ವಿಷಯಕ್ಕೆ ಹೋಗಿ

ಗ್ರಾಮ ಪಂಚಾಯಿತಿ ಕದನ -ಕೋಟೆ ಕಾಲಂ

ಕೋಟೆ ಕಾಲಂ:-
ಗ್ರಾಮ ಪಂಚಾಯತಿ ಕದನ.

-ಹರೀಶ್ ಹೆಚ್ ಆರ್ 
 ಕೋಟೆ. 






ನೋಡು ಸಂಸಾರದಲ್ಲಿ ರಾಜಕೀಯ ನಿನ್ನ ಮನೆ ಯಲ್ಲಿ ನೀನೆ ಪರಕೀಯ.....
ಸಿ.ಅಶ್ವತ್ ಅವರ ಕಂಚಿನ ಕಂಠದಲ್ಲಿ ಬರುತ್ತಿದ್ದ ಹಾಡು ಕೇಳಿದವನಿಗೆ ಒಂದು ಕ್ಷಣ ಗ್ರಾಮಪಂಚಾಯತಿ ಚುನಾವಣೆ ದ್ರಶ್ಯಾವಳಿಗಳು ಕಣ್ಣ ಮುಂದೆಯೇ ಹಾದು ಹೋದವು
ಡಿಸೆಂಬರ್ ತಿಂಗಳಿನಲ್ಲಿ ಎರಡು ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆ ಮುಗಿಯುವಷ್ಟರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅದೆಷ್ಟು ಕುರುಕ್ಷೇತ್ರ ರಾಮಾಯಣ ನಡೆಯುತ್ತವೆಯೋ ಅದೆಷ್ಟು ತಲೆಗಳು ಉರುಳುತ್ತವೋ ದ್ವೇಶದ ದಳ್ಳುರಿಗೆ ಅದೆಷ್ಟು ಮನೆಗಳು ಆಹುತಿಯಾಗುತ್ತವೋ ಬಲ್ಲವರ್ಯಾರು
ಪ್ರಶಾಂತತೆ ಹಾಗೂ ಲವಲವಿಕೆಯಿಂದ ಕೂಡಿದ ಗ್ರಾಮಾಂತರ ಪ್ರದೇಶದ ಜನರ ಮನಸ್ಸು ಬುದ್ದಿಗೆ ಲಕ್ವಾಹೊಡೆಯುವುದೇ ಗ್ರಾಮಪಂಚಾಯತಿ ಚುನಾವಣೆಗಳಲ್ಲಿ
ಈ ಸಂದರ್ಭದಲ್ಲಿ ಅಣ್ಣತಮ್ಮಂದಿರೇ ಶತ್ರುಳಾಗುತ್ತಾರೆ ಕಷ್ಟಕ್ಕಾಗುವ ಬಂಧುವೇ ಕತ್ತಿಮಸೆಯುತ್ತಾನೆ ಹೆಂಡತಿ ಮಕ್ಕಳೆ ಮನೆ ಯಜಮಾನನ ಮಾತನ್ನು ಕಾಲ ಕಸವಾಗಿ ಕಾಣುತ್ತಾರೆ ದಾಯಾದಿ ದ್ವೇಷತಾರಕಕ್ಕೇರುತ್ತದೆ ಊರೇ ಇಬ್ಬಾಗವಾದರೆ ಜಾತಿ ಉಪ ಜಾತಿಯ ಪ್ರಜ್ಞೆ ಹೆಚ್ಚಾಗಿ ಯಾರನ್ನೂ ಯಾರೂ ನಂಬದಂತಾಗುತ್ತದೆ,
ಕಳೆದ ಚುನಾವಣೆಯ ಸಂದರ್ಭದಲ್ಲಿ ಒಡೆದ ಮನಸ್ಸುಗಳೆ ಇನ್ನೂ ಒಂದಾಗಿಲ್ಲಾ ಅಷ್ಟರಲ್ಲಿ ಮತ್ತೆ ಚುನಾವಣೆ ಬಂದಿದ್ದು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಬಿರುಸು ಕಂಡು ಬರಲಿದೆ
ಈ ಬಾರೀ ಕರೋನಾ ಪಿಡುಗಿನಿಂದ ತತ್ತರಿಸಿ ಊರಿಗೆ ವಾಪಾಸಾಗಿ ಕೆಲಸವಿಲ್ಲದೆ ದಿನ ದೂಡುತ್ತಿರುವವರ ಸಂಖ್ಯೆ ಪ್ರತಿ ಗ್ರಾಮಗಳಲ್ಲಿಯೂ ಹೆಚ್ಚಾಗಿದ್ದು ಇದು ಪಂಚಾಯತಿ ಚುನಾವಣೆಯಲ್ಲಿ ಸಾಕಷ್ಟು ಪರಿಣಾಮ ಬೀರಲಿದೆಯಲ್ಲದೆ ತೋಳ್ಬಲ ಪ್ರದರ್ಶನ ಹಾಗೂ ಹೊಡಿಬಡಿ ಘಟನೆಗಳು ಹೆಚ್ಚಲು ಕಾರಣವಾಗಲಿದೆ
ಚುನಾವಣೆ ನಾಮಪತ್ರಸಲ್ಲಿಕೆ ದಿನದಿಂದ ಆರಂಭವಾಗುವ ಬಿಗುವಿನ ವಾತಾವರಣ ಬಹುತೇಕ ಮುಂದಿನ ಐದು ವರ್ಷಗಳ ಕಾಲವೂ ಆಗಾಗ್ಗೆ ಮರುಕಳಿಸಲಿದೆಯಲ್ಲದೆ ಜನರ ನಡುವೆ ಶಾಶ್ವತವಾಗಿ ದ್ವೇಷದ ಗೋಡೆ ಎಬ್ಬಿಸಲಿದೆ
ಈ ಚುನಾವಣೆ ಗ್ರಾಸ್ ರೂಟ್ ಲೆವೆಲ್ನಲ್ಲಿ ಪಕ್ಷಗಳನ್ನು ಬಲಿಷ್ಠಗೊಳಿಸಲು ರಾಜಕೀಯ ಪಕ್ಷಗಳಿಗೆ ಸದವಕಾಶ
ಸಾಮಾನ್ಯವಾಗಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಅತಿಹೆಚ್ಚು ಸರಾಸರಿ ಮತದಾನವಾಗುವುದು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಪಟ್ಟಣ ಪ್ರದೇಶ ಕ್ಕೆ ಹೋಲಿಸಿದರೆ ಗ್ರಾಮಾಂತರದಲ್ಲಿ ಮತದಾನದ ಪ್ರಮಾಣ ಹೆಚ್ಚು ಜೊತೆಗೆ ಗ್ರಾಮಾಂತರ ಮತಗಳು ಒಮ್ಮೆ ಒಲಿದರೆ ಅವುಗಳನ್ನು ಭದ್ರವಾಗಿ ಕಾಪಾಡೊಕೊಳ್ಳಬಹುದು
ಈ ಎಲ್ಲಾ ಹಿನ್ನಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ಗ್ರಾಮಪಂಚಾಯತಿ ಗಳಲ್ಲಿ ತಮ್ಮ ಹಿಂಬಾಲಕ ರನ್ನು ಗೆಲ್ಲಿಸಲು ಹಣದ ಹೊಳೆಯನ್ನೇ ಹರಿಸಲು ಸಜ್ಜಾಗಿವೆ
 ಇನ್ನೂ ಮೊದಲೇ ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಇಡೀ ಸಮಾಜಕ್ಕೆ ಜಾತಿಯ ಹೊಲಸನ್ನು ಮೆತ್ತಿ ಜನರ ನಡುವೆ ಅಪನಂಬಿಕೆಯ ಕಂದಕ ಸೃಷ್ಟಿ ಮಾಡಿದ್ದಾರೆ ಆ ಕಂದಕ ಈ ಚುನಾವಣೆಯಲ್ಲಿ ಇನ್ನಿಲ್ಲದಂತೆ ದೊಡ್ಡದಾಗುವುದಲ್ಲದೆ ಹಳ್ಳಿಗಳಲ್ಲಿನ ಸಾಮರಸ್ಯವನ್ನೇ ಹಾಳುಮಾಡಲಿದೆ
ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಹಳ್ಳಿಗಳಲ್ಲಿ ಹಿರಿಯರು ಎನ್ನುವವರ ಮಾತು ನಡೆಯುವುದು ಅಷ್ಟಕ್ಕಷ್ಟೆ ಪಡ್ಡೆಹುಡುಗರದ್ದೇ ಆಟಾಟೋಪಾ ರಾಜಕಾರಣಿಗಳು ಸಹ ವಯಸ್ಸಾದವರದ್ದು ನಡೆಯುವುದಿಲ್ಲ ಎಂಬುದನ್ನು ಮನಗಂಡಿರುವ ಕಾರಣ ಪಡ್ಡೆಗಳಿಗೆ ಮಣೆ ಹಾಕುತ್ತಿದ್ದು ಪ್ರತಿನಿತ್ಯ ಗುಂಡುತುಂಡಿನ ಸಮಾರಾದನೆ ನಡೆಯಲೇ ಬೇಕು ಕುಡಿದ ಮೇಲೆ ಕುಡಿಸಿದವನಿಗೆ ನಿಷ್ಠೆ ತೋರಲು ಹೊಡೆದಾಡಲೇಬೇಕು ಎನ್ನುವ ಪರಿಸ್ಥಿತಿ ಈಭಾರಿ ನಿರ್ಮಾಣವಾಗಲಿದೆ
ಮಹಿಳಾ ಮೀಸಲಾತಿಯ ಭರಪೂರ ದುರುಪಯೋಗವಾಗಲಿದ್ದು ಪ್ರಭಾವ ಹೊಂದಿರುವವನು ಪತ್ನಿ ಇಲ್ಲವೇ ತಾಯಿ ಅಥವಾ ಸಹೋದರಿಯನ್ನು ನಿಲ್ಲಿಸಿ ಗೆಲ್ಲಿಸುವ ಹಾಗೂ ಅವರು ನೆಪಮಾತ್ರಕ್ಕೆಂಬಂತೆ ಗಂಡಸರೇ ಆಡಳಿತ ನಡೆಸುವುದು ಮುಂದುವರೆಯಲಿದೆ ದೇವರ ದಯದಿಂದ ಸದಸ್ಯಣಿಯರ ಗಂಡ/ತಂದೆ ಅಥವಾ ಸಹೋದರ ಸಭೆ ಸಮಾರಂಭ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಮುಂದಾಗುವ ಪ್ರಹಸನ ನಡೆಯದಿದ್ದರೆ ಸಾಕು ಅಧಿಕಾರ ವಿಕೇಂದ್ರೀಕರಣದ ಮಾನ ಉಳಿಯುತ್ತದೆ
ಹಣ ಕೋಳಿ ಪ್ರತಿನಿತ್ಯ ಮದ್ಯದ ಸರಬರಾಜು ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು ನಾಕಾಣೆ ಗಿಟ್ಟದೆ ಮಖ ಒಣಗಿಸಿಕೊಂಡ ಮಂದಿ ಹಲವರಾದರೆ ತಮಗೆ ಯಾರು ಮತ ಹಾಕಿಲ್ಲ ಎಂಬುದನ್ನು ಸುಲಭವಾಗಿ ಗುರುತಿಸಿಕೊಂಡು ಅವರೊಂದಿಗೆ ವರ್ಷಗಳ ಕಾಲ ದ್ವೇಷ ಸಾಧಿಸಿ ಅವರಿಗೆ ಕೊಟ್ಟಿಗೆ ಶೌಚಾಲಯ ಮಂಜೂರಾಗದಂತೆ ತಡೆದು ಸಮಾಧಾನ ಪಟ್ಟುಕೊಳ್ಳುವವರು ಹಲವಾರು,
ಗ್ರಾಮಾಂತರ ಪ್ರದೇಶಗಳಲ್ಲಿ ಈಗಂತೂ ಮದ್ಯಪ್ರಿಯರ ಸಂಖ್ಯೆ ಅಧಿಕವಾಗಿದೆ ಚುನಾವಣೆ ಸಮಯದಲ್ಲಿ ಪುಗಸಟ್ಟೆ ಸಿಗುವಾಗ ಬಿಡುತ್ತಾರೆಯೇ ವರುಷವಿಡೀ ಚೀಪರ್ ಕುಡಿಯುವವನು ಸಹ ದುಬಾರಿ ಮದ್ಯಕ್ಕೆ ದುಂಬಾಲು ಬೀಳುತ್ತಾನೆ
ಇಂದಿನ ಮದ್ಯದ ದುಬಾರಿ ಬೆಲೆಯಲ್ಲಿ ಒಳ್ಳೆಯ ಬ್ರಾಂಡ್ ಹಂಚಲು ಸಾಕಷ್ಟು ಹಣ ವ್ಯಯ ಮಾಡಬೇಕಾದ ಹಿನ್ನಲೆಯಲ್ಲಿ ರಾಜಕೀಯ ಮುಖಂಡರು ನಕಲಿ ಮದ್ಯ ತಯಾರಕರ ಮೊರೆ ಹೋಗಲಿದ್ದು ದುಬಾರಿ ಮದ್ಯದ ಬಾಟಲಿಯಲ್ಲಿ ಲೋಕಲ್ ಸರಕು ತುಂಬಿ ಹೊಟ್ಟೆತುಂಬ ಕುಡಿಸಲಿದ್ದು ನಕಲಿ ಮದ್ಯ ಕುಡಿದು ಒಂದಷ್ಟು ಜನ ಶಿವನ ಪಾದ ಸೇರಲಿದ್ದಾರೆ
ಗ್ರಾಮ ಪಂಚಾಯತಿ ಚುನಾವಣೆಯ ಬಳಿಕ ಅಧ್ಯಕ್ಷ ಉಪಾಧ್ಯಕ್ಷ ಗಾದಿಯ ಮೀಸಲಾತಿ ಪ್ರಹಸನ ಆ ನಂತರ ಸದಸ್ಯರ ಕಿಡ್ನಾಪ್ ಪ್ರವಾಸ ಹಣದ ಆಮಿಷ ಆಗೊಂದಷ್ಟು ಹೊಡೆದಾಟ ಬಡಿದಾಟ
ಒಟ್ಟಾರೆಯಾಗಿ ಗ್ರಾಮಾಂತರ ಪ್ರದೇಶದಲ್ಲಿ ಸ್ವಾಸ್ಥ್ಯ ಕದಡಲು ಏನೇನು ಮಾಡಬೇಕೋ ಎಲ್ಲವೂ ಗ್ರಾಮ ಪಂಚಾಯತಿ ಚುನಾವಣೆ ಹೆಸರಿನಲ್ಲಿ ನಡೆಯಲಿದೆ.

#ಗ್ರಾಮ ಪಂಚಾಯಿತಿ 

#ಚುನಾವಣೆ

#ಕರ್ನಾಟಕ 

#ವಿಮರ್ಶಾ-vimarsha 


An digital media


ಪ್ರಧಾನ ಸಂಪಾದಕರು 
ಹರೀಶ್ ಹೆಚ್ ಆರ್ ಕೋಟೆ 

ಸುದ್ದಿ ಸಂಪಾದಕರು 
ನಾಗೇಂದ್ರ.ಹೆಚ್. ಎನ್. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಉತ್ತಮ ಫಲಿತಾಂಶ , ಹಣ ಉಳಿತಾಯ.

ನಾನು ನೆಟ್‌ಸರ್ಫ್ ಡೈರೆಕ್ಟ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ನೆಟ್ಸರ್ಫ್ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುತ್ತಿದ್ದೇನೆ. ನಾನು ನಿಮಗೆ ಈ ಉತ್ಪನ್ನಗಳನ್ನು ಬಲವಾಗಿ ಶಿಫಾರಸು ಮಾಡುತ್ತೇವೆ. 'NETSURF DIRECT' 5 ವಿವಿಧ ವಿಭಾಗಗಳಲ್ಲಿ 90 ಕ್ಕೂ ಹೆಚ್ಚು ಗಿಡಮೂಲಿಕೆ ಉತ್ಪನ್ನಗಳನ್ನು ನೀಡುತ್ತದೆ ಅಂದರೆ ಆರೋಗ್ಯ ರಕ್ಷಣೆ, ವೈಯಕ್ತಿಕ ಆರೈಕೆ, ಬಣ್ಣ ಸೌಂದರ್ಯವರ್ಧಕಗಳು, ಗೃಹ ಆರೈಕೆ ಮತ್ತು ಕೃಷಿ. ಈ ಉತ್ಪನ್ನಗಳನ್ನು ಭಾರತದಾದ್ಯಂತ 2.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ನಂಬಿದ್ದಾರೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೆಟ್‌ಸರ್ಫ್ ವರ್ಲ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಎಲ್ಲಾ ನೆಟ್‌ಸರ್ಫ್ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಿ. ಒಮ್ಮೆ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ನನ್ನ ಮೊಬೈಲ್ ಸಂಖ್ಯೆಯನ್ನು (8453502625) "ಉಲ್ಲೇಖಿಸಿದವರು" ನಲ್ಲಿ ನಮೂದಿಸಿ ಮತ್ತು ನಿಮ್ಮ 1ನೇ ಖರೀದಿಯಿಂದ ಪುನಃ ಪಡೆದುಕೊಳ್ಳಬಹುದಾದ ರೂ.100 ವೋಚರ್ ಅನ್ನು ಪಡೆಯಿರಿ. Andriod ಬಳಕೆದಾರರು: https://bit.ly/3SxEkfB ಆಪಲ್ ಬಳಕೆದಾರರು: https://apple.co/3Ace2JT   I am working with Netsurf Direct. I am using Netsurf products regularly. I strongly recommend these products to you .   'NETSURF DIRECT...

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...