ಹಾಸನ ಜಿಲ್ಲೆಯ ಪತ್ರಕರ್ತರುಗಳಿಂದ
ಜನಪದ ಕ್ಷೇತ್ರದಲ್ಲಿ ರಾಜ್ಯಪ್ರಶಸ್ತಿಗೆ ಭಾಜನರಾದ ಜಾನಪದ ತಜ್ಞ ಡಾ.ಹಂಪನಹಳ್ಳಿ ತಿಮ್ಮೇಗೌಡರಿಗೆ ಅಭಿನಂದನೆ.:-
ಜಿಲ್ಲೆಯಲ್ಲಿ ಎಲ್ಲಾ ಪ್ರಾಕಾರದ ಸಾಹಿತ್ಯ ಹಾಗೂ ಸಾಹಿತಿಗಳು ಶ್ರೀಮಂತವಾಗಿದ್ದಾರೆ ಆದರೆ ಇತ್ತೀಚೆಗೆ ಅದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿಲ್ಲ ಎಂದು ರಾಜ್ಯ ಪ್ರಶಸ್ತಿಗೆ ಭಾಜನರಾದ ಜನಪದ ತಜ್ಞ ಡಾ.ಹಂಪನಹಳ್ಳಿ ತಿಮ್ಮೇಗೌಡ ವಿಷಾದಿಸಿದ್ದಾರೆ
ಇತ್ತೀಚೆಗೆ ತಮ್ಮ ನಿವಾಸದಲ್ಲಿ ಅಭಿನಂದಿಸಿದ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು ಯುವ ಸಾಹಿತಿಗಳಿಗೆ ಹಾಗೂ ಪ್ರತಿಭಾವಂತ ಸಾಹಿತಿಗಳಿಗೆ ಸಾಹಿತ್ಯ ಪರಿಷತ್ತು ಪ್ರೋತ್ಸಾಹ ನೀಡಬೇಕು ಆದರೆ ಇತ್ತೀಚಿನ ವರ್ಷ ಗಳಲ್ಲಿ ಅಂತಹ ವಾತಾವರಣ ಮಾಯವಾಗಿದೆ ಎಂದರು
ಎಲ್ಲಾ ಸಾಹಿತ್ಯಾಸಕ್ತರು ಕನ್ನಡ ಪರ ಹೋರಾಟಗಾರರು ಸಾಹಿತಿಗಳು ಸೇರಿ ಸಾಹಿತ್ಯಪರಿಷತ್ತನ್ನು ಸಾಹಿತ್ಯಾತ್ಮಕ ಚಟುವಟಿಕೆ ಗಳ ಕೇಂದ್ರವನ್ನಾಗಿಸಬೇಕಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕಾದುದು ಅನಿವಾರ್ಯ ಎಂದರು
ಈ ಸಂದರ್ಭದಲ್ಲಿ ಪತ್ರಕರ್ತರುಗಳಾದ ಕೆ.ಅರ್.ಮಂಜುನಾಥ್, ಬಿ.ಅರ್.ಉದಯಕುಮಾರ್,ಹೆಚ್.ಅರ್.ಹರೀಶ್ ಕೋಟೆ,ಪ್ರಕಾಶ್ ಬೆಳವಾಡಿರವರುಗಳು ಡಾ.ಹಂಪನಹಳ್ಳಿ ದಂಪತಿಗಳನ್ನು ಸನ್ಮಾನಿಸಿದರು
#ಹಂಪನಹಳ್ಳಿ ತಿಮ್ಮೇಗೌಡರು
ಪ್ರಧಾನ ಸಂಪಾದಕರು:-
ಹರೀಶ್ ಹೆಚ್ ಆರ್
ಕೋಟೆ.
ಸುದ್ದಿ ಸಂಪಾದಕರು :-
ನಾಗೇಂದ್ರ.ಹೆಚ್.ಎನ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info