ವಿಷಯಕ್ಕೆ ಹೋಗಿ

ಅಂಕೆ ಇಲ್ಲದವಕ್ಕೆ ಅಂಕುಶ ಬೇಕೇ ಬೇಕು -ಕೋಟೆ ಕಾಲಂ


ಲೇಖಕರು ಮತ್ತು  ಸಂಪಾದಕರು 
ಹರೀಶ್ ಹೆಚ್ ಆರ್ 
ಕೋಟೆ 



ಮೊನ್ನೆ ಉತ್ತರ ಕರ್ನಾಟಕದಾದ್ಯಂತ ಎಡಬಿಡದೆ ಸುರಿದ ಮಳೆಗೆ ಉಕ್ಕಿಹರಿದ ನದಿ ಹಳ್ಳಕೊಳ್ಳ ಗಳ ಸೊಕ್ಕಿಗೆ ಜನಜೀವನ ಅಯ್ಯೋ ಶಿವನೆ ಎಂಬಂತಾಗಿತ್ತು ಮಕ್ಕಳು ಬಾಣಂತಿ ನೀರಿನಲ್ಲಿ ಸಿಲುಕಿ ಕಂಗಾಲಾದ ಸ್ಥಿತಿ ಮನೆಕಳೆದು ಕೊಂಡು ಬೀದಿಯಲ್ಲಿ ರೋದಿಸುತ್ತಾ ನಿಂತಜನ ಉಕ್ಕಿಹರಿಯುವ ನೀರಿನಲ್ಲಿ ಸಿಲುಕಿ ನೆರವಿಗಾಗಿ ಅಂಗಲಾಚುವ ಅಮಾಯಕರ ಕಣ್ಣೀರು ತಿನ್ನಲು ತಾಟನ್ನು ಉಳಿಸದಂತೆ ಎಲ್ಲವನ್ನು ಬಳಿದುಕೊಂಡು ಹೋಗಿ ಬದುಕನ್ನು ಮೂರಾಬಟ್ಟೆ ಮಾಡಿದ ಜೀವನದಿಗಳನ್ನು ಶಪಿಸುವ ಹೆಂಗಳೆಯರು ನದಿಯಲ್ಲಿ ಕೊಚ್ಚಿಹೋದ ಮನೆಯ ಯಜಮಾನ ತಿರುಗಿ ಜೀವಂತಸಿಕ್ಕಾನೇನೋ ಎಂದು ಕಣ್ಣೀರಜೊತೆಗೆ ಆಶಾಭಾವನೆ ಹೊತ್ತ ಮನೆಯವರು ತಿಂಗಳು ಗಟ್ಟಲೆ ನಿಗಾವಹಿಸಿ ಬೆಳೆದ ಬೆಳೆ ಕಣ್ಣೆದುರೆ ನೀರುಪಾಲಾದರೂ ಏನನ್ನು ಮಾಡಲಾಗದ ಅಸಹಾಯಕತೆ ಹೀಗೆ ಹತ್ತಾರು ತರಹದ ನೋವು ಸಂಕಷ್ಟಗಳನ್ನು ನಮ್ಮದೇ ರಾಜ್ಯದ ಜನಗಳು ಅನುಭವಿಸುವುದನ್ನು ಕಂಡು ಮರುಗದ ಮಾನವರಿಲ್ಲ ಇಂತಹ ಸಂದರ್ಭದಲ್ಲಿ ಟಿವಿ ಚಾನಲ್ ವೊಂದರಲ್ಲಿ ಪದೇಪದೇ ತೋರಿಸಲಾಗುತ್ತಿತ್ತು ಮಳೆಅನಾಹುತದ ಅದ್ಭುತ ದ್ರಶ್ಯಗಳು ನಮ್ಮಲ್ಲಿ ಮಾತ್ರ ಎಂದು ಆ ಕಾರ್ಯಕ್ರಮ ವೀಕ್ಷಿಸಿದರೆ ಅದರಲ್ಲಿ ಮಳೆಹಾನಿಯಿಂದ ತೊಂದರೆಗೀಡಾದವರ ಕ್ಲಿಪಿಂಗ್ ತೋರಿಸಲಾಗುತ್ತಿತ್ತು ಅದರಲ್ಲಿ ಮನೆಮಠ ಕಳೆದುಕೊಂಡವರ ರೋದನೆ ಮನಕಲಕುವಂತಿತ್ತು ಇವುಗಳು ಅದ್ಬುತ ದ್ರಶ್ಯಗಳೆ ಇನ್ನೊಬ್ಬರ ನೋವು ಆನಂದಿಸುವ ವಿಚಾರವೇ ಶೀರ್ಷಿಕೆ ಕೊಡುವಲ್ಲಿ ಚಾನಲ್ ನವರ ಬೌದ್ಧಿಕ ದಿವಾಳಿತನ ಇದಕ್ಕೆ ಸಾಕ್ಷಿಯಾಗಿತ್ತು ಇದಕ್ಕೆ ಕಾರಣ ವೀಕ್ಷಕರನ್ನು ಆಕರ್ಷಿಸುವ ಟಿಅರ್ ಪಿ ಹೆಚ್ಚಿಸಿಕೊಳ್ಳುವ ಧಾವಂತ ಇದಕ್ಕಾಗಿ ನ್ಯೂಸ್ ಚಾನಲ್ ಗಳು ಮಾಡುತ್ತಿರುವ ಅವಾಂತರ ಒಂದೆರಡಲ್ಲಾ ಡ್ರಗ್ಸ್ ಪೆಡ್ಲರ್ ಗಳ ವಿಚಾರಬಂದಾಗ ಇಬ್ಬರು ಸಿನಿಮಾನಟಿಯರನ್ನು ಹಾಸಿಗೆಯಿಂದ ಎಬ್ಬಿಸುವುದರಿಂದ ಆರಂಭಿಸಿ ಬಾತ್ರೂಮಿಗೆ ಕರೆದೊಯ್ದು ನಿತ್ಯಕರ್ಮ ಮಾಡಿಸಿ ತಿಂಡಿತಿನ್ನಿಸಿ ಬಟ್ಟೆ ಹಾಕಿಸಿ ವಿಚಾರಣೆಗೆ ಕರೆದೊಯ್ದು ನಂತರ ಪರಪ್ಪನ ಅಗ್ರಹಾರದವರೆಗೂ ಕರೆದೊಯ್ದು ಬಿಟ್ಟು ಬಂದಿದ್ದಲ್ಲದೆ ಅಲ್ಲಿ ಅವರು ತಿಂದಿದ್ದು ಬಿಟ್ಟಿದ್ದುಕಿತ್ತಾಡಿದ್ದು ಅತ್ತಿದ್ದು ಎಲ್ಲವನ್ನು ದಿನವಿಡಿ ಚಾನಲ್ ಗಳು ತೋರಿಸಿ ಕರ್ನಾಟಕದ ಬಹುದೊಡ್ಡ ಪ್ರಚಲಿತ ವಿದ್ಯಮಾನ ಈ ನಟಿಯರು ಡ್ರಗ್ಸ್ ಕೇಸಿನಲ್ಲಿ ತಗಲಾಕಿಕೊಂಡಿರುವುದು ಎಂಬಂತೆ ಬಿಂಬಿಸಿದ್ದು ಅಸಹ್ಯ ತರಿಸಿತ್ತು ಪ್ರತಿನಿತ್ಯ ಇಂತಹದ್ದೇ ಕೆಲಸಕ್ಕೆ ಬಾರದ ವಿಚಾರಗಳು ಕೋವಿಡ್ ಅನ್ನು ಅತಿಹೆಚ್ಚು ವೈಭವೀಕರಿಸಿ ಜನರಿಗೆ ಅದರ ಬಗ್ಗೆ ಅರಿವು ಮೂಡಿಸುವ ಬದಲು ಬೆದರುವಂತೆ ಮಾಡಿದ್ದು ಹಾಗೂ ಕೋವಿಡ್ ಬಂದರೆ ಸಾವೇಗತಿ ಎಂಬಂತೆ ಬಿಂಬಿಸಿದ್ದು ಅಕ್ಷಮ್ಯ ಇನ್ನು ಯಾರದೋ ಮನೆಯ ಜಗಳಕ್ಕೆ ಮೂಗುತೂರಿಸುವುದು ತಮಗೆ ಬೇಕಾದ ಹಾಗೆ ಪ್ಯಾನೆಲ್ ಚರ್ಚೆ ತಾವೇ ನ್ಯಾಯಾಧೀಶ ರಂತೆ ತೀರ್ಪು ಕೊಡುವುದು ರೇಜಿಗೆ ತರಿಸುತ್ತವೆ ಇವೆಲ್ಲವೂ ಓನ್ಲಿ ಫಾರ್‌ ಟಿಆರ್ಪಿ ಟಿ ಆರ್ ಪಿ ಅಂದರೆ ಸುದ್ದಿವಾಹಿನಿಗಳ ವಾರದ ರೇಟಿಂಗ್ ಇದರ ಆಧಾರದ ಮೇಲೆಯೆ ಆಯಾ ಚಾನಲ್ ನ ಯೋಗ್ಯತೆ ಅಳೆಯಲಾಗುತ್ತದೆ ಜಾಹಿರಾತು ಸಂಸ್ತೆಗಳು ಅದರ ಆಧಾರದ ಮೇಲೆ ಚಾನಲ್ಗಳ ಜೊತೆ ವ್ಯವಹಾರ ನಡೆಸುತ್ತವೆ ಟಿ ಆರ್ ಪಿ ನೀಡುವಲ್ಲಿಯೂ ಸಾಕಷ್ಟು ಅವ್ಯವಹಾರ ನಡೆದ ಹಿನ್ನಲೆಯಲ್ಲಿ ಬಾರ್ಕ್ಅಂದರೆ ಬ್ರಾಡ್ ಕಾಸ್ಟ್ ಆರ್ಡಿಯನ್ಸ್ ರಿಸರ್ಚ್ ಕೌನ್ಸಿಲ್ ಟಿ ಆರ್ ಪಿ ಯನ್ನು ಮೂರು ತಿಂಗಳುಗಳ ಕಾಲ ಸ್ಥಗಿತಗೊಳಿಸುವ ಮೂಲಕ ಚುರುಕು ಮುಟ್ಟಿಸಿದೆ ಈ ತೀರ್ಮಾನವನ್ನು ಬಹುಹಿಂದೆಯೇ ತೆಗೆದುಕೊಂಡಿದ್ದರೆ ಹಲವು ಅನಾಹುತಗಳನ್ನು ತಪ್ಪಿಸ ಬಹುದಾಗಿತ್ತು ಅದರಲ್ಲಿಯೂ ದೇಶದಲ್ಲಿ ಕೊರೋನಾ ಮಹಾಮಾರಿ ಕಬಂದಬಾಹು ಚಾಚಿದ ಬಳಿಕ ಕೆಲ ಮಾಧ್ಯಮ ಗಳ ಕಾರ್ಯ ಅತಿರೇಕದ ಪರಮಾವಧಿ ತಲುಪಿದೆ ವಿವಿಐಪಿ ಗಳ ಸಾವಿನ ಸುದ್ದಿಯನ್ನು ನಮ್ಮಲ್ಲೇ ಮೊದಲು ಎಂದು ತೋರಿಸಿ ಮುಜುಗರ ಉಂಟುಮಾಡಿದ್ದು ಹಾಗೂ ಬದುಕಿರುವಾಗಲೇ ಇಹ ಲೋಕ ತ್ಯಜಿಸಿದರು ಎಂದು ತರಾತುರಿಯಲ್ಲಿ ಸುದ್ದಿನೀಡಿ ಜನರ ಕೆಂಗಣ್ಣಿಗೆ ಗುರಿಯಾದವು ಕೆಲವು ಚಾನಲ್ಗಳಂತು ವ್ಯಕ್ತಿಗಳ ತೇಜೋವಧೆ ಮಾಡುವುದನ್ನೇ ಕಾಯಕವನ್ನಾಗಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ ಅದರಲ್ಲಿಯೂ ಇತ್ತೀಚೆಗೆ ಸರಕಾರ ತೆಗೆದುಕೊಂಡ ನಿರ್ಧಾರ ಗಳನ್ನು ನಮ್ಮಿಂದಲೇ ನಾವೇಕಾರಣ ಎಂದು ಹಾಕಿಕೊಳ್ಳುವ ಹಾಸ್ಯಾಸ್ಪದ ಬೆಳವಣಿಗೆ ವಾಕರಿಕೆ ತರಿಸುತ್ತದೆ ಇನ್ನಾದರೂ ಸುದ್ದಿವಾಹಿನಿಗಳು ಸ್ವಯಂ ಆತ್ಮವಿಮರ್ಷೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಬರೆದರೆ ಮುಗಿಯದಷ್ಟಿದೆ ಸದ್ಯಕ್ಕೆ ಇಷ್ಟೇ ಸಾಕು ಎನಿಸುತ್ತದೆ



ಬಾರ್ಕ್ ಸಂಸ್ಥೆ ನೀಡಿದ ಟಿ ಆರ್ ಪಿ ಮಾಹಿತಿ ಪ್ರಕಟಣೆ  ತಾತ್ಕಾಲಿಕ ನಿಷೇಧ  ಆದೇಶ  ಪತ್ರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728