ವಿಷಯಕ್ಕೆ ಹೋಗಿ

ಗ್ರಾಮ ಪಂಚಾಯಿತಿ ಕದನ -ಕೋಟೆ ಕಾಲಂ

ಕೋಟೆ ಕಾಲಂ:-
ಗ್ರಾಮ ಪಂಚಾಯತಿ ಕದನ.

-ಹರೀಶ್ ಹೆಚ್ ಆರ್ 
 ಕೋಟೆ. 






ನೋಡು ಸಂಸಾರದಲ್ಲಿ ರಾಜಕೀಯ ನಿನ್ನ ಮನೆ ಯಲ್ಲಿ ನೀನೆ ಪರಕೀಯ.....
ಸಿ.ಅಶ್ವತ್ ಅವರ ಕಂಚಿನ ಕಂಠದಲ್ಲಿ ಬರುತ್ತಿದ್ದ ಹಾಡು ಕೇಳಿದವನಿಗೆ ಒಂದು ಕ್ಷಣ ಗ್ರಾಮಪಂಚಾಯತಿ ಚುನಾವಣೆ ದ್ರಶ್ಯಾವಳಿಗಳು ಕಣ್ಣ ಮುಂದೆಯೇ ಹಾದು ಹೋದವು
ಡಿಸೆಂಬರ್ ತಿಂಗಳಿನಲ್ಲಿ ಎರಡು ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆ ಮುಗಿಯುವಷ್ಟರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅದೆಷ್ಟು ಕುರುಕ್ಷೇತ್ರ ರಾಮಾಯಣ ನಡೆಯುತ್ತವೆಯೋ ಅದೆಷ್ಟು ತಲೆಗಳು ಉರುಳುತ್ತವೋ ದ್ವೇಶದ ದಳ್ಳುರಿಗೆ ಅದೆಷ್ಟು ಮನೆಗಳು ಆಹುತಿಯಾಗುತ್ತವೋ ಬಲ್ಲವರ್ಯಾರು
ಪ್ರಶಾಂತತೆ ಹಾಗೂ ಲವಲವಿಕೆಯಿಂದ ಕೂಡಿದ ಗ್ರಾಮಾಂತರ ಪ್ರದೇಶದ ಜನರ ಮನಸ್ಸು ಬುದ್ದಿಗೆ ಲಕ್ವಾಹೊಡೆಯುವುದೇ ಗ್ರಾಮಪಂಚಾಯತಿ ಚುನಾವಣೆಗಳಲ್ಲಿ
ಈ ಸಂದರ್ಭದಲ್ಲಿ ಅಣ್ಣತಮ್ಮಂದಿರೇ ಶತ್ರುಳಾಗುತ್ತಾರೆ ಕಷ್ಟಕ್ಕಾಗುವ ಬಂಧುವೇ ಕತ್ತಿಮಸೆಯುತ್ತಾನೆ ಹೆಂಡತಿ ಮಕ್ಕಳೆ ಮನೆ ಯಜಮಾನನ ಮಾತನ್ನು ಕಾಲ ಕಸವಾಗಿ ಕಾಣುತ್ತಾರೆ ದಾಯಾದಿ ದ್ವೇಷತಾರಕಕ್ಕೇರುತ್ತದೆ ಊರೇ ಇಬ್ಬಾಗವಾದರೆ ಜಾತಿ ಉಪ ಜಾತಿಯ ಪ್ರಜ್ಞೆ ಹೆಚ್ಚಾಗಿ ಯಾರನ್ನೂ ಯಾರೂ ನಂಬದಂತಾಗುತ್ತದೆ,
ಕಳೆದ ಚುನಾವಣೆಯ ಸಂದರ್ಭದಲ್ಲಿ ಒಡೆದ ಮನಸ್ಸುಗಳೆ ಇನ್ನೂ ಒಂದಾಗಿಲ್ಲಾ ಅಷ್ಟರಲ್ಲಿ ಮತ್ತೆ ಚುನಾವಣೆ ಬಂದಿದ್ದು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಬಿರುಸು ಕಂಡು ಬರಲಿದೆ
ಈ ಬಾರೀ ಕರೋನಾ ಪಿಡುಗಿನಿಂದ ತತ್ತರಿಸಿ ಊರಿಗೆ ವಾಪಾಸಾಗಿ ಕೆಲಸವಿಲ್ಲದೆ ದಿನ ದೂಡುತ್ತಿರುವವರ ಸಂಖ್ಯೆ ಪ್ರತಿ ಗ್ರಾಮಗಳಲ್ಲಿಯೂ ಹೆಚ್ಚಾಗಿದ್ದು ಇದು ಪಂಚಾಯತಿ ಚುನಾವಣೆಯಲ್ಲಿ ಸಾಕಷ್ಟು ಪರಿಣಾಮ ಬೀರಲಿದೆಯಲ್ಲದೆ ತೋಳ್ಬಲ ಪ್ರದರ್ಶನ ಹಾಗೂ ಹೊಡಿಬಡಿ ಘಟನೆಗಳು ಹೆಚ್ಚಲು ಕಾರಣವಾಗಲಿದೆ
ಚುನಾವಣೆ ನಾಮಪತ್ರಸಲ್ಲಿಕೆ ದಿನದಿಂದ ಆರಂಭವಾಗುವ ಬಿಗುವಿನ ವಾತಾವರಣ ಬಹುತೇಕ ಮುಂದಿನ ಐದು ವರ್ಷಗಳ ಕಾಲವೂ ಆಗಾಗ್ಗೆ ಮರುಕಳಿಸಲಿದೆಯಲ್ಲದೆ ಜನರ ನಡುವೆ ಶಾಶ್ವತವಾಗಿ ದ್ವೇಷದ ಗೋಡೆ ಎಬ್ಬಿಸಲಿದೆ
ಈ ಚುನಾವಣೆ ಗ್ರಾಸ್ ರೂಟ್ ಲೆವೆಲ್ನಲ್ಲಿ ಪಕ್ಷಗಳನ್ನು ಬಲಿಷ್ಠಗೊಳಿಸಲು ರಾಜಕೀಯ ಪಕ್ಷಗಳಿಗೆ ಸದವಕಾಶ
ಸಾಮಾನ್ಯವಾಗಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಅತಿಹೆಚ್ಚು ಸರಾಸರಿ ಮತದಾನವಾಗುವುದು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಪಟ್ಟಣ ಪ್ರದೇಶ ಕ್ಕೆ ಹೋಲಿಸಿದರೆ ಗ್ರಾಮಾಂತರದಲ್ಲಿ ಮತದಾನದ ಪ್ರಮಾಣ ಹೆಚ್ಚು ಜೊತೆಗೆ ಗ್ರಾಮಾಂತರ ಮತಗಳು ಒಮ್ಮೆ ಒಲಿದರೆ ಅವುಗಳನ್ನು ಭದ್ರವಾಗಿ ಕಾಪಾಡೊಕೊಳ್ಳಬಹುದು
ಈ ಎಲ್ಲಾ ಹಿನ್ನಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ಗ್ರಾಮಪಂಚಾಯತಿ ಗಳಲ್ಲಿ ತಮ್ಮ ಹಿಂಬಾಲಕ ರನ್ನು ಗೆಲ್ಲಿಸಲು ಹಣದ ಹೊಳೆಯನ್ನೇ ಹರಿಸಲು ಸಜ್ಜಾಗಿವೆ
 ಇನ್ನೂ ಮೊದಲೇ ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಇಡೀ ಸಮಾಜಕ್ಕೆ ಜಾತಿಯ ಹೊಲಸನ್ನು ಮೆತ್ತಿ ಜನರ ನಡುವೆ ಅಪನಂಬಿಕೆಯ ಕಂದಕ ಸೃಷ್ಟಿ ಮಾಡಿದ್ದಾರೆ ಆ ಕಂದಕ ಈ ಚುನಾವಣೆಯಲ್ಲಿ ಇನ್ನಿಲ್ಲದಂತೆ ದೊಡ್ಡದಾಗುವುದಲ್ಲದೆ ಹಳ್ಳಿಗಳಲ್ಲಿನ ಸಾಮರಸ್ಯವನ್ನೇ ಹಾಳುಮಾಡಲಿದೆ
ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಹಳ್ಳಿಗಳಲ್ಲಿ ಹಿರಿಯರು ಎನ್ನುವವರ ಮಾತು ನಡೆಯುವುದು ಅಷ್ಟಕ್ಕಷ್ಟೆ ಪಡ್ಡೆಹುಡುಗರದ್ದೇ ಆಟಾಟೋಪಾ ರಾಜಕಾರಣಿಗಳು ಸಹ ವಯಸ್ಸಾದವರದ್ದು ನಡೆಯುವುದಿಲ್ಲ ಎಂಬುದನ್ನು ಮನಗಂಡಿರುವ ಕಾರಣ ಪಡ್ಡೆಗಳಿಗೆ ಮಣೆ ಹಾಕುತ್ತಿದ್ದು ಪ್ರತಿನಿತ್ಯ ಗುಂಡುತುಂಡಿನ ಸಮಾರಾದನೆ ನಡೆಯಲೇ ಬೇಕು ಕುಡಿದ ಮೇಲೆ ಕುಡಿಸಿದವನಿಗೆ ನಿಷ್ಠೆ ತೋರಲು ಹೊಡೆದಾಡಲೇಬೇಕು ಎನ್ನುವ ಪರಿಸ್ಥಿತಿ ಈಭಾರಿ ನಿರ್ಮಾಣವಾಗಲಿದೆ
ಮಹಿಳಾ ಮೀಸಲಾತಿಯ ಭರಪೂರ ದುರುಪಯೋಗವಾಗಲಿದ್ದು ಪ್ರಭಾವ ಹೊಂದಿರುವವನು ಪತ್ನಿ ಇಲ್ಲವೇ ತಾಯಿ ಅಥವಾ ಸಹೋದರಿಯನ್ನು ನಿಲ್ಲಿಸಿ ಗೆಲ್ಲಿಸುವ ಹಾಗೂ ಅವರು ನೆಪಮಾತ್ರಕ್ಕೆಂಬಂತೆ ಗಂಡಸರೇ ಆಡಳಿತ ನಡೆಸುವುದು ಮುಂದುವರೆಯಲಿದೆ ದೇವರ ದಯದಿಂದ ಸದಸ್ಯಣಿಯರ ಗಂಡ/ತಂದೆ ಅಥವಾ ಸಹೋದರ ಸಭೆ ಸಮಾರಂಭ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಮುಂದಾಗುವ ಪ್ರಹಸನ ನಡೆಯದಿದ್ದರೆ ಸಾಕು ಅಧಿಕಾರ ವಿಕೇಂದ್ರೀಕರಣದ ಮಾನ ಉಳಿಯುತ್ತದೆ
ಹಣ ಕೋಳಿ ಪ್ರತಿನಿತ್ಯ ಮದ್ಯದ ಸರಬರಾಜು ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು ನಾಕಾಣೆ ಗಿಟ್ಟದೆ ಮಖ ಒಣಗಿಸಿಕೊಂಡ ಮಂದಿ ಹಲವರಾದರೆ ತಮಗೆ ಯಾರು ಮತ ಹಾಕಿಲ್ಲ ಎಂಬುದನ್ನು ಸುಲಭವಾಗಿ ಗುರುತಿಸಿಕೊಂಡು ಅವರೊಂದಿಗೆ ವರ್ಷಗಳ ಕಾಲ ದ್ವೇಷ ಸಾಧಿಸಿ ಅವರಿಗೆ ಕೊಟ್ಟಿಗೆ ಶೌಚಾಲಯ ಮಂಜೂರಾಗದಂತೆ ತಡೆದು ಸಮಾಧಾನ ಪಟ್ಟುಕೊಳ್ಳುವವರು ಹಲವಾರು,
ಗ್ರಾಮಾಂತರ ಪ್ರದೇಶಗಳಲ್ಲಿ ಈಗಂತೂ ಮದ್ಯಪ್ರಿಯರ ಸಂಖ್ಯೆ ಅಧಿಕವಾಗಿದೆ ಚುನಾವಣೆ ಸಮಯದಲ್ಲಿ ಪುಗಸಟ್ಟೆ ಸಿಗುವಾಗ ಬಿಡುತ್ತಾರೆಯೇ ವರುಷವಿಡೀ ಚೀಪರ್ ಕುಡಿಯುವವನು ಸಹ ದುಬಾರಿ ಮದ್ಯಕ್ಕೆ ದುಂಬಾಲು ಬೀಳುತ್ತಾನೆ
ಇಂದಿನ ಮದ್ಯದ ದುಬಾರಿ ಬೆಲೆಯಲ್ಲಿ ಒಳ್ಳೆಯ ಬ್ರಾಂಡ್ ಹಂಚಲು ಸಾಕಷ್ಟು ಹಣ ವ್ಯಯ ಮಾಡಬೇಕಾದ ಹಿನ್ನಲೆಯಲ್ಲಿ ರಾಜಕೀಯ ಮುಖಂಡರು ನಕಲಿ ಮದ್ಯ ತಯಾರಕರ ಮೊರೆ ಹೋಗಲಿದ್ದು ದುಬಾರಿ ಮದ್ಯದ ಬಾಟಲಿಯಲ್ಲಿ ಲೋಕಲ್ ಸರಕು ತುಂಬಿ ಹೊಟ್ಟೆತುಂಬ ಕುಡಿಸಲಿದ್ದು ನಕಲಿ ಮದ್ಯ ಕುಡಿದು ಒಂದಷ್ಟು ಜನ ಶಿವನ ಪಾದ ಸೇರಲಿದ್ದಾರೆ
ಗ್ರಾಮ ಪಂಚಾಯತಿ ಚುನಾವಣೆಯ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ಗಾದಿಯ ಮೀಸಲಾತಿ ಪ್ರಹಸನ ಆ ನಂತರ ಸದಸ್ಯರ ಕಿಡ್ನಾಪ್ ಪ್ರವಾಸ ಹಣದ ಆಮಿಷ ಆಗೊಂದಷ್ಟು ಹೊಡೆದಾಟ ಬಡಿದಾಟ
ಒಟ್ಟಾರೆಯಾಗಿ ಗ್ರಾಮಾಂತರ ಪ್ರದೇಶದಲ್ಲಿ ಸ್ವಾಸ್ಥ್ಯ ಕದಡಲು ಏನೇನು ಮಾಡಬೇಕೋ ಎಲ್ಲವೂ ಗ್ರಾಮ ಪಂಚಾಯತಿ ಚುನಾವಣೆ ಹೆಸರಿನಲ್ಲಿ ನಡೆಯಲಿದೆ.

#ಗ್ರಾಮ ಪಂಚಾಯಿತಿ 

#ಚುನಾವಣೆ

#ಕರ್ನಾಟಕ 

#ವಿಮರ್ಶಾ-vimarsha 


An digital media


ಪ್ರಧಾನ ಸಂಪಾದಕರು 
ಹರೀಶ್ ಹೆಚ್ ಆರ್ ಕೋಟೆ 

ಸುದ್ದಿ ಸಂಪಾದಕರು 
ನಾಗೇಂದ್ರ.ಹೆಚ್. ಎನ್. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728