ವಿಮರ್ಶಾ -vimarsha
ಲೇಖಕರು-ಹರೀಶ್ ಹೆಚ್ ಆರ್ (ಕೋಟೆ )
ದೇಶವನ್ನು ಮಾತೆಗೆ ಹೋಲಿಸುವ ಸಂಸ್ಕ್ರತಿ ಒಂದೆಡೆ ಮತ್ತೊಂದೆಡೆ ಜೀವನದಿಗಳನ್ನು ಹುಟ್ಟಿದ ಮಣ್ಣನ್ನು ತಾಯಿಯೆಂದು ಪೂಜಿಸುವ ಸಂಸ್ಕ್ರತಿ ಅದೂ ಇದೂ ಎಂದು ಹೆಣ್ಣನ್ನು ಪೂಜನೀಯ ವಾಗಿ ಕಾಣುತ್ತೇವೆ ಎಂದು ಎದೆಉಬ್ಬಿಸಿಕೊಂಡು ಹೇಳುವ ನಮ್ಮ ದೇಶದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳು ಇಡೀ ಜಗತ್ತನ್ನೆ ಆಗಾಗ್ಗೆ ಬೆಚ್ಚಿಬೀಳಿಸುತ್ತಿರುತ್ತವೆ
ಒಂದುಪ್ರಕರಣ ಮಾಸುವ ಮುನ್ನವೇ ಮತ್ತೊಂದು ಎಂಬಂತೆ ಪೈಶಾಚಿಕ ಅತ್ಯಾಚಾರ ಪ್ರಕರಣಗಳು ನಿಲ್ಲುವ ಲಕ್ಷಣ ಕಾಣದೆ ನಡೆಯುತ್ತಿರುವುದು ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ
ಉತ್ತರಪ್ರದೇಶದ ಹಾಥರಸ್ ನಲ್ಲಿ ದಲಿತ ಸಮುದಾಯಕ್ಕೆ ಸೇರಿದ ಯುವತಿ ಮನಿಷಾ ವಾಲ್ಮೀಕಿ ಯ ಮೇಲೆ ನಾಲ್ವರು ದುರುಳರು ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆಮಾಡಿದ ಪ್ರಕರಣ ಅತ್ಯಂತ ಖಂಡನೀಯ
ಇಂತಹ ಸಮಯದಲ್ಲಿಯೂ ಸಹ ದಲಿತ ಯುವತಿಯ ಸಾವಿನಲ್ಲಿಯೂ ಸತ್ಯವನ್ನು ಅದುಮಿಡುವ ಉತ್ತರ ಪ್ರದೇಶ ಸರಕಾರದ ಧೋರಣೆ ಹಾಗೂ ಅದರ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರಗಳು ನೋವುತರುತ್ತವೆ
ತರಾತುರಿಯಲ್ಲಿ ರಾತ್ರಿಯೆ ಮನಿಷಾಳ ಶವವನ್ನು ಸುಟ್ಟಿದ್ದು ಉದ್ದೇಶಪೂರ್ವಕವಾಗಿ ಆಕೆಯ ಕುಟುಂಬಸ್ಥರನ್ನು ದೂರ ಇಟ್ಟಿದ್ದು ಆಕೆಯ ತಂದೆಯ ಮೇಲೆ ಪೊಲೀಸರು ಈಗಾಗಲೇ ನೀಡಿರುವ ಹೇಳಿಕೆಬದಲಿಸುವಂತೆ ಒತ್ತಡ ಹೇರುತ್ತಿರುವುದು ಪೊಲೀಸರು ಸರಕಾರವನ್ನು ಮುಜುಗರಕ್ಕೊಳಗಾಗದಂತೆ ಕಾಪಾಡುವ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಗಮವಾಗಿದೆ ಹಾಗು ಯೋಗಿ ಅಡಳಿತದಲ್ಲಿ ಇಂತಹ ಘಟನೆ ನಡೆಯದು ಎಂಬುದನ್ನು ತೋರ್ಪಡಿಸಲು ಹರಸಾಹಸ ಮಾಡಲಾಗುತ್ತಿದೆ
ಯುವತಿಯ ಮೇಲೆ ಅತ್ಯಾಚಾರವಾಗಿದೆ ಎಂದು ಶವಪರೀಕ್ಷೆ ಯಿಂದ ಸಾಬೀತಾಗಿಲ್ಲಾ ಅತ್ಯಾಚಾರದಿಂದಾದ ಗಾಯಗಳಿಂದ ಅಕೆ ಸಾವನ್ನಪ್ಪಿಲ್ಲ ಆಕೆ ಬೆನ್ನುಮೂಳೆ ಮುರಿದಿತ್ತು ಹಾಗೂ ಹ್ರದಯಾಘಾತವಾಗಿದೆ ಎಂದು ಜೊತೆಗೆ ರಕ್ತದ ಸೋಂಕು ಸಹ ಇತ್ತು ಎಂದು ಹೇಳುತ್ತಿರುವ ಉತ್ತರ ಪ್ರದೇಶದ ಪೊಲೀಸರು ತಡರಾತ್ರಿ ತಾವೇ ಅಕೆಯ ಶವವನ್ನು ಸಂಸ್ಕಾರದ ಹೆಸರಿನಲ್ಲಿ ಸುಟ್ಟು ಮರು ಶವಪರೀಕ್ಷೆ ನಡೆಸಲು ಅವಕಾಶವೇ ಇಲ್ಲದಂತೆ ಮಾಡಿರುವುದಕ್ಕೆ ಉತ್ತರಿಸುವುದಿಲ್ಲ
ಜಾತಿ ,ರಾಜಕೀಯ ,ಧರ್ಮ ,ಪಕ್ಷ ಈ ವಿಚಾರಗಳೇನೇ ಇರಲಿ ಅದರೆ ಅಮಾಯಕ ಹೆಣ್ಣುಮಗಳ ಮೇಲೆ ನಡೆದ ಹೇಯ ಕ್ರತ್ಯವನ್ನು ಈ ರೀತಿಯಾಗಿ ಮುಚ್ಚಿಹಾಕಲು ಹೊರಟರೆ ಅದು ಮುಂದಿನದಿನಗಳಲ್ಲಿ ಯಾವರೀತಿ ಪರಿಣಾಮ ಬೀರಬಹುದು ಎಂಬುದನ್ನು ನೆನಪಿಸಿಕೊಂಡರೆ ಭಯವಾಗುತ್ತದೆ
ಬಿಜೆಪಿ ಯಲ್ಲಿರುವ ಮಹಿಳಾನಾಯಕಿಯರು ಇಂತಹ ಸನ್ನಿವೇಶದಲ್ಲಿಯೂ ಮಾನವೀಯ ಸಂವೇದನೆ ಬದಿಗಿರಿಸಿ ಮೌನವಾಗಿರುವುದು ಸರಿಯಾದುದಲ್ಲಾ
ಈ ಪ್ರಕರಣವನ್ನು ರಾಜಕೀಯ ಪಕ್ಷಗಳು ಹಾಗು ಸಂಘಟನೆಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳದೆ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯದೊರಕಿಸಿಕೊಡುವ ಹಾಗೂ ಮುಂದೆ ಇಂತಹ ಅಮಾನುಷ ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಹೋರಾಟನಡೆಸಬೇಕಿದೆ
#ಹಾಥ್ರಸ್
#ಮನೀಷಾ ವಾಲ್ಮೀಕಿ
Very good article
ಪ್ರತ್ಯುತ್ತರಅಳಿಸಿVery good article
ಪ್ರತ್ಯುತ್ತರಅಳಿಸಿ