ಲೇಖಕರು ಮತ್ತು ಸಂಪಾದಕರು ಹರೀಶ್ ಹೆಚ್ ಆರ್ ಕೋಟೆ ಬೇಡಾ ಬೇಡಾ ಎಂದ್ರೂ ....ಕಸಾಪ... ಕೋಟೆ ಕಾಲಂ ಹಾಸನ : ಕ.ಸಾ.ಪ ಎಡವಿದಕಾಲೇ ಎಡವುವಂತೆ ಬೇಡದ ನೆಂಟರೇ ಸದಾ ಮನೆಗೆ ವಕ್ಕರಿಸಿಕೊಳ್ಳುವಂತೆ ಬರೆಯುವುದೇ ಬೇಡಾ ಎಂದುಕೊಂಡರೂ ಸಾಹಿತ್ಯ ಪರಿಷತ್ತಿನ ಬಗ್ಗೆ ಬರೆಯದೇ ಇರಲು ಸಾಧ್ಯವಾಗುವುದೇ ಇಲ್ಲಾ ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು ಬಹುತೇಕರಿಗೆ ಅವರವರ ಮೆಂಟಾಲಿಟಿಗೆ ತಕ್ಕಂತೆ ಮುಖ್ಯ ರಸ್ತೆಯಲ್ಲಿರುವ ಬೆಲೆಬಾಳುವ ಹಾಗೂ ಬಾಡಿಗೆ ತರುವ ಕಟ್ಟಡವಾಗಿ ಕೆಲವರಿಗೆ ಸುಂದರ ಕಟ್ಟಡವಾಗಿ ಮತ್ತೆ ಕೆಲವರಿಗೆ ಜುಬ್ಬಾಧಾರಿ ಸಾಹಿತಿಗಳು ಓಡಾಡುವ ಮತ್ರೆ ಕೆಲವರಿಗೆ ಎಲ್ಲೋ ಇರಬೇಕಾದವರೆಲ್ಲಾ ಇಲ್ಲಿದ್ದಾರಲ್ಲಾ ಎಂಬ ಅಚ್ಚರಿ ಮೂಡಿಸುತ್ತದೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ ಗಮನಿಸಿದಾಗ ನಿಜಕ್ಕೂ ಅದ್ಬುತವಾದ ವ್ಯಕ್ತಿಗಳು ಸೇವೆಸಲ್ಲಿಸಿರುವುದು ಕಂಡು ಬರುತ್ತದೆ ಅದೇ ರೀತಿ ಕಾಲಘಟ್ಟ ಕಳೆದಂತೆ ಎಲ್ಲೋ ಒಂದುಕಡೆ ಎಲ್ಲೂ ಸಲ್ಲದವರೂ.ಇಲ್ಲಿ ಸಲ್ಲಿದ್ದಾರಲ್ಲಾ.ಅನಿಸುತ್ತದೆ ಆರಂಭದ ದಶಕಗಳಿಂದಲೂ ಬಹುಪಾಲು ಹೆಚ್.ಬಿ.ಜ್ವಾಲನಯ್ಯನವರೇ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದರು ಆ ಅವಧಿಯಲ್ಲಿ ಸಾಕಷ್...
News/information/advertising/entertainment