ವಿಮರ್ಶಾ -vimarsha
ಕೋಟೆ ಕಾಲಂ
ಕಸಾಪ ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ.
ಜಿಲ್ಲಾಕನ್ನಡಸಾಹಿತ್ಯ ಪರಿಷತ್ತು ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ ಸಾಹಿತಿಗಳು ವಿಚಾರವಂತರು ಜನಸಾಮಾನ್ಯರು ಅಲ್ಲಿಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಪ್ರತಿಯೊಂದರಲ್ಲಿಯೂ ಹಣ ಮಾಡುವುದನ್ನೆ ರೂಡಿಸಿಕೊಂಡಿದ್ದಾರೆ ಅಧ್ಯಕ್ಷರು ಭ್ರಷ್ಟಾಚಾರದ ಪರಮಾವಧಿ ತಲುಪಿದ್ದಾರೆ
ಈ ವಿಚಾರವನ್ನು ಹೇಳಿದವರು ಯಾರೋ ಹಾದಿಬೀದಿಯಲ್ಲಿ ಹೋಗುವವರಲ್ಲಾ ಈಗಿನ ಜಿಲ್ಲಾ ಕಸಾಪ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡರ ಒಡನಾಡಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಗಂಜಲಗೂಡು ಗೋಪಾಲೇಗೌಡ ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು
ಮೊದಲೇ ಹೊತ್ತಿಉರಿಯುತ್ತಿರುವ ಜಿಲ್ಲಾ ಕಸಾಪ ಚುನಾವಣಾ ಕಣಕ್ಕೆ ಗೋಪಾಲೇಗೌಡರ ಎಂಟ್ರಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಬಿಚ್ಚಿಟ್ಟ ವಿಚಾರಗಳನ್ನು ಗಮನಿಸಿದಾಗ ಪರಿಷತ್ತಿಗೆ ಫಿನಾಯಿಲ್ ಹಾಕಿ ತೊಳೆಯಬೇಕಾದುದು ಅನಿವಾರ್ಯ ಎನಿಸುತ್ತದೆ
ಕಸಾಪ ಜಿಲ್ಲಾಧ್ಯಕ್ಷರ ಮೇಲೆ ನೇರವಾಗಿ ಆರೋಪಿಸಿದ ಗೋಪಾಲೇಗೌಡ ಪರಿಷತ್ತಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ದುನಿಯಾ ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖನ ಬರೆದಾಗ ಮಂಜೇಗೌಡರು ನನ್ನ ಮೇಲೆ ಹಲ್ಲೆಮಾಡಿ ಕೊಲೆಯತ್ನ ನಡೆಸಿದ್ದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಆಪಾದಿಸಿದ್ದು ಮಾತ್ರ ಎಲ್ಲರೂ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿತು
ಈ ಅವ್ಯವಹಾರಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನನ್ನು ತಾಲೂಕು ಅಧ್ಯಕ್ಷಸ್ಥಾನ ದಿಂದ ಕೆಳಗಿಳಿಸಿ ತಮಗೆ ಬೇಕಾದವರನ್ನು ನನ್ನ ಗಮನಕ್ಕೆ ಬಾರದಂತೆ ನೇಮಕ ಮಾಡಿದರು ಹಣ ನೀಡಿದರೆ ಕಸಾಪ ದಲ್ಲಿ ಯಾವುದೇ ಸ್ಥಾನ ಬೇಕಾದರೂ ಲಭ್ಯವಿದೆ ಎಂದು ಗಂಭೀರವಾಗಿ ಆರೋಪಿಸುವ ಮೂಲಕ ಸಾಹಿತ್ಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ
ಸಾಹಿತ್ಯ ಪರಿಷತ್ತಿನ ಲ್ಲಿ ಸನ್ಮಾನ ಬೇಕೆಂದರೂ ಹಣಕೊಡಬೇಕು ಸಮ್ಮೇಳನದ ಅಧ್ಯಕ್ಷ ರಾಗಲೂ ಹಣ ಕೊಡಬೇಕು ಕೆಲವು ಸಮ್ಮೇಳನಾಧ್ಯಕ್ಷರಿಂದಲೂ ಹಣ ಪಡೆಯಲಾಗಿದೆ ಸನ್ಮಾನಿತರಿಂದ ಖುಲ್ಲಂಖುಲ್ಲಾ ಹಣ ಪಡೆಯಲಾಗಿದೆ ಎಂಬ ಗಂಭೀರವಾದ ಆರೋಪ ಸನ್ಮಾನಗಳ ಬಗ್ಗೆ ಆಲೋಚಿಸುವಂತೆ ಮಾಡಿದೆ.
ಸಾಹಿತ್ಯ ಪರಿಷತ್ತಿಗೆ ಸಮ್ಮೇಳನ ನಡೆಸಲು ಸರ್ಕಾರ ಅನುದಾನ ಕೊಡುತ್ತದೆ ಅದರೂ ಸಹ ಇವರುಗಳು ಸಮ್ಮೇಳನಗಳ ಹೆಸರಿನಲ್ಲಿ ಕಂಡಕಂಡಲ್ಲಿ ಹಣ ಸಂಗ್ರಹಿಸಿದ್ದು ಅದಾವುದೂ ಸದುಪಯೋಗ ವಾಗಿಲ್ಲ ಎಂಬ ಗೋಪಾಲೇಗೌಡರ ಆರೋಪ ಕೇಳಿದಾಗ ಇದೇನು ಬಂತಪ್ಪಾ ಸಾಹಿತ್ಯ ಪರಿಷತ್ತಿಗೆ ಎನಿಸದಿರದು
ಚುನಾವಣೆಗೆ ಸ್ಪರ್ಧೆ ನಡೆಸುವುದು ಮಾತ್ರ ನನ್ನ ಉದ್ದೇಶ ವಲ್ಲ ಪರಿಷತ್ತನ್ನು ಕಟ್ಟಿ ಬೆಳೆಸುವುದು ಭ್ರಷ್ಟರು ಅಧಿಕಾರ ನಡೆಸುವುದನ್ನು ತಡೆಯುವುದು ನನ್ನ ಉದ್ದೇಶ ಎಂದಿರುವ ಗೋಪಾಲೇಗೌಡ ಅವರೂ ಸಹ ಯಾರನ್ನು ಇಂದು ದೂರುತ್ತಿದ್ದಾರೋ ಅವರೊಂದಿಗೆ ಇದ್ದವರು ಅವರ ಎಲ್ಲಾ ಕೆಲಸ ಕಾರ್ಯಗಳಲ್ಲಿಯು ಕೈ ಜೋಡಿಸಿದವರು ಅವ್ಯವಹಾರಗಳು ನಡೆದಿದ್ದರೆ ಅದನ್ನು ತಡೆಯದೆ ಇದ್ದದ್ದು ಸಹ ಅಪರಾಧವೇ ಅಲ್ಲವೇ
ತಾಲೂಕು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದಿದ್ದರೆ ಗೋಪಾಲೇಗೌಡ ಈ ರೀತಿಯ ಗಂಭೀರವಾದ ಆರೋಪ ಮಾಡುತ್ತಿದ್ದರೆ ಎಂಬುದು ಚಿಂತಿಸಬೇಕಾದ ವಿಚಾರ
ಸಾಹಿತ್ಯ ಪರಿಷತ್ತಿನ ಚುನಾವಣೆ ಹತ್ತಿರವಾದಂತೆ ಪರಸ್ವರ ಕೆಸರೆರೆಚಾಟ ಆರಂಭವಾಗಿದೆ ಎನಿಸುತ್ತದೆ ಇದರಿಂದಾಗಿ ಹತ್ತುಹಲವು ಹುಳುಕುಗಳು ಹೊರಬರಲಾರಂಭಿಸಿವೆ ಯಾರೂ ಶುದ್ದಹಸ್ತರೂ ಅಲ್ಲಾ ಪೂರ್ಣ ಅಪ್ರಮಾಣಿಕರೂ ಅಲ್ಲಾ ಅವಕಾಶ ಸಿಕ್ಕವನು ಸಿಗದವನು ಇಬ್ಬರ ನಡುವಿನ ಹಗ್ಗಜಗ್ಗಾಟ ಎನಿಸು ತ್ತದೆ
ಒಟ್ಟಾರೆ ಯಾರು ಅರ್ಹರೋ ಅನರ್ಹರೋ ಸರಿಯೋ ತಪ್ಪೋ ಅದು ಬದಿಗಿರಲಿ ಹಣಕಾಸು ಮಾಡುವ ಉದ್ದೇಶ ಹಾಗೂ ಎಲ್ಲವನ್ನೂ ಕಮಿಷನ್ ನಲ್ಲಿಯೇ ಅಳೆಯುವ ಏಜೆಂಟರು ನಾಡುನುಡಿಬಗ್ಗೆ ಗೌರವ ಇಲ್ಲದವರು ಬೊಗಳೆದಾಸರು ಮುಖವಾಡದ ವ್ಯಕ್ತಿ ಗಳನ್ನು ಕಸಾಪ ಸದಸ್ಯರು ದೂರ ಇಟ್ಟು ಉತ್ತಮರನ್ನು ಆಯ್ಕೆ ಮಾಡದಿದ್ದಲ್ಲಿ ಈ ರೀತಿಯ ವಾತಾವರಣ ಮುಂದುವರೆಯಲಿದೆ
ಇನ್ನಾದರೂ ಇಂತಹ ಆರೋಪ ಪ್ರತ್ಯಾರೋಪಗಳಿಗೆ ತೆರೆಬೀಳಲಿ ಎಂದು ಆಶಿಸೋಣ..
ಲೇಖಕರು ಮತ್ತು ಸಂಪಾದಕರು:-
ಹರೀಶ್ ಹೆಚ್ ಆರ್
ಕೋಟೆ.
ಸುದ್ದಿ ಸಂಪಾದಕರು :-
ನಾಗೇಂದ್ರ.ಹೆಚ್. ಎನ್.
Super sir
ಪ್ರತ್ಯುತ್ತರಅಳಿಸಿ