ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

#ಕರ್ನಾಟಕ ಇ ಲೋಕ ಅದಾಲತ್ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸೆ 19 ರಾಜ್ಯದಾದ್ಯಂತ ಇ -ಲೋಕ ಅದಾಲತ್ -ನ್ಯಾಯಮೂರ್ತಿ ಅರ್ವಿಂದ್ ಕುಮಾರ್

ಸೆ.19 ರಂದು ರಾಜ್ಯಾದ್ಯಂತ ಇ -ಲೋಕ ಅದಾಲತ್: ನ್ಯಾ|| ಅರವಿಂದ ಕುಮಾರ್. ಹಾಸನ,ಆ.28(ಕರ್ನಾಟಕ ವಾರ್ತೆ):-  ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಸೆ.19 ರಂದು  ಇ -ಲೋಕ ಅದಾಲತ್ ಏರ್ಪಡಿಸಲಾಗಿದ್ದು, ರಾಜಿ ತೀರ್ಮಾನದ ಮೂಲಕ ಸಾವಿರಾರು ಪ್ರಕರಣಗಳ ಇತ್ಯರ್ಥ ನಿರೀಕ್ಷಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು ಹಾಗೂ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಅವರು ತಿಳಿಸಿದ್ದಾರೆ. ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಎಲ್ಲಾ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು  ಕೊವಿಡ್-19 ಹಿನ್ನಲೆಯಲ್ಲಿ ಎಲ್ಲರಿಗೂ ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ. ನ್ಯಾಯಾಲಯಗಳಲ್ಲಿ ವಿಚಾರಣೆಗಳು ತಡವಾಗುತ್ತಿವೆ ಹಾಗಾಗಿ ಬಾಕಿ ಇರುವ ರಾಜಿ ಸಂಧಾನದ ಮೂಲಕ ಬಗೆ ಹರಿಸಬಹುದಾದ ಪ್ರಕರಣಗಳನ್ನು ವಿಲೇವಾರಿ ಮಾಡಿ ತ್ವರಿತ ನ್ಯಾಯ ಒದಗಿಸಲು ಇ-ಲೋಕ ಅದಾಲತ್ ವ್ಯವಸ್ಥೆ ಮಾಡಲಾಗಿದೆ ಎಂದರು. ಸೆಪ್ಟಂಬರ್ 19 ರಂದು ಪ್ರಪ್ರಥಮವಾಗಿ ಇ -ಲೋಕ ಅದಾಲತ್ ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನದ ಬಳಕೆ ಮೂಲಕ ಕಕ್ಷಿದಾರರು ತಮ್ಮ ವಕೀಲರ ಮೂಲಕ ಅಥವಾ ನೇರವಾಗಿ ರಾಜಿಸಂಧಾನದಲ್ಲಿ ಪಾಲ್ಗೊಂಡು ನ್ಯಾಯಲಯದ ತೀರ್ಪು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.   ಸರ್ವರಿಗೂ ಒಂದೇ ರೀತಿಯ ನ್ಯಾಯ ಒದಗಿಸಲಾಗುವುದು. ಇಲ್ಲಿ ನೀಡುವ ತೀರ್ಮಾನವನ್ನು ಇತರ ನ್ಯಾಯಲಯಗಳಲ್ಲಿ ಪ್ರಶ್ನಿಸುವಂತಿಲ