ಘಟನೆ ವಿವರ:-
ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ರಾಜ್ಯದ ದೊಡ್ಡ ಪರಂಪರೆ, ಇತಿಹಾಸ ನಾಶವಾಗಿದೆ.
ಹೊಯ್ಸಳರ ವಿಷ್ಣುವರ್ಧನನ ಕಾಲದ ಸಾ.ಶ. 1113 ರಲ್ಲಿ ವಜ್ರದ ವ್ಯಾಪಾರಿಗಳಿಂದ ಕಟ್ಟಿಸಲ್ಪಟ್ಟ ಹಾಸನ
ಜಿಲ್ಲೆಯ ದೊಡ್ಡಗದ್ದವಳ್ಳಿ ಗ್ರಾಮದ ಚತುಷ್ಕೂಟ ಮಹಾಲಕ್ಷ್ಮಿ ದೇವಾಲಯದ ದಕ್ಷಿಣ ಗರ್ಭಗೃಹದಲ್ಲಿದ್ದ
ಮಹಾಕಾಳಿ ಅಥವಾ ದಕ್ಷಿಣ ಭದ್ರಕಾಲಿ ಅಮ್ಮನವರ ವಿಗ್ರಹವನ್ನು ಒಡೆದು ಹಾಕಲಾಗಿದೆ. ( ಜಾರಿ
ಬಿದ್ದಿದೆ ಎಂದೂ ಕೂಡ ಹೇಳಲಾಗುತ್ತಿದೆ) ಇಂತಹ ಪರಮನೀಚ ಕೃತ್ಯಕ್ಕೆ ಕಾರಣರಾದವರನ್ನು ಕಠಿಣ
ಶಿಕ್ಷೆಗಳಿಂದ ದಂಡಿಸಬೇಕಿದೆ. ಇಂತಹ ಒಂದು ಭದ್ರಕಾಳಿಯ ವಿಗ್ರಹ ಅಪರೂಪದಲ್ಲಿ ಅಪರೂಪವಾಗಿತ್ತು.
ಇದರ ರಕ್ಷಣೆಯ ಹೊಣೆ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ( ASI) ಇದಕ್ಕೆ
ಉತ್ತರಿಸಿ, ಜವಾಬು ನೀಡಬೇಕಿದೆ. ತನ್ನ ಅಸಮರ್ಥತೆಯನ್ನು ಒಪ್ಪಿಕೊಳ್ಳಬೇಕಿದೆ. ಸಾಲದ್ದಕ್ಕೆ
ಪರಂಪರೆಯ ಸಪ್ತಾಹವನ್ನು ಆಚರಿಸುತ್ತಿರುವ ಈ ವಾರದಲ್ಲಿ ಇದು ರಾಜ್ಯಕ್ಕೆ, ಪರಂಪರೆಗೆ ಆದ ದೊಡ್ಡ
ನಷ್ಟವಾಗಿದೆ. ಭಕ್ತಾದಿಗಳ ಮನಸಿಗೆ ತುಂಬಾ ದುಃಖವಾಗಿದೆ. ಇದಕ್ಕೆ ಕಾರಣರಾದವರಿಗೆ ಧಿಕ್ಕಾರವಿರಲಿ
ಎಂದು ಕೂಗುತ್ತಿದ್ದಾರೆ ಅದಾಗಿಯೇ ಬಿದ್ದು ಒಡೆದು ಹೋಯಿತು ಎಂಬ ಸಬೂಬು ಹೇಳದಿರಲಿ. ಸರಿಯಾದ
ರೀತಿಯಲ್ಲಿ ತನಿಖೆ ನಡೆದು ಸತ್ಯ ಹೊರಬರಲಿ ಭಕ್ತಾದಿಗಳು ಆಗ್ರಹ ಪಡಿಸಿದ್ದಾರೆ.
ಸ್ಥಳ ಪರಿಚಯ:-
ದೊಡ್ಡಗದ್ದವಳ್ಳಿಯು ಹಾಸನ ಜಿಲ್ಲೆಯ ಒಂದು ಹಳ್ಳಿ. ಇದು ಹೊಯ್ಸಳ ಶೈಲಿಯ ಪುರಾತನ ಮಹಾಲಕ್ಷ್ಮಿ
ದೇವಸ್ಥಾನಕ್ಕೆ ಪ್ರಸಿದ್ಧಿ. ಹಾಸನದಿಂದ ಬೇಲೂರಿಗೆಹೋಗುವ ರಸ್ತೆಯಲ್ಲಿ ೧೬ ಕಿ.ಮೀ. ಸಾಗಿದರೆ
ದೊಡ್ಡಗದ್ದವಳ್ಳಿ ಸಿಗುತ್ತದೆ. ಇಲ್ಲಿಯ ಪ್ರಮುಖ ಆಕರ್ಷಣೆಯಾದ ಮಹಾಲಕ್ಷ್ಮಿ ದೇವಸ್ಥಾನವನ್ನು
ಹೊಯ್ಸಳ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ಕ್ರಿ.ಶ. ೧೧೧೪ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯವು
ಚತುಷ್ಕುಟ(ಒಂದೇ ಜಗತಿಯ ಮೇಲೆ ನಾಲ್ಕು ಮುಖ್ಯ ಗರ್ಭಗುಡಿಗಳು ಮತ್ತು ನಾಲ್ಕು ಮುಖ್ಯ
ಶಿಖರಗಳಿರುವುದು) ದೇವಾಲಯವಾಗಿದ್ದು , ಕಾಲಿಮಾತೆ, ಮಹಾಲಕ್ಷ್ಮಿ, ಶಿವಲಿಂಗ, ಮತ್ತು ವಿಷ್ಣು (
ನಲವತ್ತು ವರುಷಗಳ ಹಿಂದೆ ಮೂಲ ವಿಷ್ಣು ವಿಗ್ರಹವು ಕಳುವಾಗಿದ್ದು ಸದ್ಯ ಕಾಲಭೈರವನ ಮೂರ್ತಿಯು
ಇಲ್ಲಿದೆ)ವಿನ ವಿಗ್ರಹಗಳಿವೆ. ಇದು ಪೂಜೆಗೊಳ್ಳುವ ಆಲಯವಾಗಿದ್ದು ಭಾರತೀಯ ಪುರಾತತ್ವ ಸರ್ವೇಕ್ಷಣದ
ಸುಪರ್ದಿಗೊಳಪಟ್ಟಿದೆ. ೧೯೫೮ ರಲ್ಲಿ ಈ ಆಲಯವನ್ನು ಕೇಂದ್ರ ಸರಕಾರವು ರಾಷ್ಟ್ರೀಯ ಸ್ಮಾರಕ ಎಂದು
ಘೋಷಿಸಿದೆ. ದೇವಾಲಯವು ಸೂರ್ಯೋದಯದಿಂದ ಸೂರ್ಯಾಸ್ತದವರೆವಿಗೆ ತೆರೆದಿರುತ್ತದೆ. ಮಹಾಲಕ್ಷ್ಮಿ
ದೇವಾಲಯ ದೊಡ್ಡಗದ್ದವಳ್ಳಿ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ಹಾಸನ ತಾಲ್ಲೂಕಿನಲ್ಲಿರುವ ಒಂದು
ಹಳ್ಳಿ. ಕೊಲ್ಹಾಪುರದಲ್ಲಿರುವ ಹಾಗೆ ಇಲ್ಲೊಂದು ಲಕ್ಷ್ಮೀ ದೇವಾಲಯವಿರುವುದರಿಂದ ಇದನ್ನು ಅಭಿನವ
ಕೊಲ್ಹಾಪುರವೆಂದೂ ಕರೆಯಲಾಗಿದೆ. ಹೊಯ್ಸಳ ವಾಸ್ತುಶೈಲಿಯ ಅಪೂರ್ವ ಚತುಷ್ಕೂಟಾಚಲ ದೇವಾಲಯಕ್ಕಾಗಿ
ಇದು ಪ್ರಸಿದ್ಧವಾಗಿದೆ. ಇಲ್ಲಿಯ ಲಕ್ಷ್ಮೀ ದೇವಾಲಯವನ್ನು ವಿಷ್ಣುವರ್ಧನನ ಕಾಲದಲ್ಲಿ (1113)
ಪಾರಿಯಾತ್ರದ ಮಹಾವಡ್ಡ ವ್ಯವಹಾರಿಕುಲ್ಲಹಣ ರಾಹುತನೂ ಅವನ ಸತಿ ಸಹಜಾದೇವಿಯೂ ಸೇರಿ ಕಟ್ಟಿಸಿದರೆಂದು
ಹೇಳಲಾಗಿದೆ.....
ಪ್ರಧಾನ ಸಂಪಾದಕರು : ಹರೀಶ್ ಹೆಚ್ಆರ್
ಕೋಟೆ
ಸುದ್ದಿ ಸಂಪಾದಕರು
ನಾಗೇಂದ್ರ.ಹೆಚ್.ಎನ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info