ವಿಷಯಕ್ಕೆ ಹೋಗಿ

ಫೋಟೋ ಖಯಾಲಿ.... ಮತ್ತೆ ಹುಟ್ಟಿ ಬಾ - ಕೋಟೆ ಕಾಲಂ



ಪೊಟೋ ಖಯಾಲಿ......ಮತ್ತೆಹುಟ್ಟಿಬಾ..


ಎಂಎಲ್ಎ ನಮಗೆ ಸಖತ್ ಬೇಕಾದವರು ಆ ಮಿನಿಸ್ಟರ್ ನಮಗೆ ಕ್ಲೋಸು.ಆ
 ಡಿ.ಸಿ . ನಮ್ಮವರು ....
ಆ ಎಸ್ಪಿ ನಮ್ಮನೇವ್ರು ಅಂದ್ರೆ ಸುಮ್ಮನಾಗ್ತಾರೆ
ಇವೆಲ್ಲಾ ನಾವು ಅಗಾಗ್ಗೆ ಕೇಳುತ್ತಲೇ ಇರುವ ಮಾತು ಅದರಲ್ಲಿಯೂ ಕೆಲಸಕ್ಕೆ ಬಾರದ ಪುಡಾರಿಗಳು ನಂಬರ್ ದೋ ದಂಧೆ ಮಾಡುವವರು ಹಾಗು ಬೆಳಿಗ್ಗೆ ಮನೆಬಿಟ್ಟರೆ ಸಂಜೆಯೊತ್ತಿಗೆ ಯಾರದಾದರೂ ತಲೆಯಮೇಲೆ ಕೈ ಇಟ್ಟು ಕಾಸು ಮಾಡಿಕೊಳ್ಳುವವರ ಬಾಯಲ್ಲಿ ಬರುವ ಮಾತುಗಳು
ಇನ್ನು ಕೆಲವು ಸಮಾಜ ಸೇವಕ ಸೇವಕಿಯರ ಬಾಯಲ್ಲಿ ಬರುವ ಕ್ಲೋಸ್ ಪದದ ಅರ್ಥ ಬೇರೆ ಯದ್ದೇ ಆಗಿರುತ್ತದೆ
ಇಂತವರಮನೆಗಳ ಶೋಕೇಸ್ ಹಾಗೂ ಗೋಡೆಗಳನ್ನುಅಲಂಕರಿಸಿರುವ ವಿಐಪಿಗಳು ಅಧಿಕಾರಿಗಳ ಜೊತೆಗಿನ ಫೋಟೋಗಳು ಮನೆಗೆ ಬಂದವರ ಮುಖಕ್ಕೆ ರಾಚುವಂತಿರುತ್ತವೆ ಅದರಲ್ಲಿ ಕಷ್ಟಪಟ್ಟು ತೂರಿಸಿರುವ ಇವರ ಮುಖಗಳನ್ನು ಕಂಡಾಗ ಯೋಗ್ಯತೆ ಅರ್ಹತೆ ಅರ್ಥವಾಗುತ್ತದೆ
ಬಹುತೇಕ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಜೊತೆ ಇಂತವರ ಪೋಟೋಗಳು ಇರುತ್ತವೆಯೇ ಹೊರತಾಗಿ ಅಪ್ಪಿತಪ್ಪಿಯೂ ಸಾಹಿತಿಗಳು ನಾಡುನುಡಿಗೆ ಹೋರಾಡಿದವರ ಜೊತೆ ಇವರ ಪೋಟೋಗಳು ಸಿಗುವುದಿಲ್ಲಾ
ಸಾಲದೆಂಬುದಕ್ಕೆ ಇತ್ತೀಚೆಗೆ ಸಿಕ್ಕವರಿಗೆಲ್ಲಾ ಪ್ರಶಸ್ತಿಗಳನ್ನು ಕೊಡುವ ಸಂಸ್ಥೆಗಳು ಜೀವನದಲ್ಲಿ ಬಿಕ್ಷುಕನಿಗೆ ಒಂದುರೂಪಾಯಿ ಹಾಕದವನಿಗೂ ಸಮಾಜ ಸೇವಕ ಎಂಬ ಬಿರುದು ನೀಡಿ ಪ್ರಶಸ್ತಿ  ಕೊಡುತ್ತಿದ್ದು ಅವುಗಳ ಪೋಟೋಗಳು ಹಾಗು ಕಂಡೂ ಕೇಳದ ಡಾಕ್ಟರೇಟ್ ಗಳ ಫೊಟೋಗಳು ಬಿಲ್ಡಪ್ ಹೆಚ್ಚಿಸುವ ಸಾಧನಗಳಾಗಿವೆ
ಈ ಪೋಟೋಬಿಲ್ಡಪ್ ರಾಜರನ್ನು ಕಂಡಾಗ ಹಿಂದೆ ರಸ್ತೆಬದಿಯಲ್ಲಿ ಹಾವಾಡಿಸುವವರು ನೆನಪಾಗುತ್ತಾರೆ 
ದಶಕಹಿಂದೆ ಹಾವಾಡಿಸುವವರು ಸಹ ದೊಡ್ಡದೊಡ್ಡ ಸಿನಿಮಾ ನಟರೊಂದಿಗೆ ತಾವು ತೆಗೆಸಿಕೊಂಡ ಪೋಟೊ ಪ್ರದರ್ಶಿಸುತ್ತಿದ್ದುದಲ್ಲದೆ ತಮ್ಮಬಳಿ ಇರುವ ತೆವಳಲು ಪ್ರಾಯಾಸಪಡುತ್ತಿದ್ದ ಹಾವನ್ನು ತೋರಿಸಿ ಆ ಸಿನಿಮಾದಲ್ಲಿ ನಟಿಸಿರುವ ಹಾವು ಇದೇ ಎಂದು ಪುಂಗುತ್ತಿದ್ದರು
ಅವರಿಗೂ ಇವರಿಗೂ ಅಂತಹ ವ್ಯತ್ಯಾಸವೇನಿಲ್ಲಾ ಎಲ್ಲರೂ ಮಾಡುವುದು ದುಡ್ಡಿಗಾಗಿ ತಾನೆ
ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ವಿಐಪಿ ಗಳೊಂದಿಗೆ ಫೋಟೊ ತೆಗೆಸಿಕೊಳ್ಳುವ ಖಯಾಲಿಯ ಕ್ರಿಮಿನಲ್ ಗಳಿಂದಾಗಿ ರಾಜಕಾರಣಿಗಳು ಸಿನಿಮಾನಟನಟಿಯರು ತೊಂದರೆಗೆ ಸಿಲುಕಿರುವುದು ಸುಳ್ಳಲ್ಲಾ

ಅದರಲ್ಲಿಯೂ ಡ್ರಗ್ ಪೆಡ್ಲರ್ಗಳೊಂದಿಗೆ ಪೋಟೋಗಳಲ್ಲಿ ಕಾಣಿಸಿಕೊಂಡವರು ಕಂಬಿ ಎಣಿಸುವ ಹಾಗೂ ಪೊಲೀಸರ ವಿಚಾರಣೆ ಡ್ರಿಲ್ಲಿಂಗ್ ಗೆ ಸಿಲುಕಿ ನಲುಗುವಂತಾಗಿರುವುದು ಕಂಡಕಂಡವರೊಂದಿಗೆ ಪೋಸ್ ಕೊಡಲು ಹೆದರುವಂತೆ ಮಾಡಿದೆ
ಜಿಲ್ಲಾಮಟ್ಟದಲ್ಲಿಯೂ ಕ್ರಿಮಿನಲ್ ಕೆಲಸ ಮಾಡುವವರು ಪೊಲೀಸ್‌ ವರಿಷ್ಟಾಧಿಕಾರಿಗಳು ಹಾಗೂ ನೆಲಗಳ್ಳರು ಜಿಲ್ಲಾಧಿಕಾರಿಗಳನ್ನು ಬಂದ ತಕ್ಷಣವೇ ಓಲೈಸಿ ಸನ್ಮಾನಿಸಿ ಅವರ ಸ್ನೇಹಸಂಪಾದಿಸುವುದು ಅವರೊಡನೆ ಭಾವಚಿತ್ರ ತೆಗೆಸಿಕೊಳ್ಳುವುದು ಮಾಮೂಲಾಗಿದೆ
ಯಾರೆ ಹೊಸ ಡಿಸಿ ಎಸ್ಪಿ ಬರಲಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಆ ಪೋಟೊತೋರಿಸಿಯೇ ಹೊಟ್ಟೆಹೊರೆದುಕೊಳ್ಳುವ ಮಹಾನುಭಾವರು ಎಲ್ಲೆಡೆ ಇದ್ದೇಇರುತ್ತಾರೆ
ಅವರು ರಾಜಕೀಯ ಮುಖಂಡರಾಗಿರಬಹುದು ಸಮುದಾಯದ ಸ್ವಯಂ ಘೋಷಿತ ನಾಯಕರಾಗಿರಬಹುದು ಸಮಾಜ ಸೇವಕ ಇಲ್ಲವೇ ಪತ್ರಕರ್ತನ ಸೋಗಿನವನಾಗಿರಬಹುದು ಇವರು ಸಹ ಅಧಿಕಾರಿಗಳೊಂದಿಗೆ ಅತ್ಯಂತ ಅಪ್ತರೆಂಬಂತೆ ಬಿಂಬಿಸಿಕೊಳ್ಳುವ ಫೋಟೊ ಗಳನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಾರೆ
ಪಾಪ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರಿಗೆ ತಮ್ಮೊಂದಿಗೆ ತೆಗೆಸಿಕೊಂಡ ಒಂದು ಪೋಟೊ ಎಷ್ಟೆಲ್ಲಾ ಬಳಕೆ(ದುರ್ಬಳಕೆ) ಆಗುತ್ತದೆ ಎಂಬುದು ಅರ್ಥವಾಗುವುದೇ ಇಲ್ಲಾ
ಅದರಲ್ಲಿಯೂ ಫ್ಲೆಕ್ಸ್ ಗಳು ಬಂದನಂತರವಂತೂ ಅದರ ಅದ್ವಾನ ಹೇಳಲಸಾದ್ಯ ರಾಜಕೀಯ ಮುಖಂಡರು ಗಳ ಕಾರ್ಯಕ್ರಮ ,ನಾಟಕ ಪ್ರಾರಂಭೋತ್ಸವ ,ತಿಥಿ ಸಾವು ಒಂದೇ ಎರಡೇ ಎಲ್ಲದಕ್ಕೂ ಬಳಕೆಯಾಯಿತು ಇನ್ನು ಲೈಟ್ ಕಂಬ ಗಳಿಗೆ ಸತ್ತವರನೆನಪಿಸುವ ಮತ್ತೆಹುಟ್ಟಿ ಭಾ ಎಂಬ ತೋರಣವನ್ನು ಪರಮನೆಂಟ್ ಅಗಿಸಲಾಯಿತು
ಇನ್ನು ಕೆಲವು ಮಹಾನುಭಾವರುಗಳು ಕೆಲ ಸಂಘ ಸಂಸ್ಥೆಗಳ ಮುಂದೆ ವರ್ಷ ಗಟ್ಟಲೆ ತಮ್ಮ ಫ್ಲೆಕ್ಸ್ ರಾರಾಜಿಸುವಂತೆ ಮಾಡಿ ಆ ರಸ್ತೆಯಲ್ಲಿ ಓಡಾಡುವ ಜನರಿಗೆ ಅಸಹ್ಯ ಹುಟ್ಟಿಸಿದ್ದು ಸುಳ್ಳಲ್ಲಾ
ಒಟ್ಟಾರೆ ಪೋಟೋ ಗಳು ಹಲವರಿಗೆ ಪ್ರಚಾರದ ಸಾಧನವಾದರೆ ಮತ್ತೆಕೆಲವರಿಗೆ ಬದುಕಿನ ದಾರಿಯಾಗಿರುವುದು ಸುಳ್ಳಲ್ಲಾ 
ಏನು ಮಾಡುವುದು ಹೇಳಿ ಕೆಟ್ಟವರಿಗಿದು ಕಾಲ.....ಮತ್ತೆ..ಮತ್ತೆ...ಹುಟ್ಟಿಬರುತ್ತಿದ್ದಾರೆ


ಲೇಖಕರು ಮತ್ತು ಸಂಪಾದಕರು
ಹರೀಶ್ ಹೆಚ್ ಆರ್ 
ಕೋಟೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728