ವಿಷಯಕ್ಕೆ ಹೋಗಿ

ಅಮಲು ಅಮಲು -ಕೋಟೆ ಕಾಲಂ

ಅಮಲು ....ಅಮಲು

 ಹರೀಶ್ ಹೆಚ್ ಆರ್ 
 ಕೋಟೆ 


ರಾಜ್ಯದಲ್ಲಿ ಸದ್ಯಕ್ಕಂತೂ ಕೋವಿಡ್ ಗಿಂತಲೂ ವೇಗವಾಗಿ ಪಸರಿಸುತ್ತಿದೆ ಅಮಲಿನ ಸುದ್ದಿ ಮಾಧ್ಯಮ ಗಳಿಗಂತೂ ಅದನ್ನು ಹೊರತು ಪಡಿಸಿ ಬೇರೆಸುದ್ದಿಯೇ ಇಲ್ಲವಾಗಿದೆ ಅದರಲ್ಲಿಯೂ ಟಿವಿ ಆ್ಯಂಕರ್ ಗಳು ಗಾಂಜಾ ಅಫೀಮು ಒಟ್ಟಿಗೆ ಸೇವಿಸಿದಂತೆ ಬಾಯಿಗೆ ಬಂದದ್ದನ್ನೆಲ್ಲಾ ಹರಟತೊಡಗಿವೆ ಪ್ಯಾನಲ್ ಚರ್ಚೆ ಗಳಿಗೆ ಸಿಕ್ಕಸಿಕ್ಕವನ್ನೆಲ್ಲಾ ಕರೆತಂದು ಅವುಗಳ ಅಭಿಪ್ರಾಯ ಪಡೆದುಕೊಳ್ಳುತ್ತಾ ಮೋರಿಯಲ್ಲಿ ಬಿದ್ದವಕ್ಕೆಲ್ಲಾ ಮಾನಕೊಡುವ ಕಾಯಕದಲ್ಲಿ ಬಿಜಿ ಯಾಗಿದ್ದಾರೆ ಬಹುಶಃ ಸ್ಯಾಂಡಲ್ ವುಡ್ನ ಹೆಸರು ಇದಕ್ಕೆ ತಳಕು ಹಾಕಿಕೊಳ್ಳ ದಿದ್ದರೆ ಇಷ್ಟೋಂದು ಮಹತ್ವ ಬರುತ್ತಿತ್ತೊ ಇಲ್ಲವೋ ಗೊತ್ತಿಲ್ಲಾ ಸಿನಿತಾರೆಯರ ಹೆಸರು ಬಂದಿದ್ದೆ ತಡ ಇನ್ನಿಲ್ಲದಷ್ಟು ಮಹತ್ವ ಪಡೆದು ಕೊಂಡಿತು ಅಮಲಿಗೂ ಮನೊರಂಜನಾ ಜಗತ್ತಿಗೂ ನಂಟು ಹೊಸತೇನಲ್ಲಾ ಅದೇರೀತಿ ನಾಗರೀಕ ಸಮಾಜದ ಲ್ಲಿ ಕಾಲಕಾಲಕ್ಕೆ ಹೊಸಹೊಸ ರೀತಿಯ ಮೈ ಮರೆಸಿ ಮುದಕೊಡುವ ವಸ್ತುಗಳ ಹೊಸಹೊಸ ಆವಿಷ್ಕಾರಗಳಾಗಿವೆ ಸಮಾಜದಲ್ಲಿ ಇದು ಬಹುಹಿಂದಿನಿಂದಲೂ ನಿರಂತರವಾಗಿ ಹಾಸುಹೊಕ್ಕಾಗಿದೆ ಆದರೆ ಎಲ್ಲಾವಿಚಾರಗಳಲ್ಲಿಯೂ ಈಗ ಅತಿರೇಕದ ಪರಮಾವಧಿ ಇರುವಂತೆ ಅಮಲುಕೋರತನ ಪರಾಕಾಷ್ಟೆ ತಲುಪಿರುವುದೇ ಇಂದು ಆತಂಕಕ್ಕೆ ಕಾರಣವಾಗಿದೆ ನಾಗರಿಕ ಎಂದುಕರೆಯುವ ಈ ಅನಾಗರಿಕ ಸಮಾಜದಲ್ಲಿ ಯಾವಾಗಲೂ ಶ್ರೀಮಂತ ಮಾಡುವ ದೊಡ್ಡತಪ್ಪನ್ನು ಹೆಮ್ಮೆಯಿಂದ ನೋಡುವ ಬಡವನ ಸಣ್ಣ ಲೋಪವನ್ನು ದೊಡ್ಡದಾಗಿಸುವ ಪ್ರಕ್ರಿಯೆ ಸಾಮಾನ್ಯ ಸಾರಾಯಿ ಕುಡಿದು ಫುಟ್ಪಾತ್ನಲ್ಲಿ ಮಲಗಿದವನನ್ನು ಉಗಿಯುವಂತೆ ಡ್ರಗ್ಸ್ ನ ಅಮಲಿನಲ್ಲಿ ಅನಾಹುತ ಎಸಗುವ ಶ್ರೀಮಂತ ರ ಮಕ್ಕಳನ್ನು ಉಗಿಯದೆ ಅವರು ಮಾಡಿರುವ ಘನ ಕಾರ್ಯ ಗಳನ್ನು ಪರೋಕ್ಷವಾಗಿ ಬೆಂಬಲಿಸುವ ನಮ್ಮ ಸಮಾಜದ ಧೋರಣೆ ಸಹ ಅಮಲುಕೋರರನ್ನು ಯಾರು ಏನು ಮಾಡಲಾಗದ ಸ್ಥಿತಿಯನ್ನು ನಿರ್ಮಾಣಮಾಡಿದೆ ಕಡಿಮೆ ದರ್ಜೆ ಯ ಮದ್ಯ ಕುಡಿಯುವ ಬಡವನ ಹಣ ಸರ್ಕಾರದ ಪಾಲಾದರೆ ಡ್ರಗ್ಸ್ ನ ದುಬಾರಿ ಹಣ ಶತ್ರು ರಾಷ್ಟ್ರದ ಪಾಲಾಗಿ ಭಯೋತ್ಪಾದನೆಗೆ ಬಳಕೆಯಾಗುತ್ತಿದೆ ಅಮಲಿನಲ್ಲೂ ದೇಶಕ್ಕೆ ಶ್ರೀಮಂತ ರಿಂದ ಕಂಟಕವೇ ಹೊರತು ಬಡವನಿಂದಲ್ಲ ಮಾದಕದ್ರವ್ಯ ದ ನೆಟ್ವರ್ಕ್ ಅತ್ಯಂತ ವ್ಯವಸ್ಥಿತ ವಾಗಿಯೂ ಪ್ರಭಾವಿಯಾಗಿಯೂ ಇರುವುದರಿಂದ ಏಕಾಏಕಿ ಅದನ್ನು ನಿರ್ನಾಮ ಮಾಡಲಾಗುತ್ತದೆ ಎಂದು ಅಂದುಕೊಳ್ಳುವುದು ಮೂರ್ಖತನ ಕನಿಷ್ಠಪಕ್ಷ ಕಡಿವಾಣಹಾಕುವ ಕೆಲಸವಾದರೂ ಆದರೆ ಅದೇ ಸಮಾಧಾನ ಇಲ್ಲವೇ ಇದುಸಹ ಮಾಧ್ಯಮ ಗಳಿಗೆ ಮೂರುದಿನಕ್ಕೆ ಆಹಾರವಾಗುವ ನಂತರ ಸತ್ತಸುದ್ದಿಯಾಗುವ ಸಾಧ್ಯತೆಗಳಿವೆ ನಮ್ಮಲ್ಲಿ ಜೈಲು ಬೇಲು ನ್ಯಾಯಾಲಯ ಪೊಲೀಸ್ ವ್ಯವಸ್ಥೆ ಹಾಗೂ ರಾಜಕಾರಣಕ್ಕೆ ಬೆಸೆದಿರುವ ನಂಟನ್ನು ಗಮನಿಸಿದರೆ ಈ ಪ್ರಕರಣಗಳಲ್ಲಿನ ಸಣ್ಣಮೀನುಗಳಿಗೆ ಶಿಕ್ಷೆಯಾದರೂ ಆಗಬಹುದು ದೊಡ್ಡಮೀನುಗಳನ್ನು ಮುಟ್ಟವುದಂತೂ ಅಸಾಧ್ಯ ಎನಿಸುತ್ತದೆ ವಿಮರ್ಶಾ -vimarsha

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆರೋಗ್ಯ ಮತ್ತು ಸಂತ್ರೃಪ್ತ ಜೀವನ

ಬಂಧುಗಳೇ, ಪ್ರತಿಯೊಂದು ಜನರು ನೆಮ್ಮದಿಯಿಂದ ಬದುಕಲು ಇಷ್ಟಪಡುತ್ತಾರೆ, ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ  ಮುಖ್ಯ ಸಮಸ್ಯೆಗಳು ಅಂದರೆ ಆರೋಗ್ಯ ಮತ್ತು ಹಣಕಾಸು ಮತ್ತು  ಉದ್ಯೋಗ ಭದ್ರತೆ. ನಮ್ಮಲ್ಲಿ ಮೇಲ್ಕಂಡ  ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರವಿದೆ , ನೀವು ಆತಂಕ ಪಡುವ ಅಗತ್ಯವಿಲ್ಲ, ಬನ್ನಿ ನಮ್ಮೂಡನೆ ಸೇರಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳರಿ.   ನಾವು ಸಂವಹನ ಮಾಡಲು ಅಂತರ್ಜಾಲ ಮತ್ತು ನೇರ ಭೇಟಿ ಕಾರ್ಯಕ್ರಮ ಮೂಲಕ  ಕೆಲವೊಂದು ಮಾರ್ಗದರ್ಶನಗಳನ್ನು ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನಮಗೆ ಕಳುಹಿಸಿದರೆ, ಮಾರ್ಗದರ್ಶನ ಅವಕಾಶ ನಿಮಗೆ ಲಭಿಸುತ್ತದೆ.

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...