ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ವಿಮರ್ಶಾ -ದಿನ ಸುದ್ದಿ

#ವಿಮರ್ಶಾ -ದಿನ ಸುದ್ದಿ  ವಿಮರ್ಶಾ -vimarsha ಬಸ್ ಪಾಸ್ ನವೀಕರಣಕ್ಕೆ ಅರ್ಜಿ ಆಹ್ವಾನ ಹಾಸನ . ( ಕರ್ನಾಟಕ ವಾರ್ತೆ):- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 06 ಸೇವೆಗಳನ್ನು (ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್ ಪಾಸ್ ವಿಕಲಚೇತನರ ರಿಯಾಯಿತಿ ಬಸ್‍ಪಾಸ್, ಅಂಧರ ಉಚಿತ ಬಸ್‍ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಬಸ್‍ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪತ್ನಿ/ವಿಧವಾ ಪತ್ನಿಯರ ಉಚಿತ ಕೂಪನ್ ಪಡೆಯಲು ಮತ್ತು ಅಪಘಾತ ಪರಿಹಾರ ನಿಧಿಗಾಗಿ) ಸೇವಾಸಿಂಧು ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ಆನ್‍ಲೈನ್ ವ್ಯವಸ್ಥೆಯಡಿ ನಿರ್ವಹಿಸಲಾಗುತ್ತಿದೆ.           ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ವಿತರಣೆ ಮಾಡಬೇಕಾಗಿರುವುದರಿಂದ ಫಲಾನುಭವಿಗಳು ನವೀಕರಿಸಿಕೊಳ್ಳಲು ಮತ್ತು ಹೊಸ ಬಸ್‍ಪಾಸ್‍ಗಳನ್ನು ಪಡೆದುಕೊಳ್ಳಲು ಸೇವಾಸಿಂದು https://serviceonline.gov.in/karnataka   ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.         ಸದರಿ ವಿಕಲಚೇತನ ಫಲಾನುಭವಿಗಳು ಫೆ.28ರ ಒಳಗಾಗಿ ನವೀಕರಣ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಫೆ 28ರ ನಂತರ ವಿಕಲಚೇತನರ ಬಸ್‍ಪಾಸ್ ನವೀಕರಣಕ್ಕೆ ಅವಕಾಶ ಇರುವುದಿಲ್ಲ. ಆನ್‍ಲೈನ್‍ನಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರಿಂದ ದೃಢೀಕರಿಸಿದ ವಿಕಲಚೇತನರ ಗುರುತಿನ ಚೀಟಿ ಅಥವಾ ಯು.ಜಿ.ಐ.ಡಿ.ಕಾರ್ಡ್ ಮತದಾರರ ಚೀಟಿ/ಆಧಾರ್ ಕಾರ್ಡ್/ರೇಷನ್ ಕಾರ್ಡ್, ಇತ್ತೀಚಿನ ಭಾವ ಚಿತ್ರ

ಬಿಲ್ಡರ್ಸ್ ಗಳು ಸರ್ಕಾರಿ ಯೋಜನೆಗಳಲ್ಲಿ ಸಕ್ರೀಯವಾಗಿ ತೊಡಗಲಿ.- ಸಚಿವ ಕೆ ಗೋಪಾಲಯ್ಯ

ಬಿಲ್ಡರ್ಸ್‍ಗಳು ಸರ್ಕಾರದ ಯೋಜನೆಗಳಲ್ಲಿ ಸಕ್ರೀಯವಾಗಿ ತೊಡಗಲಿ: ಸಚಿವ ಕೆ. ಗೋಪಾಲಯ್ಯ (ಕರ್ನಾಟಕ ವಾರ್ತೆ ):  ಜಿಲ್ಲೆಯ ಬಿಲ್ಡರ್ಸ್ ಗಳು ಸರ್ಕಾರದ ವಸತಿ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿ ಬಡವರಿಗೆ  ಉತ್ತಮ ಗುಣಮಟ್ಟದ ಮನೆಗಳನ್ನು  ನಿರ್ಮಾಣಮಾಡಿ ತಮ್ಮ  ಆರ್ಥಿಕತೆಯನ್ನು  ಚುರುಕುಗೊಳಿಸಿಕೊಳ್ಳಿ  ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ, ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.ಗೋಪಾಲಯ್ಯ ರವರು ಕರೆ ನೀಡಿದ್ದಾರೆ.       ನಗರದ ಜ್ಞಾನಕ್ಷಿ ಸಮುದಾಯ ಭವನದಲ್ಲಿ ಬಿಲ್ಡ್‍ರ್ಸ್  ಅಸೊಸಿಯೇಷನ್ ಆಫ್ ಇಂಡಿಯಾ ವತಿಯಿಂದ ಏರ್ಪಡಿಸಿದ್ದ  ಕಟ್ಟಡ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.    ಕೋವಿಡ್ 19 ಹಿನ್ನೆಯಲ್ಲಿ ದೇಶದ ಎಲ್ಲಾ ವಲಯದಲ್ಲಿ ಅಭಿವೃದ್ದಿ ಕುಂಠಿತವಾಗಿತ್ತು ಇಂತಹ ಪಿರಿಸ್ಥಿಯಲ್ಲಿ  ಬಿಲ್ಡರ್ಸ್ ಮತ್ತು ಕೈಗಾರಿಕೋದ್ಯಮಿಗಳು  ಸರ್ಕಾರಿ ವಲಯದ ಕಟ್ಟಡ ಮತ್ತಿತರ ನಿರ್ಮಾಣ  ಯೋಜನೆಗಳಲ್ಲಿ ಸಕ್ರೀಯವಾಗಿ ತೊಡಗುವ ಪರಿಸ್ಥಿತಿ ಸುಧಾರಣೆ ಮಾಡಲು ಮೂಲಕ ಪ್ರಯತ್ನಿಸಿ ಎಂದು ಹೇಳಿದರು.      ಕೇಂದ್ರ ಸರ್ಕಾರದ ಆತ್ಮ ನಿರ್ಭರ ಭಾರತಿ  ಯೋಜನೆ ಮೂಲಕ ಸಂಕಷ್ಠದಲ್ಲಿರುವವರ  ಶ್ರೇಯಸ್ಸಿಗೆ ನೆರವಾಗಲಾಗುತ್ತದೆ ಅದೇ ರೀತಿ ರಾಜ್ಯ ಸರ್ಕಾರವೂ  ಹಲವು ಯೋಜನೆಗಳ ಮೂಲಕ ಸಂಕಷ್ಠ ಪರಿಹಾರಕ್ಕೆ ಮುಂದಾಗಿದೆ ಎಂದು  ಸಚಿವರು ಹೇಳಿದರು. ಮುಂದಿನ

ಹಾಸನದ ಶ್ರೀ ಗ್ಯಾರಂಟಿ ರಾಮಣ್ಣನವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ.

ಗ್ಯಾರಂಟಿ ರಾಮಣ್ಣ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ. ಹಾಸನ  ( ಕರ್ನಾಟಕ ವಾರ್ತೆ) ಹಾಸನ ಜಿಲ್ಲೆಯ ಹಿರಿಯ ಜಾನಪದ  ಕಲಾವಿದರಾದ ಗ್ಯಾರಂಟಿ ರಾಮಣ್ಣ ಅವರು ಈ ಬಾರಿಯ ಜಾನಪದ ಅಕಾಡಮಿ ಪ್ರಶಸ್ತಿಗೆ  ಪಾತ್ರರಾಗಿದ್ದಾರೆ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಇಂದು  ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಾತಾ ಬಿ.ಮಂಜಮ್ಮ ಜೋಗತಿ ಅವರು ಪತ್ರಿಕಾಗೋಷ್ಠಿ ನಡೆಸಿ 2020 ನೇ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ 30 ಜಿಲ್ಲೆಗಳ ಹಿರಿಯ ಜಾನಪದ  ಕಲಾವಿದರು ಹಾಗೂ ಇಬ್ಬರು ಜಾನಪದತಜ್ಞರ ಪಟ್ಟಿಯನ್ನು ಪ್ರಕಟಿಸಿದರು. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ,ಅಕಾಡೆಮಿಯ ಸದಸ್ಯರಾದ ಸಿ.ಎಂ.ನರಸಿಂಹ ಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ.

ನಮ್ಮ ಪರಂಪರೆ ಭಾಗವೇ ನಮ್ಮ ಆಚರಣೆಯಾಗಲಿ...ಡ್ಯಾನಿ ಪಿರೇರಾ

ನಮ್ಮ ಪರಂಪರೆಯ ಭಾಗವೇ ನಮ್ಮ ಆಚರಣೆಯಾಗಲಿ..                    ಲೇಖಕರು  :-                ಡ್ಯಾನಿ  ಪಿರೇರಾ                           #ಡ್ಯಾನಿ ಪಿರೇರಾ-ಕಾಲಂ ನಾನು ಮೂಲತಃ religious ಅಲ್ಲ, ನನ್ನ ದೇಶದ ಧಾರ್ಮಿಕ ಪರಂಪರೆಯ ಬಗ್ಗೆ  ಮಾತ್ರ ಗೌರವ ಹೊಂದಿರುವವನು. ಹಾಗಾಗಿ ಎಲ್ಲರ ನಂಬಿಕೆಯ ಬಗ್ಗೆ ಗೌರವ ಭಾವವಿದೆ. ವಿಷಯ ಇಷ್ಟೇ.  ಪಾಶ್ಚಾತ್ಯ ಮಾನಸೀಕತೆಯ ಹೊಸವರ್ಷದ ಮೊದಲ ದಿನ ಮುಕ್ತಾಯಗೊಂಡಿದೆ. ವಾಸ್ತವವಾಗಿ ಇದು ಕ್ರೈಸ್ತವರ್ಷಾಚರಣೆ ಕ್ಯಾಲೆಂಡರ್ ಬದಲಾಗುತ್ತದೆ ಮತ್ತೇನಲ್ಲ.  ಇರಲಿ,  ಡಿಸೆಂಬರ್ 31 ರ ಆ ರಾತ್ರಿ ಆ ಮತಾನುಯಾಯಿಗಳು ಚರ್ಚ್ ಗೆ ತೆರಳುತ್ತಾರೆ ಅವರು ನಂಬಿದ ಕ್ರಿಸ್ತನ ಆರಾಧನೆ ಮಾಡುತ್ತಾರೆ. ಸಾಧ್ಯವಾದರೆ ಚರ್ಚ್ ನಲ್ಲಿ ಕೇಕ್ ಹಂಚಿ ತಿಂದು ಸಂಭ್ರಮಿಸಿ,  ವಾಪಸ್ ಮನೆಗೆ ಬಂದು ಬಹುತೇಕ ಜನ ತೆಪ್ಪಗೆ ಮಲಗುತ್ತಾರೆ. ಅಲ್ಲಿಗೆ ಅವರ ಹೊಸ ವರ್ಷಾಚರಣೆ ಅವರು ನಂಬಿದ ದೈವದ ಆರಾಧನೆಯ ಮೂಲಕ ಮುಕ್ತಾಯವಾಗುತ್ತದೆ. ಆದರೆ ಸಮಸ್ಯೆ ಇರುವುದು ಹಿಂದುಗಳಲ್ಲಿ. ಅವರಿಗೆ ಯಾವ ಆ್ಯಂಗಲ್ ನಲ್ಲೂ ಸಂಬಂಧಿಸದ ಆಚರಣೆಯನ್ನು ಊರ ಹಬ್ಬದಂತೆ ಆಚರಿಸಲು ನಿಲ್ಲುತ್ತಾರೆ.  ಅದೊಂದು ಗೌರಿ ಗಣೇಶ,ಯುಗಾದಿ, ದೀಪಾವಳಿಯ ಭಕ್ತಿ ಶ್ರದ್ಧೆಯ ಭಾಗವಾಗಿದ್ದರೆ, ಅದೊಂದು ಅತ್ಯಂತ ಸಂಭ್ರಮದ ವಿಚಾರ ಎನ್ನಬಹುದಿತ್ತು.  ಈಗದು fashion ಎನ್ನುವ ರೀತಿಯಲ್ಲಿ  ಮನೆಯ ಹಬ್ಬದಂತೆ ಆಗಿದೆ. ಮನೆಯಲ್ಲಿ ಆಗತಾನೆ ಮದುವೆಯಾಗಿ ಬಂದ ಗೃಹಿಣಿಯಾದಿಯಾಗಿ ಹಲ್ಲ

ವಿಮರ್ಶಾ -ಸುದ್ದಿ ನೋಟ

ನೂತನ ಉಪ ಅರಣ್ಯಾಧಿಕಾರಿ ಅಧಿಕಾರ ಸ್ವೀಕಾರ ಹಾಸನ.  (ಕರ್ನಾಟಕ ವಾರ್ತೆ):-  ಜಿಲ್ಲೆಯ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಸವರಾಜು ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜ1 ರಂದು ಸಂಜೆ ಅಧಿಕಾರ ವಹಿಸಿಕೊಂಡ ಕೆ.ಎನ್.ಬಸವರಾಜು ರವರು ಜ 2 ರಂದು  ಪರಿಸರ ಪೋಷಕರು, ಪ್ರಗತಿಪರ ಚಿಂತಕರುಗಳೊಂದಿಗೆ  ಜಿಲ್ಲೆಯ ಅರಣ್ಯ ಹಾಗೂ, ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮಾಹಿತಿ ಪಡೆದರು.     ಅರಣ್ಯ ಭವನದಲ್ಲಿಂದು  ಹೆಮ್ಮಿಗೆ  ಮೋಹನ್ ,ಅರ್.ಪಿ ವೆಂಕಟೇಶ್ ಮೂರ್ತಿ, ಕಿಶೋರ್ ಕುಮಾರ್ ಮತ್ತಿತರರಿಂದ ಉಪ ಅರಣ್ಯ ಸಂರಕ್ಷಣಾಧಿಕಾüರಿಯವರು  ವಿವರ ಪಡೆದರು.      ಜಿಲ್ಲೆಯಲ್ಲಿ ಹೆಚ್ಚಾಗಿರುವ ಕಾಡಾನೆ, ಚಿರತೆ ಕಾಡು ಕೋಣ ,ಕಪಿಗಳ ಹಾಗೂ ಮತ್ತಿತರ ವನ್ಯ ಜೀವಿಗಳ ಹಾವಳಿ ಬಗ್ಗೆ ವಿವರಿಸಿದ ಪ್ರಗತಿಪರರು ರೈತರಿಗೆ  ಅಯಾಯ ವರ್ಷದ ಬೆಳೆ ಹಾನಿ ಪರಿಹಾರ ಆ ವರ್ಷವೇ ದೊರೆಯುವಂತಾಗಬೇಕು ವೈಜ್ಞಾನಿಕ ದರ ನಿಗಧಿಯಾಗಬೇಕು ಎಂದು  ಮನವಿ ಮಾಡಿದರು.    ಆಲೂರು ಸಕಲೇಶಪುರ ಭಾಗದ ಆನೆ ಹಾವಳಿ ನಿಯಂತ್ರಣಕ್ಕೆ ಆನೆ ಕಾರಿಡಾರ್ ಸ್ಥಾಪನೆಗೆ ಪ್ರಸ್ತಾವನೆ ಇದ್ದು, ಅದರ ಜಾರಿಯ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.         ಶೀಘ್ರದಲ್ಲೆ ಬೆಳೆಗಾರರು ,ರೈತ ಪ್ರಮುಖರ ಸಭೆ ನಡೆಸಿ ಮಾಹಿತಿ ಪಡೆದು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪ್ರಯತ್ನಿಸುವುದಾಗಿ ಅವರು ಹೇಳಿದರು. ಹಂತಹಂತವಾಗಿ ಇಲಾಖೆಗೆ ಸಂಭಂದಿಸಿದ ಸಮಸ್ಯೆಯನ್ನು ಬಗೆಹರಿಸಲಾಗುವು

ವಿಮರ್ಶಾ -ಸುದ್ದಿ ನೋಟ

ವಿಮರ್ಶಾ -vimarsha ಉಚಿತವಾಗಿ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನ ಹಾಸನ  (ಕರ್ನಾಟಕ ವಾರ್ತೆ):  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆವತಿಯಿಂದ ಶ್ರವಣದೋಷವುಳ್ಳ ವಿಕಲಚೇತನರಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.     ಶ್ರವಣದೋಷವುಳ್ಳ ವ್ಯಕ್ತಿಯು ಭಾರತದ ಪ್ರಜೆಯಾಗಿರಬೇಕು ಹಾಗೂ ಕರ್ನಾಟಕದಲ್ಲಿ ಕನಿಷ್ಟ ಹಿಂದಿನ 10 ವರ್ಷಗಳ ನಿವಾಸಿಯಾಗಿರಬೇಕು. ಕನಿಷ್ಠ ಎಸ್.ಎಸ್.ಎಲ್.ಸಿ ವರೆಗೆ ವ್ಯಾಸಂಗ ಮಾಡಿರಬೇಕು ಹಾಗೂ ವೃತ್ತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಬೇಕು. ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ಆದಾಯ ಮಿತಿಯಿರುವುದಿಲ್ಲ.     ಈ ಯೋಜನೆಯಡಿ ಸೌಲಭ್ಯ ಪಡೆಯುವ ಶ್ರವಣದೋಷವುಳ್ಳ ಫಲಾನುಭವಿಗಳು ಬೇರೆ ಯಾವುದೇ ಮೂಲಗಳಿಂದ ಇದೇ ರೀತಿಯ ಸೌಲಭ್ಯ ಪಡೆದಿರಬಾರದು ಹಾಗೂ ಈ ಬಗ್ಗೆ ನೋಟರಿಯಿಂದ ದೃಢೀಕರಿಸಿದ ಪ್ರಮಾಣ ಪತ್ರ ಒದಗಿಸತಕ್ಕದ್ದು. ವಿಕಲಚೇತನತೆಯ ಪ್ರಮಾಣ ಶೇ.40 ಅಥವಾ ಅದಕ್ಕಿಂತ ಹೆಚ್ಚಾಗಿರತಕ್ಕದ್ದು. ಕಡ್ಟಾಯವಾಗಿ ಸಂಬಂಧಪಟ್ಟ ತಹಸೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ ನೀಡಬೇಕು.      ಈ ಯೋಜನೆಯಡಿ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸೌಲಭ್ಯ ನೀಡಲಾಗುವುದು, ಸೌಲಭ್ಯ ಪಡೆದ ನಂತರ ಬೇರೆಯವರಿಗೆ ಹಸ್ತಾಂತರಿಸಬಾರದು/ಪರೆಭಾರೆ ಮಾಡಬಾರದು ಈ ಕುರಿತು ದೃಢೀಕರಣ ನೀಡುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.     ಅರ್ಜಿಯನ್ನು ಅಗತ್ಯ ದ

ಜ.5-ಹಾಸನ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ

ವಿಮರ್ಶಾ -vimarsha ಜ.5 ರಂದು ವಿವಿಧ ಹುದ್ದೆಗಳ ನೇಮಕಾತಿಗೆ:      ನೇರ ಸಂದರ್ಶನ  ಹಾಸನ . ( ಕರ್ನಾಟಕ ವಾರ್ತೆ):-   ಹಾಸನದ ಹೆಸರಾಂತ ಕಂಪನಿಗಳು ಖಾಲಿ ಇರುವ ವಿವಿಧ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ಜ.5 ರಂದು ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ.        8ನೇ ತರಗತಿ ಎಸ್.ಎಸ್.ಎಲ್.ಸಿ/ ಪಿ.ಯು.ಸಿ/ ಐ.ಟಿ.ಐ/ ಡಿಪ್ಲೋಮೋ, ಯಾವುದೇ ಪದವಿ/ ನಲ್ಲಿ ತೇರ್ಗಡೆ ಹೊಂದಿದ 18 ರಿಂದ 30 ವರ್ಷ ಒಳಪಟ್ಟ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳ್ಳುತ್ತಿದ್ದು, ಆಸಕ್ತ ನಿರುದ್ಯೋಗಿ ಯುವಕ/ ಯುವತಿಯರು  ತಮ್ಮ ಸ್ವವಿವರಗಳು ಆಧಾರ್ ಕಾರ್ಡ್ ಮತ್ತು ಶೈಕ್ಷಣಿಕ ದಾಖಲಾತಿಗಳ ಜೆರಾಕ್ಸ್ ಪ್ರತಿಗಳೊಂದಿಗೆ ಕಛೇರಿಗೆ ಹಾಜರಾಗಿ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.               ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು  ಖುದ್ದಾಗಿ ಅಥವಾ ದೂ.ಸ : 08172-296374 ಅಥವಾ  8722606874 / 8660141863 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಕೋವಿಡ್ -19 ಇರುವ ಹಿನ್ನೆಲೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲಾ ರೀತಿಯ ಮುಂಜಾಗ್ರತಾ  ಕ್ರಮಗಳನ್ನ  ಪಾಲಿ

ಗ್ರಾಮ ಪಂಚಾಯಿತಿ ಚುನಾವಣಿ ಮತ ಎಣಿಕೆ ಸಿದ್ಧತೆ : ಮದ್ಯ ಮಾರಾಟ ನಿಷೇಧ ಮತ್ತು ನಿಷೇಧ್ಜ್ಞಾನೆ ಜಾರಿ.

ಗ್ರಾ.ಪಂ ಚುನಾವಣೆ ಮತ ಎಣಿಕೆಗೆ ಸಿದ್ದತೆ :-  ಮದ್ಯ ಮಾರಾಟ ನಿಷೇಧ ಹಾಗೂ ನಿಷೇಧ್ಜ್ಞಾನೆ ಜಾರಿ (ಕರ್ನಾಟಕ ವಾರ್ತೆ) :  ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಡಿ.30 ರಂದು ನಡೆಯಲಿದ್ದು ಆಯಾ ತಾಲ್ಲೂಕಿನಲ್ಲಿ ಮತ ಎಣಿಕೆ ಕೇಂದ್ರಗಳನ್ನು ಈಗಾಗಲೇ ಗುರುತಿಸಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಚುನಾವಣೆ ನಡೆದ ಕ್ಷೇತ್ರಗಳಿಗೆ  ಅನುಗಣವಾಗಿ ಟೇಬಲ್‍ಗಳನ್ನು ಅಳವಡಿಸಿಕೊಂಡು ಎಣಿಕೆ ಕಾರ್ಯ ನಡೆಸಲಾಗುವುದು ಮತ ಎಣಿಕೆ ಕೇಂದ್ರಗಳ ವಿವರ :- ಹಾಸನ-ಸರ್ಕಾರಿ ಕಲಾ ಕಾಲೇಜು ಒಟ್ಟು 65 ಟೇಬಲ್‍ಗಳು 195 ಸಿಬ್ಬಂದಿಗಳು, ಅರಸೀಕೆರೆ-ಸೆಂಟ್ ಮೇರಿಸ್ ಪ್ರೌಢ ಶಾಲೆಯಲ್ಲಿ ಒಟ್ಟು 88 ಟೇಬಲ್‍ಗಳು 264 ಸಿಬ್ಬಂದಿಗಳು, ಚನ್ನರಾಯಪಟ್ಟಣ - ನವೋದಯ ಪದವಿ ಪೂರ್ವ ಕಾಲೇಜಿನಲ್ಲಿ  ಒಟ್ಟು 88 ಟೇಬಲ್‍ಗಳು 264 ಸಿಬ್ಬಂದಿಗಳು, ಹೊಳೆನರಸೀಪುರ - ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 50 ಟೇಬಲ್‍ಗಳು 150 ಸಿಬ್ಬಂದಿಗಳು,  ಆಲೂರು-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 30 ಟೇಬಲ್‍ಗಳು 90 ಸಿಬ್ಬಂದಿಗಳು, ಅರಕಲಗೂಡು-ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಟ್ಟು 93 ಟೇಬಲ್‍ಗಳು 279 ಸಿಬ್ಬಂದಿಗಳು, ಬೇಲೂರು-ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 74 ಟೇಬಲ್‍ಗಳು 222 ಸಿಬ್ಬಂದಿಗಳು, ಸಕಲೇಶಪುರ-ಸಂತ ಜೋಸೆಫ್ ಶಾಲೆಯಲ್ಲಿ ಒಟ್ಟು 33 ಟೇಬಲ್ 99 ಸಿಬ್ಬಂದಿಗಳು. ಒಟ್ಟು 08 ತಾಲ್ಲೂಕುಗಳಲ್ಲಿ 521

ವಿಮರ್ಶಾ-vimarsha

ವಿಮರ್ಶಾ -ಸುದ್ದಿ ನೋಟ

ವಿಮರ್ಶಾ -vimarsha ವಿಮರ್ಶಾ -ಸುದ್ದಿ ನೋಟ 17/12/2020 👇👇👇👇👇👇👇👇👇👇👇👇   https://www.facebook.com/100028372331773/posts/373926456896429/?app=fbl #ವಿಮರ್ಶಾ -vimarsha  ಪ್ರಧಾನ ಸಂಪಾದಕರು :- ಹರೀಶ್ ಹೆಚ್ ಆರ್  ಕೋಟೆ  ಸುದ್ದಿ ಸಂಪಾದಕರು:- ನಾಗೇಂದ್ರ.ಹೆಚ್. ಎನ್. 

ಕಸಾಪ ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ-ಕೋಟೆ ಕಾಲಂ

ವಿಮರ್ಶಾ -vimarsha ಕೋಟೆ ಕಾಲಂ ಕಸಾಪ ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ. ಜಿಲ್ಲಾಕನ್ನಡಸಾಹಿತ್ಯ ಪರಿಷತ್ತು ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ ಸಾಹಿತಿಗಳು ವಿಚಾರವಂತರು ಜನಸಾಮಾನ್ಯರು ಅಲ್ಲಿಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಪ್ರತಿಯೊಂದರಲ್ಲಿಯೂ ಹಣ ಮಾಡುವುದನ್ನೆ ರೂಡಿಸಿಕೊಂಡಿದ್ದಾರೆ ಅಧ್ಯಕ್ಷರು ಭ್ರಷ್ಟಾಚಾರದ ಪರಮಾವಧಿ ತಲುಪಿದ್ದಾರೆ  ಈ ವಿಚಾರವನ್ನು ಹೇಳಿದವರು ಯಾರೋ ಹಾದಿಬೀದಿಯಲ್ಲಿ ಹೋಗುವವರಲ್ಲಾ ಈಗಿನ ಜಿಲ್ಲಾ ಕಸಾಪ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡರ ಒಡನಾಡಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಗಂಜಲಗೂಡು ಗೋಪಾಲೇಗೌಡ ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು  ಮೊದಲೇ ಹೊತ್ತಿಉರಿಯುತ್ತಿರುವ ಜಿಲ್ಲಾ ಕಸಾಪ ಚುನಾವಣಾ ಕಣಕ್ಕೆ ಗೋಪಾಲೇಗೌಡರ ಎಂಟ್ರಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಬಿಚ್ಚಿಟ್ಟ ವಿಚಾರಗಳನ್ನು ಗಮನಿಸಿದಾಗ ಪರಿಷತ್ತಿಗೆ ಫಿನಾಯಿಲ್ ಹಾಕಿ ತೊಳೆಯಬೇಕಾದುದು ಅನಿವಾರ್ಯ ಎನಿಸುತ್ತದೆ ಕಸಾಪ ಜಿಲ್ಲಾಧ್ಯಕ್ಷರ ಮೇಲೆ ನೇರವಾಗಿ ಆರೋಪಿಸಿದ ಗೋಪಾಲೇಗೌಡ ಪರಿಷತ್ತಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ದುನಿಯಾ ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖನ ಬರೆದಾಗ ಮಂಜೇಗೌಡರು ನನ್ನ ಮೇಲೆ ಹಲ್ಲೆಮಾಡಿ ಕೊಲೆಯತ್ನ ನಡೆಸಿದ್ದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಆಪಾದಿಸಿದ್ದು ಮಾತ್ರ ಎಲ್ಲರೂ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿತು ಈ ಅವ್ಯವಹಾರಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನನ್ನು ತಾಲ

jobs oppurtunities -ಉದ್ಯೋಗಾವಕಾಶಗಳು.

ವಿಮರ್ಶಾ -vimarsha  ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ಕೊಂಡಿಯನ್ನು ಸಂಪರ್ಕಿಸಿ.  For more details please click below link. 👇👇👇👇👇👇👇👇 https://youtu.be/MbCoA_xDKUo      ಪ್ರಧಾನ ಸಂಪಾದಕರು :-         ಹರೀಶ್ ಹೆಚ್ ಆರ್                 ಕೋಟೆ              ಸುದ್ದಿ ಸಂಪಾದಕರು :-       ನಾಗೇಂದ್ರ.ಹೆಚ್. ಎನ್ 

ಗ್ರಾಮ ಪಂಚಾಯಿತಿ ಕದನ -ಕೋಟೆ ಕಾಲಂ

ಕೋಟೆ ಕಾಲಂ:- ಗ್ರಾಮ ಪಂಚಾಯತಿ ಕದನ. -ಹರೀಶ್ ಹೆಚ್ ಆರ್   ಕೋಟೆ.  ನೋಡು ಸಂಸಾರದಲ್ಲಿ ರಾಜಕೀಯ ನಿನ್ನ ಮನೆ ಯಲ್ಲಿ ನೀನೆ ಪರಕೀಯ..... ಸಿ.ಅಶ್ವತ್ ಅವರ ಕಂಚಿನ ಕಂಠದಲ್ಲಿ ಬರುತ್ತಿದ್ದ ಹಾಡು ಕೇಳಿದವನಿಗೆ ಒಂದು ಕ್ಷಣ ಗ್ರಾಮಪಂಚಾಯತಿ ಚುನಾವಣೆ ದ್ರಶ್ಯಾವಳಿಗಳು ಕಣ್ಣ ಮುಂದೆಯೇ ಹಾದು ಹೋದವು ಡಿಸೆಂಬರ್ ತಿಂಗಳಿನಲ್ಲಿ ಎರಡು ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆ ಮುಗಿಯುವಷ್ಟರಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅದೆಷ್ಟು ಕುರುಕ್ಷೇತ್ರ ರಾಮಾಯಣ ನಡೆಯುತ್ತವೆಯೋ ಅದೆಷ್ಟು ತಲೆಗಳು ಉರುಳುತ್ತವೋ ದ್ವೇಶದ ದಳ್ಳುರಿಗೆ ಅದೆಷ್ಟು ಮನೆಗಳು ಆಹುತಿಯಾಗುತ್ತವೋ ಬಲ್ಲವರ್ಯಾರು ಪ್ರಶಾಂತತೆ ಹಾಗೂ ಲವಲವಿಕೆಯಿಂದ ಕೂಡಿದ ಗ್ರಾಮಾಂತರ ಪ್ರದೇಶದ ಜನರ ಮನಸ್ಸು ಬುದ್ದಿಗೆ ಲಕ್ವಾಹೊಡೆಯುವುದೇ ಗ್ರಾಮಪಂಚಾಯತಿ ಚುನಾವಣೆಗಳಲ್ಲಿ ಈ ಸಂದರ್ಭದಲ್ಲಿ ಅಣ್ಣತಮ್ಮಂದಿರೇ ಶತ್ರುಳಾಗುತ್ತಾರೆ ಕಷ್ಟಕ್ಕಾಗುವ ಬಂಧುವೇ ಕತ್ತಿಮಸೆಯುತ್ತಾನೆ ಹೆಂಡತಿ ಮಕ್ಕಳೆ ಮನೆ ಯಜಮಾನನ ಮಾತನ್ನು ಕಾಲ ಕಸವಾಗಿ ಕಾಣುತ್ತಾರೆ ದಾಯಾದಿ ದ್ವೇಷತಾರಕಕ್ಕೇರುತ್ತದೆ ಊರೇ ಇಬ್ಬಾಗವಾದರೆ ಜಾತಿ ಉಪ ಜಾತಿಯ ಪ್ರಜ್ಞೆ ಹೆಚ್ಚಾಗಿ ಯಾರನ್ನೂ ಯಾರೂ ನಂಬದಂತಾಗುತ್ತದೆ, ಕಳೆದ ಚುನಾವಣೆಯ ಸಂದರ್ಭದಲ್ಲಿ ಒಡೆದ ಮನಸ್ಸುಗಳೆ ಇನ್ನೂ ಒಂದಾಗಿಲ್ಲಾ ಅಷ್ಟರಲ್ಲಿ ಮತ್ತೆ ಚುನಾವಣೆ ಬಂದಿದ್ದು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಬಿರುಸು ಕಂಡು ಬರಲಿದೆ ಈ ಬಾರೀ ಕರೋನಾ ಪಿಡುಗಿನಿಂದ ತತ್ತರಿಸಿ ಊರಿಗೆ ವಾ

ಶ್ರೀ ಬಿಂದು ಮಾಧವ ಶರ್ಮ ಸ್ವಾಮೀಜಿ ವೃಂದಾವನೋಹರಣ.

ವಿಮರ್ಶಾ -ಸುದ್ದಿ ನೋಟ

   ಕೆ. ಡಿ. ಪಿ  ತ್ರೈಮಾಸಿಕ  ಸಭೆ  ಮತ್ತು ಜಿಲ್ಲಾ ಸಚಿವರ ಪ್ರವಾಸ                   ಜಿಲ್ಲಾ ಪಂಚಾಯತ್. ಹಾಸನ                 ಕೆ.ಗೋಪಾಲಯ್ಯ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು  ಹಾಸನ ಸರ್ಕಾರಿ ವಸತಿ ಅಥಿತಿ ಗೃಹಕ್ಕೆ ಆಗಮಿಸಲಿದ್ದಾರೆ. ಜಿಲ್ಲಾ 10.30 ಕ್ಕೆ ಜಿಲ್ಲಾಪಂಚಾಯಿತಿ ಹೊಯ್ಸಳ ಸಂಭಾಂಗಣದಲ್ಲಿ ನಡೆಯುವ 2020 ನೇ ಸಾಲಿನ ಹಾಸನ ತ್ರೈ ಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಹಿಸಲಿದ್ದಾರೆ. ಸಂಜೆ 4.30ಕ್ಕೆ ಹಾಸನದಿಂದ ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ತೆರಳಲಿದ್ದಾರೆ. **************************** ಅಂತರಾಷ್ಟ್ರೀಯ ದತ್ತು ಮಾಸಾಚರಣೆ - ಈ ಬಾರಿ ನವೆಂಬರ್ ತಿಂಗಳನ್ನು ಅಂತರಾಷ್ಟ್ರೀಯ ದತ್ತು ಮಾಸಾವನ್ನಾಗಿ ಆಚರಿಸಲಾಗುತ್ತದೆ.       ಪ್ರಸ್ತುತ ಬಾಲಾನ್ಯಾಯ (ಮಕ್ಕಳ ಪಾಲನೆಮತ್ತು ರಕ್ಷಣೆ) ಅಧಿನಿಯಮ -2015 ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಮತ್ತು ಕಾಮಧೇನು ಶಿಶುಕೇಂದ್ರ ಎಂಬ ಎರಡು ವಿಶೇಷ ದತ್ತು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಸದರಿ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಆಸಕ್ತರು ನಿಯಮನುಸಾರ ಕೇಂದ್ರಗಳಲ್ಲಿ ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.        ಕುಟುಂಬ ವ್ಯವಸ್ಥೆಯಲ್ಲ

PMKVY -ಪಿಎಂಕೆವಿವೈ

ರಾಜ್ಯ ಪ್ರಶಸ್ತಿ ವಿಜೇತ ಹಂಪನಹಳ್ಳಿ ತಿಮ್ಮೇಗೌಡರಿಗೆ ಪತ್ರಕರ್ತರುಗಳಿಂದ ಅಭಿನಂದನೆ

ಹಾಸನ ಜಿಲ್ಲೆಯ  ಪತ್ರಕರ್ತರುಗಳಿಂದ ಜನಪದ ಕ್ಷೇತ್ರದಲ್ಲಿ ರಾಜ್ಯಪ್ರಶಸ್ತಿಗೆ ಭಾಜನರಾದ ಜಾನಪದ ತಜ್ಞ ಡಾ.ಹಂಪನಹಳ್ಳಿ ತಿಮ್ಮೇಗೌಡರಿಗೆ  ಅಭಿನಂದನೆ.:- ಜಿಲ್ಲೆಯಲ್ಲಿ ಎಲ್ಲಾ ಪ್ರಾಕಾರದ ಸಾಹಿತ್ಯ ಹಾಗೂ ಸಾಹಿತಿಗಳು ಶ್ರೀಮಂತವಾಗಿದ್ದಾರೆ ಆದರೆ ಇತ್ತೀಚೆಗೆ ಅದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿಲ್ಲ ಎಂದು ರಾಜ್ಯ ಪ್ರಶಸ್ತಿಗೆ ಭಾಜನರಾದ ಜನಪದ ತಜ್ಞ ಡಾ.ಹಂಪನಹಳ್ಳಿ ತಿಮ್ಮೇಗೌಡ ವಿಷಾದಿಸಿದ್ದಾರೆ ಇತ್ತೀಚೆಗೆ  ತಮ್ಮ ನಿವಾಸದಲ್ಲಿ ಅಭಿನಂದಿಸಿದ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು  ಯುವ ಸಾಹಿತಿಗಳಿಗೆ ಹಾಗೂ ಪ್ರತಿಭಾವಂತ ಸಾಹಿತಿಗಳಿಗೆ ಸಾಹಿತ್ಯ ಪರಿಷತ್ತು ಪ್ರೋತ್ಸಾಹ ನೀಡಬೇಕು ಆದರೆ ಇತ್ತೀಚಿನ ವರ್ಷ ಗಳಲ್ಲಿ ಅಂತಹ ವಾತಾವರಣ ಮಾಯವಾಗಿದೆ ಎಂದರು ಎಲ್ಲಾ ಸಾಹಿತ್ಯಾಸಕ್ತರು ಕನ್ನಡ ಪರ ಹೋರಾಟಗಾರರು ಸಾಹಿತಿಗಳು ಸೇರಿ ಸಾಹಿತ್ಯಪರಿಷತ್ತನ್ನು ಸಾಹಿತ್ಯಾತ್ಮಕ ಚಟುವಟಿಕೆ ಗಳ ಕೇಂದ್ರವನ್ನಾಗಿಸಬೇಕಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಾದುದು ಅನಿವಾರ್ಯ ಎಂದರು ಈ ಸಂದರ್ಭದಲ್ಲಿ ಪತ್ರಕರ್ತರುಗಳಾದ ಕೆ.ಅರ್.ಮಂಜುನಾಥ್, ಬಿ.ಅರ್.ಉದಯಕುಮಾರ್,ಹೆಚ್.ಅರ್.ಹರೀಶ್ ಕೋಟೆ,ಪ್ರಕಾಶ್ ಬೆಳವಾಡಿರವರುಗಳು ಡಾ.ಹಂಪನಹಳ್ಳಿ ದಂಪತಿಗಳನ್ನು ಸನ್ಮಾನಿಸಿದರು #ಹಂಪನಹಳ್ಳಿ ತಿಮ್ಮೇಗೌಡರು ಪ್ರಧಾನ  ಸಂಪಾದಕರು:- ಹರೀಶ್ ಹೆಚ್ ಆರ್  ಕೋಟೆ.  ಸುದ್ದಿ ಸಂಪಾದಕರು :- ನಾಗೇಂದ್ರ.ಹೆಚ್.ಎನ್. 

ಶಾಲು ಕೊಡವಿ ಎದ್ದು ಹೋದೆಯಲ್ಲೋ-ಕೋಟೆ ಕಾಲಂ

ಶಾಲು ಕೊಡವಿ ಎದ್ದು..... ಹೋದೆಯಲ್ಲೋ..-ಕೋಟೆ ಕಾಲಂ. ಸಿಕ್ಕಿದಾಗಲೆಲ್ಲಾ ಮೊದಲು ಜಗಳವೇ ಅದಕ್ಕೆ ಕಾರಣವಾಗಲೀ ಇಂತದ್ದೆ ನಿರ್ದಿಷ್ಟ ವಿಚಾರವಾಗಲಿ ಬೇಕೆಂದಿಲ್ಲಾ.. ಒಟ್ಟಾರೆ ಜಗಳವಾಡಿಕೊಂಡೆ ಮಾತಿಗೆ ಶುರುವಿಟ್ಟರೆ ಅರ್ಧ ಗಂಟೆ ಇಬ್ಬರು ಆ ಜಾಗಬಿಟ್ಟು ಕದಲುತ್ತಿರಲಿಲ್ಲ ನಡುವೆ ಅವನಿಗೆ ಪ್ರೀತಿಪಾತ್ರನಾದ ನನ್ನ ಮಗ ಮಯೂರನ ಬಗ್ಗೆ ವಿಚಾರಿಸುವುದನ್ನು ಮರೆಯುತ್ತಿರಲಿಲ್ಲ ಕೊಟ್ಟೂರು ಶ್ರಿನಿವಾಸ ಎಂದರೇ ಮೆಲುಮಾತಿನ ನಗುನಗುತ್ತಲೇ ಇರುವ ಸ್ನೇಹಜೀವಿ ಯಾವತ್ತೂ ಯಾರಿಗೂ ಕೇಡನ್ನು ಬಯಸಲಿಲ್ಲ ಹಣಕಾಸು ಲಾಭದ ಬಗ್ಗೆ ಮಾತನ್ನೇ ಆಡಲಿಲ್ಲ ಅಂತಹ ಗೆಳೆಯ ನಮ್ಮೊಡನಿಲ್ಲಾ ಎಂಬುದನ್ನು ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ ಬಿಸಿಲ ಬೆಂಗಾಡು ಬಳ್ಳಾರಿಯ ಕೊಟ್ಟೂರಿನ ಶ್ರೀನಿವಾಸ ಹಾಸನದ ಕೊಟ್ಟೂರು ಶ್ರೀನಿವಾಸ ನಾಗಿಯೇ ಬದುಕಿದ ವ್ಯಕ್ತಿ ಆತನ ಪತ್ನಿ ಪ್ರಮೀಳ ಅವರಿಗೆ ಸರ್ಕಾರಿ ನೌಕರಿ ಸಿಕ್ಕಿದ್ದರಿಂದ ಅನಿವಾರ್ಯ ವಾಗಿ ಹಾಸನಕ್ಕೆ ಬಂದಾತ ಹಾಸನದ ಮಣ್ಣಿನ ಮಗನಾಗಿ ಇಲ್ಲಿಯೇ ಬದುಕನ್ನು ಮುಗಿಸಿ ಪಂಚಭೂತಗಳಲ್ಲಿ ಲೀನವಾದನು ವಿದ್ಯಾರ್ಥಿ ದಿಸೆಯಲ್ಲಿ ಅರ್ ಎಸ್ ಎಸ್ ನಿಂದ ಆಕರ್ಷಿತರಾಗಿ ಕೆಲಕಾಲ ಸ್ವಯಂಸೇವಕ ರಾಗಿಯೂ ಇದ್ದರು ಅದೇಕೋ ಆತನ ಜಾಯಮಾನಕ್ಕೆ ಒಗ್ಗದ ಕಾರಣ ಅಲ್ಲಿ ಮುಂದುವರೆಯಲಿಲ್ಲ ಹಾಸನಕ್ಕೆ ಬಂದ ಬಳಿಕ ದಲಿತ ಮುಖಂಡ ಚಂದ್ರಪ್ರಸಾದ ತ್ಯಾಗಿ ಅವರ ಸಂಪರ್ಕಕ್ಕೆ ಬಂದವನೆ ದಲಿತ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಸಾಕಷ್ಟು ಹೋರಾಟಗಳಲ್ಲಿ ಸಕ್ರಿಯ