ಕೆ. ಡಿ. ಪಿ ತ್ರೈಮಾಸಿಕ ಸಭೆ ಮತ್ತು ಜಿಲ್ಲಾ ಸಚಿವರ ಪ್ರವಾಸ ಜಿಲ್ಲಾ ಪಂಚಾಯತ್. ಹಾಸನ ಕೆ.ಗೋಪಾಲಯ್ಯ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು ಹಾಸನ ಸರ್ಕಾರಿ ವಸತಿ ಅಥಿತಿ ಗೃಹಕ್ಕೆ ಆಗಮಿಸಲಿದ್ದಾರೆ. ಜಿಲ್ಲಾ 10.30 ಕ್ಕೆ ಜಿಲ್ಲಾಪಂಚಾಯಿತಿ ಹೊಯ್ಸಳ ಸಂಭಾಂಗಣದಲ್ಲಿ ನಡೆಯುವ 2020 ನೇ ಸಾಲಿನ ಹಾಸನ ತ್ರೈ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಹಿಸಲಿದ್ದಾರೆ. ಸಂಜೆ 4.30ಕ್ಕೆ ಹಾಸನದಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ತೆರಳಲಿದ್ದಾರೆ. **************************** ಅಂತರಾಷ್ಟ್ರೀಯ ದತ್ತು ಮಾಸಾಚರಣೆ - ಈ ಬಾರಿ ನವೆಂಬರ್ ತಿಂಗಳನ್ನು ಅಂತರಾಷ್ಟ್ರೀಯ ದತ್ತು ಮಾಸಾವನ್ನಾಗಿ ಆಚರಿಸಲಾಗುತ್ತದೆ. ಪ್ರಸ್ತುತ ಬಾಲಾನ್ಯಾಯ (ಮಕ್ಕಳ ಪಾಲನೆಮತ್ತು ರಕ್ಷಣೆ) ಅಧಿನಿಯಮ -2015 ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಮತ್ತು ಕಾಮಧೇನು ಶಿಶುಕೇಂದ್ರ ಎಂಬ ಎರಡು ವಿಶೇಷ ದತ್ತು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಸದರಿ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಯಂತೆ ಕಾರ...
News/information/advertising/entertainment