ವಿಷಯಕ್ಕೆ ಹೋಗಿ

ಏನಾಗ್ತಿದೆ - ಕೋಟೆ ಕಾಲಂ

 







ಏನಾಗ್ತಿದೆ.....


ಸರ್ ಯಾರದಾದರೂ ಮಾತು ಕೇಳಿಕೊಂಡು ಹಣ ವಾಪಾಸು ಕೊಡಬೇಡಿಸರ್ ಬಾಕಿ ಹಣ ನಾಳೆನೆ ಕೊಡ್ತೀವಿ ಲಾಕ್ಡೌನ್ ಇದ್ದರೂ ಅರೇಂಜ್ ಮಾಡಿದ್ದೀವಿ ಎಂದಾಗ

ಆ ದೂರವಾಣಿ ಕರೆಗೆ ನನಗೆ ಅಚ್ಚರಿಯಾಯಿತು ನಿಮಗೆ ಮನೆಕೊಡೊಲ್ಲಾ ಎಂದು ಯಾರು ಹೇಳಿದರು ಮಾತಿನಂತೆ ಉಳಿದ ಹಣವನ್ನು ತಿಂಗಳುಬಿಟ್ಟೇ ಕೊಡಿ ಎಂದೆ

ಏನಿಲ್ಲಾ ಸರ್ ನಮ್ ನೆಂಟರು ಒಂದಿಬ್ಬರಿಗೆ ಅಡ್ವಾನ್ಸ್ ಪಡೆದವರು ಈಗ ವಾಪಾಸು ಕೊಟ್ಟಿದಾರೆ ಮುಸಲ್ಮಾನರಿಗೆ ಮನೆ ಕೊಡೊಲ್ಲಾ ಅಂತಾ ನೇರವಾಗಿಯೇ ಹೇಳ್ತಿದಾರೆ ಮತ್ತೆ ಕೆಲವರು ಖಾಲಿ ಇದ್ದರು ಕೊಡುತ್ತಿಲ್ಲಾ ಎಂದರು

ಅದಕ್ಕೆಲ್ಲಾ ತಲೆಕೆಡಿಸ್ಕೋಬೇಡಿ ನಾವು ಮನುಷ್ಯರನ್ನು ನೋಡಿ ಮನೆಕೊಡೋದು ಜಾತಿಯನ್ನಲ್ಲ ಎಂದವನೆ ತಕ್ಷಣವೇ ಬರಲು ಹೇಳಿ ಕೀ ಕೊಟ್ಟಾಗ ಅವರಿಗೆ ಸಮಾಧಾನ ವಾಗಿದ್ದು ಕಂಡುಬಂದಿತು

ನಾನು ಮುಸಲ್ಮಾನರು ಸ್ವಲ್ಪಹೆಚ್ಚಾಗಿ ವಾಸಿಸುವ ಹಾಸನದ ವಲ್ಲಭಬಾಯಿ ರಸ್ತೆ ಯಲ್ಲಿ ಹುಟ್ಟಿದವನು ನಮ್ಮ ಸುಮಾರು ಮೂರು ತಲೆಮಾರಿಗೂ ಹಿಂದಿನವರು ಅಲ್ಲಿಯೇ ವಾಸವಾಗಿದ್ದವರು ಸ್ವಂತ ಮನೆ ಮಠ ಹೊಂದಿರುವವರು

ನಾನು ಚಿಕ್ಕಂದಿನಿಂದಲೂ ಅಕ್ಕಪಕ್ಕದ ಮುಸಲ್ಮಾನರ ಮಕ್ಕಳ ಜೊತೆ ಬೆಳೆದವನು ನಮಗ್ಯಾರಿಗೂ ಅಂತಹ ವ್ಯತ್ಯಾಸ ಕಂಡುಬರುತ್ತಿರಲಿಲ್ಲ

ಆನಂತರ ನಾನು ಕಾರಣಾಂತರದಿಂದ ಬೇರೆಡೆ ನೆಲೆಸಿದರೂ ಅಲ್ಲಿನ ಒಡನಾಟವಿತ್ತು 

ನನಗೆ ತಿಳಿದ ಹಾಗೆ ಸುಮಾರು ಮುವತ್ತೈದು ವರುಷದಿಂದ ಮನೆ ಅಂಗಡಿ ಮಳಿಗೆಗಳನ್ನು ಬಾಡಿಗೆ ಕೊಟ್ಟಿದ್ದೇವೆ ಅದರಲ್ಲಿ ಹಿಂದೂಗಳಲ್ಲಿನ ಎಲ್ಲಾ ಜಾತಿಯವರು ,ಮುಸಲ್ಮಾನರು ಎಲ್ಲರೂ ಇದ್ದಾರೆ

ನಮಗೆ ಹಣ ವ್ಯಕ್ತಿಗಳು ಹೊಂದಾಣಿಕೆಯಾಗುವವರಿಗೆ ಕೊಡುತ್ತೇವೆ ಹೊರತಾಗಿ ಇದರಲ್ಲಿ ವಿಶೇಷವೇನಿಲ್ಲಾ

ಆದರೆ ಇದೇ ಪ್ರಥಮ ಬಾರಿಗೆ ಜಾತಿ ಧರ್ಮ ನೋಡಿ ಮನೆಕೊಡುವ ವಿಚಾರ ನನ್ನ ಅನುಭವಕ್ಕೆ ಬಂದು ನಿಜವಾಗಿಯೂ ಬೇಸರವಾಯಿತು

ಯಾರೋ ಮಾಡಿದ ತಪ್ಪಿಗೆ ಯಾರೋ ಹಾದಿತಪ್ಪಿಸಿದ್ದಕ್ಕೆ ಮತ್ತಾರೊ ತೊಂದರೆ ಅನುಭವಿಸುವಂತಾಗಿದ್ದು ಮಾತ್ರ ನೋವಿನ ವಿಚಾರ

ಸಮಾಜ ದಲ್ಲಿ ಒಂದಿಡೀ ಸಮುದಾಯವನ್ನು ದೂರ ಇರಿಸಿ ಮುನ್ನಡೆಸುವುದು ಕಷ್ಟದ ವಿಚಾರ ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆ ಮಾತ್ರ ಉತ್ತಮ ಸಮಾಜಕ್ಕೆ ನಾಂದಿಯಾಗಬಲ್ಲದು

ಮುಸಲ್ಮಾನರನ್ನು ದಾರಿತಪ್ಪಿಸುವಲ್ಲಿ ಧರ್ಮ ಗುರುಗಳು ಸಮುದಾಯದ ಮುಖಂಡರು ರಾಜಕಾರಣಿಗಳ ಜೊತೆ ಪ್ರಗತಿಪರರು ಬುದ್ದಿಜೀವಿಗಳ ಪಾತ್ರವೂ ಗಣನೀಯವಾಗಿದೆ

ಉಳ್ಳವರು ವಾಸಮಾಡುವ ಸುಸಜ್ಜಿತ ಬಡಾವಣೆಗಳಲ್ಲಿ ಆರಾಮವಾಗಿ ಬದುಕುವ ಇವರಿಗೆ ಮುಸಲ್ಮಾನರ ಬಡತನ, ಅನಕ್ಷರತೆ ಮಾತನಾಡುವ ಆ ಮೂಲಕ ಸೆಕ್ಯುಲರ್ ಎನಿಸಿಕೊಳ್ಳುವ ತೆವಲು ತೀರಿಸಿಕೊಳ್ಳುತ್ತಾರೆ

ಮೊದಲೆ ಅತಿಯಾದ ಧರ್ಮಾಂಧತೆ ಅನಕ್ಷರತೆ ಅಭದ್ರತೆ ಯಿಂದ ನಲುಗಿರುವ ಈ ಸಮುದಾಯದ ಸಾಮಾನ್ಯರ ಬದುಕು ಹಳಿತಪ್ಪಲು ಎಲ್ಲರೂ ಕೊಡುಗೆ ನೀಡುತ್ತಲೇ ಬರುತ್ತಿದ್ದು ಅದನ್ನು ಸರಿಪಡಿಸಲು ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು


ಸಂಪಾದಕರು ಮತ್ತು ಲೇಖಕರು 

ಹರೀಶ್ ಹೆಚ್ ಆರ್ 

ಕೋಟೆ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಉತ್ತಮ ಫಲಿತಾಂಶ , ಹಣ ಉಳಿತಾಯ.

ನಾನು ನೆಟ್‌ಸರ್ಫ್ ಡೈರೆಕ್ಟ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ನೆಟ್ಸರ್ಫ್ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುತ್ತಿದ್ದೇನೆ. ನಾನು ನಿಮಗೆ ಈ ಉತ್ಪನ್ನಗಳನ್ನು ಬಲವಾಗಿ ಶಿಫಾರಸು ಮಾಡುತ್ತೇವೆ. 'NETSURF DIRECT' 5 ವಿವಿಧ ವಿಭಾಗಗಳಲ್ಲಿ 90 ಕ್ಕೂ ಹೆಚ್ಚು ಗಿಡಮೂಲಿಕೆ ಉತ್ಪನ್ನಗಳನ್ನು ನೀಡುತ್ತದೆ ಅಂದರೆ ಆರೋಗ್ಯ ರಕ್ಷಣೆ, ವೈಯಕ್ತಿಕ ಆರೈಕೆ, ಬಣ್ಣ ಸೌಂದರ್ಯವರ್ಧಕಗಳು, ಗೃಹ ಆರೈಕೆ ಮತ್ತು ಕೃಷಿ. ಈ ಉತ್ಪನ್ನಗಳನ್ನು ಭಾರತದಾದ್ಯಂತ 2.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ನಂಬಿದ್ದಾರೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೆಟ್‌ಸರ್ಫ್ ವರ್ಲ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಎಲ್ಲಾ ನೆಟ್‌ಸರ್ಫ್ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಿ. ಒಮ್ಮೆ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ನನ್ನ ಮೊಬೈಲ್ ಸಂಖ್ಯೆಯನ್ನು (8453502625) "ಉಲ್ಲೇಖಿಸಿದವರು" ನಲ್ಲಿ ನಮೂದಿಸಿ ಮತ್ತು ನಿಮ್ಮ 1ನೇ ಖರೀದಿಯಿಂದ ಪುನಃ ಪಡೆದುಕೊಳ್ಳಬಹುದಾದ ರೂ.100 ವೋಚರ್ ಅನ್ನು ಪಡೆಯಿರಿ. Andriod ಬಳಕೆದಾರರು: https://bit.ly/3SxEkfB ಆಪಲ್ ಬಳಕೆದಾರರು: https://apple.co/3Ace2JT   I am working with Netsurf Direct. I am using Netsurf products regularly. I strongly recommend these products to you .   'NETSURF DIRECT...

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...