ಕಂಡಲ್ಲಿ ಕಾಲೇಜು
ಹರೀಶ್ ಹೆಚ್ ಆರ್
ಕೋಟೆ
ಒಂದು ಸಮಯವಿತ್ತು ದಿಢೀರನೆ ನಮ್ಮ ಜನರಿಗೆ ಆಂಗ್ಲ ವ್ಯಾಮೋಹ ಎಂದಿಗಿಂತಲೂ ಹೆಚ್ಚಾಗಿ ಹರಿಯತೊಡಗಿತು ಮಕ್ಕಳು ಮಮ್ಮಿ ಡ್ಯಾಡಿ ಎನ್ನಬೇಕು ತಪ್ಪು ತಪ್ಪಾಗಿ ಇಂಗ್ಲೀಷ್ ನಲ್ಲಿಯೇ ಮಾತನಾಡಬೇಕು ಅದರಲ್ಲಿಯೂ ಕೆಲವು ಹೆಸರಾಂತ ಕೆಜಿ ಶಾಲೆಗಳಿಗೆ ಹೋಗಬೇಕೆಂದು ಬಯಸಿದ ಪರಿಣಾಮ
ನಾಯಿ ಕೊಡೆಗಳಂತೆ ಕಿಂಡರ್ ಗಾರ್ಟನ್ ಗಳು ಸಣ್ಣಸಣ್ಣ ಜಾಗಗಳಲ್ಲಿ ತಲೆ ಎತ್ತಿ ಪೋಷಕರಿಂದ ಸಾವಿರಾರು ರುಪಾಯಿ ಹಣ ಸುಲಿಗೆ ಮಾಡಿದವು,
ಇತ್ತೀಚೆಗೆ ಸ್ವಲ್ಪಮಟ್ಟಿಗೆ ಅದಕ್ಕೆ ಕಡಿವಾಣ ಬಿದ್ದಿದ್ದು ಪೋಷಕರಿಗೆ ಬುದ್ದಿಬಂದಂತಿದೆ, ಆದರೆ ಮತ್ತೊಂದು ಬೆಳವಣಿಗೆಯಲ್ಲಿ ಕೆಜಿ ಶಾಲೆಗಳ ಸ್ಥಾನವನ್ನು ಪಿಯು ಕಾಲೇಜುಗಳು ತುಂಬಿದ್ದು ಅಗತ್ಯಕ್ಕಿಂತ ಹೆಚ್ಚಾಗಿ ಕಂಡಕಂಡಲ್ಲಿ ತಲೆ ಎತ್ತಿ ವೆ
ಹಲವರುಷಗಳ ಹಿಂದೆ ಎಸ್ಸೆಸೆಲ್ಸಿ ನಂತರ ಪ್ರಥಮ ಪಿಯುಸಿ ಗೆ ಅದರಲ್ಲಿಯೂ ವಿಜ್ಞಾನ ವಿಷಯಕ್ಕೆ ಸೇರಬೇಕಾದರೆ ಪರ್ಸೆಂಟೇಜ್ ಇದ್ದರೂ ಕಾಲೇಜಿನ ಪ್ರವೇಶಕ್ಕೆ ಹರಸಾಹಸ ಪಡಬೇಕಾಗಿತ್ತು ಇದ್ದ ಬೆರಳೆಣಿಕೆಯಷ್ಟು ಕಾಲೇಜು ಗಳು ಉತ್ತಮ ಶಿಕ್ಷಣ ನೀಡುವಲ್ಲಿ ಸಫಲವಾಗಿದ್ದವು
ಅದರೆ ಇತ್ತೀಚಿನ ವರ್ಷಗಳಲ್ಲಿ ಕಂಡ ಕಂಡಲ್ಲಿ ತಲೆ ಎತ್ತಿದ ಪಿಯುಕಾಲೇಜುಗಳು ದಿಢೀರ್ ಹಣಮಾಡುವ ಕಾಯಕವಾಗಿ ಪರಿಣಮಿಸಿದವು
ಯಾವುದೋ ಕಿರಿದಾದ ಬಾಡಿಗೆ ಕಟ್ಟಡಗಳು ಗಾಳಿ ಬೆಳಕು ಬಾರದ ಕೊಠಡಿಗಳು ಸರಿಯಾದ ಲ್ಯಾಬ್ ಗಳಿಲ್ಲದ ಅವ್ಯವಸ್ಥೆ ಯಲ್ಲಿ ನಡೆಯುವ ಕಾಲೇಜುಗಳ ಸಂಖ್ಯೆ ಹೆಚ್ಚಾಗತೊಡಗಿತು ಜೊತೆಗೆ ನುರಿತ ಉಪನ್ಯಾಸಕರಿಲ್ಲದೆ ಸಮಯಕ್ಕೆ ಯಾರು ಸಿಗುತ್ತಾರೋ ಅವರಿಂದ ಪಾಠ ಮಾಡಿಸುವ ವ್ಯವಸ್ತೆಯ ಜೊತೆಗೆ ಕಾಟಾಚಾರದ ಶಿಕ್ಷಣ ಎಂಬಂತಾಗಿದೆ,
ಎಷ್ಟೋ ಕಾಲೇಜುಗಳು ಒಂದೆರೆಡು ವರ್ಷ ನಡೆದು ನಂತರ ಬಾಗಿಲು ಮುಚ್ಚಿವೆ ಅಂತಹ ಕಾಲೇಜುಗಳಲ್ಲಿ ಪಾಠಮಾಡುತ್ತಿದ್ದವರೇ ಸೇರಿ ಮತ್ತೊಂದು ಕಾಲೆಜು ತೆರೆದ ನಿದರ್ಶನ ಹತ್ತಾರು,
ಇನ್ನು ಬೆಂಗಳೂರು ಮಂಗಳೂರಿನಲ್ಲಿದ್ದ ಪ್ರತಿಷ್ಠಿತ ಕಾಲೇಜುಗಳು ಫ್ರಾಂಚೈಸಿ ನೀಡುವ ಮೂಲಕ ತಮ್ಮ ಶಾಖೆಗಳನ್ನು ತೆರೆದವಾದರೂ ಅದರಲ್ಲಿ ಹಲವು ಕಾಲೇಜುಗಳು ಒಂದೆರೆಡು ವರ್ಷಕ್ಕೆ ಬಾಗಿಲು ಮುಚ್ಚಿ ವಿದ್ಯಾರ್ಥಿ ಗಳನ್ನು ಅತಂತ್ರಗೊಳಿಸಿದವು,
ಈ ಎಲ್ಲದರ ನಡುವೆ ಹಾಸನ ಜಿಲ್ಲೆಯಲ್ಲಿ ಕೆಲವು ಸುಸಜ್ಜಿತ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕಾಲೇಜುಗಳು ಅರಂಭವಾಗಿದ್ದು ಸಮಾಧಾನದ ವಿಚಾರ
ಇದೆಲ್ಲದರಿಂದ ಒಂದೆಡೆ ವಿದ್ಯಾರ್ಥಿ ಗಳಿಗೆ ಕಾಲೇಜಿನ ಅಯ್ಕೆ ಒಂದು ಸಮಸ್ಯೆ ಆದರೆ ಪಾಠ ಮಾಡುವ ಉಪನ್ಯಾಸಕರು ಅತಂತ್ರರಾಗಿದ್ದು ಮಾತ್ರ ದುರಂತ
ಅನೇಕ ಉಪನ್ಯಾಸರು ನಿರುದ್ಯೋಗದ ಭೀತಿಯಲ್ಲಯೇ ಕಾಲ ತಳ್ಳುವಂತಾಗಿದೆ
ಇನ್ನಾದರೂ ಸಂಭಂಧ ಪಟ್ಟ ಇಲಾಖೆ ಅಧಿಕಾರಿಗಳು ಹಣ ನೀಡಿದರೆ ಸಾಕು ಕಾಲೇಜು ತೆರೆಯಲು ಅನುಮತಿ ಗ್ಯಾರಂಟಿ ಎಂಬ ನೀತಿಗೆ ತಿಲಾಂಜಲಿ ಇಡುವ ಮೂಲಕ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ
ಒಂದು ಸಮಯವಿತ್ತು ದಿಢೀರನೆ ನಮ್ಮ ಜನರಿಗೆ ಆಂಗ್ಲ ವ್ಯಾಮೋಹ ಎಂದಿಗಿಂತಲೂ ಹೆಚ್ಚಾಗಿ ಹರಿಯತೊಡಗಿತು ಮಕ್ಕಳು ಮಮ್ಮಿ ಡ್ಯಾಡಿ ಎನ್ನಬೇಕು ತಪ್ಪು ತಪ್ಪಾಗಿ ಇಂಗ್ಲೀಷ್ ನಲ್ಲಿಯೇ ಮಾತನಾಡಬೇಕು ಅದರಲ್ಲಿಯೂ ಕೆಲವು ಹೆಸರಾಂತ ಕೆಜಿ ಶಾಲೆಗಳಿಗೆ ಹೋಗಬೇಕೆಂದು ಬಯಸಿದ ಪರಿಣಾಮ
ನಾಯಿ ಕೊಡೆಗಳಂತೆ ಕಿಂಡರ್ ಗಾರ್ಟನ್ ಗಳು ಸಣ್ಣಸಣ್ಣ ಜಾಗಗಳಲ್ಲಿ ತಲೆ ಎತ್ತಿ ಪೋಷಕರಿಂದ ಸಾವಿರಾರು ರುಪಾಯಿ ಹಣ ಸುಲಿಗೆ ಮಾಡಿದವು,
ಇತ್ತೀಚೆಗೆ ಸ್ವಲ್ಪಮಟ್ಟಿಗೆ ಅದಕ್ಕೆ ಕಡಿವಾಣ ಬಿದ್ದಿದ್ದು ಪೋಷಕರಿಗೆ ಬುದ್ದಿಬಂದಂತಿದೆ, ಆದರೆ ಮತ್ತೊಂದು ಬೆಳವಣಿಗೆಯಲ್ಲಿ ಕೆಜಿ ಶಾಲೆಗಳ ಸ್ಥಾನವನ್ನು ಪಿಯು ಕಾಲೇಜುಗಳು ತುಂಬಿದ್ದು ಅಗತ್ಯಕ್ಕಿಂತ ಹೆಚ್ಚಾಗಿ ಕಂಡಕಂಡಲ್ಲಿ ತಲೆ ಎತ್ತಿ ವೆ
ಹಲವರುಷಗಳ ಹಿಂದೆ ಎಸ್ಸೆಸೆಲ್ಸಿ ನಂತರ ಪ್ರಥಮ ಪಿಯುಸಿ ಗೆ ಅದರಲ್ಲಿಯೂ ವಿಜ್ಞಾನ ವಿಷಯಕ್ಕೆ ಸೇರಬೇಕಾದರೆ ಪರ್ಸೆಂಟೇಜ್ ಇದ್ದರೂ ಕಾಲೇಜಿನ ಪ್ರವೇಶಕ್ಕೆ ಹರಸಾಹಸ ಪಡಬೇಕಾಗಿತ್ತು ಇದ್ದ ಬೆರಳೆಣಿಕೆಯಷ್ಟು ಕಾಲೇಜು ಗಳು ಉತ್ತಮ ಶಿಕ್ಷಣ ನೀಡುವಲ್ಲಿ ಸಫಲವಾಗಿದ್ದವು
ಅದರೆ ಇತ್ತೀಚಿನ ವರ್ಷಗಳಲ್ಲಿ ಕಂಡ ಕಂಡಲ್ಲಿ ತಲೆ ಎತ್ತಿದ ಪಿಯುಕಾಲೇಜುಗಳು ದಿಢೀರ್ ಹಣಮಾಡುವ ಕಾಯಕವಾಗಿ ಪರಿಣಮಿಸಿದವು
ಯಾವುದೋ ಕಿರಿದಾದ ಬಾಡಿಗೆ ಕಟ್ಟಡಗಳು ಗಾಳಿ ಬೆಳಕು ಬಾರದ ಕೊಠಡಿಗಳು ಸರಿಯಾದ ಲ್ಯಾಬ್ ಗಳಿಲ್ಲದ ಅವ್ಯವಸ್ಥೆ ಯಲ್ಲಿ ನಡೆಯುವ ಕಾಲೇಜುಗಳ ಸಂಖ್ಯೆ ಹೆಚ್ಚಾಗತೊಡಗಿತು ಜೊತೆಗೆ ನುರಿತ ಉಪನ್ಯಾಸಕರಿಲ್ಲದೆ ಸಮಯಕ್ಕೆ ಯಾರು ಸಿಗುತ್ತಾರೋ ಅವರಿಂದ ಪಾಠ ಮಾಡಿಸುವ ವ್ಯವಸ್ತೆಯ ಜೊತೆಗೆ ಕಾಟಾಚಾರದ ಶಿಕ್ಷಣ ಎಂಬಂತಾಗಿದೆ,
ಎಷ್ಟೋ ಕಾಲೇಜುಗಳು ಒಂದೆರೆಡು ವರ್ಷ ನಡೆದು ನಂತರ ಬಾಗಿಲು ಮುಚ್ಚಿವೆ ಅಂತಹ ಕಾಲೇಜುಗಳಲ್ಲಿ ಪಾಠಮಾಡುತ್ತಿದ್ದವರೇ ಸೇರಿ ಮತ್ತೊಂದು ಕಾಲೆಜು ತೆರೆದ ನಿದರ್ಶನ ಹತ್ತಾರು,
ಇನ್ನು ಬೆಂಗಳೂರು ಮಂಗಳೂರಿನಲ್ಲಿದ್ದ ಪ್ರತಿಷ್ಠಿತ ಕಾಲೇಜುಗಳು ಫ್ರಾಂಚೈಸಿ ನೀಡುವ ಮೂಲಕ ತಮ್ಮ ಶಾಖೆಗಳನ್ನು ತೆರೆದವಾದರೂ ಅದರಲ್ಲಿ ಹಲವು ಕಾಲೇಜುಗಳು ಒಂದೆರೆಡು ವರ್ಷಕ್ಕೆ ಬಾಗಿಲು ಮುಚ್ಚಿ ವಿದ್ಯಾರ್ಥಿ ಗಳನ್ನು ಅತಂತ್ರಗೊಳಿಸಿದವು,
ಈ ಎಲ್ಲದರ ನಡುವೆ ಹಾಸನ ಜಿಲ್ಲೆಯಲ್ಲಿ ಕೆಲವು ಸುಸಜ್ಜಿತ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕಾಲೇಜುಗಳು ಅರಂಭವಾಗಿದ್ದು ಸಮಾಧಾನದ ವಿಚಾರ
ಇದೆಲ್ಲದರಿಂದ ಒಂದೆಡೆ ವಿದ್ಯಾರ್ಥಿ ಗಳಿಗೆ ಕಾಲೇಜಿನ ಅಯ್ಕೆ ಒಂದು ಸಮಸ್ಯೆ ಆದರೆ ಪಾಠ ಮಾಡುವ ಉಪನ್ಯಾಸಕರು ಅತಂತ್ರರಾಗಿದ್ದು ಮಾತ್ರ ದುರಂತ
ಅನೇಕ ಉಪನ್ಯಾಸರು ನಿರುದ್ಯೋಗದ ಭೀತಿಯಲ್ಲಯೇ ಕಾಲ ತಳ್ಳುವಂತಾಗಿದೆ
ಇನ್ನಾದರೂ ಸಂಭಂಧ ಪಟ್ಟ ಇಲಾಖೆ ಅಧಿಕಾರಿಗಳು ಹಣ ನೀಡಿದರೆ ಸಾಕು ಕಾಲೇಜು ತೆರೆಯಲು ಅನುಮತಿ ಗ್ಯಾರಂಟಿ ಎಂಬ ನೀತಿಗೆ ತಿಲಾಂಜಲಿ ಇಡುವ ಮೂಲಕ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info