ಏನಾಗ್ತಿದೆ.....
ಸರ್ ಯಾರದಾದರೂ ಮಾತು ಕೇಳಿಕೊಂಡು ಹಣ ವಾಪಾಸು ಕೊಡಬೇಡಿಸರ್ ಬಾಕಿ ಹಣ ನಾಳೆನೆ ಕೊಡ್ತೀವಿ ಲಾಕ್ಡೌನ್ ಇದ್ದರೂ ಅರೇಂಜ್ ಮಾಡಿದ್ದೀವಿ ಎಂದಾಗ
ಏನಿಲ್ಲಾ ಸರ್ ನಮ್ ನೆಂಟರು ಒಂದಿಬ್ಬರಿಗೆ ಅಡ್ವಾನ್ಸ್ ಪಡೆದವರು ಈಗ ವಾಪಾಸು ಕೊಟ್ಟಿದಾರೆ ಮುಸಲ್ಮಾನರಿಗೆ ಮನೆ ಕೊಡೊಲ್ಲಾ ಅಂತಾ ನೇರವಾಗಿಯೇ ಹೇಳ್ತಿದಾರೆ ಮತ್ತೆ ಕೆಲವರು ಖಾಲಿ ಇದ್ದರು ಕೊಡುತ್ತಿಲ್ಲಾ ಎಂದರು
ಅದಕ್ಕೆಲ್ಲಾ ತಲೆಕೆಡಿಸ್ಕೋಬೇಡಿ ನಾವು ಮನುಷ್ಯರನ್ನು ನೋಡಿ ಮನೆಕೊಡೋದು ಜಾತಿಯನ್ನಲ್ಲ ಎಂದವನೆ ತಕ್ಷಣವೇ ಬರಲು ಹೇಳಿ ಕೀ ಕೊಟ್ಟಾಗ ಅವರಿಗೆ ಸಮಾಧಾನ ವಾಗಿದ್ದು ಕಂಡುಬಂದಿತು
ನಾನು ಮುಸಲ್ಮಾನರು ಸ್ವಲ್ಪಹೆಚ್ಚಾಗಿ ವಾಸಿಸುವ ಹಾಸನದ ವಲ್ಲಭಬಾಯಿ ರಸ್ತೆ ಯಲ್ಲಿ ಹುಟ್ಟಿದವನು ನಮ್ಮ ಸುಮಾರು ಮೂರು ತಲೆಮಾರಿಗೂ ಹಿಂದಿನವರು ಅಲ್ಲಿಯೇ ವಾಸವಾಗಿದ್ದವರು ಸ್ವಂತ ಮನೆ ಮಠ ಹೊಂದಿರುವವರು
ನಾನು ಚಿಕ್ಕಂದಿನಿಂದಲೂ ಅಕ್ಕಪಕ್ಕದ ಮುಸಲ್ಮಾನರ ಮಕ್ಕಳ ಜೊತೆ ಬೆಳೆದವನು ನಮಗ್ಯಾರಿಗೂ ಅಂತಹ ವ್ಯತ್ಯಾಸ ಕಂಡುಬರುತ್ತಿರಲಿಲ್ಲ
ಆನಂತರ ನಾನು ಕಾರಣಾಂತರದಿಂದ ಬೇರೆಡೆ ನೆಲೆಸಿದರೂ ಅಲ್ಲಿನ ಒಡನಾಟವಿತ್ತು
ನನಗೆ ತಿಳಿದ ಹಾಗೆ ಸುಮಾರು ಮುವತ್ತೈದು ವರುಷದಿಂದ ಮನೆ ಅಂಗಡಿ ಮಳಿಗೆಗಳನ್ನು ಬಾಡಿಗೆ ಕೊಟ್ಟಿದ್ದೇವೆ ಅದರಲ್ಲಿ ಹಿಂದೂಗಳಲ್ಲಿನ ಎಲ್ಲಾ ಜಾತಿಯವರು ,ಮುಸಲ್ಮಾನರು ಎಲ್ಲರೂ ಇದ್ದಾರೆ
ನಮಗೆ ಹಣ ವ್ಯಕ್ತಿಗಳು ಹೊಂದಾಣಿಕೆಯಾಗುವವರಿಗೆ ಕೊಡುತ್ತೇವೆ ಹೊರತಾಗಿ ಇದರಲ್ಲಿ ವಿಶೇಷವೇನಿಲ್ಲಾ
ಆದರೆ ಇದೇ ಪ್ರಥಮ ಬಾರಿಗೆ ಜಾತಿ ಧರ್ಮ ನೋಡಿ ಮನೆಕೊಡುವ ವಿಚಾರ ನನ್ನ ಅನುಭವಕ್ಕೆ ಬಂದು ನಿಜವಾಗಿಯೂ ಬೇಸರವಾಯಿತು
ಯಾರೋ ಮಾಡಿದ ತಪ್ಪಿಗೆ ಯಾರೋ ಹಾದಿತಪ್ಪಿಸಿದ್ದಕ್ಕೆ ಮತ್ತಾರೊ ತೊಂದರೆ ಅನುಭವಿಸುವಂತಾಗಿದ್ದು ಮಾತ್ರ ನೋವಿನ ವಿಚಾರ
ಸಮಾಜ ದಲ್ಲಿ ಒಂದಿಡೀ ಸಮುದಾಯವನ್ನು ದೂರ ಇರಿಸಿ ಮುನ್ನಡೆಸುವುದು ಕಷ್ಟದ ವಿಚಾರ ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆ ಮಾತ್ರ ಉತ್ತಮ ಸಮಾಜಕ್ಕೆ ನಾಂದಿಯಾಗಬಲ್ಲದು
ಮುಸಲ್ಮಾನರನ್ನು ದಾರಿತಪ್ಪಿಸುವಲ್ಲಿ ಧರ್ಮ ಗುರುಗಳು ಸಮುದಾಯದ ಮುಖಂಡರು ರಾಜಕಾರಣಿಗಳ ಜೊತೆ ಪ್ರಗತಿಪರರು ಬುದ್ದಿಜೀವಿಗಳ ಪಾತ್ರವೂ ಗಣನೀಯವಾಗಿದೆ
ಉಳ್ಳವರು ವಾಸಮಾಡುವ ಸುಸಜ್ಜಿತ ಬಡಾವಣೆಗಳಲ್ಲಿ ಆರಾಮವಾಗಿ ಬದುಕುವ ಇವರಿಗೆ ಮುಸಲ್ಮಾನರ ಬಡತನ, ಅನಕ್ಷರತೆ ಮಾತನಾಡುವ ಆ ಮೂಲಕ ಸೆಕ್ಯುಲರ್ ಎನಿಸಿಕೊಳ್ಳುವ ತೆವಲು ತೀರಿಸಿಕೊಳ್ಳುತ್ತಾರೆ
ಮೊದಲೆ ಅತಿಯಾದ ಧರ್ಮಾಂಧತೆ ಅನಕ್ಷರತೆ ಅಭದ್ರತೆ ಯಿಂದ ನಲುಗಿರುವ ಈ ಸಮುದಾಯದ ಸಾಮಾನ್ಯರ ಬದುಕು ಹಳಿತಪ್ಪಲು ಎಲ್ಲರೂ ಕೊಡುಗೆ ನೀಡುತ್ತಲೇ ಬರುತ್ತಿದ್ದು ಅದನ್ನು ಸರಿಪಡಿಸಲು ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು
ಸಂಪಾದಕರು ಮತ್ತು ಲೇಖಕರು
ಹರೀಶ್ ಹೆಚ್ ಆರ್
ಕೋಟೆ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info