ವಿಷಯಕ್ಕೆ ಹೋಗಿ

ಫೋಟೋ ಖಯಾಲಿ.... ಮತ್ತೆ ಹುಟ್ಟಿ ಬಾ - ಕೋಟೆ ಕಾಲಂ



ಪೊಟೋ ಖಯಾಲಿ......ಮತ್ತೆಹುಟ್ಟಿಬಾ..


ಎಂಎಲ್ಎ ನಮಗೆ ಸಖತ್ ಬೇಕಾದವರು ಆ ಮಿನಿಸ್ಟರ್ ನಮಗೆ ಕ್ಲೋಸು.ಆ
 ಡಿ.ಸಿ . ನಮ್ಮವರು ....
ಆ ಎಸ್ಪಿ ನಮ್ಮನೇವ್ರು ಅಂದ್ರೆ ಸುಮ್ಮನಾಗ್ತಾರೆ
ಇವೆಲ್ಲಾ ನಾವು ಅಗಾಗ್ಗೆ ಕೇಳುತ್ತಲೇ ಇರುವ ಮಾತು ಅದರಲ್ಲಿಯೂ ಕೆಲಸಕ್ಕೆ ಬಾರದ ಪುಡಾರಿಗಳು ನಂಬರ್ ದೋ ದಂಧೆ ಮಾಡುವವರು ಹಾಗು ಬೆಳಿಗ್ಗೆ ಮನೆಬಿಟ್ಟರೆ ಸಂಜೆಯೊತ್ತಿಗೆ ಯಾರದಾದರೂ ತಲೆಯಮೇಲೆ ಕೈ ಇಟ್ಟು ಕಾಸು ಮಾಡಿಕೊಳ್ಳುವವರ ಬಾಯಲ್ಲಿ ಬರುವ ಮಾತುಗಳು
ಇನ್ನು ಕೆಲವು ಸಮಾಜ ಸೇವಕ ಸೇವಕಿಯರ ಬಾಯಲ್ಲಿ ಬರುವ ಕ್ಲೋಸ್ ಪದದ ಅರ್ಥ ಬೇರೆ ಯದ್ದೇ ಆಗಿರುತ್ತದೆ
ಇಂತವರಮನೆಗಳ ಶೋಕೇಸ್ ಹಾಗೂ ಗೋಡೆಗಳನ್ನುಅಲಂಕರಿಸಿರುವ ವಿಐಪಿಗಳು ಅಧಿಕಾರಿಗಳ ಜೊತೆಗಿನ ಫೋಟೋಗಳು ಮನೆಗೆ ಬಂದವರ ಮುಖಕ್ಕೆ ರಾಚುವಂತಿರುತ್ತವೆ ಅದರಲ್ಲಿ ಕಷ್ಟಪಟ್ಟು ತೂರಿಸಿರುವ ಇವರ ಮುಖಗಳನ್ನು ಕಂಡಾಗ ಯೋಗ್ಯತೆ ಅರ್ಹತೆ ಅರ್ಥವಾಗುತ್ತದೆ
ಬಹುತೇಕ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜೊತೆ ಇಂತವರ ಪೋಟೋಗಳು ಇರುತ್ತವೆಯೇ ಹೊರತಾಗಿ ಅಪ್ಪಿತಪ್ಪಿಯೂ ಸಾಹಿತಿಗಳು ನಾಡುನುಡಿಗೆ ಹೋರಾಡಿದವರ ಜೊತೆ ಇವರ ಪೋಟೋಗಳು ಸಿಗುವುದಿಲ್ಲಾ
ಸಾಲದೆಂಬುದಕ್ಕೆ ಇತ್ತೀಚೆಗೆ ಸಿಕ್ಕವರಿಗೆಲ್ಲಾ ಪ್ರಶಸ್ತಿಗಳನ್ನು ಕೊಡುವ ಸಂಸ್ಥೆಗಳು ಜೀವನದಲ್ಲಿ ಬಿಕ್ಷುಕನಿಗೆ ಒಂದುರೂಪಾಯಿ ಹಾಕದವನಿಗೂ ಸಮಾಜ ಸೇವಕ ಎಂಬ ಬಿರುದು ನೀಡಿ ಪ್ರಶಸ್ತಿ  ಕೊಡುತ್ತಿದ್ದು ಅವುಗಳ ಪೋಟೋಗಳು ಹಾಗು ಕಂಡೂ ಕೇಳದ ಡಾಕ್ಟರೇಟ್ ಗಳ ಫೊಟೋಗಳು ಬಿಲ್ಡಪ್ ಹೆಚ್ಚಿಸುವ ಸಾಧನಗಳಾಗಿವೆ
ಈ ಪೋಟೋಬಿಲ್ಡಪ್ ರಾಜರನ್ನು ಕಂಡಾಗ ಹಿಂದೆ ರಸ್ತೆಬದಿಯಲ್ಲಿ ಹಾವಾಡಿಸುವವರು ನೆನಪಾಗುತ್ತಾರೆ 
ದಶಕಹಿಂದೆ ಹಾವಾಡಿಸುವವರು ಸಹ ದೊಡ್ಡದೊಡ್ಡ ಸಿನಿಮಾ ನಟರೊಂದಿಗೆ ತಾವು ತೆಗೆಸಿಕೊಂಡ ಪೋಟೊ ಪ್ರದರ್ಶಿಸುತ್ತಿದ್ದುದಲ್ಲದೆ ತಮ್ಮಬಳಿ ಇರುವ ತೆವಳಲು ಪ್ರಾಯಾಸಪಡುತ್ತಿದ್ದ ಹಾವನ್ನು ತೋರಿಸಿ ಆ ಸಿನಿಮಾದಲ್ಲಿ ನಟಿಸಿರುವ ಹಾವು ಇದೇ ಎಂದು ಪುಂಗುತ್ತಿದ್ದರು
ಅವರಿಗೂ ಇವರಿಗೂ ಅಂತಹ ವ್ಯತ್ಯಾಸವೇನಿಲ್ಲಾ ಎಲ್ಲರೂ ಮಾಡುವುದು ದುಡ್ಡಿಗಾಗಿ ತಾನೆ
ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ವಿಐಪಿ ಗಳೊಂದಿಗೆ ಫೋಟೊ ತೆಗೆಸಿಕೊಳ್ಳುವ ಖಯಾಲಿಯ ಕ್ರಿಮಿನಲ್ ಗಳಿಂದಾಗಿ ರಾಜಕಾರಣಿಗಳು ಸಿನಿಮಾನಟನಟಿಯರು ತೊಂದರೆಗೆ ಸಿಲುಕಿರುವುದು ಸುಳ್ಳಲ್ಲಾ

ಅದರಲ್ಲಿಯೂ ಡ್ರಗ್ ಪೆಡ್ಲರ್ಗಳೊಂದಿಗೆ ಪೋಟೋಗಳಲ್ಲಿ ಕಾಣಿಸಿಕೊಂಡವರು ಕಂಬಿ ಎಣಿಸುವ ಹಾಗೂ ಪೊಲೀಸರ ವಿಚಾರಣೆ ಡ್ರಿಲ್ಲಿಂಗ್ ಗೆ ಸಿಲುಕಿ ನಲುಗುವಂತಾಗಿರುವುದು ಕಂಡಕಂಡವರೊಂದಿಗೆ ಪೋಸ್ ಕೊಡಲು ಹೆದರುವಂತೆ ಮಾಡಿದೆ
ಜಿಲ್ಲಾಮಟ್ಟದಲ್ಲಿಯೂ ಕ್ರಿಮಿನಲ್ ಕೆಲಸ ಮಾಡುವವರು ಪೊಲೀಸ್‌ ವರಿಷ್ಟಾಧಿಕಾರಿಗಳು ಹಾಗೂ ನೆಲಗಳ್ಳರು ಜಿಲ್ಲಾಧಿಕಾರಿಗಳನ್ನು ಬಂದ ತಕ್ಷಣವೇ ಓಲೈಸಿ ಸನ್ಮಾನಿಸಿ ಅವರ ಸ್ನೇಹಸಂಪಾದಿಸುವುದು ಅವರೊಡನೆ ಭಾವಚಿತ್ರ ತೆಗೆಸಿಕೊಳ್ಳುವುದು ಮಾಮೂಲಾಗಿದೆ
ಯಾರೆ ಹೊಸ ಡಿಸಿ ಎಸ್ಪಿ ಬರಲಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಆ ಪೋಟೊತೋರಿಸಿಯೇ ಹೊಟ್ಟೆಹೊರೆದುಕೊಳ್ಳುವ ಮಹಾನುಭಾವರು ಎಲ್ಲೆಡೆ ಇದ್ದೇಇರುತ್ತಾರೆ
ಅವರು ರಾಜಕೀಯ ಮುಖಂಡರಾಗಿರಬಹುದು ಸಮುದಾಯದ ಸ್ವಯಂ ಘೋಷಿತ ನಾಯಕರಾಗಿರಬಹುದು ಸಮಾಜ ಸೇವಕ ಇಲ್ಲವೇ ಪತ್ರಕರ್ತನ ಸೋಗಿನವನಾಗಿರಬಹುದು ಇವರು ಸಹ ಅಧಿಕಾರಿಗಳೊಂದಿಗೆ ಅತ್ಯಂತ ಅಪ್ತರೆಂಬಂತೆ ಬಿಂಬಿಸಿಕೊಳ್ಳುವ ಫೋಟೊ ಗಳನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಾರೆ
ಪಾಪ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಗೆ ತಮ್ಮೊಂದಿಗೆ ತೆಗೆಸಿಕೊಂಡ ಒಂದು ಪೋಟೊ ಎಷ್ಟೆಲ್ಲಾ ಬಳಕೆ(ದುರ್ಬಳಕೆ) ಆಗುತ್ತದೆ ಎಂಬುದು ಅರ್ಥವಾಗುವುದೇ ಇಲ್ಲಾ
ಅದರಲ್ಲಿಯೂ ಫ್ಲೆಕ್ಸ್ ಗಳು ಬಂದನಂತರವಂತೂ ಅದರ ಅದ್ವಾನ ಹೇಳಲಸಾದ್ಯ ರಾಜಕೀಯ ಮುಖಂಡರು ಗಳ ಕಾರ್ಯಕ್ರಮ ,ನಾಟಕ ಪ್ರಾರಂಭೋತ್ಸವ ,ತಿಥಿ ಸಾವು ಒಂದೇ ಎರಡೇ ಎಲ್ಲದಕ್ಕೂ ಬಳಕೆಯಾಯಿತು ಇನ್ನು ಲೈಟ್ ಕಂಬ ಗಳಿಗೆ ಸತ್ತವರನೆನಪಿಸುವ ಮತ್ತೆಹುಟ್ಟಿ ಭಾ ಎಂಬ ತೋರಣವನ್ನು ಪರಮನೆಂಟ್ ಅಗಿಸಲಾಯಿತು
ಇನ್ನು ಕೆಲವು ಮಹಾನುಭಾವರುಗಳು ಕೆಲ ಸಂಘ ಸಂಸ್ಥೆಗಳ ಮುಂದೆ ವರ್ಷ ಗಟ್ಟಲೆ ತಮ್ಮ ಫ್ಲೆಕ್ಸ್ ರಾರಾಜಿಸುವಂತೆ ಮಾಡಿ ಆ ರಸ್ತೆಯಲ್ಲಿ ಓಡಾಡುವ ಜನರಿಗೆ ಅಸಹ್ಯ ಹುಟ್ಟಿಸಿದ್ದು ಸುಳ್ಳಲ್ಲಾ
ಒಟ್ಟಾರೆ ಪೋಟೋ ಗಳು ಹಲವರಿಗೆ ಪ್ರಚಾರದ ಸಾಧನವಾದರೆ ಮತ್ತೆಕೆಲವರಿಗೆ ಬದುಕಿನ ದಾರಿಯಾಗಿರುವುದು ಸುಳ್ಳಲ್ಲಾ 
ಏನು ಮಾಡುವುದು ಹೇಳಿ ಕೆಟ್ಟವರಿಗಿದು ಕಾಲ.....ಮತ್ತೆ..ಮತ್ತೆ...ಹುಟ್ಟಿಬರುತ್ತಿದ್ದಾರೆ


ಲೇಖಕರು ಮತ್ತು ಸಂಪಾದಕರು
ಹರೀಶ್ ಹೆಚ್ ಆರ್ 
ಕೋಟೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಉತ್ತಮ ಫಲಿತಾಂಶ , ಹಣ ಉಳಿತಾಯ.

ನಾನು ನೆಟ್‌ಸರ್ಫ್ ಡೈರೆಕ್ಟ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ನೆಟ್ಸರ್ಫ್ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುತ್ತಿದ್ದೇನೆ. ನಾನು ನಿಮಗೆ ಈ ಉತ್ಪನ್ನಗಳನ್ನು ಬಲವಾಗಿ ಶಿಫಾರಸು ಮಾಡುತ್ತೇವೆ. 'NETSURF DIRECT' 5 ವಿವಿಧ ವಿಭಾಗಗಳಲ್ಲಿ 90 ಕ್ಕೂ ಹೆಚ್ಚು ಗಿಡಮೂಲಿಕೆ ಉತ್ಪನ್ನಗಳನ್ನು ನೀಡುತ್ತದೆ ಅಂದರೆ ಆರೋಗ್ಯ ರಕ್ಷಣೆ, ವೈಯಕ್ತಿಕ ಆರೈಕೆ, ಬಣ್ಣ ಸೌಂದರ್ಯವರ್ಧಕಗಳು, ಗೃಹ ಆರೈಕೆ ಮತ್ತು ಕೃಷಿ. ಈ ಉತ್ಪನ್ನಗಳನ್ನು ಭಾರತದಾದ್ಯಂತ 2.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ನಂಬಿದ್ದಾರೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೆಟ್‌ಸರ್ಫ್ ವರ್ಲ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಎಲ್ಲಾ ನೆಟ್‌ಸರ್ಫ್ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಿ. ಒಮ್ಮೆ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ನನ್ನ ಮೊಬೈಲ್ ಸಂಖ್ಯೆಯನ್ನು (8453502625) "ಉಲ್ಲೇಖಿಸಿದವರು" ನಲ್ಲಿ ನಮೂದಿಸಿ ಮತ್ತು ನಿಮ್ಮ 1ನೇ ಖರೀದಿಯಿಂದ ಪುನಃ ಪಡೆದುಕೊಳ್ಳಬಹುದಾದ ರೂ.100 ವೋಚರ್ ಅನ್ನು ಪಡೆಯಿರಿ. Andriod ಬಳಕೆದಾರರು: https://bit.ly/3SxEkfB ಆಪಲ್ ಬಳಕೆದಾರರು: https://apple.co/3Ace2JT   I am working with Netsurf Direct. I am using Netsurf products regularly. I strongly recommend these products to you .   'NETSURF DIRECT...

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...