ಆ.ಕ.ಬ್ರಾ.ಮ.ಸ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ , ಕೇಂದ್ರ ಸಚಿವ ಶ್ರೀ ಪ್ರಹ್ಲಾದ ಜೋಶಿರೊಡನೆ ಭೇಟಿ ಸಮಸ್ಯೆಗಳ ಬಗ್ಗೆ ಸಮಾಲೋಚನೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಆವರು ಮಹಾಸಭಾದ ಪದಾಧಿಕಾರಿಗಳೊಂದಿಗೆ ಹಾಗೂ ಹುಬ್ಬಳಿಯ ಸ್ಥಳೀಯ ವಿಪ್ರ ಮುಖಂಡರೊಡಗೂಡಿ ದಿನಾಕ ೦9/೦5 /2022 ರಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ವಿಪ್ರ ಬಂಧುಗಳ ಕುಂದು ಕೊರತೆಗಳ ಬಗ್ಗೆ ಸಮಾಲೋಚಿಸಿದರು , ಪ್ರಮುಖವಾಗಿ ಸಮಾಲೋಚಿಸಿದ ಅಂಶಗಳು ಈ ಕೆಳ ಕಂಡತಿವೆ
1.EWS certificate ಪರಿಧಿಯ ವ್ಯಾಪ್ತಿ ವಿಸ್ತಾರ ಹೆಚ್ಚಿಸುವುದು (ಅಂದರೆ ಪ್ರಸ್ತುತ EWS Certificate annu ಕೇವಲ ಒಂದು ವರ್ಷಕ್ಕೆ ನೀಡಲಾಗುತ್ತಿದೆ ಅದನ್ನು ಒಂದು ವರ್ಷದಿಂದ ಕನಿಷ್ಟ 3 ರಿಂದ 5 ವರ್ಷದ ಅವಧಿಗೆ ನೀಡುವುದು) ಶಿಕ್ಷಣ ಕ್ಷೇತ್ರದಲ್ಲಿ ಸೂಕ್ತ ಮೀಸಲಾತಿ (10 %)
2.ಸರ್ಕಾರದ ಪತ್ರಿಕಾ ಜಾಹೀರಾತು ನೀತಿಯಲ್ಲಿ ವಿಪ್ರ ಭಾಂದವರು ನಡೆಸುತ್ತಿರುವ ಪತ್ರಿಕೆಗಳಿಗೂ ಸೂಕ್ತ ಜಾಹೀರಾತು ಅವಕಾಶವನ್ನು ಕಲ್ಪಿಸಿ ಕೊಡುವುದು
3.ಹುಬ್ಬಳಿಯಲ್ಲಿ ವಿಪ್ರ ಸಮುದಾಯಕ್ಕೆ ಈಗಾಗಲೇ ಅನುದಾನವಾಗಿರುವ ಜಾಗೆಯಲ್ಲಿ ವಿಪ್ರ ಸಮುದಾಯದ ಅನುಕೂಲಕ್ಕೆ ಗಾಯತ್ರಿ ಭವನದ ನಿರ್ಮಾಣ ಹಾಗೂ ಅದರ ರೂಪು ರೇಶೆಗಳ ಬಗ್ಗೆ ಸಚಿವರೊಡನೆ ಮಾತುಕತೆ.
ಈ ವಿಚಾರ ಬಗೆಯಲ್ಲಿ ಸನ್ಮಾನ್ಯ ಶ್ರೀ ಅಶೋಕ್ ಹಾರ್ಳ್ರು ತಮ್ಮ ಟ್ಟಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ ಟ್ವಿಟ್ಟರ್ ಕೊಂಡಿಯನ್ನು ಕೆಳಗೆ ನೀಡಲಾಗಿದೆ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info