ಲೇಖಕರು ಮತ್ತು ಸಂಪಾದಕರು
ಹರೀಶ್ ಹೆಚ್ ಆರ್
ಕೋಟೆ
ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಕನ್ನಡದಲ್ಲಿಯೇ ಆಲೋಚಿಸಿ ಕನ್ನಡದಲ್ಲಿಯೇ
ಮಾತನಾಡುವಕನ್ನಡ ಬಿಟ್ಟರೆ ಬೇರೆಭಾಷೆ ತಿಳಿಯದ ನನ್ನಂತಹ ಲಕ್ಷಾಂತರ ಕನ್ನಡಿಗರು ನಮ್ಮ ಭಾಷೆಯ
ಬಗ್ಗೆ ಎಷ್ಟರಮಟ್ಟಿಗೆ ಪ್ರೀತಿ ಹೊಂದಿದ್ದೇವೆ ಎಂದು ಅನುಮಾನಿಸುವಂತಾಗುತ್ತದೆ ಭಾರತದಲ್ಲಿರುವ
ಅಸಂಖ್ಯ ಭಾಷೆಗಳ ಪೈಕಿ ಶತಶತಮಾನಗಳಿಂದ ತನ್ನದೇ ಆದ ಲಿಪಿಯನ್ನು ಹೊಂದಿರುವ ಹೆಗ್ಗಳಿಕೆಯ ಕನ್ನಡ
ಇಂದು ಅಪ್ಪಟ ಕನ್ನಡಿಗರ ಬಾಯಿಯಲ್ಲಿ ಓದಲು ಬರುತ್ತದೆ ಬರೆಯೋಕೆ ಬರೊಲ್ಲಾ ಚೆನ್ನಾಗಿ ಮಾತನಾಡ್ತೀನಿ
ಎನ್ನುವ ಹಂತಕ್ಕೆ ಬಂದಿರುವುದನ್ನು ನೋಡಿದರೆ ಬೇಸರವಾಗುತ್ತದೆ ಭಾಷೆಯ ವಿಚಾರವಾಗಿ ನಾವು ಅಭಿಮಾನ
ಶೂನ್ಯರೇ ಅದರಲ್ಲಿ ಎರಡುಮಾತಿಲ್ಲಾ ಪಕ್ಕದ ಮನೆ ಆಂಟಿಗೆ ಚೂಡಿದಾರ ಕೊಡಿಸಿ ನಮ್ ತಾಯಿಗೆ ಹರಕಲು
ಸೀರೇನೆ ಸರಿ ನಿನಗೆ ಎನ್ನುವವರು ನಾವು ಈ ಎಲ್ಲಾ ಕಾರಣಗಳಿಂದ ದಶಕಗಳ ಹಿಂದೆಯೆ ಹೊಟ್ಟೆಪಾಡಿಗಾಗಿ
ಬಂದ ಅಕ್ಕಪಕ್ಕದ ರಾಜ್ಯದವರು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ವನ್ನಾಗಿಸಿ ಎಂದು ಕೂಗು
ಹಾಕಿದ್ದರೂ ಆಗಲೂ ಕೆಲ ಬುದ್ದಿಜೀವಿ ಗಳು ನಮ್ಮತನ ಮರೆತು ಆದರೆ ತಪ್ಪೇನು ಎಂದು ಸಹ
ಪ್ರತಿಪಾದಿಸಿದ್ದು ಹೇಸಿಗೆಯ ವಿಚಾರ ಬೆಂಗಳೂರಿನಲ್ಲಿ ತೊಂಬತ್ತರ ದಶಕದವರೆಗೂ ಕನ್ನಡಿಗರು ತಮಿಳು
ತೆಲುಗನ್ನು ಹೆಮ್ಮೆಯಿಂದಲೇ ಮಾತನಾಡುತ್ತಿದ್ದರು ಪರಭಾಷಾ ಚಿತ್ರಗಳನ್ನು ಮುಗಿಬಿದ್ದು
ನೋಡುತ್ತಿದ್ದರು ಆ ಪೀಳಿಗೆಯ ನಂತರ ಸ್ವಲ್ಪಮಟ್ಟಿಗೆ ಉಂಟಾದ ಜಾಗ್ರತಿ ಚಳುವಳಿ ಚಿತ್ರರಂಗ
ಬೆಂಗಳೂರಿನಲ್ಲಿ ನೆಲೆಯೂರಿದ್ದು ಹಾಗು ಬೆಂಗಳೂರಿಗೆ ಗ್ರಾಮಾಂತರ ಪ್ರದೇಶದ ವಿದ್ಯಾವಂತರ ವಲಸೆ(ಇದು
ಕನ್ನಡವನ್ನು ಬೆಂಗಳೂರಿನಲ್ಲಿಉಳಿಸುವಲ್ಲಿ ಅತ್ಯಂತ ಪ್ರಮುಖ ವಿಚಾರ ಎನಿಸಿದರೂ ಈ ಬಗ್ಗೆ ಯಾರೂ
ಮಾತನಾಡದಿರುವುದು ಅಚ್ಚರಿ) ಇತ್ತೀಚಿನ ವರ್ಷ ಗಳಲ್ಲಿ ಐಟಿ ಬಿಟಿ ಕಂಪೆನಿಗಳಲ್ಲಿ ಕನ್ನಡಿಗರು
ನಮ್ಮತನ ಮೆರೆಯುತ್ತಿದ್ದು ಹಲವೆಡೆ ಕನ್ನಡದಲ್ಲಿ ಮಾತನಾಡುವ ಕಲಿಸುವ ಹಾಗೂ ಸಾಂಸ್ಕೃತಿಕ
ಕಾರ್ಯಕ್ರಮಗಳ ನಡೆಸುವ ಮಟ್ಟಕ್ಕೆ ಭಾಷಾಪ್ರೇಮ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಆದರೆ
ಇತ್ತೀಚೆಗಿನ ವರ್ಷ ಗಳಲ್ಲಿ ಹಿಂದಿ ಹಾವಳಿ ನಮ್ಮ ಸಂಸ್ಕ್ರತಿ ಯ ಮೇಲೂ ಪರಿಣಾಮ ಬೀರುತ್ತಿದೆ
ಅತಿಯಾದ ಉತ್ತರಭಾರತೀಯರ ವಲಸೆ ನಮ್ಮ ಭಾಷಾ ಬಳಕೆಯಲ್ಲದೆ ಸ್ಥಳೀಯರ ಉದ್ಯೋಗಾವಕಾಶಗಳಿಗೂ ಪರಿಣಾಮ
ಬೀರುತ್ತಿದೆ ಈ ವಲಸೆ ಮಹಾನಗರಗಳಿಗೆ ಸೀಮಿತವಾಗದೆ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೂ
ವ್ಯಾಪಿಸಿದ್ದು ಗ್ರಾಮಾಂತರ ಪ್ರದೇಶದಲ್ಲು ಹಿಂದಿ ಬಿಹಾರಿ ಜಾರ್ಖಂಡ್ ಹೆಸರು ಜನರ ನಾಲಿಗೆ ಮೇಲೆ
ಹರಿದಾಡುತ್ತಿದೆ ಇನ್ನು ರಾಜ್ಯದ ಅಂಚಿನಲ್ಲಿ ಇರುವ ಗಡಿ ಜಿಲ್ಲೆಗಳಲ್ಲಿ ಈಗಾಗಲೇ ಪರಭಾಷಾ
ಪ್ರಾಬಲ್ಯ ಹೆಚ್ಚಾಗಿದೆ ನಿಧಾನವಾಗಿ ಕನ್ನಡತನ ಮಾಯವಾಗತೊಡಗಿದೆ ಅದಕ್ಕೆ ಪರಭಾಷಾ ಸರ್ಕಾರ ಗಳು
ಪರೋಕ್ಷಕುಮ್ಮಕ್ಕು ನೀಡಿದರೆ ನಮ್ಮ ಸರ್ಕಾರ ಗಳು ನಿರ್ಲಕ್ಷ್ಯ ತೋರಿವೆ ಇದರಪರಿಣಾಮವಾಗಿ ಕನ್ನಡದ
ನಾಮಫಲಕ ಶಾಲೆಗಳು ಮರೆಯಾಗತೊಡಗಿವೆ ಹೆಸರಿಗೇನೋ ಕನ್ನಡ ಅಭಿವ್ರದ್ದಿ ಗಾಗಿ ಪ್ರಾಧಿಕಾರ ಇದೆಯಾದರೂ
ಅದು ಹಲ್ಲುಕಿತ್ತಹಾವಾಗಿದೆ ಗಂಜಿಕೇಂದ್ರದ ಸ್ವರೂಪ ಪಡೆದುಕೊಂಡಿದ್ದು ಅಧ್ಯಕ್ಷರಾದವರು ಬಿಲ್ ಮಾಡಿ
ಸರಕಾರದ ಸವಲತ್ತು ಪಡೆದುಕೊಳ್ಳುವಲ್ಲಿಯೇ ನಿರತರಾದ ಕಾರಣ ಇವರಿಂದ ನಿರೀಕ್ಷೆ ಶೂನ್ಯ ಮೈಸೂರು ಅರಸರ
ಭಾಷಾ ಪ್ರೇಮದ ದ್ಯೋತಕ ವಾದ ಕನ್ನಡ ಸಾಹಿತ್ಯಪರಿಷತ್ತು ದಿನದಿಂದ ದಿನಕ್ಕೆ ತನ್ನ ಆಶಯದಿಂದ ದೂರ
ಸರಿದಿದೆ ಸಾಹಿತಿಗಳಿಗಿಂತ ಖುರ್ಚಿಗಾಗಿ ಹಪಾಹಪಿಸುವವರು ರಾಜಕಾರಣಿಗಳ ಬಾಲಂಗೋಚಿಗಳು ಅದಕ್ಕೆ
ಅಮರಿಕೊಂಡಿದ್ದಾರೆ ಅದರಲ್ಲಿಯೂ ಬಳಿಗಾರ್ ನಂತಹ ಅಧಿಕಾರ ಲಾಲಸೆಯ ಅಧಿಕಾರಿ ನಿವ್ರತ್ತಿಯ
ನಂತರದಲ್ಲಿ ಹುಡುಕಿಕೊಂಡ ಆಯಕಟ್ಟಿನ ಜಾಗವಾಗಿ ಸಾಹಿತ್ಯ ಪರಿಷತ್ತು ಮಾರ್ಪಟ್ಟು ಆತ ಐದುವರುಷ
ಅಧಿಕಾರದಲ್ಲಿರಲು ಮಾಡಿದ ನಾಟಕ ನ್ಯಾಯಾಲಯದ ಮೆಟ್ಟಿಲು ಹತ್ತುವಂತೆ ಮಾಡಿತು ಎಲ್ಲಾ ಜಿಲ್ಲಾ
ಕೇಂದ್ರಗಳಿಗೂ ತನ್ನದೇ ಸಂತಾನ ಪ್ರತಿಷ್ಠಾಪಿಸಿದ್ದಬಳಿಗಾರ್ ಅವರಿಗೆಲ್ಲಾ ಸರಕಾರದ ಅನುದಾನವನ್ನು
ನುಂಗಿ ನೀರುಕುಡಿಯುವ ವಿದ್ಯೆ ಹೇಳಿಕೊಟ್ಟದ್ದೇ ಸಾಧನೆಯೆ ಹೊರತು ಕನ್ನಡದ ಕೆಲಸವಾಗಲಿಲ್ಲ ಈಗ
ಮತ್ತೆ ಸಾಹಿತ್ಯ ಪರಿಷತ್ ಚುನಾವಣೆ ಸನ್ನಿಹಿತವಾಗಿದ್ದು ಸೇವೆ ಮಾಡಲು ಕನ್ನಡದ ಕಂದಗಳು
ಮುಗಿಬಿದ್ದಿವೆ ಕನ್ನಡ ಪರ ಸಂಘಟನೆ ವೇದಿಕೆಗಳಿಂದ ಒಂದಷ್ಟು ಕೆಲಸವಾಗಿದ್ದು ಸುಳ್ಳಲ್ಲಾ
ನಾಡುನುಡಿಗೆ ನೆಲ ಜಲದ ವಿಚಾರವಾಗಿ ಅನ್ಯಾಯ ವಾದಾಗ ಬೀದಿಗಿಳಿದು ಹೋರಾಡಿದ ಸಂಘಟನೆಗಳು ಕನ್ನಡದ
ಉಳುವಿಗೆ ಕಾಲಕಾಲಕ್ಕೆ ಕೊಡುಗೆ ನೀಡಿವೆ ಕೆಲ ನಾಯಕರ ಹಣದಾಸೆ ನಿಜವಾದ ಆಶಯ ಅರ್ಥ ಮಾಡಿಕೊಳ್ಳದ ಕೆಲ
ಸ್ವಾರ್ಥಿ ಗಳಿಂದ ಕೆಲ ಸಂಘಟನೆಗಳು ಹಾದಿತಪ್ಪಿದರೂ ಸಹ ಇನ್ನೂ ನಾಡುನುಡಿಗಾಗಿ ಹೋರಾಡುವ ಸಂಘಟನೆ
ಗಳು ಉಳಿದಿರುವುದು ಸಮಾಧಾನಕರ ಇನ್ನು ರಾಜ್ಯೋತ್ಸವ ಪ್ರಶಸ್ತಿಗಳ ಬಗ್ಗೆ ಮಾತನಾಡದಿರುವುದು ಒಳಿತು
ಹತ್ತಾರು ಅನರ್ಹ ರ ಜೊತೆಗೆ ಕೆಲವರಾದರೂ ಯೋಗ್ಯರಿಗೆ ಸಿಗುತ್ತಿದೆಯಲ್ಲಾ ಎಂಬುದೆ ಒಳ್ಳೆಯ ವಿಚಾರ
ಬರೆದರೆ ಮುಗಿಯದು ಎಚ್ಚರಿಸಲು ಇಷ್ಟುಸಾಕು ಎನಿಸುತ್ತದೆ...ಇನ್ನೊಮ್ಮೆ ಮಾಧ್ಯಮಗಳಲ್ಲಿನ ಕನ್ನಡದ
ಕಗ್ಗೊಲೆ ಬಗ್ಗೆ ಮತ್ತೆ ಬರೆಯುತ್ತೇನೆ ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ
ಕನ್ನಡವಾಗಿರು
ಬಂಧುಗಳೇ, ಪ್ರತಿಯೊಂದು ಜನರು ನೆಮ್ಮದಿಯಿಂದ ಬದುಕಲು ಇಷ್ಟಪಡುತ್ತಾರೆ, ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ ಮುಖ್ಯ ಸಮಸ್ಯೆಗಳು ಅಂದರೆ ಆರೋಗ್ಯ ಮತ್ತು ಹಣಕಾಸು ಮತ್ತು ಉದ್ಯೋಗ ಭದ್ರತೆ. ನಮ್ಮಲ್ಲಿ ಮೇಲ್ಕಂಡ ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರವಿದೆ , ನೀವು ಆತಂಕ ಪಡುವ ಅಗತ್ಯವಿಲ್ಲ, ಬನ್ನಿ ನಮ್ಮೂಡನೆ ಸೇರಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳರಿ. ನಾವು ಸಂವಹನ ಮಾಡಲು ಅಂತರ್ಜಾಲ ಮತ್ತು ನೇರ ಭೇಟಿ ಕಾರ್ಯಕ್ರಮ ಮೂಲಕ ಕೆಲವೊಂದು ಮಾರ್ಗದರ್ಶನಗಳನ್ನು ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನಮಗೆ ಕಳುಹಿಸಿದರೆ, ಮಾರ್ಗದರ್ಶನ ಅವಕಾಶ ನಿಮಗೆ ಲಭಿಸುತ್ತದೆ.

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info