ವಿಷಯಕ್ಕೆ ಹೋಗಿ

ಅಂಕೆ ಇಲ್ಲದವಕ್ಕೆ ಅಂಕುಶ ಬೇಕೇ ಬೇಕು -ಕೋಟೆ ಕಾಲಂ


ಲೇಖಕರು ಮತ್ತು  ಸಂಪಾದಕರು 
ಹರೀಶ್ ಹೆಚ್ ಆರ್ 
ಕೋಟೆ 



ಮೊನ್ನೆ ಉತ್ತರ ಕರ್ನಾಟಕದಾದ್ಯಂತ ಎಡಬಿಡದೆ ಸುರಿದ ಮಳೆಗೆ ಉಕ್ಕಿಹರಿದ ನದಿ ಹಳ್ಳಕೊಳ್ಳ ಗಳ ಸೊಕ್ಕಿಗೆ ಜನಜೀವನ ಅಯ್ಯೋ ಶಿವನೆ ಎಂಬಂತಾಗಿತ್ತು ಮಕ್ಕಳು ಬಾಣಂತಿ ನೀರಿನಲ್ಲಿ ಸಿಲುಕಿ ಕಂಗಾಲಾದ ಸ್ಥಿತಿ ಮನೆಕಳೆದು ಕೊಂಡು ಬೀದಿಯಲ್ಲಿ ರೋದಿಸುತ್ತಾ ನಿಂತಜನ ಉಕ್ಕಿಹರಿಯುವ ನೀರಿನಲ್ಲಿ ಸಿಲುಕಿ ನೆರವಿಗಾಗಿ ಅಂಗಲಾಚುವ ಅಮಾಯಕರ ಕಣ್ಣೀರು ತಿನ್ನಲು ತಾಟನ್ನು ಉಳಿಸದಂತೆ ಎಲ್ಲವನ್ನು ಬಳಿದುಕೊಂಡು ಹೋಗಿ ಬದುಕನ್ನು ಮೂರಾಬಟ್ಟೆ ಮಾಡಿದ ಜೀವನದಿಗಳನ್ನು ಶಪಿಸುವ ಹೆಂಗಳೆಯರು ನದಿಯಲ್ಲಿ ಕೊಚ್ಚಿಹೋದ ಮನೆಯ ಯಜಮಾನ ತಿರುಗಿ ಜೀವಂತಸಿಕ್ಕಾನೇನೋ ಎಂದು ಕಣ್ಣೀರಜೊತೆಗೆ ಆಶಾಭಾವನೆ ಹೊತ್ತ ಮನೆಯವರು ತಿಂಗಳು ಗಟ್ಟಲೆ ನಿಗಾವಹಿಸಿ ಬೆಳೆದ ಬೆಳೆ ಕಣ್ಣೆದುರೆ ನೀರುಪಾಲಾದರೂ ಏನನ್ನು ಮಾಡಲಾಗದ ಅಸಹಾಯಕತೆ ಹೀಗೆ ಹತ್ತಾರು ತರಹದ ನೋವು ಸಂಕಷ್ಟಗಳನ್ನು ನಮ್ಮದೇ ರಾಜ್ಯದ ಜನಗಳು ಅನುಭವಿಸುವುದನ್ನು ಕಂಡು ಮರುಗದ ಮಾನವರಿಲ್ಲ ಇಂತಹ ಸಂದರ್ಭದಲ್ಲಿ ಟಿವಿ ಚಾನಲ್ ವೊಂದರಲ್ಲಿ ಪದೇಪದೇ ತೋರಿಸಲಾಗುತ್ತಿತ್ತು ಮಳೆಅನಾಹುತದ ಅದ್ಭುತ ದ್ರಶ್ಯಗಳು ನಮ್ಮಲ್ಲಿ ಮಾತ್ರ ಎಂದು ಆ ಕಾರ್ಯಕ್ರಮ ವೀಕ್ಷಿಸಿದರೆ ಅದರಲ್ಲಿ ಮಳೆಹಾನಿಯಿಂದ ತೊಂದರೆಗೀಡಾದವರ ಕ್ಲಿಪಿಂಗ್ ತೋರಿಸಲಾಗುತ್ತಿತ್ತು ಅದರಲ್ಲಿ ಮನೆಮಠ ಕಳೆದುಕೊಂಡವರ ರೋದನೆ ಮನಕಲಕುವಂತಿತ್ತು ಇವುಗಳು ಅದ್ಬುತ ದ್ರಶ್ಯಗಳೆ ಇನ್ನೊಬ್ಬರ ನೋವು ಆನಂದಿಸುವ ವಿಚಾರವೇ ಶೀರ್ಷಿಕೆ ಕೊಡುವಲ್ಲಿ ಚಾನಲ್ ನವರ ಬೌದ್ಧಿಕ ದಿವಾಳಿತನ ಇದಕ್ಕೆ ಸಾಕ್ಷಿಯಾಗಿತ್ತು ಇದಕ್ಕೆ ಕಾರಣ ವೀಕ್ಷಕರನ್ನು ಆಕರ್ಷಿಸುವ ಟಿಅರ್ ಪಿ ಹೆಚ್ಚಿಸಿಕೊಳ್ಳುವ ಧಾವಂತ ಇದಕ್ಕಾಗಿ ನ್ಯೂಸ್ ಚಾನಲ್ ಗಳು ಮಾಡುತ್ತಿರುವ ಅವಾಂತರ ಒಂದೆರಡಲ್ಲಾ ಡ್ರಗ್ಸ್ ಪೆಡ್ಲರ್ ಗಳ ವಿಚಾರಬಂದಾಗ ಇಬ್ಬರು ಸಿನಿಮಾನಟಿಯರನ್ನು ಹಾಸಿಗೆಯಿಂದ ಎಬ್ಬಿಸುವುದರಿಂದ ಆರಂಭಿಸಿ ಬಾತ್ರೂಮಿಗೆ ಕರೆದೊಯ್ದು ನಿತ್ಯಕರ್ಮ ಮಾಡಿಸಿ ತಿಂಡಿತಿನ್ನಿಸಿ ಬಟ್ಟೆ ಹಾಕಿಸಿ ವಿಚಾರಣೆಗೆ ಕರೆದೊಯ್ದು ನಂತರ ಪರಪ್ಪನ ಅಗ್ರಹಾರದವರೆಗೂ ಕರೆದೊಯ್ದು ಬಿಟ್ಟು ಬಂದಿದ್ದಲ್ಲದೆ ಅಲ್ಲಿ ಅವರು ತಿಂದಿದ್ದು ಬಿಟ್ಟಿದ್ದುಕಿತ್ತಾಡಿದ್ದು ಅತ್ತಿದ್ದು ಎಲ್ಲವನ್ನು ದಿನವಿಡಿ ಚಾನಲ್ ಗಳು ತೋರಿಸಿ ಕರ್ನಾಟಕದ ಬಹುದೊಡ್ಡ ಪ್ರಚಲಿತ ವಿದ್ಯಮಾನ ಈ ನಟಿಯರು ಡ್ರಗ್ಸ್ ಕೇಸಿನಲ್ಲಿ ತಗಲಾಕಿಕೊಂಡಿರುವುದು ಎಂಬಂತೆ ಬಿಂಬಿಸಿದ್ದು ಅಸಹ್ಯ ತರಿಸಿತ್ತು ಪ್ರತಿನಿತ್ಯ ಇಂತಹದ್ದೇ ಕೆಲಸಕ್ಕೆ ಬಾರದ ವಿಚಾರಗಳು ಕೋವಿಡ್ ಅನ್ನು ಅತಿಹೆಚ್ಚು ವೈಭವೀಕರಿಸಿ ಜನರಿಗೆ ಅದರ ಬಗ್ಗೆ ಅರಿವು ಮೂಡಿಸುವ ಬದಲು ಬೆದರುವಂತೆ ಮಾಡಿದ್ದು ಹಾಗೂ ಕೋವಿಡ್ ಬಂದರೆ ಸಾವೇಗತಿ ಎಂಬಂತೆ ಬಿಂಬಿಸಿದ್ದು ಅಕ್ಷಮ್ಯ ಇನ್ನು ಯಾರದೋ ಮನೆಯ ಜಗಳಕ್ಕೆ ಮೂಗುತೂರಿಸುವುದು ತಮಗೆ ಬೇಕಾದ ಹಾಗೆ ಪ್ಯಾನೆಲ್ ಚರ್ಚೆ ತಾವೇ ನ್ಯಾಯಾಧೀಶ ರಂತೆ ತೀರ್ಪು ಕೊಡುವುದು ರೇಜಿಗೆ ತರಿಸುತ್ತವೆ ಇವೆಲ್ಲವೂ ಓನ್ಲಿ ಫಾರ್‌ ಟಿಆರ್ಪಿ ಟಿ ಆರ್ ಪಿ ಅಂದರೆ ಸುದ್ದಿವಾಹಿನಿಗಳ ವಾರದ ರೇಟಿಂಗ್ ಇದರ ಆಧಾರದ ಮೇಲೆಯೆ ಆಯಾ ಚಾನಲ್ ನ ಯೋಗ್ಯತೆ ಅಳೆಯಲಾಗುತ್ತದೆ ಜಾಹಿರಾತು ಸಂಸ್ತೆಗಳು ಅದರ ಆಧಾರದ ಮೇಲೆ ಚಾನಲ್ಗಳ ಜೊತೆ ವ್ಯವಹಾರ ನಡೆಸುತ್ತವೆ ಟಿ ಆರ್ ಪಿ ನೀಡುವಲ್ಲಿಯೂ ಸಾಕಷ್ಟು ಅವ್ಯವಹಾರ ನಡೆದ ಹಿನ್ನಲೆಯಲ್ಲಿ ಬಾರ್ಕ್ಅಂದರೆ ಬ್ರಾಡ್ ಕಾಸ್ಟ್ ಆರ್ಡಿಯನ್ಸ್ ರಿಸರ್ಚ್ ಕೌನ್ಸಿಲ್ ಟಿ ಆರ್ ಪಿ ಯನ್ನು ಮೂರು ತಿಂಗಳುಗಳ ಕಾಲ ಸ್ಥಗಿತಗೊಳಿಸುವ ಮೂಲಕ ಚುರುಕು ಮುಟ್ಟಿಸಿದೆ ಈ ತೀರ್ಮಾನವನ್ನು ಬಹುಹಿಂದೆಯೇ ತೆಗೆದುಕೊಂಡಿದ್ದರೆ ಹಲವು ಅನಾಹುತಗಳನ್ನು ತಪ್ಪಿಸ ಬಹುದಾಗಿತ್ತು ಅದರಲ್ಲಿಯೂ ದೇಶದಲ್ಲಿ ಕೊರೋನಾ ಮಹಾಮಾರಿ ಕಬಂದಬಾಹು ಚಾಚಿದ ಬಳಿಕ ಕೆಲ ಮಾಧ್ಯಮ ಗಳ ಕಾರ್ಯ ಅತಿರೇಕದ ಪರಮಾವಧಿ ತಲುಪಿದೆ ವಿವಿಐಪಿ ಗಳ ಸಾವಿನ ಸುದ್ದಿಯನ್ನು ನಮ್ಮಲ್ಲೇ ಮೊದಲು ಎಂದು ತೋರಿಸಿ ಮುಜುಗರ ಉಂಟುಮಾಡಿದ್ದು ಹಾಗೂ ಬದುಕಿರುವಾಗಲೇ ಇಹ ಲೋಕ ತ್ಯಜಿಸಿದರು ಎಂದು ತರಾತುರಿಯಲ್ಲಿ ಸುದ್ದಿನೀಡಿ ಜನರ ಕೆಂಗಣ್ಣಿಗೆ ಗುರಿಯಾದವು ಕೆಲವು ಚಾನಲ್ಗಳಂತು ವ್ಯಕ್ತಿಗಳ ತೇಜೋವಧೆ ಮಾಡುವುದನ್ನೇ ಕಾಯಕವನ್ನಾಗಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿವೆ ಅದರಲ್ಲಿಯೂ ಇತ್ತೀಚೆಗೆ ಸರಕಾರ ತೆಗೆದುಕೊಂಡ ನಿರ್ಧಾರ ಗಳನ್ನು ನಮ್ಮಿಂದಲೇ ನಾವೇಕಾರಣ ಎಂದು ಹಾಕಿಕೊಳ್ಳುವ ಹಾಸ್ಯಾಸ್ಪದ ಬೆಳವಣಿಗೆ ವಾಕರಿಕೆ ತರಿಸುತ್ತದೆ ಇನ್ನಾದರೂ ಸುದ್ದಿವಾಹಿನಿಗಳು ಸ್ವಯಂ ಆತ್ಮವಿಮರ್ಷೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಬರೆದರೆ ಮುಗಿಯದಷ್ಟಿದೆ ಸದ್ಯಕ್ಕೆ ಇಷ್ಟೇ ಸಾಕು ಎನಿಸುತ್ತದೆ



ಬಾರ್ಕ್ ಸಂಸ್ಥೆ ನೀಡಿದ ಟಿ ಆರ್ ಪಿ ಮಾಹಿತಿ ಪ್ರಕಟಣೆ  ತಾತ್ಕಾಲಿಕ ನಿಷೇಧ  ಆದೇಶ  ಪತ್ರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆರೋಗ್ಯ ಮತ್ತು ಸಂತ್ರೃಪ್ತ ಜೀವನ

ಬಂಧುಗಳೇ, ಪ್ರತಿಯೊಂದು ಜನರು ನೆಮ್ಮದಿಯಿಂದ ಬದುಕಲು ಇಷ್ಟಪಡುತ್ತಾರೆ, ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ  ಮುಖ್ಯ ಸಮಸ್ಯೆಗಳು ಅಂದರೆ ಆರೋಗ್ಯ ಮತ್ತು ಹಣಕಾಸು ಮತ್ತು  ಉದ್ಯೋಗ ಭದ್ರತೆ. ನಮ್ಮಲ್ಲಿ ಮೇಲ್ಕಂಡ  ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರವಿದೆ , ನೀವು ಆತಂಕ ಪಡುವ ಅಗತ್ಯವಿಲ್ಲ, ಬನ್ನಿ ನಮ್ಮೂಡನೆ ಸೇರಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳರಿ.   ನಾವು ಸಂವಹನ ಮಾಡಲು ಅಂತರ್ಜಾಲ ಮತ್ತು ನೇರ ಭೇಟಿ ಕಾರ್ಯಕ್ರಮ ಮೂಲಕ  ಕೆಲವೊಂದು ಮಾರ್ಗದರ್ಶನಗಳನ್ನು ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನಮಗೆ ಕಳುಹಿಸಿದರೆ, ಮಾರ್ಗದರ್ಶನ ಅವಕಾಶ ನಿಮಗೆ ಲಭಿಸುತ್ತದೆ.

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...