ವಿಷಯಕ್ಕೆ ಹೋಗಿ

ಸ್ವಾಮ್ ಗುಳು-ಕೋಟೆ ಕಾಲಂ.

ವಿಮರ್ಶಾ -vimarsha

 ಸ್ವಾಮ್ ಗುಳು..

> ಯಾರೇ ಆಗಲಿ ಎಂತವನೇ ಆಗಲಿ ಹತ್ತುಜನರಿಗೆ ಕೆಡುಕು ಮಾಡುತ್ತಾನೆ ಎಂದರೆ ಅವನು ದೈವಾ ಅಥವಾ ದೆವ್ವಾಂಶ ಸಂಭೂತನೇ ಆದರು ಸಾರಾ ಸಗಟಾಗಿ ತಿರಸ್ಕರಿಸಬೇಕು ಇಡೀ ಸಮಾಜಕ್ಕೆ ಕಂಟಕನಾಗುತ್ತಾನೆ ಎಂದಾದರೆ ಆತ ರಾಜಕಾರಣಿಯಾಗಲಿ ಸಿನಿಮಾ ನಡನಾಗಲಿ ಸಾಹಿತಿಯಾಗಲಿ ಸ್ವಾಮೀಜಿಯಾಗಲಿ ಆತ ತಿರಸ್ಕಾರಕ್ಕೆ ಅರ್ಹ ಮನುಷ್ಯ ವಿದ್ಯಾವಂತ ನಾದಷ್ಟು ಆಧುನೀಕರಣ ಕ್ಕೆ ಮೈ ಒಡ್ಡಿದಂತೆ ಹಾಗು ವಿಜ್ಞಾನ ತಂತ್ರಜ್ಞಾನ ಅಳವಡಿಸಿಕೊಂಡಷ್ಟು ಜಾತಿಯ ಬಂಧದಿಂದ ವಿಮುಕ್ತನಾದಂತೆ ಎಂದು ಭಾವಿಸಲಾಗಿತ್ತು ಅದರೆ ಅದೆಲ್ಲವೂ ತಲೆಕೆಳಕಾಗಿದ್ದು ದಿನದಿಂದ ದಿನಕ್ಕೆ ಜಾತಿ ವ್ಯವಸ್ಥೆ ಬಲಗೊಳ್ಳುತ್ತಾ ಸಾಗಿದೆ ತಮ್ಮ ರಾಜಕೀಯ ಅಧಿಕಾರಕ್ಕಾಗಿ ತಮ್ಮ ಸಂಖ್ಯಾಬಲವನ್ನು ಪ್ರದರ್ಶಿಸಲು ಮುಂದಾದ ರಾಜಕಾರಣಿಗಳು ಹಾಗೂ ಜಾತಿನಿರ್ಮೂಲ ಮಾಡಬೇಕಾದ ಸರಕಾರಗಳು ಜಾತಿಗಳ ಓಲೈಕೆಗಾಗಿಯೇ ಯೋಜನೆಗಳನ್ನು ಘೋಷಿಸಲು ಮುಂದಾದ ಪರಿಣಾಮ ಜಾತಿ ಉಪಜಾತಿ ಗೊಂದು ಮಠಗಳು ಸ್ವಾಮೀಜಿಗಳು ಹುಟ್ಟಿಕೊಂಡರು ಆ ಸಮುದಾಯದ ನಾಯಕರು ರಾಜಕಾರಣಿಗಳು ಅವರನ್ನು ಪೋಷಿಸಿ ತಮ್ಮ ಕೈ ಗೊಂಬೆಗಳನ್ನು ಮಾಡಿಕೊಂಡ ಪರಿಣಾಮ ಎಷ್ಟೋ ಮಠಗಳ ಸ್ವಾಮೀಜಿಗಳು ಡಮ್ಮಿ ಫಿಗರ್ ಗಳಾಗಿದ್ದಾರೆ ಬಹುತೇಕ ಮಠಗಳು ಶಿಕ್ಷಣ ಸಂಸ್ಥೆ ನಡೆಸಯವುದನ್ನೇ ಪ್ರಮುಖ ಕಾಯಕವನ್ನಾಗಿದಿಕೊಂಡಿವೆ ಯಾವ ಉದ್ಯಮಿಗೂ ಕಡಿಮೆ ಇಲ್ಲದಂತೆ ಹಣ ಬಾಚುತ್ತಿವೆ ಇವುಗಳ ನಡುವೆಯೂ ದಶಕ ಗಳಿಂದ ಲಕ್ಷಾಂತರ ಜನರಿಗೆ ವಿದ್ಯೆ ಅನ್ನ ಆಸರೆ ಉದ್ಯೋಗ ಬದುಕನ್ನು ನೀಡುತ್ತಿರುವ ಮಠಗಳಿದ್ದು ಸಮಾಜದ ಸ್ವಾಸ್ಥ್ಯ ಹಾಗೂ ಕಾವಿಯ ಗೌರವ ಕಾಪಾಡುತ್ತಿವೆ ದುರಾದೃಷ್ಟವಶಾತ್ ಇತ್ತೀಚೆಗೆ ಕೆಲ ಮಠಗಳು ತಮ್ಮ ಸಮುದಾಯದ ಶ್ರೀಮಂತ ರು ಹಾಗೂ ರಾಜಕಾರಣಿಗಳ ಬಾಲಬಡುಕರಂತಾಗಿರುವುದು ದುರಂತ ಹಿಂದೆ ಪುಡಾರಿಗಳು ಮಾಡುತ್ತಿದ್ದ ಕೆಲಸವನ್ನು ಸ್ವಾಮೀಜಿಗಳು ಮಾಡತೊಡಗಿದ್ದಾರೆ ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಲು ರಾಜಕೀಯ ಪಕ್ಷಗಳ ನಾಯಕರ ಮನೆ ಬಾಗಿಲು ಕಾಯುವ ಕೆಲಸವನ್ನು ನಿರ್ಲಜ್ಜೆಯಿಂದ ಮಾಡುವುದನ್ನು ಕಂಡಿದ್ದೇ ವೆ ತಮಗೆ ಬೇಕಾದವರಿಗೆ ಹಣ ಕ್ರೋಡೀಕರಿಸುವುದರಿಂದ ಹಿಡಿದು ಎಲ್ಲಾರೀತಿಯ ಒಳ ರಾಜಕೀಯ ಮಾಡುತ್ತಾರೆ ಇನ್ನು ಗೆದ್ದ ನಂತರ ಮಂತ್ರಿಗಿರಿಗಾಗಿ ತಮ್ಮವರ ಪರ ಲಾಬಿ ಮಾಡುವುದಲ್ಲದೆ ಎಲಗಲಾರೀತಿಯ ಧಮಕಿ ಹಾಕಿಜನಾಂಗವನ್ನು ಎತ್ತಿಕಟ್ಟುವ ಕೆಲಸಕ್ಕೂ ಮುಂದಾಗುತ್ತಾರೆ ತಮ್ಮ ಶಿಷ್ಯ ಸಮುದಾಯದ ವ್ಯಕ್ತಿ ಎಂಬಕಾರಣಕ್ಕೆ ಶ್ರೀಮಂತ ರಾಜಕಾರಣಿಯ ಮನೆ ರೈಡ್ ಆದರೂ ಓಡುತ್ತಾರೆ ಕೊಲೆಕೇಸಿನಲ್ಲಿ ಬಂಧನಕ್ಕೊಳಗಾದರೂ ಬಾಯಿಬಡಿದುಕೊಳ್ಳುತ್ತಾರೆ ನಮ್ಮವರು ನಿರಪರಾಧಿ ಎಂದು ಅರಂಭದಲ್ಲಿ ಇವರೇ ತೀರ್ಪು ನೀಡುತ್ತಾರೆ ಜನ ಸೇರಿಸುತ್ತಾರೆ ಒಟ್ಟಾರೆ ಹಣವಂತನ ಓಲೈಕೆಗೆ ಇನ್ನಿಲ್ಲದ ಶ್ರಮ ಪಡುತ್ತಾರೆ ಆದರೆ ಅದೇ ಸಮುದಾಯದ ಬಡವ ನಿರಪರಾಧಿಯಾಗಿದ್ದರೂ ಶಿಕ್ಷೆ ಅನುಭವಿಸಿದರೆ ಅದು ಇವರ ಲೆಕ್ಕಕ್ಕಿಲ್ಲ ಅದೇ ಸಮುದಾಯದ ಬಡವನನ್ನು ಹಾಡಹಗಲೇ ಕಡಿದು ಕೊಂದರೂ ಇವರಿಗೆ ಸಂಬಂದವೇ ಇರುವುದಿಲ್ಲ ಬರಿಯ ಕಾಲಿಗೆ ಭಕ್ತಿಯಿಂದ ಬೀಳುವ ಭಕ್ತನಿಗಿಂತ ಸ್ವಾಮೀಜಿಗಳಿಗೆ ಲಕ್ಷಲಕ್ಷ ಕಾಣಿಕೆ ನೀಡುವ ಭಕ್ತರ ಹಿತಮುಖ್ಯ ಇನ್ನು ವಿಧಾನಸೌದಧ ಮೊಗಸಾಲೆಯಲ್ಲಿ ತಮಗೆ ಬೇಕಾದವರ ಫೈಲ್ ಹಿಡಿದು ಮಂತ್ರಿಗಳ ಕೊಠಡಿಗಳ ಮುಂದೆ ನಿಂತಿರುವ ಕಾವಿಧಾರಿಗಳನ್ನು ಕಂಡಾಗ ಯಾವ ಬ್ರೋಕರ್ ಗಳಿಗೂ ಕಡಿಮೆ ಇಲ್ಲಾ ಎನಿಸುತ್ತದೆ ಭಗವಂತನ ಪ್ರತಿನಿಧಿಗಳು ಎನ್ನುವ ಸ್ವಾಮೀಜಿಗಳು ಅವರು ಯಾವ ಜಾತಿಯೇ ಆಗಲಿ ಜನಾಂಗವೇ ಆಗಲಿ ಆದ್ಯತೆ ಏ ನಿದ್ದರು ಕಾಂಚಾಣದ ಪರ ಅದಿಲ್ಲದವನು ಭಗವಂತನ ಬಳಿಯೂ ನಗಣ್ಯ ಚಲಾವಣೆಯಲ್ಲಿದ್ದರೆ ಮಾತ್ರ ನಾಣ್ಯ
ಲೇಖಕರು ಮತ್ತು ಸಂಪಾದಕರು *ಹರೀಶ್ ಹೆಚ್ ಆರ್ ಕೋಟೆ *

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆರೋಗ್ಯ ಮತ್ತು ಸಂತ್ರೃಪ್ತ ಜೀವನ

ಬಂಧುಗಳೇ, ಪ್ರತಿಯೊಂದು ಜನರು ನೆಮ್ಮದಿಯಿಂದ ಬದುಕಲು ಇಷ್ಟಪಡುತ್ತಾರೆ, ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ  ಮುಖ್ಯ ಸಮಸ್ಯೆಗಳು ಅಂದರೆ ಆರೋಗ್ಯ ಮತ್ತು ಹಣಕಾಸು ಮತ್ತು  ಉದ್ಯೋಗ ಭದ್ರತೆ. ನಮ್ಮಲ್ಲಿ ಮೇಲ್ಕಂಡ  ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರವಿದೆ , ನೀವು ಆತಂಕ ಪಡುವ ಅಗತ್ಯವಿಲ್ಲ, ಬನ್ನಿ ನಮ್ಮೂಡನೆ ಸೇರಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳರಿ.   ನಾವು ಸಂವಹನ ಮಾಡಲು ಅಂತರ್ಜಾಲ ಮತ್ತು ನೇರ ಭೇಟಿ ಕಾರ್ಯಕ್ರಮ ಮೂಲಕ  ಕೆಲವೊಂದು ಮಾರ್ಗದರ್ಶನಗಳನ್ನು ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನಮಗೆ ಕಳುಹಿಸಿದರೆ, ಮಾರ್ಗದರ್ಶನ ಅವಕಾಶ ನಿಮಗೆ ಲಭಿಸುತ್ತದೆ.

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...