ವಿಷಯಕ್ಕೆ ಹೋಗಿ

ಅಫಿಡೆವಿಟ್ ಸಲ್ಲಿಸಿದ ಬೆಳೆಗೆರೆ-ಕೋಟೆ ಕಾಲಂ.


ಅಫಿಡೆವಿಟ್ ಸಲ್ಲಿಸಿದ ಬೆಳೆಗೆರೆ
ಕೋಟೆ ಕಾಲಂ 


ಬೆಳ್ಳಂಬೆಳಿಗ್ಗೆ ಮೊಬೈಲ್ ತೆಗೆದು ಫೇಸ್ಬುಕ್ ನೋಡಿದರೆ ಅಚ್ಚರಿ ಖ್ಯಾತಪತ್ರಕರ್ತ ರವಿಬೆಳಗೆರೆ ನಿಧನ ಎಂಬ ಸ್ಟೇಟಸ್ ಇತ್ತು 
ಕಾಮೆಂಟ್ ಬಾಕ್ಸ್ನಲ್ಲಿ ರಿಪ್ ಗಳ ಸುರಿಮಳೆ ಅಲ್ಲಿಗೆ ಕನ್ನಡ ಪತ್ರಿಕೋದ್ಯಮದ ವರ್ಣರಂಜಿತ ವ್ಯಕ್ತಿ ಇನ್ನಿಲ ಎಂಬುದು ಖಚಿತವಾಯಿತು
ದಶಕಗಳ ಕಾಲ ಸುಟ್ಟ ಅಸಂಖ್ಯಾತ ಸಿಗರೇಟ್ಗಳು ಆ ದಿನಗಳಲ್ಲಿ ಹೀರಿದ ಲೀಟರ್ ಗಟ್ಟಲೆ ಮದ್ಯದ ಹೊಡೆತ ಶುಗರ್ ಕಾಲುನೋವು ತೊದಲುವ ನಾಲಿಗೆ ಕತ್ತುಕೆಳಗೆ ಹಾಕಿ ಮಾತನಾಡಲು ಆಯಾಸಪಡುವುದನ್ನು ಕಂಡವರಿಗೆ ಸಾವು ಅಷ್ಟಾಗಿ ಅಚ್ಚರಿ ತರಲಿಲ್ಲವಾದರೂ ಆತನ ಜೀವಂತಿಕೆಗೆ 62ರ ವಯೋಮಾನಕ್ಕೆ ಸಾವು ಆಘಾತವೇ ಸರಿ

ಬಳ್ಳಾರಿಯ ಸತ್ಯನಾರಾಯಣ ಪೇಟೆಯಲ್ಲಿ 1958 ರ ಮಾ.15 ರಂದು ತಂದೆಯ ನೆರಳೇ ಇಲ್ಲದೆ ತಾಯಿಯ ಅಸರೆಯಲ್ಲಿ ಬೆಳೆದ ಬೇಜವಾಬ್ದಾರಿ ಹುಡುಗ ರವಿಬೆಳೆಗೆರೆ 
ಮುಂದೆ ದೊಡ್ಡದೊಡ್ಡವರಿಗೆ ಜವಾಬ್ದಾರಿಯ ಪಾಠ ಹೇಳಿದ್ದು ಇತಿಹಾಸ
ಪಿ.ಲಂಕೇಶ್ ವೈಕುಂಠ ರಾಜು ನಂತರ ಜಾಹೀರಾತಿನ ಹಂಗಿಲ್ಲದೆ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದ ಹೆಗ್ಗಳಿಕೆ ಬೆಳೆಗೆರೆ ಅವರದ್ದು
ಕಪ್ಪುಬಿಳುಪಿನ ಸುಂದರಿ ಹಾಯ್ ಬೆಂಗಳೂರನ್ನು 1995 ರಲ್ಲಿ ರವಿ ಹೊರ ತಂದಾಗ ಅದರ ಹೆಸರು ಕೇಳಿ ನಕ್ಕವರೇ ಹೆಚ್ಚು ಅದರೆ ಅ ನಂತರದಲ್ಲಿ ಅದು ಕಂಡ ಯಶಸ್ಸು ಬಹುಶ ಬೆಳೆಗೆರೆಯೆ ಊಹಿಸಿರಲಿಲ್ಲ ಎನಿಸುತ್ತದೆ
ಜಾಣಜಾಣೆಯರ ಪತ್ರಿಕೆ ಲಂಕೇಶ್ ಇಳಿಜಾರಿನಲ್ಲಿದ್ದಾಗ ಬಂದ ಹಾಯ್ ಬೆಂಗಳೂರು ರವಿಬೆಳೆಗೆರೆಯ ಖಾಸ್ಬಾತ್ ಬಾಟಂ ಐಟಮ್ ಅಫಿಡೆವಿಟ್ ಕಾಲಂ ಒದುಗರಿಗೆ ಹೊಸತನ ನೀಡಿತು
ಹಸಿ ಕ್ರೈಂ ರಕ್ತ ಸಿಕ್ತ ಬರಹ ತೊಂಬತ್ತರ ದಶಕದ ಓದುಗರಿಗೆ ಪತ್ರಿಕೆ ಖರೀದಿಸಲು ಪ್ರೇರೇಪಿಸಿತು
ಬೆಳೆಗೆರೆಯ ವಿಶಿಷ್ಟ  ಶೈಲಿ ದಂಧೆ ಮಾಂಸದ ಅಡ್ಡ ಮೂಗುಬೊಟ್ಟು ಪಿಂಪ್ ಇತ್ಯಾದಿ ಪದಪುಂಜಗಳ ಬಳಕೆ ಹೊಸ ಓದುಗರ ವರ್ಗವನ್ನೇ ಸೃಷ್ಟಿಸಿತು,
ಹಾಯ್ ಬೆಂಗಳೂರು ಪತ್ರಿಕೆ ಯಥಾವತ್ತು ಪತ್ರಿಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು ಆ ಶೈಲಿ ಅನುಸರಿಸುವ ಪತ್ರಕರ್ತರು ಹುಟ್ಟಿಕೊಂಡರು
ಸತ್ಯದ ತಲೆಯ ಮೇಲೆ  ಹೊಡೆದಂತೆ ಸುಳ್ಳ ನ್ನು ಬರೆಯುವುದರಲ್ಲಿ ನಿಸ್ಸೀಮರಾದ ಬೆಳೆಗೆರೆ ಖ್ಯಾತ ಬರಹಗಾರರ ಕಾದಂಬರಿ ತರ್ಜುಮೆಯನ್ನು ತಮ್ಮದೆಂದರೂ ಸಹ ಓದುಗರು ಒಪ್ಪಿದರು ,
ಕಪ್ಪುಬಿಳುಪಿನ ಸುಂದರಿಯ ಒಡಲಲ್ಲಿ ಜನರ ಜಾತಕವನ್ನೇ ಇಟ್ಟುಕೊಂಡು ಆಟವಾಡಿಸಿದ ಬೆಳೆಗೆರೆ ಹಣದ ಹಪಾ ಹಪಿತನಕ್ಕಾಗಿ ಸಿನಿಮಾ ನಟಿಯರು ರಾಜಕಾರಣಿಗಳು ನಂಬರ್ ದೋ ದಂಧೆ ಕುಳಗಳನ್ನು ಉರಿದುಮುಕ್ಕಿ ಶಾಪ ಹಾಕಿಸಿಕೊಂಡಿದ್ದು ಸುಳ್ಳಲ್ಲಾ
ಎರಡೆರೆಡು ವಿಷಯಗಳಲ್ಲಿ ಎಂಎ ಪದವೀಧರರಾದ ಆರ್ಬಿ ಕೆಲಕಾಲ ಹಾಸನದ ಎನ್ಡಿಆರ್ಕೆ ಕಾಲೇಜಿನಲ್ಲಿ
ಉಪನ್ಯಾಸಕರಾಗಿದ್ದರು
ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಹೆತ್ತೂರು ಸಮೀಪದ ಶೂಟಿಂಗ್ ಸ್ಪಾಟ್ಗಳು ಇವರ ನೆಚ್ಚಿನ ತಾಣ ಸಿಪಾಯಿ ಚಿತ್ರ ಚಿತ್ರಿಕರಣವಾದ ಜಾಗದಲ್ಲಿ ಬೆಳಗ್ಗಿನ ಜಾವದವರೆಗೂ ಕುಡಿದು ಚಿತ್ತಾಗಿ ಹಿಂದಿನ ಸೀಟಿನಲ್ಲಿ ಮಲಗಿಕೊಂಡೇ ವಾಪಾಸಾಗುತ್ತಿದ್ದುದು ಮಾಮೂಲು
ಪತ್ರಕರ್ತನಿಗಿಂತ ಕಾದಂಬರಿಕಾರನಾಗಿ ಬೆಳೆಗೆರೆ ಸದಾ ನೆನಪಿನಲ್ಲುಳಿಯುತ್ತಾರೆ ಇವರ ಎಲ್ಲಾಪುಸ್ತಕಗಳು ಪುಸ್ತಕ ಪ್ರಿಯರ ಫೇವರಿಟ್ ಈಗಲೂ ಮಾರಾಟದಲ್ಲಿ ಬೆಳೆಗೆರೆ ಬುಕ್ಕುಗಳೆ ನಂಬರ್ ವನ್
ಅದರಲ್ಲಿಯೂ ಹಿಮಾಲಯನ್ ಬ್ಲಂಡರ್ ಡಯಾನ ರೇಷ್ಮೆ ರುಮಾಲು ಮಾಂಡವಿ ಮಾಟಗಾತಿ ಪಾಪಿಗಳಲೋಕದಲ್ಲಿ ಇಂದಿರೆಯ ಮಗ ಸಂಜಯ ಭೀಮಾತೀರದ ಹಂತಕರು ಅದ್ಬುತ ಪುಸ್ತಕಗಳು
ಪತ್ರಕರ್ತ ಬರಹಗಾರ ನಟ ನಿರೂಪಕ ಹೀಗೆ ಹತ್ತು ಹಲವು ರೂಪಗಳಲ್ಲಿ ಕಾಣಿಸಿಕೊಂಡ ಬೆಳೆಗೆರೆ ಎಲ್ಲದರಲ್ಲಿಯೂ ಯಶ ಕಂಡವರು
ಅತ್ಯಂತ ಶ್ರೀಮಂತ ಪತ್ರಕರ್ತ ಬೆಳೆಗೆರೆ ತಮ್ಮ ಕುಟುಂಬಕ್ಕೆ ಕಾದಂಬರಿಗಳ ಎಟಿಎಂ ಅನ್ನೇ ಬಿಟ್ಟುಹೋಗಿದ್ದಾರೆ ಅದೇರೀತಿ ಪತ್ರಿಕೋದ್ಯಮ ಬಳಸಿಕೊಂಡು ದುಡ್ಡುಮಾಡಬಹುದು ಎಂಬುದನ್ನು ಹಲವರಿಗೆ ಹೇಳಿಕೊಟ್ಟು ಹೋಗಿದ್ದು ಆ ಸಂತಾನ ಸಮಾಜವನ್ನು ಕಾಡುತ್ತಿದೆ
ಕ್ರಿಮಿನಲ್ ಗಳ ವೈಭವೀಕರಣ ಹಂತಕರ ಮಾರ್ಕೆಟಿಂಗ್ ಭೂಗತ ಜಗತ್ತನ್ನು ಬಳಸಿಕೊಳ್ಳುವ ಕಲೆ ಇದೆಲ್ಲದರ ನಡುವೆಯೂ ಬೆಳೆಗೆರೆ ಉತ್ತಮ ಬರಹಗಾರರಾಗಿ ಸದಾ ನೆನಪಿನಲ್ಲಿರುತ್ತಾರೆ
ಇವರ ಗುರು ಖುಷ್ವಂತ್ ಸಿಂಗ್ ರಂತೆ ತಮ್ನ ವೀಕ್ನೆಸ್ ಗಳನ್ನು ಓದುಗರೆದುರು ಅನಾವರಣ ಗೊಳಿಸಿದರೂ ಬೆಳೆಗೆರೆ ಅವರಂತೆ ಧೀರ್ಘಕಾಲ ಬದುಕುವ ಲಕ್ಕಿಫೆಲೊ ಆಗಲಿಲ್ಲ.


   ಲೇಖಕರು  ಮತ್ತು  ಸಂಪಾದಕರು

         ಹರೀಶ್ ಹೆಚ್ ಆರ್ ಕೋಟೆ 



ಕಾಮೆಂಟ್‌ಗಳು

  1. ಫ್ರವಿ ಬೆಳಗೆರೆ ಯವಾರ ಆತ್ಮಕ್ಕೆ ಚಿರ ಶಾಂತಿ ಕೊರುತ್ತ ಸರ್ ತಾವು ಅವರನ್ನೇ ಕಿರು ಬರಹದಲ್ಲಿ ಕಟ್ಟಿ ಕೊಟ್ಟಿದ್ದೀರಿ. ನೆಗೆಟೀವ್ ಗುಣಗಳನ್ನು ದಾಟಿ ಉತ್ತಮ ಕೆಲಸಗಳನ್ನು ಮಾಡಿ.ಸಾಹಿತ್ಯ ಲೋಕವನ್ನು ಅರಳಿಸಿ.ಹಗಲು ಕಳ್ಳರಿಗೆ ಸಿಂಹ ಸ್ವಪ್ನರಾಗಿ.ಪತ್ರಿಕೆ ನಡೆಸುವವರಿಗೆ ಮಾದರಿಯಾಗಿ.ಎಂದೂ ಮರೆಯದ ಹಾಡಾಗಿ ಬದುಕಿದ ಮಹನೀಯರಿಗೆ ನಿಮ್ಮಿಂದ ಉತ್ತಮ ಮಾತುಗಳು ಹೊರಹೊಮ್ಮಿವೆ. ಧನ್ಯ ವಾದಗಳು.ಅವರ ಆತ್ಮಕ್ಕೆ ಶಾಂತಿ. ದೊರೆಯಲಿ

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Vimarsha.info

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಉತ್ತಮ ಫಲಿತಾಂಶ , ಹಣ ಉಳಿತಾಯ.

ನಾನು ನೆಟ್‌ಸರ್ಫ್ ಡೈರೆಕ್ಟ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ನೆಟ್ಸರ್ಫ್ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುತ್ತಿದ್ದೇನೆ. ನಾನು ನಿಮಗೆ ಈ ಉತ್ಪನ್ನಗಳನ್ನು ಬಲವಾಗಿ ಶಿಫಾರಸು ಮಾಡುತ್ತೇವೆ. 'NETSURF DIRECT' 5 ವಿವಿಧ ವಿಭಾಗಗಳಲ್ಲಿ 90 ಕ್ಕೂ ಹೆಚ್ಚು ಗಿಡಮೂಲಿಕೆ ಉತ್ಪನ್ನಗಳನ್ನು ನೀಡುತ್ತದೆ ಅಂದರೆ ಆರೋಗ್ಯ ರಕ್ಷಣೆ, ವೈಯಕ್ತಿಕ ಆರೈಕೆ, ಬಣ್ಣ ಸೌಂದರ್ಯವರ್ಧಕಗಳು, ಗೃಹ ಆರೈಕೆ ಮತ್ತು ಕೃಷಿ. ಈ ಉತ್ಪನ್ನಗಳನ್ನು ಭಾರತದಾದ್ಯಂತ 2.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ನಂಬಿದ್ದಾರೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೆಟ್‌ಸರ್ಫ್ ವರ್ಲ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಎಲ್ಲಾ ನೆಟ್‌ಸರ್ಫ್ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಿ. ಒಮ್ಮೆ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ನನ್ನ ಮೊಬೈಲ್ ಸಂಖ್ಯೆಯನ್ನು (8453502625) "ಉಲ್ಲೇಖಿಸಿದವರು" ನಲ್ಲಿ ನಮೂದಿಸಿ ಮತ್ತು ನಿಮ್ಮ 1ನೇ ಖರೀದಿಯಿಂದ ಪುನಃ ಪಡೆದುಕೊಳ್ಳಬಹುದಾದ ರೂ.100 ವೋಚರ್ ಅನ್ನು ಪಡೆಯಿರಿ. Andriod ಬಳಕೆದಾರರು: https://bit.ly/3SxEkfB ಆಪಲ್ ಬಳಕೆದಾರರು: https://apple.co/3Ace2JT   I am working with Netsurf Direct. I am using Netsurf products regularly. I strongly recommend these products to you .   'NETSURF DIRECT...

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...