ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಕೋಟೆ ಕಾಲಂ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗ್ರಾಮ ಪಂಚಾಯಿತಿ ಕದನ -ಕೋಟೆ ಕಾಲಂ

ಕೋಟೆ ಕಾಲಂ:- ಗ್ರಾಮ ಪಂಚಾಯತಿ ಕದನ. -ಹರೀಶ್ ಹೆಚ್ ಆರ್   ಕೋಟೆ.  ನೋಡು ಸಂಸಾರದಲ್ಲಿ ರಾಜಕೀಯ ನಿನ್ನ ಮನೆ ಯಲ್ಲಿ ನೀನೆ ಪರಕೀಯ..... ಸಿ.ಅಶ್ವತ್ ಅವರ ಕಂಚಿನ ಕಂಠದಲ್ಲಿ ಬರುತ್ತಿದ್ದ ಹಾಡು ಕೇಳಿದವನಿಗೆ ಒಂದು ಕ್ಷಣ ಗ್ರಾಮಪಂಚಾಯತಿ ಚುನಾವಣೆ ದ್ರಶ್ಯಾವಳಿಗಳು ಕಣ್ಣ ಮುಂದೆಯೇ ಹಾದು ಹೋದವು ಡಿಸೆಂಬರ್ ತಿಂಗಳಿನಲ್ಲಿ ಎರಡು ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆ ಮುಗಿಯುವಷ್ಟರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅದೆಷ್ಟು ಕುರುಕ್ಷೇತ್ರ ರಾಮಾಯಣ ನಡೆಯುತ್ತವೆಯೋ ಅದೆಷ್ಟು ತಲೆಗಳು ಉರುಳುತ್ತವೋ ದ್ವೇಶದ ದಳ್ಳುರಿಗೆ ಅದೆಷ್ಟು ಮನೆಗಳು ಆಹುತಿಯಾಗುತ್ತವೋ ಬಲ್ಲವರ್ಯಾರು ಪ್ರಶಾಂತತೆ ಹಾಗೂ ಲವಲವಿಕೆಯಿಂದ ಕೂಡಿದ ಗ್ರಾಮಾಂತರ ಪ್ರದೇಶದ ಜನರ ಮನಸ್ಸು ಬುದ್ದಿಗೆ ಲಕ್ವಾಹೊಡೆಯುವುದೇ ಗ್ರಾಮಪಂಚಾಯತಿ ಚುನಾವಣೆಗಳಲ್ಲಿ ಈ ಸಂದರ್ಭದಲ್ಲಿ ಅಣ್ಣತಮ್ಮಂದಿರೇ ಶತ್ರುಳಾಗುತ್ತಾರೆ ಕಷ್ಟಕ್ಕಾಗುವ ಬಂಧುವೇ ಕತ್ತಿಮಸೆಯುತ್ತಾನೆ ಹೆಂಡತಿ ಮಕ್ಕಳೆ ಮನೆ ಯಜಮಾನನ ಮಾತನ್ನು ಕಾಲ ಕಸವಾಗಿ ಕಾಣುತ್ತಾರೆ ದಾಯಾದಿ ದ್ವೇಷತಾರಕಕ್ಕೇರುತ್ತದೆ ಊರೇ ಇಬ್ಬಾಗವಾದರೆ ಜಾತಿ ಉಪ ಜಾತಿಯ ಪ್ರಜ್ಞೆ ಹೆಚ್ಚಾಗಿ ಯಾರನ್ನೂ ಯಾರೂ ನಂಬದಂತಾಗುತ್ತದೆ, ಕಳೆದ ಚುನಾವಣೆಯ ಸಂದರ್ಭದಲ್ಲಿ ಒಡೆದ ಮನಸ್ಸುಗಳೆ ಇನ್ನೂ ಒಂದಾಗಿಲ್ಲಾ ಅಷ್ಟರಲ್ಲಿ ಮತ್ತೆ ಚುನಾವಣೆ ಬಂದಿದ್ದು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಬಿರುಸು ಕಂಡು ಬರಲಿದೆ ಈ ಬಾರೀ ಕರೋನಾ ಪಿಡುಗಿನಿಂದ ತತ್ತರಿಸಿ ಊರಿಗೆ ವಾ

ಶಾಲು ಕೊಡವಿ ಎದ್ದು ಹೋದೆಯಲ್ಲೋ-ಕೋಟೆ ಕಾಲಂ

ಶಾಲು ಕೊಡವಿ ಎದ್ದು..... ಹೋದೆಯಲ್ಲೋ..-ಕೋಟೆ ಕಾಲಂ. ಸಿಕ್ಕಿದಾಗಲೆಲ್ಲಾ ಮೊದಲು ಜಗಳವೇ ಅದಕ್ಕೆ ಕಾರಣವಾಗಲೀ ಇಂತದ್ದೆ ನಿರ್ದಿಷ್ಟ ವಿಚಾರವಾಗಲಿ ಬೇಕೆಂದಿಲ್ಲಾ.. ಒಟ್ಟಾರೆ ಜಗಳವಾಡಿಕೊಂಡೆ ಮಾತಿಗೆ ಶುರುವಿಟ್ಟರೆ ಅರ್ಧ ಗಂಟೆ ಇಬ್ಬರು ಆ ಜಾಗಬಿಟ್ಟು ಕದಲುತ್ತಿರಲಿಲ್ಲ ನಡುವೆ ಅವನಿಗೆ ಪ್ರೀತಿಪಾತ್ರನಾದ ನನ್ನ ಮಗ ಮಯೂರನ ಬಗ್ಗೆ ವಿಚಾರಿಸುವುದನ್ನು ಮರೆಯುತ್ತಿರಲಿಲ್ಲ ಕೊಟ್ಟೂರು ಶ್ರಿನಿವಾಸ ಎಂದರೇ ಮೆಲುಮಾತಿನ ನಗುನಗುತ್ತಲೇ ಇರುವ ಸ್ನೇಹಜೀವಿ ಯಾವತ್ತೂ ಯಾರಿಗೂ ಕೇಡನ್ನು ಬಯಸಲಿಲ್ಲ ಹಣಕಾಸು ಲಾಭದ ಬಗ್ಗೆ ಮಾತನ್ನೇ ಆಡಲಿಲ್ಲ ಅಂತಹ ಗೆಳೆಯ ನಮ್ಮೊಡನಿಲ್ಲಾ ಎಂಬುದನ್ನು ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ ಬಿಸಿಲ ಬೆಂಗಾಡು ಬಳ್ಳಾರಿಯ ಕೊಟ್ಟೂರಿನ ಶ್ರೀನಿವಾಸ ಹಾಸನದ ಕೊಟ್ಟೂರು ಶ್ರೀನಿವಾಸ ನಾಗಿಯೇ ಬದುಕಿದ ವ್ಯಕ್ತಿ ಆತನ ಪತ್ನಿ ಪ್ರಮೀಳ ಅವರಿಗೆ ಸರ್ಕಾರಿ ನೌಕರಿ ಸಿಕ್ಕಿದ್ದರಿಂದ ಅನಿವಾರ್ಯ ವಾಗಿ ಹಾಸನಕ್ಕೆ ಬಂದಾತ ಹಾಸನದ ಮಣ್ಣಿನ ಮಗನಾಗಿ ಇಲ್ಲಿಯೇ ಬದುಕನ್ನು ಮುಗಿಸಿ ಪಂಚಭೂತಗಳಲ್ಲಿ ಲೀನವಾದನು ವಿದ್ಯಾರ್ಥಿ ದಿಸೆಯಲ್ಲಿ ಅರ್ ಎಸ್ ಎಸ್ ನಿಂದ ಆಕರ್ಷಿತರಾಗಿ ಕೆಲಕಾಲ ಸ್ವಯಂಸೇವಕ ರಾಗಿಯೂ ಇದ್ದರು ಅದೇಕೋ ಆತನ ಜಾಯಮಾನಕ್ಕೆ ಒಗ್ಗದ ಕಾರಣ ಅಲ್ಲಿ ಮುಂದುವರೆಯಲಿಲ್ಲ ಹಾಸನಕ್ಕೆ ಬಂದ ಬಳಿಕ ದಲಿತ ಮುಖಂಡ ಚಂದ್ರಪ್ರಸಾದ ತ್ಯಾಗಿ ಅವರ ಸಂಪರ್ಕಕ್ಕೆ ಬಂದವನೆ ದಲಿತ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಸಾಕಷ್ಟು ಹೋರಾಟಗಳಲ್ಲಿ ಸಕ್ರಿಯ

ಎಲ್ಲಾ ಬಿಟ್ಟ ಮಗ....ಬಂಗಿ ನೆಟ್ಟ-ಕೋಟೆ ಕಾಲಂ.

ಎಲ್ಲಾ ಬಿಟ್ಟ ಮಗ .....ಬಂಗಿ ನೆಟ್ಟ- ಕೋಟೆ ಕಾಲಂ. ಎಲ್ಲಾ ಬಿಟ್ಟ ಮಗ ಬಂಗಿನೆಟ್ಟ ಅನ್ನುವ ಹಾಗೆ ಸಿ.ಎಂ. ಯಡಿಯೂರಪ್ಪನವರ ಮಗ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿರುವ ಬಿ.ವೈ. ವಿಜಯೇಂದ್ರ ಮಾಡುತ್ತಿರುವ ಯಡವಟ್ಟುಗಳು ಕೆಲಸವಿಲ್ಲದೆ ಮಗುವಿನ ಹಿಂಭಾಗ ಕೆತ್ತಿದ ಎಡಬಿಡಂಗಿಯಂತಿದೆ ನಮ್ಮ ರಾಜ್ಯದಲ್ಲಿ ಜಾತಿ ಎನ್ನುವುದು ಜೇನುಗೂಡಿನ ಪ್ರತಿ ರೂಪದಂತೆ ಅದಕ್ಕೆ ಕೈ ಹಾಕಬೇಕಾದರೆ ಎಂತಹ ಮುತ್ಸದ್ದಿ ರಾಜಕಾರಣಿಯೇ ಅಗಲಿ ಹತ್ತುಬಾರಿ ಯೋಚಿಸುತ್ತಾರೆ ಆದರೆ ಉಪಚುನಾವಣೆ ಫಲಿತಾಂಶ ಹಾಗೂ ತನ್ನ ತಂತ್ರಗಳು ಫಲ ಕೊಡುತ್ತಿರುವುದರಿಂದ ನೆಲಕಾಣದಂತಾಗಿರುವ ವಿಜಯೇಂದ್ರ ಅತಿ ಉತ್ಸಾಹದಿಂದ ಮಾಡಿದ ಮರಾಠಾ ಪ್ರಾಧಿಕಾರದ ಎಡವಟ್ಟು ರಾಜಕಾರಣದ ಕೊನೆಯ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಉಮೇದಿನಲ್ಲಿ ಬಿಗಿಯಾಗಿ ಪ್ಯಾಡ್ ಹಾಗೂ ಅಬ್ಡಾಮನ್ ಗಾರ್ಡ್ ಕಟ್ಟಿಕೊಂಡಿರುವ ರಾಜಾಹುಲಿ ಯನ್ನು ಹಿಟ್ ವಿಕೇಟ್ ಮಾಡಿ ಪೆವಿಲಿಯನ್ ಗೆ ಕಳುಹಿಸುವ ಸಾಧ್ಯತೆಗಳಿವೆ, ಬಸವ ಕಲ್ಯಾಣದಲ್ಲಿ ಉಪ ಚುನಾವಣೆ ಹಿನ್ನಲೆಯಲ್ಲಿ ನಡೆದ ಸಭೆಯಲ್ಲಿ ಮರಾಠರನ್ನು ಓಲೈಸಲು ಬಿ.ವೈ. ವಿಜಯೇಂದ್ರ ಅಭಿವೃದ್ದಿ ನಿಗಮ ಮಾಡುವುದಾಗಿ ಭರವಸೆ ನೀಡಿದರು ಮಗನ ಮಾತನ್ನು ಚಾಚೂತಪ್ಪದೆ ಪಾಲಿಸುವ ಸಿಎಂ ಶಿರಸಾವಹಿಸಿ ಅದಕ್ಕೆ ಚಾಲನೆ ನೀಡಿ ಸಂಪುಟ ಸಭೆಯಲ್ಲಿ ಸಣ್ಣಪುಟ್ಟ ಹೆಸರು ಬದಲಾವಣೆಯೊಂದಿಗೆ ಅನುಮೋದನೆ ನೀಡಿ ಕನ್ನಡಿಗರ ಹಿತಾಸಕ್ತಿಗೆ ಕೊನೆಯ ಮೊಳೆ ಹೊಡೆದರು ಉತ್ತರ ಕರ್ನಾಟಕ ಭಾಗದಲ್ಲಿ

ಅಫಿಡೆವಿಟ್ ಸಲ್ಲಿಸಿದ ಬೆಳೆಗೆರೆ-ಕೋಟೆ ಕಾಲಂ.

ಅಫಿಡೆವಿಟ್ ಸಲ್ಲಿಸಿದ ಬೆಳೆಗೆರೆ ಕೋಟೆ ಕಾಲಂ  ಬೆಳ್ಳಂಬೆಳಿಗ್ಗೆ ಮೊಬೈಲ್ ತೆಗೆದು ಫೇಸ್ಬುಕ್ ನೋಡಿದರೆ ಅಚ್ಚರಿ ಖ್ಯಾತಪತ್ರಕರ್ತ ರವಿಬೆಳಗೆರೆ ನಿಧನ ಎಂಬ ಸ್ಟೇಟಸ್ ಇತ್ತು  ಕಾಮೆಂಟ್ ಬಾಕ್ಸ್ನಲ್ಲಿ ರಿಪ್ ಗಳ ಸುರಿಮಳೆ ಅಲ್ಲಿಗೆ ಕನ್ನಡ ಪತ್ರಿಕೋದ್ಯಮದ ವರ್ಣರಂಜಿತ ವ್ಯಕ್ತಿ ಇನ್ನಿಲ ಎಂಬುದು ಖಚಿತವಾಯಿತು ದಶಕಗಳ ಕಾಲ ಸುಟ್ಟ ಅಸಂಖ್ಯಾತ ಸಿಗರೇಟ್ಗಳು ಆ ದಿನಗಳಲ್ಲಿ ಹೀರಿದ ಲೀಟರ್ ಗಟ್ಟಲೆ ಮದ್ಯದ ಹೊಡೆತ ಶುಗರ್ ಕಾಲುನೋವು ತೊದಲುವ ನಾಲಿಗೆ ಕತ್ತುಕೆಳಗೆ ಹಾಕಿ ಮಾತನಾಡಲು ಆಯಾಸಪಡುವುದನ್ನು ಕಂಡವರಿಗೆ ಸಾವು ಅಷ್ಟಾಗಿ ಅಚ್ಚರಿ ತರಲಿಲ್ಲವಾದರೂ ಆತನ ಜೀವಂತಿಕೆಗೆ 62ರ ವಯೋಮಾನಕ್ಕೆ ಸಾವು ಆಘಾತವೇ ಸರಿ ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿ 1958 ರ ಮಾ.15 ರಂದು ತಂದೆಯ ನೆರಳೇ ಇಲ್ಲದೆ ತಾಯಿಯ ಅಸರೆಯಲ್ಲಿ ಬೆಳೆದ ಬೇಜವಾಬ್ದಾರಿ ಹುಡುಗ ರವಿಬೆಳೆಗೆರೆ  ಮುಂದೆ ದೊಡ್ಡದೊಡ್ಡವರಿಗೆ ಜವಾಬ್ದಾರಿಯ ಪಾಠ ಹೇಳಿದ್ದು ಇತಿಹಾಸ ಪಿ.ಲಂಕೇಶ್ ವೈಕುಂಠ ರಾಜು ನಂತರ ಜಾಹೀರಾತಿನ ಹಂಗಿಲ್ಲದೆ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಬೆಳೆಗೆರೆ ಅವರದ್ದು ಕಪ್ಪುಬಿಳುಪಿನ ಸುಂದರಿ ಹಾಯ್ ಬೆಂಗಳೂರನ್ನು 1995 ರಲ್ಲಿ ರವಿ ಹೊರ ತಂದಾಗ ಅದರ ಹೆಸರು ಕೇಳಿ ನಕ್ಕವರೇ ಹೆಚ್ಚು ಅದರೆ ಅ ನಂತರದಲ್ಲಿ ಅದು ಕಂಡ ಯಶಸ್ಸು ಬಹುಶ ಬೆಳೆಗೆರೆಯೆ ಊಹಿಸಿರಲಿಲ್ಲ ಎನಿಸುತ್ತದೆ ಜಾಣಜಾಣೆಯರ ಪತ್ರಿಕೆ ಲಂಕೇಶ್ ಇಳಿಜಾರಿನಲ್ಲಿದ್ದಾಗ ಬಂದ ಹಾಯ್ ಬೆಂಗಳೂರು ರವಿ

ಸ್ವಾಮ್ ಗುಳು-ಕೋಟೆ ಕಾಲಂ.

ವಿಮರ್ಶಾ -vimarsha  ಸ್ವಾಮ್ ಗುಳು.. > ಯಾರೇ ಆಗಲಿ ಎಂತವನೇ ಆಗಲಿ ಹತ್ತುಜನರಿಗೆ ಕೆಡುಕು ಮಾಡುತ್ತಾನೆ ಎಂದರೆ ಅವನು ದೈವಾ ಅಥವಾ ದೆವ್ವಾಂಶ ಸಂಭೂತನೇ ಆದರು ಸಾರಾ ಸಗಟಾಗಿ ತಿರಸ್ಕರಿಸಬೇಕು ಇಡೀ ಸಮಾಜಕ್ಕೆ ಕಂಟಕನಾಗುತ್ತಾನೆ ಎಂದಾದರೆ ಆತ ರಾಜಕಾರಣಿಯಾಗಲಿ ಸಿನಿಮಾ ನಡನಾಗಲಿ ಸಾಹಿತಿಯಾಗಲಿ ಸ್ವಾಮೀಜಿಯಾಗಲಿ ಆತ ತಿರಸ್ಕಾರಕ್ಕೆ ಅರ್ಹ ಮನುಷ್ಯ ವಿದ್ಯಾವಂತ ನಾದಷ್ಟು ಆಧುನೀಕರಣ ಕ್ಕೆ ಮೈ ಒಡ್ಡಿದಂತೆ ಹಾಗು ವಿಜ್ಞಾನ ತಂತ್ರಜ್ಞಾನ ಅಳವಡಿಸಿಕೊಂಡಷ್ಟು ಜಾತಿಯ ಬಂಧದಿಂದ ವಿಮುಕ್ತನಾದಂತೆ ಎಂದು ಭಾವಿಸಲಾಗಿತ್ತು ಅದರೆ ಅದೆಲ್ಲವೂ ತಲೆಕೆಳಕಾಗಿದ್ದು ದಿನದಿಂದ ದಿನಕ್ಕೆ ಜಾತಿ ವ್ಯವಸ್ಥೆ ಬಲಗೊಳ್ಳುತ್ತಾ ಸಾಗಿದೆ ತಮ್ಮ ರಾಜಕೀಯ ಅಧಿಕಾರಕ್ಕಾಗಿ ತಮ್ಮ ಸಂಖ್ಯಾಬಲವನ್ನು ಪ್ರದರ್ಶಿಸಲು ಮುಂದಾದ ರಾಜಕಾರಣಿಗಳು ಹಾಗೂ ಜಾತಿನಿರ್ಮೂಲ ಮಾಡಬೇಕಾದ ಸರಕಾರಗಳು ಜಾತಿಗಳ ಓಲೈಕೆಗಾಗಿಯೇ ಯೋಜನೆಗಳನ್ನು ಘೋಷಿಸಲು ಮುಂದಾದ ಪರಿಣಾಮ ಜಾತಿ ಉಪಜಾತಿ ಗೊಂದು ಮಠಗಳು ಸ್ವಾಮೀಜಿಗಳು ಹುಟ್ಟಿಕೊಂಡರು ಆ ಸಮುದಾಯದ ನಾಯಕರು ರಾಜಕಾರಣಿಗಳು ಅವರನ್ನು ಪೋಷಿಸಿ ತಮ್ಮ ಕೈ ಗೊಂಬೆಗಳನ್ನು ಮಾಡಿಕೊಂಡ ಪರಿಣಾಮ ಎಷ್ಟೋ ಮಠಗಳ ಸ್ವಾಮೀಜಿಗಳು ಡಮ್ಮಿ ಫಿಗರ್ ಗಳಾಗಿದ್ದಾರೆ ಬಹುತೇಕ ಮಠಗಳು ಶಿಕ್ಷಣ ಸಂಸ್ಥೆ ನಡೆಸಯವುದನ್ನೇ ಪ್ರಮುಖ ಕಾಯಕವನ್ನಾಗಿದಿಕೊಂಡಿವೆ ಯಾವ ಉದ್ಯಮಿಗೂ ಕಡಿಮೆ ಇಲ್ಲದಂತೆ ಹಣ ಬಾಚು

ನವೆಂಬರ್ ಕನ್ನಡಿಗರಾಗಬೇಡಿ-ಕೋಟೆ ಕಾಲಂ

ಲೇಖಕರು ಮತ್ತು ಸಂಪಾದಕರು ಹರೀಶ್ ಹೆಚ್ ಆರ್ ಕೋಟೆ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡದಲ್ಲಿಯೇ ಆಲೋಚಿಸಿ ಕನ್ನಡದಲ್ಲಿಯೇ ಮಾತನಾಡುವಕನ್ನಡ ಬಿಟ್ಟರೆ ಬೇರೆಭಾಷೆ ತಿಳಿಯದ ನನ್ನಂತಹ ಲಕ್ಷಾಂತರ ಕನ್ನಡಿಗರು ನಮ್ಮ ಭಾಷೆಯ ಬಗ್ಗೆ ಎಷ್ಟರಮಟ್ಟಿಗೆ ಪ್ರೀತಿ ಹೊಂದಿದ್ದೇವೆ ಎಂದು ಅನುಮಾನಿಸುವಂತಾಗುತ್ತದೆ ಭಾರತದಲ್ಲಿರುವ ಅಸಂಖ್ಯ ಭಾಷೆಗಳ ಪೈಕಿ ಶತಶತಮಾನಗಳಿಂದ ತನ್ನದೇ ಆದ ಲಿಪಿಯನ್ನು ಹೊಂದಿರುವ ಹೆಗ್ಗಳಿಕೆಯ ಕನ್ನಡ ಇಂದು ಅಪ್ಪಟ ಕನ್ನಡಿಗರ ಬಾಯಿಯಲ್ಲಿ ಓದಲು ಬರುತ್ತದೆ ಬರೆಯೋಕೆ ಬರೊಲ್ಲಾ ಚೆನ್ನಾಗಿ ಮಾತನಾಡ್ತೀನಿ ಎನ್ನುವ ಹಂತಕ್ಕೆ ಬಂದಿರುವುದನ್ನು ನೋಡಿದರೆ ಬೇಸರವಾಗುತ್ತದೆ ಭಾಷೆಯ ವಿಚಾರವಾಗಿ ನಾವು ಅಭಿಮಾನ ಶೂನ್ಯರೇ ಅದರಲ್ಲಿ ಎರಡುಮಾತಿಲ್ಲಾ ಪಕ್ಕದ ಮನೆ ಆಂಟಿಗೆ ಚೂಡಿದಾರ ಕೊಡಿಸಿ ನಮ್ ತಾಯಿಗೆ ಹರಕಲು ಸೀರೇನೆ ಸರಿ ನಿನಗೆ ಎನ್ನುವವರು ನಾವು ಈ ಎಲ್ಲಾ ಕಾರಣಗಳಿಂದ ದಶಕಗಳ ಹಿಂದೆಯೆ ಹೊಟ್ಟೆಪಾಡಿಗಾಗಿ ಬಂದ ಅಕ್ಕಪಕ್ಕದ ರಾಜ್ಯದವರು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ವನ್ನಾಗಿಸಿ ಎಂದು ಕೂಗು ಹಾಕಿದ್ದರೂ ಆಗಲೂ ಕೆಲ ಬುದ್ದಿಜೀವಿ ಗಳು ನಮ್ಮತನ ಮರೆತು ಆದರೆ ತಪ್ಪೇನು ಎಂದು ಸಹ ಪ್ರತಿಪಾದಿಸಿದ್ದು ಹೇಸಿಗೆಯ ವಿಚಾರ ಬೆಂಗಳೂರಿನಲ್ಲಿ ತೊಂಬತ್ತರ ದಶಕದವರೆಗೂ ಕನ್ನಡಿಗರು ತಮಿಳು ತೆಲುಗನ್ನು ಹೆಮ್ಮೆಯಿಂದಲೇ ಮಾತನಾಡುತ್ತಿದ್ದರು ಪರಭಾಷಾ ಚಿತ್ರಗಳನ

ಅಂಕೆ ಇಲ್ಲದವಕ್ಕೆ ಅಂಕುಶ ಬೇಕೇ ಬೇಕು -ಕೋಟೆ ಕಾಲಂ

ಲೇಖಕರು ಮತ್ತು  ಸಂಪಾದಕರು  ಹರೀಶ್ ಹೆಚ್ ಆರ್  ಕೋಟೆ  ಮೊನ್ನೆ ಉತ್ತರ ಕರ್ನಾಟಕದಾದ್ಯಂತ ಎಡಬಿಡದೆ ಸುರಿದ ಮಳೆಗೆ ಉಕ್ಕಿಹರಿದ ನದಿ ಹಳ್ಳಕೊಳ್ಳ ಗಳ ಸೊಕ್ಕಿಗೆ ಜನಜೀವನ ಅಯ್ಯೋ ಶಿವನೆ ಎಂಬಂತಾಗಿತ್ತು ಮಕ್ಕಳು ಬಾಣಂತಿ ನೀರಿನಲ್ಲಿ ಸಿಲುಕಿ ಕಂಗಾಲಾದ ಸ್ಥಿತಿ ಮನೆಕಳೆದು ಕೊಂಡು ಬೀದಿಯಲ್ಲಿ ರೋದಿಸುತ್ತಾ ನಿಂತಜನ ಉಕ್ಕಿಹರಿಯುವ ನೀರಿನಲ್ಲಿ ಸಿಲುಕಿ ನೆರವಿಗಾಗಿ ಅಂಗಲಾಚುವ ಅಮಾಯಕರ ಕಣ್ಣೀರು ತಿನ್ನಲು ತಾಟನ್ನು ಉಳಿಸದಂತೆ ಎಲ್ಲವನ್ನು ಬಳಿದುಕೊಂಡು ಹೋಗಿ ಬದುಕನ್ನು ಮೂರಾಬಟ್ಟೆ ಮಾಡಿದ ಜೀವನದಿಗಳನ್ನು ಶಪಿಸುವ ಹೆಂಗಳೆಯರು ನದಿಯಲ್ಲಿ ಕೊಚ್ಚಿಹೋದ ಮನೆಯ ಯಜಮಾನ ತಿರುಗಿ ಜೀವಂತಸಿಕ್ಕಾನೇನೋ ಎಂದು ಕಣ್ಣೀರಜೊತೆಗೆ ಆಶಾಭಾವನೆ ಹೊತ್ತ ಮನೆಯವರು ತಿಂಗಳು ಗಟ್ಟಲೆ ನಿಗಾವಹಿಸಿ ಬೆಳೆದ ಬೆಳೆ ಕಣ್ಣೆದುರೆ ನೀರುಪಾಲಾದರೂ ಏನನ್ನು ಮಾಡಲಾಗದ ಅಸಹಾಯಕತೆ ಹೀಗೆ ಹತ್ತಾರು ತರಹದ ನೋವು ಸಂಕಷ್ಟಗಳನ್ನು ನಮ್ಮದೇ ರಾಜ್ಯದ ಜನಗಳು ಅನುಭವಿಸುವುದನ್ನು ಕಂಡು ಮರುಗದ ಮಾನವರಿಲ್ಲ ಇಂತಹ ಸಂದರ್ಭದಲ್ಲಿ ಟಿವಿ ಚಾನಲ್ ವೊಂದರಲ್ಲಿ ಪದೇಪದೇ ತೋರಿಸಲಾಗುತ್ತಿತ್ತು ಮಳೆಅನಾಹುತದ ಅದ್ಭುತ ದ್ರಶ್ಯಗಳು ನಮ್ಮಲ್ಲಿ ಮಾತ್ರ ಎಂದು ಆ ಕಾರ್ಯಕ್ರಮ ವೀಕ್ಷಿಸಿದರೆ ಅದರಲ್ಲಿ ಮಳೆಹಾನಿಯಿಂದ ತೊಂದರೆಗೀಡಾದವರ ಕ್ಲಿಪಿಂಗ್ ತೋರಿಸಲಾಗುತ್ತಿತ್ತು ಅದರಲ್ಲಿ ಮನೆಮಠ ಕಳೆದುಕೊಂಡವರ ರೋದನೆ ಮನಕಲಕುವಂತಿತ್ತು ಇವುಗಳು ಅದ್ಬುತ ದ್ರಶ್ಯಗಳೆ ಇನ್ನೊಬ್ಬರ ನೋವು ಆನಂದಿಸುವ ವಿಚಾರವೇ

ಮೀಸಲು ರಾಜಕೀಯ -ಕೋಟೆ ಕಾಲಂ

ಮೀಸಲು ರಾಜಕೀಯ - ಕೋಟೆ ಕಾಲಂ ಹರೀಶ್ ಹೆಚ್ ಆರ್ ಕೋಟೆ ರಾಜಕಾರಣಿಗಳು ತಮ್ಮಸ್ವಾರ್ಥಕ್ಕಾಗಿ ವ್ಯವಸ್ಥೆಯನ್ನು ಬಳಸಿಕೊಂಡರೆ ಅದು ಅಭಿವೃದ್ಧಿ ಗೆ ಮಾರಕ ಹಾಗೂ ಪ್ರಜಾಪ್ರಭುತ್ವವನ್ನು ಅಸ್ಥಿರ ಗೊಳಿಸುವ ಪ್ರಕ್ರಿಯೆ ಎಂದು ಗೊತ್ತಿದ್ದರೂ ಪದೇಪದೇ ಅದೇ ಪ್ರಹಸನ ಮುಂದುವರೆಯುತ್ತಿದೆ ರಾಜಕಾರಣ ಕ್ಕೆ ಮೀಸಲಾತಿಯನ್ನು ಮನಬಂದಂತೆ ಬದಲಾಯಿಸುವ ಪ್ರಕ್ರಿಯೆಯು ನಡೆಯುತ್ತಿದೆ ಸ್ಥಳಿಯ ಸಂಸ್ಥೆ ಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ತಮ್ಮ ಪಕ್ಚ ಸ್ಥಳೀಯ ಸಂಸ್ಥೆ ಗಳ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ವಿಫಲವಾದಾಗ ಆಡಳಿತಾರೂಡ ಪಕ್ಷಗಳು ವಿಪಕ್ಷ ಬಹುಮತ ಹೊಂದಿದ್ದರೂ ಅಧಿಕಾರದಿಂದ ದೂರ ಇಡುವ ಸಲುವಾಗಿ ವಿಪಕ್ಷದಲ್ಲಿ ಇಲ್ಲದ ಹಾಗೂ ತಮ್ಮಲ್ಲಿ ಮಾತ್ರ ಗೆಲುವು ಸಾಧಿಸಿರುವ ಕೆಟಗರಿಗೆ ಮೀಸಲು ನಿಗದಿಪಡಿಸಿ ಎದುರಾಳಿಗಳಿಗೆ ಬಹುಮತವಿದ್ದರೂ ಅಧಿಕಾರ ಸಿಗದಂತೆ ಮಾಡುವುದು ಆನಂತರ ಅವರು ಪ್ರತಿಯೊಂದು ಕೆಲಸಕ್ಜೂ ಅಡ್ಡಗಾಲು ಹಾಕಿ ಅಭಿವ್ರದ್ದಿ ಕಾರ್ಯಕ್ರಮ ನಡೆಯದಂತೆ ತಡೆಯುವುದು ಮಾಮೂಲಾಗಿದ್ದು ರಾಜಕೀಯ ಚದುರಂಗಕೆ ಜನರು ಬೆಲೆತೆರಬೇಕಾಗಿದೆ ಹಾಸನ ಜಿಲ್ಲಾಪಂಚಾಯತಿಯಲ್ಲಿ ಜೆಡಿಎಸ್ ಬಹುಮತಹೊಂದಿದ್ದರೂ ಅದನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಅಧ್ಯಕ್ಷಸ್ಥಾನವನ್ನು ಎಸ್ಟಿ ಗೆ ಮೀಸಲು ಮಾಡುವ ಮೂಲಕ ರಾಜಕೀಯ

ಇನ್ನೆಷ್ಟು ಅಮಾಯಕಿಯರು ಬಲಿಯಾಗಬೇಕು-ಕೋಟೆ ಕಾಲಂ

ವಿಮರ್ಶಾ -vimarsha ಕೋಟೆ ಕಾಲಂ ಲೇಖಕರು-ಹರೀಶ್ ಹೆಚ್ ಆರ್ (ಕೋಟೆ ) ದೇಶವನ್ನು ಮಾತೆಗೆ ಹೋಲಿಸುವ ಸಂಸ್ಕ್ರತಿ ಒಂದೆಡೆ ಮತ್ತೊಂದೆಡೆ ಜೀವನದಿಗಳನ್ನು ಹುಟ್ಟಿದ ಮಣ್ಣನ್ನು ತಾಯಿಯೆಂದು ಪೂಜಿಸುವ ಸಂಸ್ಕ್ರತಿ ಅದೂ ಇದೂ ಎಂದು ಹೆಣ್ಣನ್ನು ಪೂಜನೀಯ ವಾಗಿ ಕಾಣುತ್ತೇವೆ ಎಂದು ಎದೆಉಬ್ಬಿಸಿಕೊಂಡು ಹೇಳುವ ನಮ್ಮ ದೇಶದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳು ಇಡೀ ಜಗತ್ತನ್ನೆ ಆಗಾಗ್ಗೆ ಬೆಚ್ಚಿಬೀಳಿಸುತ್ತಿರುತ್ತವೆ ಒಂದುಪ್ರಕರಣ ಮಾಸುವ ಮುನ್ನವೇ ಮತ್ತೊಂದು ಎಂಬಂತೆ ಪೈಶಾಚಿಕ ಅತ್ಯಾಚಾರ ಪ್ರಕರಣಗಳು ನಿಲ್ಲುವ ಲಕ್ಷಣ ಕಾಣದೆ ನಡೆಯುತ್ತಿರುವುದು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಉತ್ತರಪ್ರದೇಶದ ಹಾಥರಸ್ ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವತಿ ಮನಿಷಾ ವಾಲ್ಮೀಕಿ ಯ ಮೇಲೆ ನಾಲ್ವರು ದುರುಳರು ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆಮಾಡಿದ ಪ್ರಕರಣ ಅತ್ಯಂತ ಖಂಡನೀಯ ಇಂತಹ ಸಮಯದಲ್ಲಿಯೂ ಸಹ ದಲಿತ ಯುವತಿಯ ಸಾವಿನಲ್ಲಿಯೂ ಸತ್ಯವನ್ನು ಅದುಮಿಡುವ ಉತ್ತರ ಪ್ರದೇಶ ಸರಕಾರದ ಧೋರಣೆ ಹಾಗೂ ಅದರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರಗಳು ನೋವುತರುತ್ತವೆ ತರಾತುರಿಯಲ್ಲಿ ರಾತ್ರಿಯೆ ಮನಿಷಾಳ ಶವವನ್ನು ಸುಟ್ಟಿದ್ದು ಉದ್ದೇಶಪೂರ್ವಕವಾಗಿ ಆಕೆಯ ಕುಟುಂಬಸ್ಥರನ್ನು ದೂರ ಇಟ್ಟಿದ್ದು ಆಕೆಯ ತಂದೆಯ ಮೇಲೆ ಪೊಲೀಸರು ಈಗಾಗಲೇ ನೀಡಿರುವ ಹೇಳಿಕೆಬದಲಿಸುವಂತೆ ಒತ್ತಡ ಹೇರುತ್ತಿರುವುದು ಪೊಲೀಸರು ಸರಕಾರವನ್ನು ಮುಜುಗರಕ್ಕೊಳಗಾಗದಂತೆ ಕಾಪಾಡುವ ಹಾಗೂ ರಾಜ್ಯದಲ್

ಫೋಟೋ ಖಯಾಲಿ.... ಮತ್ತೆ ಹುಟ್ಟಿ ಬಾ - ಕೋಟೆ ಕಾಲಂ

ಪೊಟೋ ಖಯಾಲಿ......ಮತ್ತೆಹುಟ್ಟಿಬಾ.. ಎಂಎಲ್ಎ ನಮಗೆ ಸಖತ್ ಬೇಕಾದವರು ಆ ಮಿನಿಸ್ಟರ್ ನಮಗೆ ಕ್ಲೋಸು.ಆ  ಡಿ.ಸಿ . ನಮ್ಮವರು .... ಆ ಎಸ್ಪಿ ನಮ್ಮನೇವ್ರು ಅಂದ್ರೆ ಸುಮ್ಮನಾಗ್ತಾರೆ ಇವೆಲ್ಲಾ ನಾವು ಅಗಾಗ್ಗೆ ಕೇಳುತ್ತಲೇ ಇರುವ ಮಾತು ಅದರಲ್ಲಿಯೂ ಕೆಲಸಕ್ಕೆ ಬಾರದ ಪುಡಾರಿಗಳು ನಂಬರ್ ದೋ ದಂಧೆ ಮಾಡುವವರು ಹಾಗು ಬೆಳಿಗ್ಗೆ ಮನೆಬಿಟ್ಟರೆ ಸಂಜೆಯೊತ್ತಿಗೆ ಯಾರದಾದರೂ ತಲೆಯಮೇಲೆ ಕೈ ಇಟ್ಟು ಕಾಸು ಮಾಡಿಕೊಳ್ಳುವವರ ಬಾಯಲ್ಲಿ ಬರುವ ಮಾತುಗಳು ಇನ್ನು ಕೆಲವು ಸಮಾಜ ಸೇವಕ ಸೇವಕಿಯರ ಬಾಯಲ್ಲಿ ಬರುವ ಕ್ಲೋಸ್ ಪದದ ಅರ್ಥ ಬೇರೆ ಯದ್ದೇ ಆಗಿರುತ್ತದೆ ಇಂತವರಮನೆಗಳ ಶೋಕೇಸ್ ಹಾಗೂ ಗೋಡೆಗಳನ್ನುಅಲಂಕರಿಸಿರುವ ವಿಐಪಿಗಳು ಅಧಿಕಾರಿಗಳ ಜೊತೆಗಿನ ಫೋಟೋಗಳು ಮನೆಗೆ ಬಂದವರ ಮುಖಕ್ಕೆ ರಾಚುವಂತಿರುತ್ತವೆ ಅದರಲ್ಲಿ ಕಷ್ಟಪಟ್ಟು ತೂರಿಸಿರುವ ಇವರ ಮುಖಗಳನ್ನು ಕಂಡಾಗ ಯೋಗ್ಯತೆ ಅರ್ಹತೆ ಅರ್ಥವಾಗುತ್ತದೆ ಬಹುತೇಕ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜೊತೆ ಇಂತವರ ಪೋಟೋಗಳು ಇರುತ್ತವೆಯೇ ಹೊರತಾಗಿ ಅಪ್ಪಿತಪ್ಪಿಯೂ ಸಾಹಿತಿಗಳು ನಾಡುನುಡಿಗೆ ಹೋರಾಡಿದವರ ಜೊತೆ ಇವರ ಪೋಟೋಗಳು ಸಿಗುವುದಿಲ್ಲಾ ಸಾಲದೆಂಬುದಕ್ಕೆ ಇತ್ತೀಚೆಗೆ ಸಿಕ್ಕವರಿಗೆಲ್ಲಾ ಪ್ರಶಸ್ತಿಗಳನ್ನು ಕೊಡುವ ಸಂಸ್ಥೆಗಳು ಜೀವನದಲ್ಲಿ ಬಿಕ್ಷುಕನಿಗೆ ಒಂದುರೂಪಾಯಿ ಹಾಕದವನಿಗೂ ಸಮಾಜ ಸೇವಕ ಎಂಬ ಬಿರುದು ನೀಡಿ ಪ್ರಶಸ್ತಿ  ಕೊಡುತ್ತಿದ್ದು ಅವುಗಳ ಪೋಟೋಗಳು ಹಾಗು ಕಂಡೂ ಕೇಳದ ಡಾಕ್ಟರೇಟ್ ಗಳ ಫೊಟೋಗಳು ಬಿಲ್ಡಪ್ ಹೆಚ್ಚಿಸುವ ಸ

ಇದ್ದಾಗ ಹಿಟ್ಟಾಕಲಿಲ್ಲಾ-ಕೋಟೆ ಕಾಲಂ

 ಇದ್ದಾಗ ಹಿಟ್ಟಾಕಲಿಲ್ಲಾ...... ಕೋಟೆ ಕಾಲಂ  ಏ .......ಏನಿಲ್ಲಾ ಗುರು ಕೆಜಿ ಏಳ್ನೂರಾಗಲಿ ನನಗಂತೂ ಹಬ್ಬಕ್ಕೆ ಒಳ್ಳೆ ಮಟನ್ನೇ ಬೇಕು..... ಅದೂ ಮೇಕೆದೇ ಆಗಿರಬೇಕು ಎಷ್ಟಾದ್ರು ಖರ್ಚಾಗಲಿ ಅದಕ್ಕೆಲ್ಲಾ ತಲೆಕೆಡಿಸ್ಕಳಲ್ಲಾ ಡ್ರಿಂಕ್ಸ್ ಅಷ್ಟೆನೇಯಾ ದುಡ್ಡಿಗೆಲ್ಲಾ ಕೇರೆ ಮಾಡೊಲ್ಲಾ ಒಳ್ಳೆ ಬ್ರಾಂಡೇ ಕುಡಿಸೋದು....ಇನ್ನು ನಾಟಿಕೋಳಿ ಇರಲೇ ಬೇಕು... ಹೀಗೆ ಸಾಗಿತ್ತು ಮಹಾಲಯ ಅಮಾವಾಸ್ಯೆಯ ದಿನ ಪಿತ್ರಪಕ್ಷಕ್ಕೆ ಕರೆದಿದ್ದ ಮಹಾನುಭಾವ ರೊಬ್ಬರ ಗುಂಡು ತುಂಡಿನ ಜೊತೆಯ ಮಾತುಕತೆ ನನಗೆ ಚೆನ್ನಾಗಿ ನೆನಪಿತ್ತು ಇದೇಮಹಾನುಭಾವ ಅಲ್ಲವೆ ಅಪ್ಪ ಅಮ್ಮ ನಿಗೆ ಕಡೆಗಾಲದಲ್ಲಿ ಸರಿಯಾಗಿ ನೋಡಿಕೊಳ್ಳದೆ ಒಳ್ಳೆಯ ಬೆಲೆ ಬಂದಿದ್ದ ಜಮೀನನ್ನು ಮಾರಿ ಅವರನ್ನು ಮುರುಕಲು ಮನೆಯಲ್ಲಿಟ್ಟು ಸರಿಯಾಗಿ ಚಿಕಿತ್ಸೆ ಕೊಡಿಸದೆ ಇನ್ನೂ ಒಂದಷ್ಟುವರ್ಷ ಬದುಕುವರನ್ನು ತಾನಾಗಿಯೆ ಸಾವಿಗೆ ತಳ್ಳಿದವನು ಗ್ಯಾರಂಟಿ ಇವನು ಮಾಡೋ ಪಿತ್ರಪಕ್ಷ ಮೇಲಿರೋ ಹೆತ್ತವರಿಗಂತೂ ಸದ್ಗತಿ ಕೊಡೊಲ್ಲಾ ಎಂದನಿಸಿತು ಸತ್ತನಂತರ ಮಾಡೋ ಅದ್ದೂರಿ ಪಿತ್ರಪಕ್ಷದಲ್ಲಿ ಅವರು ಬಳಸುತ್ತಿದ್ದ ವಸ್ತುಗಳು ಕುಡಿಯೋ ತಿನ್ನೋ ವಸ್ತುಗಳು ಬೀಡಿಸಿಗರೇಟ್ ನಿಂದಾ ಹಿಡಿದು   ಎಲೆ ಅಡಿಕೆ ಕಡ್ಡಿಪುಡಿ ಹೊಗೆಸೊಪ್ಪು ಕಾಚು ಒಂದನ್ನೂ ಬಿಡೊಲ್ಲಾ ಮೇಲಿರೋ ಹಿರಿಯರು ಯಾವುದನ್ನು ಉಪಯೋಗಿಸೊಲ್ಲಾ ಅವೆಲ್ಲಾ ತಮ್ಮ ಬಳಕೆಗೆ ಎಂಬುದು ಖಾತ್ರಿಯಾಗಿರುವುದರಿಂದ ತಮ್ಮ ಇಷ್ಟದ ಅದರಲ್ಲಿಯೂ ಎಲ್ಲರ ಮನೆಯಲ್ಲಿ ಯೂ ಮಹಿಳಾ ಸಾಮ್ರಾಜ್ಯದ

ಏನಾಗ್ತಿದೆ - ಕೋಟೆ ಕಾಲಂ

  ಏನಾಗ್ತಿದೆ..... ಸರ್ ಯಾರದಾದರೂ ಮಾತು ಕೇಳಿಕೊಂಡು ಹಣ ವಾಪಾಸು ಕೊಡಬೇಡಿಸರ್ ಬಾಕಿ ಹಣ ನಾಳೆನೆ ಕೊಡ್ತೀವಿ ಲಾಕ್ಡೌನ್ ಇದ್ದರೂ ಅರೇಂಜ್ ಮಾಡಿದ್ದೀವಿ ಎಂದಾಗ ಆ ದೂರವಾಣಿ ಕರೆಗೆ ನನಗೆ ಅಚ್ಚರಿಯಾಯಿತು ನಿಮಗೆ ಮನೆಕೊಡೊಲ್ಲಾ ಎಂದು ಯಾರು ಹೇಳಿದರು ಮಾತಿನಂತೆ ಉಳಿದ ಹಣವನ್ನು ತಿಂಗಳುಬಿಟ್ಟೇ ಕೊಡಿ ಎಂದೆ ಏನಿಲ್ಲಾ ಸರ್ ನಮ್ ನೆಂಟರು ಒಂದಿಬ್ಬರಿಗೆ ಅಡ್ವಾನ್ಸ್ ಪಡೆದವರು ಈಗ ವಾಪಾಸು ಕೊಟ್ಟಿದಾರೆ ಮುಸಲ್ಮಾನರಿಗೆ ಮನೆ ಕೊಡೊಲ್ಲಾ ಅಂತಾ ನೇರವಾಗಿಯೇ ಹೇಳ್ತಿದಾರೆ ಮತ್ತೆ ಕೆಲವರು ಖಾಲಿ ಇದ್ದರು ಕೊಡುತ್ತಿಲ್ಲಾ ಎಂದರು ಅದಕ್ಕೆಲ್ಲಾ ತಲೆಕೆಡಿಸ್ಕೋಬೇಡಿ ನಾವು ಮನುಷ್ಯರನ್ನು ನೋಡಿ ಮನೆಕೊಡೋದು ಜಾತಿಯನ್ನಲ್ಲ ಎಂದವನೆ ತಕ್ಷಣವೇ ಬರಲು ಹೇಳಿ ಕೀ ಕೊಟ್ಟಾಗ ಅವರಿಗೆ ಸಮಾಧಾನ ವಾಗಿದ್ದು ಕಂಡುಬಂದಿತು ನಾನು ಮುಸಲ್ಮಾನರು ಸ್ವಲ್ಪಹೆಚ್ಚಾಗಿ ವಾಸಿಸುವ ಹಾಸನದ ವಲ್ಲಭಬಾಯಿ ರಸ್ತೆ ಯಲ್ಲಿ ಹುಟ್ಟಿದವನು ನಮ್ಮ ಸುಮಾರು ಮೂರು ತಲೆಮಾರಿಗೂ ಹಿಂದಿನವರು ಅಲ್ಲಿಯೇ ವಾಸವಾಗಿದ್ದವರು ಸ್ವಂತ ಮನೆ ಮಠ ಹೊಂದಿರುವವರು ನಾನು ಚಿಕ್ಕಂದಿನಿಂದಲೂ ಅಕ್ಕಪಕ್ಕದ ಮುಸಲ್ಮಾನರ ಮಕ್ಕಳ ಜೊತೆ ಬೆಳೆದವನು ನಮಗ್ಯಾರಿಗೂ ಅಂತಹ ವ್ಯತ್ಯಾಸ ಕಂಡುಬರುತ್ತಿರಲಿಲ್ಲ ಆನಂತರ ನಾನು ಕಾರಣಾಂತರದಿಂದ ಬೇರೆಡೆ ನೆಲೆಸಿದರೂ ಅಲ್ಲಿನ ಒಡನಾಟವಿತ್ತು  ನನಗೆ ತಿಳಿದ ಹಾಗೆ ಸುಮಾರು ಮುವತ್ತೈದು ವರುಷದಿಂದ ಮನೆ ಅಂಗಡಿ ಮಳಿಗೆಗಳನ್ನು ಬಾಡಿಗೆ ಕೊಟ್ಟಿದ್ದೇವೆ ಅದರಲ್ಲಿ ಹಿಂದೂಗಳಲ್ಲಿನ ಎಲ್ಲಾ ಜಾತಿಯವರ

ಸಂಬಂಧಗಳ ಅನುಬಂಧ-ಕೋಟೆ ಕಾಲಂ

ಸಂಬಂಧಗಳ ಅನುಬಂಧ ಮಕ್ಕಳು ಯಾರಾದ್ರು ನೆಂಟರು ಅದರಲ್ಲಿಯೂ ಹತ್ತಿರದವರು ಅತ್ತೆ ಮಾವ ಚಿಕ್ಕಪ್ಪ ಚಿಕ್ಕಮ್ಮ ಅವರ ಮಕ್ಕಳು ಅಜ್ಜಿ ತಾತ ಹೀಗೆ ಹತ್ತಿರದವರು ಹಬ್ಬ ಹುಣ್ಣಿಮೆ ಇಲ್ಲವೆ ರಜೆ ಸಮಯದಲ್ಲಿ ನಾಕು ದಿನ ಇದ್ದು ಹೊರಟಾಗಿನ ಪ್ರಸಂಗ ಪ್ರಹಸನ ನೆನಪಿಸಿಕೊಂಡರೆ ಸಾಕು ಮನುಷ್ಯ ಸಂಬಂಧ ಅಗ ಮತ್ತು ಈಗ ಎಂಬ ವ್ಯತ್ಯಾಸ ಅರ್ಥ ವಾಗುತ್ತದೆ ನೆಂಟರ ಬ್ಯಾಗ್ ಭರ್ತಿಮಾಡುತ್ತಿದ್ದುದರಿಂದ ಹಿಡಿದು ಅವರನ್ನು ಬಸ್ಸಿನಲ್ಲಿ ಕಿಟಕಿ ಪಕ್ಕದ ಸೀಟ್ ಹಿಡಿದು ಅವರ ಲಗೆಜ್ ಅನ್ನು ಜೋಪಾನವಾಗಿ ಜೋಡಿಸಿ ಬರ್ತೀಯಾ ಕಾಗದ ಬರಿ ಅನ್ನೋವರೆಗೂ ನಡೆಯುತ್ತಿದ್ದ ಸೀನ್ಗಳೇ ಅದ್ಬುತ ಇನ್ನು ಮಕ್ಕಳು ಕರೆದುಕೊಂಡು ಹೋಗುವುದಿಲ್ಲ ಎಂದು ಖಚಿತವಾದರು ಕಡೆಯದಾಗಿ ನಾನು ಬತ್ತೀನಿ ಎಂದು ಅಳುತ್ತಿದ್ದುದು ಅಳುವಿನ ನಡುವೆಯೆ ಚಡ್ಡಿ ಜೇಬು ತಡವಿ ನೆಂಟರು ಕೊಟ್ಟ ಚಿಲ್ಲರೆ ನಾಣ್ಯ ಸ್ಪರ್ಷಿಸಿ ಖುಷಿಪಡುತ್ತಿದ್ದುದು ಮರೆಯಲಸಾಧ್ಯ ಇನ್ನು ಹೆಣ್ಣುಮಕ್ಕಳಿಗೆ ಕುಂಕುಮ ಕೊಡುತ್ತಿದ್ದುದನ್ನೇ ಒಂದು ಕತೆಯಾಗಿಸಬಹುದು ಸಣ್ಣ ವಿಚಾರ ಎನಿಸಿದರೂ ಇವುಗಳಲ್ಲಿ ಅಡಗಿರುವ ಪ್ರೀತಿ ಅಗಾಧ ಇದೆಲ್ಲದರಿಂದ ಇಂದಿನ ಮಕ್ಕಳು ವಂಚಿತರಾದರಲ್ಲಾ ಎಂದು ಒಮ್ಮೊಮ್ಮೆ ನೋವಾಗುತ್ತದೆ ಇನ್ನು ಮದುವೆಗಳಂತೂ ಒಂದು ವಾರ ಠಿಕಾಣಿ ಹೊಡೆಯುವ ಕಾರ್ಯಕ್ರಮ ಮನೆಬಾಗಿಲಿನಲ್ಲಿ ಧಾರೆ ಎರೆಯುತ್ತಿದ್ದ ಮದುವೆಗಳ ಸಂಭ್ರಮ ಒಂದುರೀತಿಯಾದರೆ ಇದ್ದ ಒಂದೆರೆಡು ಛತ್ರಗಳಲ್ಲಿ ನಡೆಯುತ್ತಿದ್ದ ಮದುವೆಗಳ ಸಂಭ್ರಮ ಮತ್ತೊಂದು ರೀತಿಯದ್ದು ಅಲ

ಹೋದೋರೆಲ್ಲಾ ಒಳ್ಳೆಯವರು-ಕೋಟೆ ಕಾಲಂ

       ಸಂಪಾದಕರು ಹಾಗೂ ಲೇಖಕರು               ಹರೀಶ್ ಹೆಚ್ ಆರ್                     ಕೋಟೆ.                          ಬೇಲೂರು ಕೃಷ್ಣಮೂರ್ತಿ                  ಆರ್. ಕೆ .ಸ್ವರೂಪ್ ಹೋದೋರೆಲ್ಲಾ ಒಳ್ಳೆಯವರು....             ಹರೀಶ್ ಹೆಚ್ ಆರ್                   ಕೋಟೆ  ಇಬ್ಬರ ಸಾವು ಅದರಲ್ಲಿಯೂ ಒಂದುದಿನದ ಅಂತರದಲ್ಲಿ ನಡೆದ ಮರಣಗಳು ವೈಯಕ್ತಿಕ ವಾಗಿ ನನ್ನನ್ನು ಘಾಸಿಗೊಳಿಸಿದ್ದು ಸುಳ್ಳಲ್ಲಾ ಒಂದು ಸಮಾಜಸೇವಕ ನಿರೂಪಕ ಆರ್.ಕೆ.ಸ್ವರೂಪ್ ಅವರದ್ದಾದರೆ ಮತ್ತೊಂದು ಅವರ ಸಾವಿನ ಮಾರನೆಯ ದಿವಸವೇ ಇಹಲೋಕ ತ್ಯಜಿಸಿದ ಶತನಾಟಕಗಳ ಸರದಾರ ಬೇಲೂರು ಕ್ರೃಷ್ಣ ಮೂರ್ತಿ ಅವರದ್ದು ಇಬ್ಬರ ಕಾರ್ಯಕ್ಷೇತ್ರವಾಗಲಿ ಸ್ವಭಾವ ಗುಣವಾಗಲೀ ಯಾವುದು ಹೋಲಿಕೆ ಇಲ್ಲವಾದರೂ ಮಾನವೀಯ ಗುಣ ಹಾಗೂ ಯಾರಿಗೂ ಕೆಡುಕು ಬಯಸದ ಅವರ ಬದುಕು ನಿಜಕ್ಕೂ ಸ್ಮರಣೀಯ, ಮಿತ್ರ ಡಾ.ಉದಯರವಿ ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ದ್ದಾಗ ಬೇಲೂರು ಕ್ರೃಷ್ಣ ಮೂರ್ತಿ ಅವರೊಂದಿಗೆ ಸಾಕಷ್ಡು ಸಮಯ ಕಳೆಯುವ ಹಾಗೂ ಹಲವು ವಿಚಾರಗಳ ಬಗ್ಗೆ ಅವರೊಂದಿಗೆ ಚರ್ಚಿಸುವ ಅವಕಾಶ ಲಭ್ಯ ವಾಗಿತ್ತು, ಅದು ಹಾಗೆಯೇ ಬಹಳ ವರ್ಷ ಮುಂದುವರೆಯಿತು ವಯಸ್ಸಿನ ಅಂತರ ಬದಿಗಿಟ್ಟು ಅವರು ಹಾರಿಸುತ್ತಿದ್ದಾ ಹಾಸ್ಯಚಟಾಕಿಗಳು ಎಲ್ಲ ವಿಚಾರಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ರೀತಿ ಅಚ್ಚರಿ ಮೂಡಿಸುತ್ತಿತ್ತಲ್ಲದೆ

ಕಂಡಲ್ಲಿ ಕಾಲೇಜು -ಕೋಟೆ ಕಾಲಂ

ಕಂಡಲ್ಲಿ ಕಾಲೇಜು ಹರೀಶ್ ಹೆಚ್ ಆರ್  ಕೋಟೆ  ಒಂದು ಸಮಯವಿತ್ತು ದಿಢೀರನೆ ನಮ್ಮ ಜನರಿಗೆ ಆಂಗ್ಲ ವ್ಯಾಮೋಹ ಎಂದಿಗಿಂತಲೂ ಹೆಚ್ಚಾಗಿ ಹರಿಯತೊಡಗಿತು ಮಕ್ಕಳು ಮಮ್ಮಿ ಡ್ಯಾಡಿ ಎನ್ನಬೇಕು ತಪ್ಪು ತಪ್ಪಾಗಿ ಇಂಗ್ಲೀಷ್ ನಲ್ಲಿಯೇ ಮಾತನಾಡಬೇಕು ಅದರಲ್ಲಿಯೂ ಕೆಲವು ಹೆಸರಾಂತ ಕೆಜಿ ಶಾಲೆಗಳಿಗೆ ಹೋಗಬೇಕೆಂದು ಬಯಸಿದ ಪರಿಣಾಮ ನಾಯಿ ಕೊಡೆಗಳಂತೆ ಕಿಂಡರ್ ಗಾರ್ಟನ್ ಗಳು ಸಣ್ಣಸಣ್ಣ ಜಾಗಗಳಲ್ಲಿ ತಲೆ ಎತ್ತಿ ಪೋಷಕರಿಂದ ಸಾವಿರಾರು ರುಪಾಯಿ ಹಣ ಸುಲಿಗೆ ಮಾಡಿದವು, ಇತ್ತೀಚೆಗೆ ಸ್ವಲ್ಪಮಟ್ಟಿಗೆ ಅದಕ್ಕೆ ಕಡಿವಾಣ ಬಿದ್ದಿದ್ದು ಪೋಷಕರಿಗೆ ಬುದ್ದಿಬಂದಂತಿದೆ, ಆದರೆ ಮತ್ತೊಂದು ಬೆಳವಣಿಗೆಯಲ್ಲಿ ಕೆಜಿ ಶಾಲೆಗಳ ಸ್ಥಾನವನ್ನು ಪಿಯು ಕಾಲೇಜುಗಳು ತುಂಬಿದ್ದು ಅಗತ್ಯಕ್ಕಿಂತ ಹೆಚ್ಚಾಗಿ ಕಂಡಕಂಡಲ್ಲಿ ತಲೆ ಎತ್ತಿ ವೆ ಹಲವರುಷಗಳ ಹಿಂದೆ ಎಸ್ಸೆಸೆಲ್ಸಿ ನಂತರ ಪ್ರಥಮ ಪಿಯುಸಿ ಗೆ ಅದರಲ್ಲಿಯೂ ವಿಜ್ಞಾನ ವಿಷಯಕ್ಕೆ ಸೇರಬೇಕಾದರೆ ಪರ್ಸೆಂಟೇಜ್ ಇದ್ದರೂ ಕಾಲೇಜಿನ ಪ್ರವೇಶಕ್ಕೆ ಹರಸಾಹಸ ಪಡಬೇಕಾಗಿತ್ತು ಇದ್ದ ಬೆರಳೆಣಿಕೆಯಷ್ಟು ಕಾಲೇಜು ಗಳು ಉತ್ತಮ ಶಿಕ್ಷಣ ನೀಡುವಲ್ಲಿ ಸಫಲವಾಗಿದ್ದವು ಅದರೆ ಇತ್ತೀಚಿನ ವರ್ಷಗಳಲ್ಲಿ ಕಂಡ ಕಂಡಲ್ಲಿ ತಲೆ ಎತ್ತಿದ ಪಿಯುಕಾಲೇಜುಗಳು ದಿಢೀರ್ ಹಣಮಾಡುವ ಕಾಯಕವಾಗಿ ಪರಿಣಮಿಸಿದವು ಯಾವುದೋ ಕಿರಿದಾದ ಬಾಡಿಗೆ ಕಟ್ಟಡಗಳು ಗಾಳಿ ಬೆಳಕು ಬಾರದ ಕೊಠಡಿಗಳು ಸರಿಯಾದ ಲ್ಯಾಬ್ ಗಳಿಲ್ಲದ ಅವ್ಯವಸ್ಥೆ ಯಲ್ಲಿ ನಡೆಯುವ ಕಾಲೇಜುಗಳ ಸಂಖ್ಯೆ ಹ

ಅಮಲು ಅಮಲು -ಕೋಟೆ ಕಾಲಂ

ಅಮಲು ....ಅಮಲು  ಹರೀಶ್ ಹೆಚ್ ಆರ್   ಕೋಟೆ  ರಾಜ್ಯದಲ್ಲಿ ಸದ್ಯಕ್ಕಂತೂ ಕೋವಿಡ್ ಗಿಂತಲೂ ವೇಗವಾಗಿ ಪಸರಿಸುತ್ತಿದೆ ಅಮಲಿನ ಸುದ್ದಿ ಮಾಧ್ಯಮ ಗಳಿಗಂತೂ ಅದನ್ನು ಹೊರತು ಪಡಿಸಿ ಬೇರೆಸುದ್ದಿಯೇ ಇಲ್ಲವಾಗಿದೆ ಅದರಲ್ಲಿಯೂ ಟಿವಿ ಆ್ಯಂಕರ್ ಗಳು ಗಾಂಜಾ ಅಫೀಮು ಒಟ್ಟಿಗೆ ಸೇವಿಸಿದಂತೆ ಬಾಯಿಗೆ ಬಂದದ್ದನ್ನೆಲ್ಲಾ ಹರಟತೊಡಗಿವೆ ಪ್ಯಾನಲ್ ಚರ್ಚೆ ಗಳಿಗೆ ಸಿಕ್ಕಸಿಕ್ಕವನ್ನೆಲ್ಲಾ ಕರೆತಂದು ಅವುಗಳ ಅಭಿಪ್ರಾಯ ಪಡೆದುಕೊಳ್ಳುತ್ತಾ ಮೋರಿಯಲ್ಲಿ ಬಿದ್ದವಕ್ಕೆಲ್ಲಾ ಮಾನಕೊಡುವ ಕಾಯಕದಲ್ಲಿ ಬಿಜಿ ಯಾಗಿದ್ದಾರೆ ಬಹುಶಃ ಸ್ಯಾಂಡಲ್ ವುಡ್ನ ಹೆಸರು ಇದಕ್ಕೆ ತಳಕು ಹಾಕಿಕೊಳ್ಳ ದಿದ್ದರೆ ಇಷ್ಟೋಂದು ಮಹತ್ವ ಬರುತ್ತಿತ್ತೊ ಇಲ್ಲವೋ ಗೊತ್ತಿಲ್ಲಾ ಸಿನಿತಾರೆಯರ ಹೆಸರು ಬಂದಿದ್ದೆ ತಡ ಇನ್ನಿಲ್ಲದಷ್ಟು ಮಹತ್ವ ಪಡೆದು ಕೊಂಡಿತು ಅಮಲಿಗೂ ಮನೊರಂಜನಾ ಜಗತ್ತಿಗೂ ನಂಟು ಹೊಸತೇನಲ್ಲಾ ಅದೇರೀತಿ ನಾಗರೀಕ ಸಮಾಜದ ಲ್ಲಿ ಕಾಲಕಾಲಕ್ಕೆ ಹೊಸಹೊಸ ರೀತಿಯ ಮೈ ಮರೆಸಿ ಮುದಕೊಡುವ ವಸ್ತುಗಳ ಹೊಸಹೊಸ ಆವಿಷ್ಕಾರಗಳಾಗಿವೆ ಸಮಾಜದಲ್ಲಿ ಇದು ಬಹುಹಿಂದಿನಿಂದಲೂ ನಿರಂತರವಾಗಿ ಹಾಸುಹೊಕ್ಕಾಗಿದೆ ಆದರೆ ಎಲ್ಲಾವಿಚಾರಗಳಲ್ಲಿಯೂ ಈಗ ಅತಿರೇಕದ ಪರಮಾವಧಿ ಇರುವಂತೆ ಅಮಲುಕೋರತನ ಪರಾಕಾಷ್ಟೆ ತಲುಪಿರುವುದೇ ಇಂದು ಆತಂಕಕ್ಕೆ ಕಾರಣವಾಗಿದೆ ನಾಗರಿಕ ಎಂದುಕರೆಯುವ ಈ ಅನಾಗರಿಕ ಸಮಾಜದಲ್ಲಿ ಯಾವಾಗಲೂ ಶ್ರೀಮಂತ ಮಾಡುವ ದೊಡ್ಡತಪ್ಪನ್ನು ಹೆಮ್ಮೆಯಿಂದ ನೋಡುವ ಬಡವನ ಸಣ್ಣ ಲೋಪವನ್ನು ದೊಡ್ಡದಾಗಿಸುವ ಪ್ರಕ್ರಿಯೆ ಸಾ