ಘಟನೆ ವಿವರ:- ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ರಾಜ್ಯದ ದೊಡ್ಡ ಪರಂಪರೆ, ಇತಿಹಾಸ ನಾಶವಾಗಿದೆ. ಹೊಯ್ಸಳರ ವಿಷ್ಣುವರ್ಧನನ ಕಾಲದ ಸಾ.ಶ. 1113 ರಲ್ಲಿ ವಜ್ರದ ವ್ಯಾಪಾರಿಗಳಿಂದ ಕಟ್ಟಿಸಲ್ಪಟ್ಟ ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿ ಗ್ರಾಮದ ಚತುಷ್ಕೂಟ ಮಹಾಲಕ್ಷ್ಮಿ ದೇವಾಲಯದ ದಕ್ಷಿಣ ಗರ್ಭಗೃಹದಲ್ಲಿದ್ದ ಮಹಾಕಾಳಿ ಅಥವಾ ದಕ್ಷಿಣ ಭದ್ರಕಾಲಿ ಅಮ್ಮನವರ ವಿಗ್ರಹವನ್ನು ಒಡೆದು ಹಾಕಲಾಗಿದೆ. ( ಜಾರಿ ಬಿದ್ದಿದೆ ಎಂದೂ ಕೂಡ ಹೇಳಲಾಗುತ್ತಿದೆ) ಇಂತಹ ಪರಮನೀಚ ಕೃತ್ಯಕ್ಕೆ ಕಾರಣರಾದವರನ್ನು ಕಠಿಣ ಶಿಕ್ಷೆಗಳಿಂದ ದಂಡಿಸಬೇಕಿದೆ. ಇಂತಹ ಒಂದು ಭದ್ರಕಾಳಿಯ ವಿಗ್ರಹ ಅಪರೂಪದಲ್ಲಿ ಅಪರೂಪವಾಗಿತ್ತು. ಇದರ ರಕ್ಷಣೆಯ ಹೊಣೆ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ( ASI) ಇದಕ್ಕೆ ಉತ್ತರಿಸಿ, ಜವಾಬು ನೀಡಬೇಕಿದೆ. ತನ್ನ ಅಸಮರ್ಥತೆಯನ್ನು ಒಪ್ಪಿಕೊಳ್ಳಬೇಕಿದೆ. ಸಾಲದ್ದಕ್ಕೆ ಪರಂಪರೆಯ ಸಪ್ತಾಹವನ್ನು ಆಚರಿಸುತ್ತಿರುವ ಈ ವಾರದಲ್ಲಿ ಇದು ರಾಜ್ಯಕ್ಕೆ, ಪರಂಪರೆಗೆ ಆದ ದೊಡ್ಡ ನಷ್ಟವಾಗಿದೆ. ಭಕ್ತಾದಿಗಳ ಮನಸಿಗೆ ತುಂಬಾ ದುಃಖವಾಗಿದೆ. ಇದಕ್ಕೆ ಕಾರಣರಾದವರಿಗೆ ಧಿಕ್ಕಾರವಿರಲಿ ಎಂದು ಕೂಗುತ್ತಿದ್ದಾರೆ ಅದಾಗಿಯೇ ಬಿದ್ದು ಒಡೆದು ಹೋಯಿತು ಎಂಬ ಸಬೂಬು ಹೇಳದಿರಲಿ. ಸರಿಯಾದ ರೀತಿಯಲ್ಲಿ ತನಿಖೆ ನಡೆದು ಸತ್ಯ ಹೊರಬರಲಿ ಭಕ್ತಾದಿಗಳು ಆಗ್ರಹ ಪಡಿಸಿದ್ದಾರೆ. ಸ್ಥಳ ಪರಿಚಯ:- ದೊಡ್ಡಗದ್ದವಳ್ಳಿಯು ಹಾಸನ ಜಿಲ್ಲೆಯ ಒಂದು ಹಳ್ಳಿ. ಇದು ಹೊಯ್ಸ...
News/information/advertising/entertainment