ಲೇಖಕರು ಮತ್ತು ಸಂಪಾದಕರು
ಹರೀಶ್ ಹೆಚ್ ಆರ್ ಕೋಟೆ
ಬೇಡಾ ಬೇಡಾ ಎಂದ್ರೂ ....ಕಸಾಪ...
ಕೋಟೆ ಕಾಲಂ
ಎಡವಿದಕಾಲೇ ಎಡವುವಂತೆ ಬೇಡದ ನೆಂಟರೇ ಸದಾ ಮನೆಗೆ ವಕ್ಕರಿಸಿಕೊಳ್ಳುವಂತೆ ಬರೆಯುವುದೇ ಬೇಡಾ ಎಂದುಕೊಂಡರೂ ಸಾಹಿತ್ಯ ಪರಿಷತ್ತಿನ ಬಗ್ಗೆ ಬರೆಯದೇ ಇರಲು ಸಾಧ್ಯವಾಗುವುದೇ ಇಲ್ಲಾ
ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು ಬಹುತೇಕರಿಗೆ ಅವರವರ ಮೆಂಟಾಲಿಟಿಗೆ ತಕ್ಕಂತೆ ಮುಖ್ಯ ರಸ್ತೆಯಲ್ಲಿರುವ ಬೆಲೆಬಾಳುವ ಹಾಗೂ ಬಾಡಿಗೆ ತರುವ ಕಟ್ಟಡವಾಗಿ ಕೆಲವರಿಗೆ ಸುಂದರ ಕಟ್ಟಡವಾಗಿ ಮತ್ತೆ ಕೆಲವರಿಗೆ ಜುಬ್ಬಾಧಾರಿ ಸಾಹಿತಿಗಳು ಓಡಾಡುವ ಮತ್ರೆ ಕೆಲವರಿಗೆ ಎಲ್ಲೋ ಇರಬೇಕಾದವರೆಲ್ಲಾ ಇಲ್ಲಿದ್ದಾರಲ್ಲಾ ಎಂಬ ಅಚ್ಚರಿ ಮೂಡಿಸುತ್ತದೆ
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸ ಗಮನಿಸಿದಾಗ ನಿಜಕ್ಕೂ ಅದ್ಬುತವಾದ ವ್ಯಕ್ತಿಗಳು ಸೇವೆಸಲ್ಲಿಸಿರುವುದು ಕಂಡು ಬರುತ್ತದೆ ಅದೇ ರೀತಿ ಕಾಲಘಟ್ಟ ಕಳೆದಂತೆ ಎಲ್ಲೋ ಒಂದುಕಡೆ ಎಲ್ಲೂ ಸಲ್ಲದವರೂ.ಇಲ್ಲಿ ಸಲ್ಲಿದ್ದಾರಲ್ಲಾ.ಅನಿಸುತ್ತದೆ
ಆರಂಭದ ದಶಕಗಳಿಂದಲೂ ಬಹುಪಾಲು ಹೆಚ್.ಬಿ.ಜ್ವಾಲನಯ್ಯನವರೇ ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದರು ಆ ಅವಧಿಯಲ್ಲಿ ಸಾಕಷ್ಟು ಕಾರ್ಯಕ್ರಮ ರೂಪಿಸಿದ ಅವರು ನಗರಸಭೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ಜ್ಯುಬಿಲಿ ಫಿಲ್ಡ್ ಎಂದೇ ಪ್ರಸಿದ್ದವಾಗಿದ್ದ ಬ್ರಹತ್ ಮೈದಾನದಲ್ಲಿ ಕೇವಲ 101 ರೂಪಾಯಿ ಕಿಮ್ಮತ್ತು ಕಟ್ಟಿ ನೂರು ಅಡಿ ಅಗಲ ಹಾಗೂ ಮುನ್ನೂರು ಅಡಿ ಉದ್ದ ಇರುವ ನಿವೇಶನವನ್ನು ಮಂಜೂರು ಮಾಡಿಸಿ ಕೊಳ್ಳುವ ಮೂಲಕ ಪರಿಷತ್ತಿಗೆ ಯಾರೂ ನೀಡದ ಕೊಡುಗೆ ಕೊಟ್ಟರು
ರಾಜ್ಯಮಟ್ಟದಲ್ಲಿಯೂ ಖ್ಯಾತರಾಗಿದ್ದ ಜ್ವಾಲನಯ್ಯ ರಾಜ್ಯಾದ್ಯಕ್ಷರಾಗಿಯೂ ಆಯ್ಕೆಯಾಗಿ ಎರಡು ವರ್ಷ ಕೆಲಸಮಾಡಿದರು
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಜಿಲ್ಲೆಯಲ್ಲಿಯೇ ಸಾಹಿತಿಗಳು ಕೈ ಕೊಟ್ಟಿದ್ದರಿಂದ ಬೇಸತ್ತಿದ್ದ ಅವರು ತಾವು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ ತೆರಳುವಾಗ ಹಂಗಾಮಿ ಜಿಲ್ಲಾಧ್ಯಕ್ಷರನ್ನಾಗಿ ತಮ್ಮ ಆಪ್ತ ಮಾಣಿಕ್ಯರಾಜು ಅವರನ್ನು 1986 ರಲ್ಲಿ ನಿಯೋಜಿಸಿದ್ದರು
ಕೆಲ ತಿಂಗಳುಗಳ ಕಾಲ ಅಧಿಕಾರದಲ್ಲಿದ್ದ ಮಾಣಿಕ್ಯ ರಾಜು ಡಾ.ಹೆಚ್.ಎಸ್.ನಿಂಗಪ್ಪ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಿರ್ಗಮಿಸಿದರು
1986ರಿಂದ ಎರಡು ವರ್ಷಗಳ ಕಾಲ ಕೆಲಸ ಮಾಡಿದ ನಿಂಗಪ್ಪ ಆ ನಂತರ ಹೆಚ್ಚು ಪರಿಷತ್ತಿನ ಚಟುವಟಿಕೆಗಳಲ್ಲಿ ಕಾಣಿಸಿಕೊಳ್ಳಲಿಲ್ಲ
ಆ ನಂತರದಲ್ಲಿ 1989 ರಿಂದ 1995 ರ ವರೆಗೆ ನಿರಂತರವಾಗಿ ಮಾ.ಹನುಮಂತೇಗೌಡ ಸುಧೀರ್ಘ ಕಾಲ ಅಧ್ಯಕ್ಷರಾಗಿದ್ದರು ಆ ಸಂದರ್ಭದಲ್ಲಿ ಮಹಾರಾಜ ಪಾರ್ಕ್ ಪರಿಷತ್ತಿನ ಮೀಟಿಂಗ್ ತಾಣವಾಗಿತ್ತು ಸದಸ್ಯರು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದ್ದ ಸಂದರ್ಭದಲ್ಲಿ ಇದಕ್ಕಿಂತ ಹೆಚ್ಚಿನ ನಿರೀಕ್ಷೆ ಯಾರಲ್ಲಿಯೂ ಇರಲಿಲ್ಲ
ಆ ನಂತರ ಹನುಮಂತೇಗೌಡರ ಅವಧಿಯಲ್ಲಿ ಕಾರ್ಯದರ್ಶಿಯಾಗಿದ್ದ ಬಿ.ಎನ್.ರಾಮಸ್ವಾಮಿ ಎದುರಾಳಿ ಗಂಗೇಗೌಡ ಅವರನ್ನು ಕೆಲವೇ ಮತಗಳ ಅಂತರದಲ್ಲಿ ಮಣಿಸಿ ತಮ್ಮ ಬಹುವರುಷದ ಆಸೆಯನ್ನು ಈಡೇರಿಸಿಕೊಂಡಿದ್ದರು
ಆ ಸಂದರ್ಭದಲ್ಲಿ ಅಖಿಲಭಾರತ ಸಾಹಿತ್ಯಸಮ್ಮೇಳನ ನಡೆಯಿತು ದೇವೇಗೌಡರು ಪ್ರಧಾನಿಯಾಗಿದ್ದರು ಇಡೀ ಅಡಳಿತ ಯಂತ್ರವೇ ಹಾಸನದಲ್ಲಿತ್ತು ಅಂತಹ ಸುವರ್ಣ ಅವಕಾಶ ರಾಮಸ್ವಾಮಿ ಅವರಿಗೆ ದೊರಕಿತು
ಈಗಿನ ಕೆಲವರಿಗೆ ಅಂತಹ ಅವಕಾಶ ಸಿಕ್ಕಿದ್ದರೆ ಬಂಗಾರದ ಮನೆಯನ್ನೆ ಕಟ್ಟುತ್ತಿದ್ದರೋ ಏನೋ ಆದರೆ ರಾಮಸ್ವಾಮಿ ಪಾರದರ್ಶಕ ವಾಗಿ ನಿಭಾಯಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು
ಅವರ ಅವಧಿಯ ನಂತರ1998 ರಲ್ಲಿ ಎದುರಾಳಿಯನ್ನು ಕೇವಲ ಒಂದು ಮತದ ಅಂತರದಲ್ಲಿ ಮಣಿಸಿ ಅಧಿಕಾರಕ್ಕೆ ಬಂದ
ಎ.ಜಿ.ಹರಿಗೋಪಾಲ್ ನಿಜಕ್ಕೂ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತಿಗೆ ನೀಡಿದ ಕೊಡುಗೆ ಎಂದೂ ಮರೆಯಲಾಗದು
ಅದುವರೆಗೂ ಹಾಳುಬಿದ್ದಿದ್ದ ನಿವೇಶನದಲ್ಲಿ ಸುಂದರವಾದ ಕಟ್ಟಡ ನಿರ್ಮಿಸಿದರು
ಅದರಲ್ಲಿ ಒಂದು ದಿವಸವೂ ಕುಳಿತು ಕೊಳ್ಳದ ಅವರು ಕಟ್ಟಡ ಪೂರ್ಣವಾದಂತೆ ಅವಧಿಯೂ ಮುಗಿದ ಕಾರಣ ಅಧಿಕಾರದಿಂದ ನಿರ್ಗಮಿಸಿದರು
2001ರಿಂದ2004 ರ ವರೆಗೆಅಧಿಕಾರದಲ್ಲಿದ್ದ ಯುವಕ ಮದನಗೌಡ ಅಷ್ಟರಲ್ಲಾಗಲೇ ಪತ್ರಿಕಾ ರಂಗದಲ್ಲಿ ಹೆಸರು ಮಾಡಿದ್ದರು
ಅದನ್ನು ಬಳಸಿಕೊಂಡು ಪರಿಷತ್ತಿನ ಕಟ್ಟಡವನ್ನು ಸಾಂಸ್ಕ್ರತಿಕ ಹಾಗೂ ಸಾಹಿತ್ಯದ ಕೇಂದ್ರವನ್ನಾಗಿಸಿದರು
ಬಹುವರ್ಷಗಳಿಂದ ಮರೆತೇ ಹೋಗಿದ್ದ ಜಿಲ್ಲಾ ತಾಲೂಕು ಸಮ್ಮೇಳನಗಳಿಗೆ ಚಾಲನೆ ನೀಡಿದರು
ಜನಸಾಮಾನ್ಯರು ಹಾಗೂ ನಾಡುನುಡಿಯ ಪರ ಹೋರಾಟ ಗಾರರನ್ನು ಪರಿಷತ್ತಿಗೆ ಬರುವಂತೆ ಮಾಡಿದರು ಒಟ್ಟಾರೆಯಾಗಿ ಪರಿಷತ್ತನ್ನು ಮದನಗೌಡರು ಜನರ ಬಳಿಗೆ ತರುವ ಮೂಲಕ ಪ್ರಶಂಸೆಗೆ ಪಾತ್ರರಾದರು
ಯೋಗ ಗುರು ಹೆಚ್.ಬಿ.ರಮೇಶ್ ತಮ್ಮ ಖಡಕ್ ಮಾತುಗಳಿಂದಾಗಿ ಹೆಸರಾದವರು ಇವರು ಅಧ್ಯಕ್ಷರಾದಾಗ ವಯಸ್ಸು ಹಾಗು ಅವರ ಸ್ವಭಾವ ಸಾಹಿತ್ಯಾಸಕ್ತರಲ್ಲಿ ಅವರು ಯಾವರೀತಿ ಕಾರ್ಯನಿರ್ವಹಿಸಬಹುದು ಎಂಬ ಆತಂಕವಿತ್ತು
ಅದರೆ ಯುವಕರು ನಾಚಿಸುವಂತೆ ಕಾರ್ಯಕ್ರಮ ರೂಪಿಸಿ ಪರಿಷತ್ತಿಗೆ ಸಾತ್ವಿಕ ಕಳೆ ತಂದುಕೊಟ್ಟರು
ಮದನಗೌಡರ ಅವಧಿಯಲ್ಲಿ ಗೌರವ ಕಾರ್ಯದರ್ಶಿ ಯಾಗಿದ್ದ ಉದಯ ರವಿ ತಮ್ಮದೇ ಅದ ಕಾರ್ಯವಿಧಾನಗಳ ಮೂಲಕ ಪರಿಷತ್ತಿನ ಆಶಯಕ್ಕೆ ಭಂಗ ಬಾರದಂತೆ ಕೆಲಸಮಾಡಿದರು ಪುಸ್ತಕ ಪ್ರಕಟಣೆಗೆ ಅದ್ಯತೆ ನೀಡಿದ ಅವರು ಹಲವಾರು ಸಾಹಿತಿಗಳಿಗೆ ಪುಸ್ತಕ ಪ್ರಕಟಣೆಗೆ ಸಹಕಾರ ನೀಡಿದರು
ಅದರಲ್ಲಿಯೂ ಕುವೆಂಪು ಪ್ರತಿಮೆ ಯನ್ನು ಪರಿಷತ್ತಿನ ಮುಂಭಾಗದಲ್ಲಿ ಸ್ಥಾಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು
ವ್ರತ್ತಿಯಲ್ಲಿ ವೈದ್ಯರಾದ ಡಾ.ಜನಾರ್ದನ್ ನಾಯಕರ ಹಳ್ಳಿ ಮಂಜೇಗೌಡರನ್ನು ಮಣಿಸಿ2012 ರಿಂದ15 ರ ವರೆಗೆ ಅಧ್ಯಕ್ಷ ರಾಗಿದ್ದರು
ಸಾಹಿತ್ಯಾತ್ಮಕವಾಗಿ ಅಂತಹ ಚಟುವಟಿಕೆಗಳು ನಡೆಯಲಿಲ್ಲವಾದರೂ ಯಾವುದೇ ಲೋಪ ವಿಲ್ಲದಂತೆ ಪರಿಷತ್ತನ್ನು ನಡೆಸಿಕೊಂಡು ಅವಧಿ ಮುಗಿಸಿದರು
ತಮ್ಮ ಸ್ನೇಹಿತರ ಬಳಗಕ್ಕೆ ಮಾತ್ರ ಮಣೆ ಹಾಕಿದರಾದರೂ ಅದರಿಂದ ಸಮಸ್ಯೆಗಳೇನು ಉದ್ಬವವಾಗಲಿಲ್ಲಾ
ಇವರ ಅವಧಿಯಲ್ಲಿ ಶ್ರವಣಬೆಳಗೊಳದ ಲ್ಲಿ ಅಖಿಲಭಾರತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದ್ದು ಜನಾರ್ಧನ್ ಅವರಿಗೆ ಗರಿ ಮೂಡಿಸಿದೆ
ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ಎಂಬಂತೆ ಸೋತರೂ ಛಲ ಬಿಡದೆ ಗೆದ್ದ ನಾಯಕರಹಳ್ಳಿ ಮಂಜೇಗೌಡ ಅದ್ರಷ್ಟವಂತ ಅಧ್ಯಕ್ಷ
ಮನು ಬಳಿಗಾರ್ ಕೇಂದ್ರ ಕ.ಸಾ.ಪ ಅಧ್ಯಕ್ಷರಾದಾಗಲೇ ಅತನ ಹಪಾಹಪಿತನ ಕಂಡಿದ್ದವರು ಅಧಿಕಾರ ಸುಲಭವಾಗಿ ಬಿಡುವ ಗಿರಾಕಿಯಲ್ಲ ಎಂದಿದ್ದರು
ಅಂತೆಯೆ ಆತನನ್ನು ಕೆಳಗಿಳಿಸಲು ನ್ಯಾಯಾಲಯದ ಮೊರೆ ಹೋಗಬೇಕಾಯಿತು ಆತನ ಕ್ರಪೆಯಿಂದ ಮಂಜೇಗೌಡರು ಐದು ವರ್ಷಗಳ ಕಾಲ ಅಧ್ಯಕ್ಷಗಿರಿ ಅನುಭವಿಸಿದರು
ಸಮ್ಮೇಳನಗಳು ನಡೆಸಿದ್ದು ಒಂದೆಡೆಯಾದರೆ ಸದಾ ಒಂದಿಲ್ಲೊಂದು ವಿವಾದ ಹೊತ್ತುಕೊಂಡೇ ಅಧಿಕಾರ ನಡೆಸಿದರು
ಆರಂಭದಲ್ಲಿ ಇವರೊಂದಿಗಿದ್ದ ಮಿತ್ರರು ಬೆಂಬಲಿಗರು ಪದಾಧಿಕಾರಿಗಳು ನೋಡನೋಡುತ್ತಲೇ ಅವರಿಂದ ದೂರ ಸರಿದಿದ್ದರು ಬೆರಳೆಣಿಕೆ ವ್ಯಕ್ತಿಗಳು ಹೊರತು ಪಡಿಸಿದರೆ ಸಾಹಿತ್ಯ ಪರಿಷತ್ತಿನೆಡೆ ಸುಳಿಯುವವರ ಸಂಖ್ಯೆ ಕಡಿಮೆಯಾಯಿತು
ಪ್ರಥಮ ಬಾರಿಗೆ ಗೌರವಾಧ್ಯಕ್ಷ ಸ್ಥಾನವನ್ನು
ಸೃಸ್ಷ್ಟಿಸಿ ಅಧಿಕಾರ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಿದ ಹೆಗ್ಗಳಿಕೆ ಇವರದ್ದು
ಇದು ಇಲ್ಲಿಯ ವರೆಗಿನ ಜಿಲ್ಲಾ ಕಸಾಪ ಅಧ್ಯಕ್ಷರ ಕುರಿತ ಪಕ್ಷಿನೋಟ ವಾಗಿತ್ತು
ಜ್ವಾಲನಯ್ಯ ಅವರಿಂದ ಹಿಡಿದು ನಾಯಕರ ಹಳ್ಳಿ ಮಂಜೇಗೌಡ ವರೆಗೆ ಅಧ್ಯಕ್ಷರುಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಇದು ಮುಂದೆ ಬರಲು ಕಾದಿರುವ ಆಕಾಂಕ್ಷಿಗಳಿಗೆ ಸವಾಲಾಗಿದೆ
ಈಗಾಗಲೇ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಚುನಾವಣೆ ಗಾಗಿ ಸಿದ್ದತೆ ಭರದಿಂದ ಸಾಗಿದೆ
ಈ ಬಾರೀ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದು ಕೆಲವರು ಬಿರುಸಿನ ಪ್ರಚಾರ ಜಿಲ್ಲಾ ಪ್ರವಾಸದಲ್ಲಿ ತೊಡಗಿದ್ದಾರೆ
ಉಳಿದಂತೆ ಸಾಹಿತ್ಯ ಪರಿಷತ್ತಿನಲ್ಲಿ ಪದಾಧಿಕಾರಿಗಳಾಗಿದ್ದವರು ಈ ಹಿಂದಿನ ಚುನಾವಣೆಗಳಲ್ಲಿ ಸೋತವರು ಮರಳಿ ಯತ್ನವ ಮಾಡುವ ಉಮೇದಿನಲ್ಲಿದ್ದಾರೆ
ಇದೇ ಪ್ರಥಮ ಬಾರಿಗೆ ದಲಿತ ಸಮುದಾಯದವರಿಗೆ ಅಧ್ಯಕ್ಷರಾಗಲು ಅವಕಾಶ ನೀಡಿ ಎಂಬ ವಿಚಾರ ಕೇಳಿ ಬರುತ್ತಿದೆ ಆದರೆ ಸಾಹಿತ್ಯ ಪರಿಷತ್ ಮತದಾರರ ವಲಯದಲ್ಲಿ ಈ ಬಾರೀ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನೇ ಅಧ್ಯಕ್ಷರನ್ನಾಗಿಸಬೇಕೆಂಬ ವಿಚಾರ ಕೇಳಿ ಬರುತ್ತಿದೆ.
ಅದರಲ್ಲಿಯೂ ಹಂಪನಹಳ್ಳಿ ತಿಮ್ಮೇಗೌಡ ಡಾ.ಮಲ್ಲೇಶಗೌಡ ಅಂತವರ ಹೆಸರು ಮುಂಚೂಣಿಯಲ್ಲಿದೆ ಈ ನಡುವೆ ರಾಜಕಾರಣ ಸಹ ಪ್ರವೇಶ ಪಡೆದಿದೆ ಮುಂದೇ ಮಾತ್ರ ಕಾದಿದೆ ರೋಚಕ ಚುನಾವಣೆ....
#ಕಸಾಪ
#ಚುನಾವಣೆ
#ಹಾಸನ
#ವಿಮರ್ಶಾ-vimarsha
*ಹರೀಶ್ ಹೆಚ್ ಆರ್
Super sir Madan how Dara halmidi Shasana baggenu baribekkithu
ಪ್ರತ್ಯುತ್ತರಅಳಿಸಿ