ಎಲ್ಲಾ ಬಿಟ್ಟ ಮಗ .....ಬಂಗಿ ನೆಟ್ಟ-
ಕೋಟೆ ಕಾಲಂ.
ಎಲ್ಲಾ ಬಿಟ್ಟ ಮಗ ಬಂಗಿನೆಟ್ಟ ಅನ್ನುವ ಹಾಗೆ ಸಿ.ಎಂ. ಯಡಿಯೂರಪ್ಪನವರ ಮಗ ಅವರ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿರುವ ಬಿ.ವೈ. ವಿಜಯೇಂದ್ರ ಮಾಡುತ್ತಿರುವ ಯಡವಟ್ಟುಗಳು ಕೆಲಸವಿಲ್ಲದೆ ಮಗುವಿನ ಹಿಂಭಾಗ ಕೆತ್ತಿದ ಎಡಬಿಡಂಗಿಯಂತಿದೆ
ನಮ್ಮ ರಾಜ್ಯದಲ್ಲಿ ಜಾತಿ ಎನ್ನುವುದು ಜೇನುಗೂಡಿನ ಪ್ರತಿ ರೂಪದಂತೆ ಅದಕ್ಕೆ ಕೈ ಹಾಕಬೇಕಾದರೆ ಎಂತಹ ಮುತ್ಸದ್ದಿ ರಾಜಕಾರಣಿಯೇ ಅಗಲಿ ಹತ್ತುಬಾರಿ ಯೋಚಿಸುತ್ತಾರೆ ಆದರೆ ಉಪಚುನಾವಣೆ ಫಲಿತಾಂಶ ಹಾಗೂ ತನ್ನ ತಂತ್ರಗಳು ಫಲ ಕೊಡುತ್ತಿರುವುದರಿಂದ ನೆಲಕಾಣದಂತಾಗಿರುವ ವಿಜಯೇಂದ್ರ ಅತಿ ಉತ್ಸಾಹದಿಂದ ಮಾಡಿದ ಮರಾಠಾ ಪ್ರಾಧಿಕಾರದ ಎಡವಟ್ಟು ರಾಜಕಾರಣದ ಕೊನೆಯ ಇನ್ನಿಂಗ್ಸ್ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಉಮೇದಿನಲ್ಲಿ ಬಿಗಿಯಾಗಿ ಪ್ಯಾಡ್ ಹಾಗೂ ಅಬ್ಡಾಮನ್ ಗಾರ್ಡ್ ಕಟ್ಟಿಕೊಂಡಿರುವ ರಾಜಾಹುಲಿ ಯನ್ನು ಹಿಟ್ ವಿಕೇಟ್ ಮಾಡಿ ಪೆವಿಲಿಯನ್ ಗೆ ಕಳುಹಿಸುವ ಸಾಧ್ಯತೆಗಳಿವೆ,
ಬಸವ ಕಲ್ಯಾಣದಲ್ಲಿ ಉಪ ಚುನಾವಣೆ ಹಿನ್ನಲೆಯಲ್ಲಿ ನಡೆದ ಸಭೆಯಲ್ಲಿ ಮರಾಠರನ್ನು ಓಲೈಸಲು ಬಿ.ವೈ. ವಿಜಯೇಂದ್ರ ಅಭಿವೃದ್ದಿ ನಿಗಮ ಮಾಡುವುದಾಗಿ ಭರವಸೆ ನೀಡಿದರು
ಮಗನ ಮಾತನ್ನು ಚಾಚೂತಪ್ಪದೆ ಪಾಲಿಸುವ ಸಿಎಂ ಶಿರಸಾವಹಿಸಿ ಅದಕ್ಕೆ ಚಾಲನೆ ನೀಡಿ ಸಂಪುಟ ಸಭೆಯಲ್ಲಿ ಸಣ್ಣಪುಟ್ಟ ಹೆಸರು ಬದಲಾವಣೆಯೊಂದಿಗೆ ಅನುಮೋದನೆ ನೀಡಿ ಕನ್ನಡಿಗರ ಹಿತಾಸಕ್ತಿಗೆ ಕೊನೆಯ ಮೊಳೆ ಹೊಡೆದರು
ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಭಟನೆ ನಡೆಸಬಾರದೆಂಬ ಕಾರಣಕ್ಕೆ ಅಲ್ಲಿ ಬಹುಸಂಖ್ಯಾತ ಕನ್ನಡಿಗರಾದ ವೀರಶೈವ ಲಿಂಗಾಯತ ಅಭಿವ್ರದ್ದಿ ನಿಗಮಕ್ಕೆ ಅಸ್ತು ಎಂದಿದ್ದೂ ಆಯಿತು ಅದಕ್ಕೂ ಮರಾಠಿ ಅಭಿವೃದ್ದಿ ನಿಗಮದಂತೆ ಐವತ್ತು ಕೋಟಿ ಮೀಸಲಿಡಲಾಯಿತು
ಕೊರೊನಾದಿಂದಾಗಿ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಬೊಕ್ಕಸ ಬರಿದಾಗಿದೆ ಇಂತಹ ಸಂದರ್ಭದಲ್ಲಿ ಮಗನ ಮಾತುಕೇಳಿಕೊಂಡು ನಿಗಮ ಪ್ರಾಧಿಕಾರ ಸ್ಥಾಪಿಸಿರುವುದು ನಿಜಕ್ಕೂ ವಿಪರ್ಯಾಸ
ಅದರಲ್ಲಿಯೂ ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿರುವ ಐವತ್ತು ಸಾವಿರ ಮರಾಠ ಮತಗಳಿಗಾಗಿ ನಿಗಮದ ಹೆಸರಿನಲ್ಲಿ ಐವತ್ತು ಕೋಟಿ ಕೊಟ್ಟಿರುವುದು ಯಾವ ಪುರುಷಾರ್ಥಕ್ಕೆ
ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಬಳ್ಳಾರಿ ಉಪಚುನಾವಣೆಯಲ್ಲಿ ತೆಲುಗು ಪ್ರಾಧಿಕಾರ ತಮಿಳು ನಾಡಿನ ಗಡಿಭಾಗದಲ್ಲಿ ನಡೆದರೆ ತಮಿಳು ಪ್ರಾಧಿಕಾರ ನಂತರ ಉತ್ತರ ಭಾರತ ಪ್ರಾಧಿಕಾರ ಸ್ಥಾಪಿಸಬೇಕಾಗುತ್ತದೆ ಕಡೆಗೆ ಕನ್ನಡಿಗರಿಗೆ ಚೊಂಬೆ ಗತಿಯಾಗುತ್ತದೆ,
ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ವೇತನ ನೀಡಿಲ್ಲಾ ಮಾಸಾಶನ, ಶಿಷ್ಯ ವೇತನ ಬಂದ್ ಆಗಿದೆ ಇಂತಹ ಸಂದರ್ಭದಲ್ಲಿ ಮಸ್ಕಿ ಹಾಗೂ ಬಸವಕಲ್ಯಾಣ ಉಪಚುನಾವಣೆ ಗೆಲುವಿಗಾಗಿ ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವ ವನ್ನು ಕರಾಳ ದಿನವನ್ನಾಗಿ ಅಚರಿಸುವವರಿಗೆ ಮಣೆ ಹಾಕುತ್ತಿರುವುದು ಎಷ್ಟರಮಟ್ಟಿಗೆ ಸರಿ ಎನಿಸುತ್ತದೆ...?.
ವಾಲ್ಮೀಕಿ ಸಮಾಜ ರಜಪೂತರು ಕಾಡುಗೊಲ್ಲ ಸೇರಿದಂತೆ ಹಲವು ಸಮುದಾಯಗಳು ತಮ್ಮ ಹಕ್ಕಿಗಾಗಿ ಹೋರಾಡುವ ಎಚ್ಚರಿಕೆ ನೀಡಿವೆ ಹಲವು ಸಮುದಾಯಗಳ ಮುಖಂಡರು ಪೂರ್ವಭಾವಿ ಸಭೆ ನಡೆಸುತ್ತಿದ್ದಾರೆ ಜೈನ ಸಮುದಾಯ ಸಹ ತನ್ನ ಹಕ್ಕನ್ನು ಪ್ರತಿಪಾದಿಸಿದ್ದು ಮಗನ ಮಾತು ಕೇಳಿ ಸಿಎಂ ಕೈಗೊಂಡ ನಿರ್ಧಾರ ಅವರ ಬುಡಕ್ಕೆ ಬಂದಿದೆ,
ಈ ನಡುವೆ ಕನ್ನಡ ಪರ ಸಂಘಟನೆಗಳು ಬಂದ್ ಹೋರಾಟದ ಕರೆ ನೀಡಿವೆ, ಪ್ರತಿಭಟಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿ ರುವ ಸರಕಾರ ಆ ಮೂಲಕ ಮತ್ತೊಂದು ತಪ್ಪನ್ನೆಸಗಲು ಸಿದ್ಧವಾಗಿದೆ .
ಈ ನಡುವೆ ಸಂದರ್ಭದ ಲಾಭ ಪಡೆದ ಶಿವಸೇನಾ ಮುಖಂಡರು ಕಾರವಾರ, ಬೆಳಗಾವಿ ನಮ್ಮದು ಎಂದು ಬಾಲಿಷ ಹೇಳಿಕೆ ಕೊಡುತ್ತಿದ್ದಾರೆ
ಇದು ಗಡಿ ವಿವಾದ ಮತ್ತೆ ಗರಿ ಗೆದರುವ ಮುನ್ಸೂಚನೆ ನೀಡಿದ್ದು ಎಲ್ಲದಕ್ಕೂ ಸಿಎಂ ಹೊಣೆಗಾರರಾಗ ಬೇಕಾಗುತ್ತದೆ ಒಟ್ಟಾರೆ ಇರಲಾರದೆ ಇರುವೆ ಬಿಟ್ಟುಕೊಂಡಿರುವ ಸರಕಾರಕ್ಕೆ ಸಿಎಂ ಪುತ್ರ ವಿಜಯೇಂದ್ರ 'ಟ್ರಬಲ್' ಆಗುತ್ತಾರೋ ಟ್ರಬಲ್ 'ಶೂಟರ್' ಆಗುತ್ತಾರೋ ಕಾದುನೋಡಬೇಕು
ಪ್ರವರ್ಗ ಒಂದರಲ್ಲಿ 95 ಜಾತಿ, 2(a)ನಲ್ಲಿ 101 ಜಾತಿ, ಪ್ರವರ್ಗ 2(b), 3(a) 3(b) ನಲ್ಲಿ ವೀರಶೈವ ಲಿಂಗಾಯಿಯರನ್ನು ಹೊರತು ಪಡಿಸಿ ಸುಮಾರು 15 ರಿಂದ 20 ಜಾತಿಗಳು ಪ.ಜಾ.101, ಪ.ವ. 57, ಅಷ್ಟೇ.. ಒಟ್ಟಾರೆ ನಾಲ್ಕು ನೂರರಿಂದ ಐದು ನೂರು ಅಭಿವೃದ್ಧಿ ನಿಗಮಗಳಾಗಬಹುದು ಅಷ್ಟೇ..
ಇವುಗಳಿಗೆಲ್ಲಾ ಅನುದಾನ ನೀಡುತ್ತಾ ಹೋದಲ್ಲಿ ಸರಕಾರದ ಬೊಕ್ಕಸದ ಹಣ ಎಷ್ಟು ಬೇಕಾಗಬಹುದು ಎಂದು ಚಿಂತಿಸಿದರೆ, ರಾಜಕಾರಣಿಗಳ ನಾನ್ ಸೆನ್ಸ್ ಐಡಿಯಾಗಳ ಬಗ್ಗೆ ವಾಕರಿಕೆ ಬರುತ್ತದೆ
ಈಗಾಗಲೇ ವೀರಶೈವರ ನಂತರ ಅತಿಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗರು ಕುರುಬ ಸಮುದಾಯದವರು ನಮಗೂ ನಿಗಮ ಮಾಡಿ ಎಂದು ಹೋರಾಟ ನಡೆಸಲು ಸಜ್ಜಾಗಿದ್ದಾರೆ
ಕ್ರೈಸ್ತರು ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ.......
#ಹಾಸನ
#ಕೋಟೆ ಕಾಲಂ
#ವಿಮರ್ಶಾ-vimarsha
An digital media.
ಲೇಖಕರು ಮತ್ತು ಪ್ರಧಾನ ಸಂಪಾದಕರು :-
ಹರೀಶ್ ಹೆಚ್ ಆರ್
ಕೋಟೆ .
ಸುದ್ದಿ ಸಂಪಾದಕರು :-
ನಾಗೇಂದ್ರ.ಹೆಚ್. ಎನ್.
.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info