ವಿಷಯಕ್ಕೆ ಹೋಗಿ

ಕಸಾಪ ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ-ಕೋಟೆ ಕಾಲಂ

ವಿಮರ್ಶಾ -vimarsha


ಕೋಟೆ ಕಾಲಂ
ಕಸಾಪ ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ.
ಜಿಲ್ಲಾಕನ್ನಡಸಾಹಿತ್ಯ ಪರಿಷತ್ತು ಎಂಕ ನಾಣಿ ಸೀನರ ಹಿಡಿತದಲ್ಲಿ ನಲುಗಿದೆ ಸಾಹಿತಿಗಳು ವಿಚಾರವಂತರು ಜನಸಾಮಾನ್ಯರು ಅಲ್ಲಿಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಪ್ರತಿಯೊಂದರಲ್ಲಿಯೂ ಹಣ ಮಾಡುವುದನ್ನೆ ರೂಡಿಸಿಕೊಂಡಿದ್ದಾರೆ ಅಧ್ಯಕ್ಷರು ಭ್ರಷ್ಟಾಚಾರದ ಪರಮಾವಧಿ ತಲುಪಿದ್ದಾರೆ 
ಈ ವಿಚಾರವನ್ನು ಹೇಳಿದವರು ಯಾರೋ ಹಾದಿಬೀದಿಯಲ್ಲಿ ಹೋಗುವವರಲ್ಲಾ ಈಗಿನ ಜಿಲ್ಲಾ ಕಸಾಪ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡರ ಒಡನಾಡಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಗಂಜಲಗೂಡು ಗೋಪಾಲೇಗೌಡ ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು 
ಮೊದಲೇ ಹೊತ್ತಿಉರಿಯುತ್ತಿರುವ ಜಿಲ್ಲಾ ಕಸಾಪ ಚುನಾವಣಾ ಕಣಕ್ಕೆ ಗೋಪಾಲೇಗೌಡರ ಎಂಟ್ರಿ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಬಿಚ್ಚಿಟ್ಟ ವಿಚಾರಗಳನ್ನು ಗಮನಿಸಿದಾಗ ಪರಿಷತ್ತಿಗೆ ಫಿನಾಯಿಲ್ ಹಾಕಿ ತೊಳೆಯಬೇಕಾದುದು ಅನಿವಾರ್ಯ ಎನಿಸುತ್ತದೆ
ಕಸಾಪ ಜಿಲ್ಲಾಧ್ಯಕ್ಷರ ಮೇಲೆ ನೇರವಾಗಿ ಆರೋಪಿಸಿದ ಗೋಪಾಲೇಗೌಡ ಪರಿಷತ್ತಿನಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ದುನಿಯಾ ಎಂಬ ಶೀರ್ಷಿಕೆ ಅಡಿಯಲ್ಲಿ ಲೇಖನ ಬರೆದಾಗ ಮಂಜೇಗೌಡರು ನನ್ನ ಮೇಲೆ ಹಲ್ಲೆಮಾಡಿ ಕೊಲೆಯತ್ನ ನಡೆಸಿದ್ದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಆಪಾದಿಸಿದ್ದು ಮಾತ್ರ ಎಲ್ಲರೂ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿತು
ಈ ಅವ್ಯವಹಾರಗಳ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನನ್ನು ತಾಲೂಕು ಅಧ್ಯಕ್ಷಸ್ಥಾನ ದಿಂದ ಕೆಳಗಿಳಿಸಿ ತಮಗೆ ಬೇಕಾದವರನ್ನು ನನ್ನ ಗಮನಕ್ಕೆ ಬಾರದಂತೆ ನೇಮಕ ಮಾಡಿದರು ಹಣ ನೀಡಿದರೆ ಕಸಾಪ ದಲ್ಲಿ ಯಾವುದೇ ಸ್ಥಾನ ಬೇಕಾದರೂ ಲಭ್ಯವಿದೆ ಎಂದು ಗಂಭೀರವಾಗಿ ಆರೋಪಿಸುವ ಮೂಲಕ ಸಾಹಿತ್ಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ
ಸಾಹಿತ್ಯ ಪರಿಷತ್ತಿನ ಲ್ಲಿ ಸನ್ಮಾನ ಬೇಕೆಂದರೂ ಹಣಕೊಡಬೇಕು ಸಮ್ಮೇಳನದ ಅಧ್ಯಕ್ಷ ರಾಗಲೂ ಹಣ ಕೊಡಬೇಕು ಕೆಲವು ಸಮ್ಮೇಳನಾಧ್ಯಕ್ಷರಿಂದಲೂ ಹಣ ಪಡೆಯಲಾಗಿದೆ ಸನ್ಮಾನಿತರಿಂದ ಖುಲ್ಲಂಖುಲ್ಲಾ ಹಣ ಪಡೆಯಲಾಗಿದೆ ಎಂಬ ಗಂಭೀರವಾದ ಆರೋಪ ಸನ್ಮಾನಗಳ ಬಗ್ಗೆ ಆಲೋಚಿಸುವಂತೆ ಮಾಡಿದೆ.

ಸಾಹಿತ್ಯ ಪರಿಷತ್ತಿಗೆ ಸಮ್ಮೇಳನ ನಡೆಸಲು ಸರ್ಕಾರ ಅನುದಾನ ಕೊಡುತ್ತದೆ ಅದರೂ ಸಹ ಇವರುಗಳು ಸಮ್ಮೇಳನಗಳ ಹೆಸರಿನಲ್ಲಿ ಕಂಡಕಂಡಲ್ಲಿ ಹಣ ಸಂಗ್ರಹಿಸಿದ್ದು ಅದಾವುದೂ ಸದುಪಯೋಗ ವಾಗಿಲ್ಲ ಎಂಬ ಗೋಪಾಲೇಗೌಡರ ಆರೋಪ ಕೇಳಿದಾಗ ಇದೇನು ಬಂತಪ್ಪಾ ಸಾಹಿತ್ಯ ಪರಿಷತ್ತಿಗೆ ಎನಿಸದಿರದು
ಚುನಾವಣೆಗೆ ಸ್ಪರ್ಧೆ ನಡೆಸುವುದು ಮಾತ್ರ ನನ್ನ ಉದ್ದೇಶ ವಲ್ಲ ಪರಿಷತ್ತನ್ನು ಕಟ್ಟಿ ಬೆಳೆಸುವುದು ಭ್ರಷ್ಟರು ಅಧಿಕಾರ ನಡೆಸುವುದನ್ನು ತಡೆಯುವುದು ನನ್ನ ಉದ್ದೇಶ ಎಂದಿರುವ ಗೋಪಾಲೇಗೌಡ ಅವರೂ ಸಹ ಯಾರನ್ನು ಇಂದು ದೂರುತ್ತಿದ್ದಾರೋ ಅವರೊಂದಿಗೆ ಇದ್ದವರು ಅವರ ಎಲ್ಲಾ ಕೆಲಸ ಕಾರ್ಯಗಳಲ್ಲಿಯು ಕೈ ಜೋಡಿಸಿದವರು ಅವ್ಯವಹಾರಗಳು ನಡೆದಿದ್ದರೆ ಅದನ್ನು ತಡೆಯದೆ ಇದ್ದದ್ದು ಸಹ ಅಪರಾಧವೇ ಅಲ್ಲವೇ
ತಾಲೂಕು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸದಿದ್ದರೆ ಗೋಪಾಲೇಗೌಡ ಈ ರೀತಿಯ ಗಂಭೀರವಾದ ಆರೋಪ ಮಾಡುತ್ತಿದ್ದರೆ ಎಂಬುದು ಚಿಂತಿಸಬೇಕಾದ ವಿಚಾರ
ಸಾಹಿತ್ಯ ಪರಿಷತ್ತಿನ ಚುನಾವಣೆ ಹತ್ತಿರವಾದಂತೆ ಪರಸ್ವರ ಕೆಸರೆರೆಚಾಟ ಆರಂಭವಾಗಿದೆ ಎನಿಸುತ್ತದೆ ಇದರಿಂದಾಗಿ ಹತ್ತುಹಲವು ಹುಳುಕುಗಳು ಹೊರಬರಲಾರಂಭಿಸಿವೆ ಯಾರೂ ಶುದ್ದಹಸ್ತರೂ ಅಲ್ಲಾ ಪೂರ್ಣ ಅಪ್ರಮಾಣಿಕರೂ ಅಲ್ಲಾ ಅವಕಾಶ ಸಿಕ್ಕವನು ಸಿಗದವನು ಇಬ್ಬರ ನಡುವಿನ ಹಗ್ಗಜಗ್ಗಾಟ ಎನಿಸು ತ್ತದೆ
ಒಟ್ಟಾರೆ ಯಾರು ಅರ್ಹರೋ ಅನರ್ಹರೋ ಸರಿಯೋ ತಪ್ಪೋ  ಅದು ಬದಿಗಿರಲಿ ಹಣಕಾಸು ಮಾಡುವ ಉದ್ದೇಶ ಹಾಗೂ ಎಲ್ಲವನ್ನೂ ಕಮಿಷನ್ ನಲ್ಲಿಯೇ ಅಳೆಯುವ ಏಜೆಂಟರು ನಾಡುನುಡಿಬಗ್ಗೆ ಗೌರವ ಇಲ್ಲದವರು ಬೊಗಳೆದಾಸರು ಮುಖವಾಡದ ವ್ಯಕ್ತಿ ಗಳನ್ನು ಕಸಾಪ ಸದಸ್ಯರು ದೂರ ಇಟ್ಟು ಉತ್ತಮರನ್ನು ಆಯ್ಕೆ ಮಾಡದಿದ್ದಲ್ಲಿ ಈ ರೀತಿಯ ವಾತಾವರಣ ಮುಂದುವರೆಯಲಿದೆ
ಇನ್ನಾದರೂ ಇಂತಹ ಆರೋಪ ಪ್ರತ್ಯಾರೋಪಗಳಿಗೆ ತೆರೆಬೀಳಲಿ ಎಂದು ಆಶಿಸೋಣ..


ಲೇಖಕರು ಮತ್ತು ಸಂಪಾದಕರು:-

ಹರೀಶ್ ಹೆಚ್ ಆರ್ 
ಕೋಟೆ. 

ಸುದ್ದಿ ಸಂಪಾದಕರು :-

ನಾಗೇಂದ್ರ.ಹೆಚ್. ಎನ್. 


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Vimarsha.info

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಆರೋಗ್ಯ ಮತ್ತು ಸಂತ್ರೃಪ್ತ ಜೀವನ

ಬಂಧುಗಳೇ, ಪ್ರತಿಯೊಂದು ಜನರು ನೆಮ್ಮದಿಯಿಂದ ಬದುಕಲು ಇಷ್ಟಪಡುತ್ತಾರೆ, ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ  ಮುಖ್ಯ ಸಮಸ್ಯೆಗಳು ಅಂದರೆ ಆರೋಗ್ಯ ಮತ್ತು ಹಣಕಾಸು ಮತ್ತು  ಉದ್ಯೋಗ ಭದ್ರತೆ. ನಮ್ಮಲ್ಲಿ ಮೇಲ್ಕಂಡ  ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರವಿದೆ , ನೀವು ಆತಂಕ ಪಡುವ ಅಗತ್ಯವಿಲ್ಲ, ಬನ್ನಿ ನಮ್ಮೂಡನೆ ಸೇರಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳರಿ.   ನಾವು ಸಂವಹನ ಮಾಡಲು ಅಂತರ್ಜಾಲ ಮತ್ತು ನೇರ ಭೇಟಿ ಕಾರ್ಯಕ್ರಮ ಮೂಲಕ  ಕೆಲವೊಂದು ಮಾರ್ಗದರ್ಶನಗಳನ್ನು ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನಮಗೆ ಕಳುಹಿಸಿದರೆ, ಮಾರ್ಗದರ್ಶನ ಅವಕಾಶ ನಿಮಗೆ ಲಭಿಸುತ್ತದೆ.

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...