ವಿಷಯಕ್ಕೆ ಹೋಗಿ

ಕರೋನಾ... ಜ್ಯೋತಿಷ್ಯ... ಭವಿಷ್ಯ -ಕೋಟೆ ಕಾಲಂ

ಲೇಖಕರು ಮತ್ತು ಸಂಪಾದಕರು ಹರೀಶ್ .ಹೆಚ್ ಆರ್ ಕೋಟೆ.








....ಜ್ಯೋತಿಷ್ಯ......ಭವಿಷ್ಯ ಕರೋನಾ ಈ ಮೂರಕ್ಷರ ಈ ವರ್ಷ ಮಾಡಿದಷ್ಟು ಅನಾಹುತ ಯಾವ ಮಹಾಯುದ್ದಕ್ಜೇನು ಕಡಿಮೆ ಇಲ್ಲಾ ಒಂದೆಡೆ ಅತಿಯಾದ ತಂತ್ರಜ್ಞಾನ ದ ಆವಿಷ್ಕಾರ ವಿಜ್ಞಾನದ ಊಹೆಗೂ ನಿಲುಕದ ನಾಗಾಲೋಟಾ ಮನುಷ್ಯ ನಿಗೆ ಸಾವಿನ ಸುಳಿವು ಸಿಗದಂತೆ ಮಾಡುವ ಚಾಲೆಂಜ್ ಹಾಕುತ್ತಿದ್ದ ವೈದ್ಯಕೀಯ ವಿಜ್ಞಾನ ದ ದುರಹಂಕಾರ ಸೂಪರ್‌ ಪವರ್ ಆಗುವ ಮುಂದುವರೆದ ದೇಶಗಳ ದುರಾಸೆ ಎಲ್ಲವನ್ನು ಹಣದಲ್ಲಿಯೇ ಅಳೆಯುವ ಮನುಷ್ಯನ ಮೆಟೀರಿಯಲಿಸ್ಟಿಕ್ ಮನೋಭಾವ ಎಲ್ಲದಕ್ಕೂ ತಿಲಾಂಜಲಿ ನೀಡುವಂತೆ ಮಾಡಿದ ಕೊರೋನಾ ಮನುಷ್ಯನನ್ನು ವಾಪಾಸು ಭ್ರಮಾಲೋಕದಿಂದ ಹೊರತಂದು ನೀನು ಇಷ್ಟೇ ಎಂಬ ವಾಸ್ತವದ ಮಸಣಕ್ಕೆ ಎಳೆತಂದು ಅನಾಥ ವಾಗಿ ಬಿಸಾಡಿ ಹೋಯಿತು ಕರೋನಾ ದಲ್ಲಿಯೂ ಬಿಡದೆ ದುಂಡಾಗಿ ಮೇಯ್ದ ನಮ್ಮ ರಾಜಕಾರಣಿಗಳು ಅಧಿಕಾರಿಗಳು ಪ್ರಥಮ ಬಾರಿಗೆ ಸಾವಿನ ಭಯದಿಂದ ನಲುಗಿಹೋದರಲ್ಲದೆ ಹಲವರು ಇಹಲೋಕ ತ್ಯಜಿಸಿದರು ರಾಜಕಾರಣಿಗಳ ಹೆಣವನ್ನು ಅನಾಥ ಶವದಂತೆ ಸಂಸ್ಕಾರ ಮಾಡಿದ್ದು ಅಮಾನವೀಯ ಎನಿಸಿದರೂ ಸಾವಿನಲ್ಲು ಪ್ರಥಮ ಬಾರಿಗೆ ಸಮಾನತೆ ಕಾಪಾಡಿದ್ದಾರೆ ಎನಿಸಿತು ಕೊರೋನಾ ಚಿಕಿತ್ಸೆಗಾಗಿ ಖರ್ಚಾದ ಕೋಟ್ಯಾಂತರ ರೂಪಾಯಿ ಹಣ ಯಾರ್ಯಾರ ಪಾಲಾಯಿತೋ ತಿಳಿಯದು ಪ್ರತಿ ಜಿಲ್ಲೆಯಲ್ಲಿಯೂ ನಿತ್ಯ ಸರ್ಕಾರಿ ಲೆಕ್ಕದಲ್ಲಿ ನೂರಾರು ಜನ ಕೊರೋನಾ ಸೋಂಕಿತರು ಪತ್ತೆಯಾದರು ಅವರ ಹೆಸರಲ್ಲಿ ಹಣ ಖರ್ಚಾಯಿತು ಹಲವಾರು ಜನರು ದಿಡೀರ್ ಶ್ರೀಮಂತ ರಾದರೆ ಸತ್ತವರೆಲ್ಲಾ ಕೊರೋನಾ ಲೆಕ್ಕಕ್ಕೆ ಸೇರಿ ಸ್ವರ್ಗ ಸೇರಿದರು ಈಗ ದಿಡೀರನೆ ಕೊರೊನಾ ಕಡಿಮೆ ಅಗತೊಡಗಿದೆ ಲಸಿಕೆ ಸಿಗಲಿದೆ ಎಂದು ಚಾನಲ್ಗಳು ಬೊಂಬಡಾ ಬಜಾಯಿಸುತ್ತಿವೆ ಈ ನಡುವೆ ಜನರು ಬೇಸತ್ತು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ ಟಿವಿಯಲ್ಲಿ ಮಾತ್ರ ಭಯ ಹುಟ್ಟಿಸುವ ಸುದ್ದಿಗಳು ಬರುತ್ತಲೇ ಇವೇ ಸರಕಾರಿ ಲೆಕ್ಕದಲ್ಲಿ ನೂರಾರು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಅವರೆಲ್ಲಾ ಎಲ್ಲಿ ಎಂದು ಹುಡುಕಿದರೆ ಬೆರಳೆಣಿಕೆ ಜನ ಸಿಗುತ್ತಾರೆ ಈ ಎಲ್ಲದರ ನಡುವೆ ಆನ್ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳಿಗೆ ಹೊಸ ಮೊಬೈಲ್ ಸಿಕ್ಕಿವೆ ಡಾಟಾ ಪ್ಯಾಕ್ ಗಳು ಭರ್ತಿಯಾಗಿವೆ ಮೊಬೈಲ್ ಕಂಪನಿಗಳು ಉದ್ದಾರ ವಾಗಿವೆ ಪಡ್ಡೆಹುಡುಗರು ಡಾಟಾಪ್ಯಾಕ್ ಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಯಸ್ಕರಾಗುತ್ತಿದ್ದಾರೆ ಪಾಪದ ಪೋಷಕರು ದಿಕ್ಕುತೋಚದಂತಾದರೆ ಶಿಕ್ಷಕರು ಅರ್ಧ ಸಂಬಳ ಪಡೆದು ಬಳಲಿದ್ದಾರೆ ಶಿಕ್ಷಣ ಸಂಸ್ಥೆ ಮಾಲಿಕರು ಪೋಷಕರಿಂದ ಹಣಕೀಳುವ ಸ್ಕೀಂ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ನಮ್ಮ ಪ್ರಧಾನಿಗಳು ಮಾತ್ರ ಅಗಾಗ್ಗೆ ಬಂದು ಪ್ಯಾರೆ ದೇಶ್ ವಾಸಿಯೋ ಎಂದು ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ ಕೋಟಿ ಕೋಟಿ ಪ್ಯಾಕೇಜ್ ಘೋಷಣೆ ಮಾಡಿ ಮನಸಂತೋಷ ಪಡಿಸುತ್ತಿದ್ದಾರೆ ಕನ್ನಡಿಯಲ್ಲಿ ಬಿರಿಯಾನಿ ತೋರಿಸಿ ತೋರಿಸಿ ಸಹಕಾರ ನೀಡಿ ಎನ್ನುತ್ತಿದ್ದಾರೆ ಈ ನಡುವೆ ಸ್ವಲ್ಪಕಾಲ ಮರೆಯಾಗಿ ಹೋಗಿದ್ದ ಜೋತಿಷಿಗಳು ಪಂಚೆಕೊಡವಿಕೊಂಡು ಎದ್ದಿದ್ದಾರೆ ಮೇಕಪ್ ಮಾಡಿಕೊಂಡು ಟಿವಿ ಕ್ಯಾಮೆರಾ ಮುಂದೆ ಕೂರುತ್ತಿದ್ದಾರೆ ಕೊರೋನಾ ಕೆಲವೇ ತಿಂಗಳಲ್ಲಿ ನಿರ್ನಾಮ ವಾಗಲಿದೆ ಎಂದು ಬೊಗಳೆಬಿಡುತ್ತಾ ಎಲ್ಲಾ ಸರಿಹೋಗಬೇಕಾದರೆ ನಮ್ಮಲ್ಲಿ ಬನ್ನಿ ಎಂದು ಪರ್ಸನಲ್ ನಂಬರ್ ಕೊಡುತ್ತಿದ್ದಾರೆ ಈ ನಡುವೆ ಕೆಲವು ಪಡ್ಡೆ ಹುಡುಗರು ಪಂಚೆಕಟ್ಟಿಕೊಂಡು ಗುರೂಜಿಗಳಾಗಿವೆ ಈ ಗಾಗಲೇ ರಾಜ್ಯದ ಪ್ರಭಾವಿ ರಾಜಕಾರಣಿಗಳ ಕೋಣೆ ಸೇರಿದ್ದು ಲಕ್ಷಾಂತರ ರೂಪಾಯಿನ ಪೂಜೆ ಮಾಡಿ ತಲೆಮಾಸಿದ ರಾಜಕಾರಣಿಗಳಿಗೆ ನೀನೆ ಮುಂದಿನ ಸಿಎಂ ಎನ್ನುತ್ತಿವೆ ಹೆಂಡತಿಯನ್ನು ನಂಬದ ರಾಜಕೀಯ ಧುರೀಣ ರು ಅದೇಗೆ ಈ ಅರ್ಧ ನಾರೀಶ್ವರರಂತಹ ಗುರೂಜಿಗಳನ್ನು ನಂಬುತ್ತಾರೆ ಎಂಬುದೇ ಅಚ್ಚರಿಯ ವಿಚಾರ ಈ ಎಲ್ಲದರ ನಡುವೆ ಕೆಲಸ ಕಳೆದುಕೊಂಡು ಕಂಗಾಲಾಗಿ ಊರುಸೇರಿರುವ ಜನಸಾಮಾನ್ಯರು ಕಂಗಾಲಾಗಿದ್ದಾರೆ ಸಾಮಾಜಿಕ ಹಾಗೂ ಕೌಟುಂಬಿಕವಾಗಿ ಸಮಸ್ಯೆಗಳು ಉದ್ಬವವಾಗಿವೆ ಖರ್ಚಿಗೆ ಕಾಸಿಲ್ಲದ ಯುವಕರು ಕ್ರಿಮಿನಲ್ ಗಳಾಗುತ್ತಿದ್ದಾರೆ ಮನೆಯಲ್ಲಿ ಹೊಂದಾಣಿಕೆ ಗಳಾಗದೆ ಅಣ್ಣತಮ್ಮಂದಿರ ನಡುವೆ ಹೊಡೆದಾಟಗಳಾಗುತ್ತಿವೆ ನಿರುದ್ಯೋಗ ಸಾವಿನೆಡೆ ಚಿಂತಿಸುವಂತೆ ಮಾಡುತ್ತಿದೆ ಇದು ಭವಿಷ್ಯವೇ ಇಲ್ಲದ ಜನಸಾಮಾನ್ಯರ ಅಳಲಾಗಿದ್ದು ಈ ವರ್ಷ ವನ್ನು ನೆನಪಿಸಿಕೊಳ್ಳಲು ಭಯಪಡುವಂತೆ ಮಾಡಿದೆ ಆದರೆ ಇದಾವುದೇ ಪರಿವೆ ಇಲ್ಲದೆ ಕೆಲ ರಾಜ್ಯಗಳಲ್ಲಿ ಚುನಾವಣೆಗಳಿಗೆ ಸಿದ್ದತೆ ನಡೆಯುತ್ತಿವೆ ಉಪಚುನಾವಣೆಯಲ್ಲಿ ಹಣದ ಹೊಳೆಹರಿಯುತ್ತಿದೆ ಅಧಿಕಾರಕ್ಕಾಗಿ ಬಡಿದಾಟ ಆರಂಭವಾಗಿದೆ ಸಂಘ ಸಂಸ್ಥೆಗಳ ಚುನಾವಣೆಗಳ ಕಣಗಳು ಬಿರುಸಿನ ಪ್ರಚಾರ ಕಾಣತೊಡಗಿವೆ ಸಾವು ಸಂಕಷ್ಟಗಳ ನಡುವೆಯೂ ಅಧಿಕಾರದ ಹಪಾಹಪಿತನ ಮುಂದುವರೆದಿದೆ.....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಉತ್ತಮ ಫಲಿತಾಂಶ , ಹಣ ಉಳಿತಾಯ.

ನಾನು ನೆಟ್‌ಸರ್ಫ್ ಡೈರೆಕ್ಟ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ನೆಟ್ಸರ್ಫ್ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುತ್ತಿದ್ದೇನೆ. ನಾನು ನಿಮಗೆ ಈ ಉತ್ಪನ್ನಗಳನ್ನು ಬಲವಾಗಿ ಶಿಫಾರಸು ಮಾಡುತ್ತೇವೆ. 'NETSURF DIRECT' 5 ವಿವಿಧ ವಿಭಾಗಗಳಲ್ಲಿ 90 ಕ್ಕೂ ಹೆಚ್ಚು ಗಿಡಮೂಲಿಕೆ ಉತ್ಪನ್ನಗಳನ್ನು ನೀಡುತ್ತದೆ ಅಂದರೆ ಆರೋಗ್ಯ ರಕ್ಷಣೆ, ವೈಯಕ್ತಿಕ ಆರೈಕೆ, ಬಣ್ಣ ಸೌಂದರ್ಯವರ್ಧಕಗಳು, ಗೃಹ ಆರೈಕೆ ಮತ್ತು ಕೃಷಿ. ಈ ಉತ್ಪನ್ನಗಳನ್ನು ಭಾರತದಾದ್ಯಂತ 2.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ನಂಬಿದ್ದಾರೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೆಟ್‌ಸರ್ಫ್ ವರ್ಲ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಎಲ್ಲಾ ನೆಟ್‌ಸರ್ಫ್ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಿ. ಒಮ್ಮೆ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ನನ್ನ ಮೊಬೈಲ್ ಸಂಖ್ಯೆಯನ್ನು (8453502625) "ಉಲ್ಲೇಖಿಸಿದವರು" ನಲ್ಲಿ ನಮೂದಿಸಿ ಮತ್ತು ನಿಮ್ಮ 1ನೇ ಖರೀದಿಯಿಂದ ಪುನಃ ಪಡೆದುಕೊಳ್ಳಬಹುದಾದ ರೂ.100 ವೋಚರ್ ಅನ್ನು ಪಡೆಯಿರಿ. Andriod ಬಳಕೆದಾರರು: https://bit.ly/3SxEkfB ಆಪಲ್ ಬಳಕೆದಾರರು: https://apple.co/3Ace2JT   I am working with Netsurf Direct. I am using Netsurf products regularly. I strongly recommend these products to you .   'NETSURF DIRECT...

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...