ವಿಷಯಕ್ಕೆ ಹೋಗಿ

ಎಲ್ಲಾ ಬಿಟ್ಟ ಮಗ....ಬಂಗಿ ನೆಟ್ಟ-ಕೋಟೆ ಕಾಲಂ.

ಎಲ್ಲಾ ಬಿಟ್ಟ ಮಗ .....ಬಂಗಿ ನೆಟ್ಟ-

ಕೋಟೆ ಕಾಲಂ.






ಎಲ್ಲಾ ಬಿಟ್ಟ ಮಗ ಬಂಗಿನೆಟ್ಟ ಅನ್ನುವ ಹಾಗೆ ಸಿ.ಎಂ. ಯಡಿಯೂರಪ್ಪನವರ ಮಗ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿರುವ ಬಿ.ವೈ. ವಿಜಯೇಂದ್ರ ಮಾಡುತ್ತಿರುವ ಯಡವಟ್ಟುಗಳು ಕೆಲಸವಿಲ್ಲದೆ ಮಗುವಿನ ಹಿಂಭಾಗ ಕೆತ್ತಿದ ಎಡಬಿಡಂಗಿಯಂತಿದೆ
ನಮ್ಮ ರಾಜ್ಯದಲ್ಲಿ ಜಾತಿ ಎನ್ನುವುದು ಜೇನುಗೂಡಿನ ಪ್ರತಿ ರೂಪದಂತೆ ಅದಕ್ಕೆ ಕೈ ಹಾಕಬೇಕಾದರೆ ಎಂತಹ ಮುತ್ಸದ್ದಿ ರಾಜಕಾರಣಿಯೇ ಅಗಲಿ ಹತ್ತುಬಾರಿ ಯೋಚಿಸುತ್ತಾರೆ ಆದರೆ ಉಪಚುನಾವಣೆ ಫಲಿತಾಂಶ ಹಾಗೂ ತನ್ನ ತಂತ್ರಗಳು ಫಲ ಕೊಡುತ್ತಿರುವುದರಿಂದ ನೆಲಕಾಣದಂತಾಗಿರುವ ವಿಜಯೇಂದ್ರ ಅತಿ ಉತ್ಸಾಹದಿಂದ ಮಾಡಿದ ಮರಾಠಾ ಪ್ರಾಧಿಕಾರದ ಎಡವಟ್ಟು ರಾಜಕಾರಣದ ಕೊನೆಯ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಉಮೇದಿನಲ್ಲಿ ಬಿಗಿಯಾಗಿ ಪ್ಯಾಡ್ ಹಾಗೂ ಅಬ್ಡಾಮನ್ ಗಾರ್ಡ್ ಕಟ್ಟಿಕೊಂಡಿರುವ ರಾಜಾಹುಲಿ ಯನ್ನು ಹಿಟ್ ವಿಕೇಟ್ ಮಾಡಿ ಪೆವಿಲಿಯನ್ ಗೆ ಕಳುಹಿಸುವ ಸಾಧ್ಯತೆಗಳಿವೆ,
ಬಸವ ಕಲ್ಯಾಣದಲ್ಲಿ ಉಪ ಚುನಾವಣೆ ಹಿನ್ನಲೆಯಲ್ಲಿ ನಡೆದ ಸಭೆಯಲ್ಲಿ ಮರಾಠರನ್ನು ಓಲೈಸಲು ಬಿ.ವೈ. ವಿಜಯೇಂದ್ರ ಅಭಿವೃದ್ದಿ ನಿಗಮ ಮಾಡುವುದಾಗಿ ಭರವಸೆ ನೀಡಿದರು
ಮಗನ ಮಾತನ್ನು ಚಾಚೂತಪ್ಪದೆ ಪಾಲಿಸುವ ಸಿಎಂ ಶಿರಸಾವಹಿಸಿ ಅದಕ್ಕೆ ಚಾಲನೆ ನೀಡಿ ಸಂಪುಟ ಸಭೆಯಲ್ಲಿ ಸಣ್ಣಪುಟ್ಟ ಹೆಸರು ಬದಲಾವಣೆಯೊಂದಿಗೆ ಅನುಮೋದನೆ ನೀಡಿ ಕನ್ನಡಿಗರ ಹಿತಾಸಕ್ತಿಗೆ ಕೊನೆಯ ಮೊಳೆ ಹೊಡೆದರು
ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಭಟನೆ ನಡೆಸಬಾರದೆಂಬ ಕಾರಣಕ್ಕೆ ಅಲ್ಲಿ ಬಹುಸಂಖ್ಯಾತ ಕನ್ನಡಿಗರಾದ ವೀರಶೈವ ಲಿಂಗಾಯತ ಅಭಿವ್ರದ್ದಿ ನಿಗಮಕ್ಕೆ ಅಸ್ತು ಎಂದಿದ್ದೂ ಆಯಿತು ಅದಕ್ಕೂ ಮರಾಠಿ ಅಭಿವೃದ್ದಿ ನಿಗಮದಂತೆ ಐವತ್ತು ಕೋಟಿ ಮೀಸಲಿಡಲಾಯಿತು
ಕೊರೊನಾದಿಂದಾಗಿ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಬೊಕ್ಕಸ ಬರಿದಾಗಿದೆ ಇಂತಹ ಸಂದರ್ಭದಲ್ಲಿ ಮಗನ ಮಾತುಕೇಳಿಕೊಂಡು ನಿಗಮ ಪ್ರಾಧಿಕಾರ ಸ್ಥಾಪಿಸಿರುವುದು ನಿಜಕ್ಕೂ ವಿಪರ್ಯಾಸ
ಅದರಲ್ಲಿಯೂ ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿರುವ ಐವತ್ತು ಸಾವಿರ ಮರಾಠ ಮತಗಳಿಗಾಗಿ ನಿಗಮದ ಹೆಸರಿನಲ್ಲಿ ಐವತ್ತು ಕೋಟಿ ಕೊಟ್ಟಿರುವುದು ಯಾವ ಪುರುಷಾರ್ಥಕ್ಕೆ 
ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಬಳ್ಳಾರಿ ಉಪಚುನಾವಣೆಯಲ್ಲಿ ತೆಲುಗು ಪ್ರಾಧಿಕಾರ ತಮಿಳು ನಾಡಿನ ಗಡಿಭಾಗದಲ್ಲಿ ನಡೆದರೆ ತಮಿಳು ಪ್ರಾಧಿಕಾರ ನಂತರ ಉತ್ತರ ಭಾರತ ಪ್ರಾಧಿಕಾರ ಸ್ಥಾಪಿಸಬೇಕಾಗುತ್ತದೆ ಕಡೆಗೆ ಕನ್ನಡಿಗರಿಗೆ ಚೊಂಬೆ ಗತಿಯಾಗುತ್ತದೆ,
ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ವೇತನ ನೀಡಿಲ್ಲಾ ಮಾಸಾಶನ, ಶಿಷ್ಯ ವೇತನ ಬಂದ್ ಆಗಿದೆ ಇಂತಹ ಸಂದರ್ಭದಲ್ಲಿ ಮಸ್ಕಿ ಹಾಗೂ ಬಸವಕಲ್ಯಾಣ ಉಪಚುನಾವಣೆ ಗೆಲುವಿಗಾಗಿ ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವ ವನ್ನು ಕರಾಳ ದಿನವನ್ನಾಗಿ ಅಚರಿಸುವವರಿಗೆ ಮಣೆ ಹಾಕುತ್ತಿರುವುದು ಎಷ್ಟರಮಟ್ಟಿಗೆ ಸರಿ ಎನಿಸುತ್ತದೆ...?.
 
ವಾಲ್ಮೀಕಿ ಸಮಾಜ ರಜಪೂತರು ಕಾಡುಗೊಲ್ಲ ಸೇರಿದಂತೆ ಹಲವು ಸಮುದಾಯಗಳು ತಮ್ಮ ಹಕ್ಕಿಗಾಗಿ ಹೋರಾಡುವ ಎಚ್ಚರಿಕೆ ನೀಡಿವೆ ಹಲವು ಸಮುದಾಯಗಳ ಮುಖಂಡರು ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ ಜೈನ ಸಮುದಾಯ ಸಹ ತನ್ನ ಹಕ್ಕನ್ನು ಪ್ರತಿಪಾದಿಸಿದ್ದು ಮಗನ ಮಾತು ಕೇಳಿ ಸಿಎಂ ಕೈಗೊಂಡ ನಿರ್ಧಾರ ಅವರ ಬುಡಕ್ಕೆ ಬಂದಿದೆ,
ಈ ನಡುವೆ ಕನ್ನಡ ಪರ ಸಂಘಟನೆಗಳು ಬಂದ್ ಹೋರಾಟದ ಕರೆ ನೀಡಿವೆ, ಪ್ರತಿಭಟಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿ ರುವ ಸರಕಾರ ಆ ಮೂಲಕ ಮತ್ತೊಂದು ತಪ್ಪನ್ನೆಸಗಲು ಸಿದ್ಧವಾಗಿದೆ .
ಈ ನಡುವೆ ಸಂದರ್ಭದ ಲಾಭ ಪಡೆದ ಶಿವಸೇನಾ ಮುಖಂಡರು ಕಾರವಾರ, ಬೆಳಗಾವಿ ನಮ್ಮದು ಎಂದು ಬಾಲಿಷ ಹೇಳಿಕೆ ಕೊಡುತ್ತಿದ್ದಾರೆ
ಇದು ಗಡಿ ವಿವಾದ ಮತ್ತೆ ಗರಿ ಗೆದರುವ ಮುನ್ಸೂಚನೆ ನೀಡಿದ್ದು ಎಲ್ಲದಕ್ಕೂ ಸಿಎಂ ಹೊಣೆಗಾರರಾಗ ಬೇಕಾಗುತ್ತದೆ ಒಟ್ಟಾರೆ ಇರಲಾರದೆ ಇರುವೆ ಬಿಟ್ಟುಕೊಂಡಿರುವ ಸರಕಾರಕ್ಕೆ ಸಿಎಂ ಪುತ್ರ ವಿಜಯೇಂದ್ರ 'ಟ್ರಬಲ್' ಆಗುತ್ತಾರೋ ಟ್ರಬಲ್ 'ಶೂಟರ್' ಆಗುತ್ತಾರೋ ಕಾದುನೋಡಬೇಕು   

ಪ್ರವರ್ಗ ಒಂದರಲ್ಲಿ 95 ಜಾತಿ, 2(a)ನಲ್ಲಿ 101 ಜಾತಿ, ಪ್ರವರ್ಗ 2(b), 3(a) 3(b) ನಲ್ಲಿ ವೀರಶೈವ ಲಿಂಗಾಯಿಯರನ್ನು ಹೊರತು ಪಡಿಸಿ ಸುಮಾರು 15 ರಿಂದ 20 ಜಾತಿಗಳು ಪ.ಜಾ.101, ಪ.ವ. 57, ಅಷ್ಟೇ.. ಒಟ್ಟಾರೆ ನಾಲ್ಕು ನೂರರಿಂದ ಐದು ನೂರು ಅಭಿವೃದ್ಧಿ ನಿಗಮಗಳಾಗಬಹುದು ಅಷ್ಟೇ..
ಇವುಗಳಿಗೆಲ್ಲಾ ಅನುದಾನ ನೀಡುತ್ತಾ ಹೋದಲ್ಲಿ ಸರಕಾರದ ಬೊಕ್ಕಸದ ಹಣ ಎಷ್ಟು ಬೇಕಾಗಬಹುದು ಎಂದು ಚಿಂತಿಸಿದರೆ, ರಾಜಕಾರಣಿಗಳ ನಾನ್ ಸೆನ್ಸ್ ಐಡಿಯಾಗಳ ಬಗ್ಗೆ ವಾಕರಿಕೆ ಬರುತ್ತದೆ
ಈಗಾಗಲೇ ವೀರಶೈವರ ನಂತರ ಅತಿಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರು ಕುರುಬ ಸಮುದಾಯದವರು ನಮಗೂ ನಿಗಮ ಮಾಡಿ ಎಂದು ಹೋರಾಟ ನಡೆಸಲು ಸಜ್ಜಾಗಿದ್ದಾರೆ
ಕ್ರೈಸ್ತರು ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ.......

#ಹಾಸನ

#ಕೋಟೆ  ಕಾಲಂ

#ವಿಮರ್ಶಾ-vimarsha 

An digital media. 

ಲೇಖಕರು ಮತ್ತು  ಪ್ರಧಾನ ಸಂಪಾದಕರು :-
ಹರೀಶ್  ಹೆಚ್ ಆರ್ 
ಕೋಟೆ .


ಸುದ್ದಿ ಸಂಪಾದಕರು :-

ನಾಗೇಂದ್ರ.ಹೆಚ್. ಎನ್. 
.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728