ಇದ್ದಾಗ ಹಿಟ್ಟಾಕಲಿಲ್ಲಾ......
ಕೋಟೆ ಕಾಲಂ
ಏ .......ಏನಿಲ್ಲಾ ಗುರು ಕೆಜಿ ಏಳ್ನೂರಾಗಲಿ ನನಗಂತೂ ಹಬ್ಬಕ್ಕೆ ಒಳ್ಳೆ ಮಟನ್ನೇ ಬೇಕು.....
ಅದೂ ಮೇಕೆದೇ ಆಗಿರಬೇಕು ಎಷ್ಟಾದ್ರು ಖರ್ಚಾಗಲಿ ಅದಕ್ಕೆಲ್ಲಾ ತಲೆಕೆಡಿಸ್ಕಳಲ್ಲಾ ಡ್ರಿಂಕ್ಸ್ ಅಷ್ಟೆನೇಯಾ ದುಡ್ಡಿಗೆಲ್ಲಾ ಕೇರೆ ಮಾಡೊಲ್ಲಾ ಒಳ್ಳೆ ಬ್ರಾಂಡೇ ಕುಡಿಸೋದು....ಇನ್ನು ನಾಟಿಕೋಳಿ ಇರಲೇ ಬೇಕು...
ಹೀಗೆ ಸಾಗಿತ್ತು ಮಹಾಲಯ ಅಮಾವಾಸ್ಯೆಯ ದಿನ ಪಿತ್ರಪಕ್ಷಕ್ಕೆ ಕರೆದಿದ್ದ ಮಹಾನುಭಾವ ರೊಬ್ಬರ ಗುಂಡು ತುಂಡಿನ ಜೊತೆಯ ಮಾತುಕತೆ
ನನಗೆ ಚೆನ್ನಾಗಿ ನೆನಪಿತ್ತು ಇದೇಮಹಾನುಭಾವ ಅಲ್ಲವೆ ಅಪ್ಪ ಅಮ್ಮ ನಿಗೆ ಕಡೆಗಾಲದಲ್ಲಿ ಸರಿಯಾಗಿ ನೋಡಿಕೊಳ್ಳದೆ ಒಳ್ಳೆಯ ಬೆಲೆ ಬಂದಿದ್ದ ಜಮೀನನ್ನು ಮಾರಿ ಅವರನ್ನು ಮುರುಕಲು ಮನೆಯಲ್ಲಿಟ್ಟು ಸರಿಯಾಗಿ ಚಿಕಿತ್ಸೆ ಕೊಡಿಸದೆ ಇನ್ನೂ ಒಂದಷ್ಟುವರ್ಷ ಬದುಕುವರನ್ನು ತಾನಾಗಿಯೆ ಸಾವಿಗೆ ತಳ್ಳಿದವನು ಗ್ಯಾರಂಟಿ ಇವನು ಮಾಡೋ ಪಿತ್ರಪಕ್ಷ ಮೇಲಿರೋ ಹೆತ್ತವರಿಗಂತೂ ಸದ್ಗತಿ ಕೊಡೊಲ್ಲಾ ಎಂದನಿಸಿತು
ಸತ್ತನಂತರ ಮಾಡೋ ಅದ್ದೂರಿ ಪಿತ್ರಪಕ್ಷದಲ್ಲಿ ಅವರು ಬಳಸುತ್ತಿದ್ದ ವಸ್ತುಗಳು ಕುಡಿಯೋ ತಿನ್ನೋ ವಸ್ತುಗಳು ಬೀಡಿಸಿಗರೇಟ್ ನಿಂದಾ ಹಿಡಿದು ಎಲೆ ಅಡಿಕೆ ಕಡ್ಡಿಪುಡಿ ಹೊಗೆಸೊಪ್ಪು ಕಾಚು ಒಂದನ್ನೂ ಬಿಡೊಲ್ಲಾ ಮೇಲಿರೋ ಹಿರಿಯರು ಯಾವುದನ್ನು ಉಪಯೋಗಿಸೊಲ್ಲಾ ಅವೆಲ್ಲಾ ತಮ್ಮ ಬಳಕೆಗೆ ಎಂಬುದು ಖಾತ್ರಿಯಾಗಿರುವುದರಿಂದ ತಮ್ಮ ಇಷ್ಟದ ಅದರಲ್ಲಿಯೂ ಎಲ್ಲರ ಮನೆಯಲ್ಲಿ ಯೂ ಮಹಿಳಾ ಸಾಮ್ರಾಜ್ಯದ ಮಾತೆ ನಡೆಯುವುದರಿಂದ ಅವರಿಗೆ ಇಷ್ಟವಾದುದನ್ನೆ ಇಡುತ್ತಾರೆ
ಒಂದು ರೀತಿಯಲ್ಲಿ ಇತ್ತೀಚೆಗೆ ಪಿತ್ರಪಕ್ಷ ತನ್ನ ಮೂಲ ಉದ್ದೇಶಕ್ಕಿಂತ ಪಾರ್ಟಿ ಅಯೋಜಿಸುವ ಅವಕಾಶ ವಾಗಿ ಮಾರ್ಪಟ್ಟಿದ್ದು
ಇದ್ದಾಗ ತಂದೆತಾಯಿಗೆ ಉಪವಾಸ ಕೆಡವಿದ್ದವರು ಸಹ ಮುಗಿಬಿದ್ದು ಅದ್ದೂರಿಯಾಗಿ ಅವರ ಹೆಸರಿನಲ್ಲಿ ತಮ್ಮ ಆಪ್ತರಿಗೆ ಗುಂಡು ತುಂಡಿನ ಸಮಾರಾಧನೆ ನಡೆಸುತ್ತಾರೆ
ಭಾದ್ರಪದ ಮಾಸದ ಕ್ರಷ್ಣಪಕ್ಷದ ಹದಿನೈದು ದಿನದ ಅವಧಿಯ ನ್ನು ಮಹಾಲಯ ಪಕ್ಷವೆನ್ನಲಾಗುತ್ತದೆ ಅದರಲ್ಲಿಯೂ ಈ ಸಮಯದಲ್ಲಿ ಬರುವ ಅಮಾವಾಸ್ಯೆಯ ದಿವಸ ಗತಿಸಿದ ಹಿರಿಯರು ತಮ್ಮ ಪೀಳಿಗೆಯಿಂದ ಎಡೆಯ ರೂಪದಲ್ಲಿ ತಮಗೆ ಇಷ್ಟವಾದುದನ್ನು ಸೇವಿಸಿ ಸಂತ್ರಪ್ತರಾಗುವ ಸಮಯ
ಗತಿಸಿದ ಹಿರಿಯರಿಗೆ ಸದ್ಗತಿ ಮೋಕ್ಷ ದೊರಕಲಿ ಸಂತ್ರಪ್ತರಾಗಿ ಅಶಿರ್ವದಿಸಲಿ ಎಂಬ ಅಶಯ ಈ ಹಬ್ಬದಲ್ಲಿದೆ
ಈ ಹಬ್ಬದೊಂದಿಗೆ ಈ ನೆಲದ ಸಂಸ್ಕ್ರತಿ ಆಚಾರ ವಿಚಾರಗಳ ಜೊತೆಗೆ ನಮ್ಮ ಹಿರಿಯರನ್ನು ನೆನಪಿಸಿಕೊಳ್ಳುವ ನಾವು ನಮ್ಮವರು ಎಂಬ ಭಾವನೆಗಳನ್ನು ಪುನರ್ಮನನ ಗೊಳಿಸುವ ಹಬ್ಬ
ನಾನಾ ಕಾರಣಗಳಿಂದ ಶ್ರಾದ್ದಮಾಡಲಾಗದಿದ್ದರೆ ಅಂತಹವರಿಗೆ ಮಹಾಲಯ ಅಮಾವಾಸ್ಯೆ ಯಂದು ಬಿಡುವ ತರ್ಪಣ ಸದ್ಗತಿ ನೀಡಬಹುದೆಂಬ ನಂಬಿಕೆ ಇದೆ
ಎಲ್ಲವನ್ನು ವೈಜ್ಞಾನಿಕ ಎಂಬ ದ್ರಷ್ಠಿಕೋನದಲ್ಲಿ ವಿಶ್ಲೇಷಣೆ ಮಾಡದೆ ನಮ್ಮ ಆಚರಣೆಗಳನ್ನೆಲ್ಲಾ ಪ್ರಗತಿಪರರು ಎಂಬ ಲೇಬಲ್ ಹಚ್ಚಿಕೊಂಡು ಟೀಕಿಸದೇ ಈ ಹಬ್ಬಗಳ ಮಹತ್ವ ಹಾಗೂ ಮನುಷ್ಯ ಸಂಬಂದ ಗಳ ಬಗ್ಗೆ ಅವುಗಳಲ್ಲಿರುವ ವಿಚಾರ ಅರ್ಥ ಮಾಡಿಕೊಳ್ಳಬೇಕು
ಇದ್ದಾಗ ಅಪ್ಪಾ ಅಮ್ಮ ನನ್ನು ನೋಡಿಕೊಳ್ಳದೆ ಸತ್ತಮೇಲೆ ಅದ್ದೂರಿಯಾಗಿ ಹಬ್ಬಮಾಡುವ ಜನರ ಮನಸ್ಥಿತಿಯನ್ನು ಟೀಕಿಸಬಹುದಾದರು ಈ ನೆಪದಲ್ಲಾದರೂ ಹಿರಿಯರನ್ನು ಸ್ಮರಿಸುತ್ತಿದ್ದಾರೆ ಎಂದು ಸಮಾಧಾನ ಪಟ್ಕೊಳ್ಳಬಹುದು
ಸಂಪಾದಕರು ಮತ್ತು ಲೇಖಕರು
ಹರೀಶ್ ಹೆಚ್ ಆರ್
ಕೋಟೆ.
ನಗ್ನ ಸತ್ಯದ ಅನಾವರಣ
ಪ್ರತ್ಯುತ್ತರಅಳಿಸಿಸಾರ್ಥ ರೀತಿಯಲ್ಲಿ ಬಿಂಬಿಸಿದ್ದೀರಿ. ಚೊಕ್ಕ ಬರೆಹ..
ಪ್ರತ್ಯುತ್ತರಅಳಿಸಿಸಾರ್ಥ ರೀತಿಯಲ್ಲಿ ಬಿಂಬಿಸಿದ್ದೀರಿ. ಚೊಕ್ಕ ಬರೆಹ..
ಪ್ರತ್ಯುತ್ತರಅಳಿಸಿಸಾರ್ಥ ರೀತಿಯಲ್ಲಿ ಬಿಂಬಿಸಿದ್ದೀರಿ. ಚೊಕ್ಕ ಬರೆಹ..
ಪ್ರತ್ಯುತ್ತರಅಳಿಸಿ