ವಿಷಯಕ್ಕೆ ಹೋಗಿ

ಕರೋನಾ... ಜ್ಯೋತಿಷ್ಯ... ಭವಿಷ್ಯ -ಕೋಟೆ ಕಾಲಂ

ಲೇಖಕರು ಮತ್ತು ಸಂಪಾದಕರು ಹರೀಶ್ .ಹೆಚ್ ಆರ್ ಕೋಟೆ.








....ಜ್ಯೋತಿಷ್ಯ......ಭವಿಷ್ಯ ಕರೋನಾ ಈ ಮೂರಕ್ಷರ ಈ ವರ್ಷ ಮಾಡಿದಷ್ಟು ಅನಾಹುತ ಯಾವ ಮಹಾಯುದ್ದಕ್ಜೇನು ಕಡಿಮೆ ಇಲ್ಲಾ ಒಂದೆಡೆ ಅತಿಯಾದ ತಂತ್ರಜ್ಞಾನ ದ ಆವಿಷ್ಕಾರ ವಿಜ್ಞಾನದ ಊಹೆಗೂ ನಿಲುಕದ ನಾಗಾಲೋಟಾ ಮನುಷ್ಯ ನಿಗೆ ಸಾವಿನ ಸುಳಿವು ಸಿಗದಂತೆ ಮಾಡುವ ಚಾಲೆಂಜ್ ಹಾಕುತ್ತಿದ್ದ ವೈದ್ಯಕೀಯ ವಿಜ್ಞಾನ ದ ದುರಹಂಕಾರ ಸೂಪರ್‌ ಪವರ್ ಆಗುವ ಮುಂದುವರೆದ ದೇಶಗಳ ದುರಾಸೆ ಎಲ್ಲವನ್ನು ಹಣದಲ್ಲಿಯೇ ಅಳೆಯುವ ಮನುಷ್ಯನ ಮೆಟೀರಿಯಲಿಸ್ಟಿಕ್ ಮನೋಭಾವ ಎಲ್ಲದಕ್ಕೂ ತಿಲಾಂಜಲಿ ನೀಡುವಂತೆ ಮಾಡಿದ ಕೊರೋನಾ ಮನುಷ್ಯನನ್ನು ವಾಪಾಸು ಭ್ರಮಾಲೋಕದಿಂದ ಹೊರತಂದು ನೀನು ಇಷ್ಟೇ ಎಂಬ ವಾಸ್ತವದ ಮಸಣಕ್ಕೆ ಎಳೆತಂದು ಅನಾಥ ವಾಗಿ ಬಿಸಾಡಿ ಹೋಯಿತು ಕರೋನಾ ದಲ್ಲಿಯೂ ಬಿಡದೆ ದುಂಡಾಗಿ ಮೇಯ್ದ ನಮ್ಮ ರಾಜಕಾರಣಿಗಳು ಅಧಿಕಾರಿಗಳು ಪ್ರಥಮ ಬಾರಿಗೆ ಸಾವಿನ ಭಯದಿಂದ ನಲುಗಿಹೋದರಲ್ಲದೆ ಹಲವರು ಇಹಲೋಕ ತ್ಯಜಿಸಿದರು ರಾಜಕಾರಣಿಗಳ ಹೆಣವನ್ನು ಅನಾಥ ಶವದಂತೆ ಸಂಸ್ಕಾರ ಮಾಡಿದ್ದು ಅಮಾನವೀಯ ಎನಿಸಿದರೂ ಸಾವಿನಲ್ಲು ಪ್ರಥಮ ಬಾರಿಗೆ ಸಮಾನತೆ ಕಾಪಾಡಿದ್ದಾರೆ ಎನಿಸಿತು ಕೊರೋನಾ ಚಿಕಿತ್ಸೆಗಾಗಿ ಖರ್ಚಾದ ಕೋಟ್ಯಾಂತರ ರೂಪಾಯಿ ಹಣ ಯಾರ್ಯಾರ ಪಾಲಾಯಿತೋ ತಿಳಿಯದು ಪ್ರತಿ ಜಿಲ್ಲೆಯಲ್ಲಿಯೂ ನಿತ್ಯ ಸರ್ಕಾರಿ ಲೆಕ್ಕದಲ್ಲಿ ನೂರಾರು ಜನ ಕೊರೋನಾ ಸೋಂಕಿತರು ಪತ್ತೆಯಾದರು ಅವರ ಹೆಸರಲ್ಲಿ ಹಣ ಖರ್ಚಾಯಿತು ಹಲವಾರು ಜನರು ದಿಡೀರ್ ಶ್ರೀಮಂತ ರಾದರೆ ಸತ್ತವರೆಲ್ಲಾ ಕೊರೋನಾ ಲೆಕ್ಕಕ್ಕೆ ಸೇರಿ ಸ್ವರ್ಗ ಸೇರಿದರು ಈಗ ದಿಡೀರನೆ ಕೊರೊನಾ ಕಡಿಮೆ ಅಗತೊಡಗಿದೆ ಲಸಿಕೆ ಸಿಗಲಿದೆ ಎಂದು ಚಾನಲ್ಗಳು ಬೊಂಬಡಾ ಬಜಾಯಿಸುತ್ತಿವೆ ಈ ನಡುವೆ ಜನರು ಬೇಸತ್ತು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ ಟಿವಿಯಲ್ಲಿ ಮಾತ್ರ ಭಯ ಹುಟ್ಟಿಸುವ ಸುದ್ದಿಗಳು ಬರುತ್ತಲೇ ಇವೇ ಸರಕಾರಿ ಲೆಕ್ಕದಲ್ಲಿ ನೂರಾರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರೆಲ್ಲಾ ಎಲ್ಲಿ ಎಂದು ಹುಡುಕಿದರೆ ಬೆರಳೆಣಿಕೆ ಜನ ಸಿಗುತ್ತಾರೆ ಈ ಎಲ್ಲದರ ನಡುವೆ ಆನ್ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳಿಗೆ ಹೊಸ ಮೊಬೈಲ್ ಸಿಕ್ಕಿವೆ ಡಾಟಾ ಪ್ಯಾಕ್ ಗಳು ಭರ್ತಿಯಾಗಿವೆ ಮೊಬೈಲ್ ಕಂಪನಿಗಳು ಉದ್ದಾರ ವಾಗಿವೆ ಪಡ್ಡೆಹುಡುಗರು ಡಾಟಾಪ್ಯಾಕ್ ಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಯಸ್ಕರಾಗುತ್ತಿದ್ದಾರೆ ಪಾಪದ ಪೋಷಕರು ದಿಕ್ಕುತೋಚದಂತಾದರೆ ಶಿಕ್ಷಕರು ಅರ್ಧ ಸಂಬಳ ಪಡೆದು ಬಳಲಿದ್ದಾರೆ ಶಿಕ್ಷಣ ಸಂಸ್ಥೆ ಮಾಲಿಕರು ಪೋಷಕರಿಂದ ಹಣಕೀಳುವ ಸ್ಕೀಂ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ನಮ್ಮ ಪ್ರಧಾನಿಗಳು ಮಾತ್ರ ಅಗಾಗ್ಗೆ ಬಂದು ಪ್ಯಾರೆ ದೇಶ್ ವಾಸಿಯೋ ಎಂದು ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ ಕೋಟಿ ಕೋಟಿ ಪ್ಯಾಕೇಜ್ ಘೋಷಣೆ ಮಾಡಿ ಮನಸಂತೋಷ ಪಡಿಸುತ್ತಿದ್ದಾರೆ ಕನ್ನಡಿಯಲ್ಲಿ ಬಿರಿಯಾನಿ ತೋರಿಸಿ ತೋರಿಸಿ ಸಹಕಾರ ನೀಡಿ ಎನ್ನುತ್ತಿದ್ದಾರೆ ಈ ನಡುವೆ ಸ್ವಲ್ಪಕಾಲ ಮರೆಯಾಗಿ ಹೋಗಿದ್ದ ಜೋತಿಷಿಗಳು ಪಂಚೆಕೊಡವಿಕೊಂಡು ಎದ್ದಿದ್ದಾರೆ ಮೇಕಪ್ ಮಾಡಿಕೊಂಡು ಟಿವಿ ಕ್ಯಾಮೆರಾ ಮುಂದೆ ಕೂರುತ್ತಿದ್ದಾರೆ ಕೊರೋನಾ ಕೆಲವೇ ತಿಂಗಳಲ್ಲಿ ನಿರ್ನಾಮ ವಾಗಲಿದೆ ಎಂದು ಬೊಗಳೆಬಿಡುತ್ತಾ ಎಲ್ಲಾ ಸರಿಹೋಗಬೇಕಾದರೆ ನಮ್ಮಲ್ಲಿ ಬನ್ನಿ ಎಂದು ಪರ್ಸನಲ್ ನಂಬರ್ ಕೊಡುತ್ತಿದ್ದಾರೆ ಈ ನಡುವೆ ಕೆಲವು ಪಡ್ಡೆ ಹುಡುಗರು ಪಂಚೆಕಟ್ಟಿಕೊಂಡು ಗುರೂಜಿಗಳಾಗಿವೆ ಈ ಗಾಗಲೇ ರಾಜ್ಯದ ಪ್ರಭಾವಿ ರಾಜಕಾರಣಿಗಳ ಕೋಣೆ ಸೇರಿದ್ದು ಲಕ್ಷಾಂತರ ರೂಪಾಯಿನ ಪೂಜೆ ಮಾಡಿ ತಲೆಮಾಸಿದ ರಾಜಕಾರಣಿಗಳಿಗೆ ನೀನೆ ಮುಂದಿನ ಸಿಎಂ ಎನ್ನುತ್ತಿವೆ ಹೆಂಡತಿಯನ್ನು ನಂಬದ ರಾಜಕೀಯ ಧುರೀಣ ರು ಅದೇಗೆ ಈ ಅರ್ಧ ನಾರೀಶ್ವರರಂತಹ ಗುರೂಜಿಗಳನ್ನು ನಂಬುತ್ತಾರೆ ಎಂಬುದೇ ಅಚ್ಚರಿಯ ವಿಚಾರ ಈ ಎಲ್ಲದರ ನಡುವೆ ಕೆಲಸ ಕಳೆದುಕೊಂಡು ಕಂಗಾಲಾಗಿ ಊರುಸೇರಿರುವ ಜನಸಾಮಾನ್ಯರು ಕಂಗಾಲಾಗಿದ್ದಾರೆ ಸಾಮಾಜಿಕ ಹಾಗೂ ಕೌಟುಂಬಿಕವಾಗಿ ಸಮಸ್ಯೆಗಳು ಉದ್ಬವವಾಗಿವೆ ಖರ್ಚಿಗೆ ಕಾಸಿಲ್ಲದ ಯುವಕರು ಕ್ರಿಮಿನಲ್ ಗಳಾಗುತ್ತಿದ್ದಾರೆ ಮನೆಯಲ್ಲಿ ಹೊಂದಾಣಿಕೆ ಗಳಾಗದೆ ಅಣ್ಣತಮ್ಮಂದಿರ ನಡುವೆ ಹೊಡೆದಾಟಗಳಾಗುತ್ತಿವೆ ನಿರುದ್ಯೋಗ ಸಾವಿನೆಡೆ ಚಿಂತಿಸುವಂತೆ ಮಾಡುತ್ತಿದೆ ಇದು ಭವಿಷ್ಯವೇ ಇಲ್ಲದ ಜನಸಾಮಾನ್ಯರ ಅಳಲಾಗಿದ್ದು ಈ ವರ್ಷ ವನ್ನು ನೆನಪಿಸಿಕೊಳ್ಳಲು ಭಯಪಡುವಂತೆ ಮಾಡಿದೆ ಆದರೆ ಇದಾವುದೇ ಪರಿವೆ ಇಲ್ಲದೆ ಕೆಲ ರಾಜ್ಯಗಳಲ್ಲಿ ಚುನಾವಣೆಗಳಿಗೆ ಸಿದ್ದತೆ ನಡೆಯುತ್ತಿವೆ ಉಪಚುನಾವಣೆಯಲ್ಲಿ ಹಣದ ಹೊಳೆಹರಿಯುತ್ತಿದೆ ಅಧಿಕಾರಕ್ಕಾಗಿ ಬಡಿದಾಟ ಆರಂಭವಾಗಿದೆ ಸಂಘ ಸಂಸ್ಥೆಗಳ ಚುನಾವಣೆಗಳ ಕಣಗಳು ಬಿರುಸಿನ ಪ್ರಚಾರ ಕಾಣತೊಡಗಿವೆ ಸಾವು ಸಂಕಷ್ಟಗಳ ನಡುವೆಯೂ ಅಧಿಕಾರದ ಹಪಾಹಪಿತನ ಮುಂದುವರೆದಿದೆ.....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728