ವಿಷಯಕ್ಕೆ ಹೋಗಿ

ಶಾಲು ಕೊಡವಿ ಎದ್ದು ಹೋದೆಯಲ್ಲೋ-ಕೋಟೆ ಕಾಲಂ


ಶಾಲು ಕೊಡವಿ ಎದ್ದು..... ಹೋದೆಯಲ್ಲೋ..-ಕೋಟೆ ಕಾಲಂ.




ಸಿಕ್ಕಿದಾಗಲೆಲ್ಲಾ ಮೊದಲು ಜಗಳವೇ ಅದಕ್ಕೆ ಕಾರಣವಾಗಲೀ ಇಂತದ್ದೆ ನಿರ್ದಿಷ್ಟ ವಿಚಾರವಾಗಲಿ ಬೇಕೆಂದಿಲ್ಲಾ..
ಒಟ್ಟಾರೆ ಜಗಳವಾಡಿಕೊಂಡೆ ಮಾತಿಗೆ ಶುರುವಿಟ್ಟರೆ ಅರ್ಧ ಗಂಟೆ ಇಬ್ಬರು ಆ ಜಾಗಬಿಟ್ಟು ಕದಲುತ್ತಿರಲಿಲ್ಲ ನಡುವೆ ಅವನಿಗೆ ಪ್ರೀತಿಪಾತ್ರನಾದ ನನ್ನ ಮಗ ಮಯೂರನ ಬಗ್ಗೆ ವಿಚಾರಿಸುವುದನ್ನು ಮರೆಯುತ್ತಿರಲಿಲ್ಲ
ಕೊಟ್ಟೂರು ಶ್ರಿನಿವಾಸ ಎಂದರೇ ಮೆಲುಮಾತಿನ ನಗುನಗುತ್ತಲೇ ಇರುವ ಸ್ನೇಹಜೀವಿ ಯಾವತ್ತೂ ಯಾರಿಗೂ ಕೇಡನ್ನು ಬಯಸಲಿಲ್ಲ ಹಣಕಾಸು ಲಾಭದ ಬಗ್ಗೆ ಮಾತನ್ನೇ ಆಡಲಿಲ್ಲ ಅಂತಹ ಗೆಳೆಯ ನಮ್ಮೊಡನಿಲ್ಲಾ ಎಂಬುದನ್ನು ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ
ಬಿಸಿಲ ಬೆಂಗಾಡು ಬಳ್ಳಾರಿಯ ಕೊಟ್ಟೂರಿನ ಶ್ರೀನಿವಾಸ ಹಾಸನದ ಕೊಟ್ಟೂರು ಶ್ರೀನಿವಾಸ ನಾಗಿಯೇ ಬದುಕಿದ ವ್ಯಕ್ತಿ
ಆತನ ಪತ್ನಿ ಪ್ರಮೀಳ ಅವರಿಗೆ ಸರ್ಕಾರಿ ನೌಕರಿ ಸಿಕ್ಕಿದ್ದರಿಂದ ಅನಿವಾರ್ಯ ವಾಗಿ ಹಾಸನಕ್ಕೆ ಬಂದಾತ ಹಾಸನದ ಮಣ್ಣಿನ ಮಗನಾಗಿ ಇಲ್ಲಿಯೇ ಬದುಕನ್ನು ಮುಗಿಸಿ ಪಂಚಭೂತಗಳಲ್ಲಿ ಲೀನವಾದನು
ವಿದ್ಯಾರ್ಥಿ ದಿಸೆಯಲ್ಲಿ ಅರ್ ಎಸ್ ಎಸ್ ನಿಂದ ಆಕರ್ಷಿತರಾಗಿ ಕೆಲಕಾಲ ಸ್ವಯಂಸೇವಕ ರಾಗಿಯೂ ಇದ್ದರು
ಅದೇಕೋ ಆತನ ಜಾಯಮಾನಕ್ಕೆ ಒಗ್ಗದ ಕಾರಣ ಅಲ್ಲಿ ಮುಂದುವರೆಯಲಿಲ್ಲ
ಹಾಸನಕ್ಕೆ ಬಂದ ಬಳಿಕ ದಲಿತ ಮುಖಂಡ ಚಂದ್ರಪ್ರಸಾದ ತ್ಯಾಗಿ ಅವರ ಸಂಪರ್ಕಕ್ಕೆ ಬಂದವನೆ ದಲಿತ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಸಾಕಷ್ಟು ಹೋರಾಟಗಳಲ್ಲಿ ಸಕ್ರಿಯ ರಾಗಿದ್ದು ಎಲ್ಲೇ ಅನ್ಯಾಯವಾದರೂ ಪ್ರತಿಭಟಿಸುವ ಮನಸ್ಥಿತಿ ಹೊಂದಿದ್ದನು
ಹಾಸನಕ್ಕಿಂತಲೂ ಕಟ್ಟರ್ ಫ್ಯೂಡಲ್ ವ್ಯವಸ್ತೆಯ ಬಳ್ಳಾರಿಯವನಾಗಿ ಶೋಷಣೆಯನ್ನು ಹೆಚ್ಚು ಬಲ್ಲವ ಹಾಗೂ ಅನುಭವಿಸಿದವನಾದ ಕಾರಣ ಆತನಲ್ಲಿ ಶೋಷಣೆಯ ಬಗ್ಗೆ ಸಹಜವಾಗಿಯೇ ಆಕ್ರೋಶ ಹೆಚ್ಚಾಗಿತ್ತು
ಅದೇಕೋ ದಲಿತ ಚಳುವಳಿಗಳಿಂದ  ಸಕ್ರಿಯವಾಗಿ ದೂರುಳಿದ ಕೊಟ್ಟೂರು ಆಗಾಗ್ಗೆ ದೌರ್ಜನ್ಯದ ಪ್ರಕರಣಗಳು ನಡೆದಾಗ ಬೀದಿಗಿಳಿದು ಹೋರಾಟ ಬೆಂಬಲಿಸುತ್ತಿದ್ದುದು ನೆನಪಿದೆ
ಪ್ರೊಫೆಸರ್ ಎಂ.ನಂಜುಂಡ ಸ್ವಾಮಿ ಅವರ ಬಗ್ಗೆ ವಿಶೇಷ ಒಲವಿದ್ದ  ಕೊಟ್ಟೂರು ಅ ನಂತರ ರೈತ ಸಂಘದಲ್ಲಿ ಗುರುತಿಸಿಕೊಂಡು ಸಕ್ರಿಯವಾಗಿ ಹೋರಾಟಗಳಿಗೆ ತೊಡಗಿಕೊಂಡರು ಅದರ ನಡುವೆ ‌ನೆಲ ಜಲದ ಹೋರಾಟ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಬಂದಾಗಲೆಲ್ಲಾ ಸಂಘಟನೆಗಳ ಜೊತೆಸೇರಿ ಪ್ರತಿಭಟಿಸುತ್ತಿದ್ದ ಹುಟ್ಟು ಹೋರಾಟಗಾರ
ನಂಜುಂಡ ಸ್ವಾಮಿ ಅವರ ಮರು ಜಪ್ತಿ ಚಳುವಳಿ ಸಂದರ್ಭದಲ್ಲಿ ಸಕ್ರಿಯನಾಗಿದ್ದಲ್ಲದೇ ಎಂಡಿಎನ್ ಕಾಲವಾದ ನಂತರ ಕೋಡಿಹಳ್ಳಿ ಬಣದಲ್ಲಿ ಗುರುತಿಸಿಕೊಂಡು ಜಿಲ್ಲಾಧ್ಯಕ್ಷನಾಗಿ ನಿರಂತರ ಕಾರ್ಯ ನಿರ್ವಹಿಸಿದ್ದರು
ಜೀವನ ನಿರ್ವಹಣೆಗೆ ಪುಸ್ತಕದ ಮಾರಾಟವನ್ನು ಆರಂಭಿಸಿದ ಕೊಟ್ಟೂರು ತೇಜಸ್ವಿ ಅವರ ಮಿಲೇನಿಯಂ ಸೀರೀಸ್ ಅನ್ನು ಓದುಗರಿಗೆ ನಿರಂತರವಾಗಿ ತಲುಪಿಸುವಲ್ಲಿ ಖುಷಿ ಕಂಡ ವ್ಯಕ್ತಿ
ತೇಜಸ್ವಿ ಅವರೊಡನೆ ಆಶ್ಚರ್ಯ ಪಡುವಷ್ಟು ಆತ್ಮೀಯತೆ ಹೊಂದಿದ್ದ ವ್ಯಾವಹಾರಿಕವಾಗಿ ಚತುರನಲ್ಲದ ಕಾರಣ ಹಾಗೂ ತೀರಾ ನಿಷ್ಟುರವಾದಿಯಲ್ಲದ್ದರಿಂದ ಎಲ್ಲೇ ಪುಸ್ತಕದ ಮಾರಾಟ ನಡೆದರೂ ಕೊಟ್ಟೂರ್ಗೆ ಪುಸ್ತಕಗಳು ಖಾಲಿಯಾಗುತ್ತಿದ್ದವು ವ್ಯಾಪಾರ ಮಾತ್ರ ನಷ್ಟವಾಗುತ್ತಿತ್ತು
ಪತ್ನಿ ಪ್ರಮೀಳಾ ಅವರು ಸರಕಾರಿ ಉದ್ಯೋಗದಲ್ಲಿದ್ದ ಕಾರಣ ಬದುಕು ಸುಗಮವಾಗಿ ಸಾಗಿತ್ತಾದ್ದರಿಂದ ಇದ್ದೊಬ್ಬ ಮಗಳ ಮದುವೆ ಮಾಡಿ ಮೊಮ್ಮಗನ ಜೊತೆ ಆಟವಾಡುತ್ತಾ ಸಂತಸದಿಂದಿದ್ದ ಕೊಟ್ಟೂರ್ ನನ್ನು ಶುಗರ್ ಹೈರಾಣಾಗಿಸಿತ್ತು ಜೊತೆಗೆ ಆತ ಆಯುರ್ವೇದ ಔಷಧ ಬಳಕೆ ಇತ್ಯಾದಿಯು ಸಹ ಉಲ್ಬಣಕ್ಕೆ ಕಾರಣವಾಗಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಯಿತು
ತೀರಾ ಇತ್ತೀಚೆಗೆ ನಡೆದಾಡಲು ಕಷ್ಡಪಡುವಂತಾಗಿತ್ತು..
ಪರಿಸ್ಥಿತಿ ಉಲ್ಬಣವಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾದಾತ ಜೀವಂತ ಮರಳಲೇ ಇಲ್ಲಾ
ಸುಮಾರು ಎಂಟತ್ತು ವರುಷದ ಹಿಂದೆ ಹಾಸನ ಬಿಟ್ಟು ಶಿವಮೊಗ್ಗದಲ್ಲಿ ಕೊಟ್ಟೂರು ಕುಟುಂಬ ವಾಸವಿತ್ತು ಆಗ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ತೆರಳಿದ್ದ ಪತ್ರಕರ್ತರಾದ ಶಿವಾನಂದ ತಗಡೂರು,ಎ.ಅರ್.ವೆಂಕಟೇಶ್ ನಾನು ಹಾಗೂ ಡಿಎಸ್ಎಸ್ ನ ಸಮದ್ ಕೊಟ್ಟೂರು ಮನೆಗೆ ತೆರಳಿ ಹಾಸನಕ್ಕೆ ಬನ್ನಿ ಎಂದಿದ್ದೆವು ಆತನ ಮನದಲ್ಲೂ ಅದೇ ಬಯಕೆ ಇದ್ದ ಕಾರಣ ಮನೆಯವರಿಗೆ ವರ್ಗಾವಣೆ ಮಾಡಿಸಿಕೊಂಡು ಕುಟುಂಬ ಸಮೇತ ಮತ್ತೆ ಹಾಸನಕ್ಕೆ ಮರಳಿದ್ದನು ಹಾಗೆ ಬಂದವನು ಮತ್ತೆ ಎಲ್ಲಿಗೂ ಹೋಗಲಾಗಲೇ ಇಲ್ಲಾ........

#ಹಾಸನ

#ರೈತ ಪರ 

#ಕೊಟ್ಟೂರು ಶ್ರೀನಿವಾಸ್ 

#ವಿಮರ್ಶಾ-vimarsha 

*ಹರೀಶ್ ಹೆಚ್ ಆರ್ 
ಕೋಟೆ *

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728