ವಿಷಯಕ್ಕೆ ಹೋಗಿ

ಸಾಹಿತ್ಯ ಪರಿಷದ್ ಅಖಾಡ-ಕೋಟೆ ಕಾಲಂ

ಹರೀಶ್ ಹೆಚ್ ಆರ್ 
ಕೋಟೆ 
ಸಾಹಿತ್ಯ ಪರಿಷತ್ತಿನ ಅಖಾಡ ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತಿನ ಈ ಅವಧಿ ಮುಗಿಯಲು ಇನ್ನೂ ಹಲವು ತಿಂಗಳುಗಳ ಸಮಯವಿದ್ದರೂ ಆಕಾಂಕ್ಷಿಗಳ ಉತ್ಸಾಹ ಈಗಲೇ ಸ್ಪೋಟಗೊಂಡಿದೆ ಜಿಲ್ಲಾಕೇಂದ್ರ ದಲ್ಲಿ ಒಳ್ಳೆಯ ಭವನ ಸಮ್ಮೇಳನಗಳಿಗೆ ಸರಕಾರದ ಅನುದಾನ ಖರ್ಚಿಗೆ ಎಂದು ಬಾಡಿಗೆ ಕಾರ್ಯಕ್ರಮ ಗಳಿಗೆ ದಾನಿಗಳಿಂದ ತನುಮನ ಎಲ್ಲದಕ್ಕಿಂತ ಆರ್ಥಿಕ ಸಹಾಯ ಇನ್ನು ತಮಗೆ ಬೇಕಾದವರಿಗೆ ಸಮ್ಮೇಳನಗಳ ಅಧ್ಯಕ್ಷರನ್ನಾಗಿಸುವ ಅವಕಾಶ ಹೋಬಳಿ ಮಟ್ಟದವರೆಗೂ ಚಂದಾ ವಸೂಲಿಯ ಅವಕಾಶ ಎಲ್ಲೆಡೆ ತಮ್ಮ ಶಿಷ್ಯರನ್ನು ಪ್ರತಿಷ್ಠಾಪಿಸುವ ವ್ಯವಸ್ಥೆ ಆ ಮೂಲಕ ರಾಜಕಾರಣಿಗಳು ಮತ್ತು ಅಧಿಕಾರಿಗಳ ಗಮನ ಸೆಳೆಯುವ ಮೂಲಕ ವೈಯಕ್ತಿಕ ವಾಗಿ ಸಾಕಷ್ಟು ಪ್ರಯೋಜನ ಪಡೆಯಲು ಇರುವ ಸಾಧ್ಯತೆಗಳು ಆ ಸ್ಥಾನದ ಮೇಲೆ ಹೆಚ್ಚು ಜನರು ಮುಗಿಬೀಳುವಂತೆ ಮಾಡಿದೆ ಎ.ಜಿ.ಹರಿಗೋಪಾಲ್ ಸಾಹಿತ್ಯ ಪರಿಷತ್ತಿನ ಸುಂದರ ಕಟ್ಟಡ ಕಟ್ಟಿದ ನಂತರ ಇನ್ನಿಲ್ಲದ ಡಿಮ್ಯಾಂಡ್ ಬಂದ ಜಿಲ್ಲಾ ಕಸಾಪ ಮದನಗೌಡರ ಕ್ರಿಯಾಶೀಲತೆ ಫಲವಾಗಿ ಅಧ್ಯಕ್ಷ ಗಾದಿಗೆ ಸ್ಟಾರ್ ವ್ಯಾಲ್ಯು ಬಂದಿತು ಹೆಚ್ ಬಿ ರಮೇಶ್ ಅದಕ್ಕೆ ಸಾತ್ವಿಕ ರೂಪನೀಡುವ ಮೂಲಕ ಹೊಸರೀತಿಯ ಚಲನೆ ನೀಡಿದ್ದಲ್ಲದೆ ಎಲ್ಲಾ ವರ್ಗದ ಜನರೂ ಸಕ್ರಿಯವಾಗಿ ಪರಿಷತ್ತಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದರು ನಂತರದ ಅವದಿಯಲ್ಲಿ ಪರಿಷತ್ತು ಅಧ್ಯಕ್ಷರು ಹಾಗೂ ಅವರ ಊಳಿಗದವರ ಸೊತ್ತು ಎಂಬಂತಾಯಿತಲ್ಲದೇ ಬೇಕಾದವರನ್ನು ಬೇಕಾಬಿಟ್ಟಿ ಸಮ್ಮೆಳನಾಧ್ಯಕ್ಷರನ್ನಾಗಿ ಮಾಡುವ ಸಂಪ್ರದಾಯ ಆರಂಭವಾಯಿತಲ್ಲದೆ ಸಾಹಿತಿಗಳು ಹಾರ ಪೋಟೋ ಪೇಟ ಸಣ್ಣಮೆರವಣಿಗೆಗೆ ಚಿತ್ತಾಗುತ್ತಾರೆ ಎಂಬ ಸತ್ಯ ಅರ್ಥ ಮಾಡಿಕೊಂಡ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಆಟಕ್ಕುಂಟು ಎಂಬಂತೆ ಬಳಸಿ ಕೊಳ್ಳುತ್ತಿದ್ದಾರೆ ಈಗಂತೂ ಸದಸ್ಯರ ಸಂಖ್ಯೆ ಹಲವು ಸಾವಿರಕ್ಕೆ ಏರಿಕೆಯಾಗಿದ್ದು ಯಾವುದೇ ಚುನಾವಣೆಗೂ ಕಡಿಮೆ ಇಲ್ಲದಂತೆ ಬಿರುಸು ಕಾಣಲಿದೆ ಇದರ ನಡುವೆ ಈಗಾಗಲೇ ತಯಾರಿನಡೆಸಿರುವವರ ಜೊತೆಯಲ್ಲಿ ಹೊಸಮುಖಗಳು ಕಣದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಲಿದ್ದು ಯಾರೂ ಸಹ ಜಾತಿ ಹೆಸರಿನಲ್ಲಿ ಕೆಲ ಗಾಡ್ ಫಾದರ್ ಗಳ ಕ್ರಪಾ ಕಟಾಕ್ಷದಲ್ಲಿ ಗೆಲ್ಲಲು ಸಾಧ್ಯವಿಲ್ಲ ಅದೇರೀತಿ ಯಾರು ಯಾರನ್ನು ಗೆಲ್ಲಿಸಲು ಸಾಧ್ಯವಿಲ್ಲ ಸೋಲಿಸಲೂ ಸಾಧ್ಯವಿಲ್ಲ ಏಕೆಂದರೆ ಜನ ಬುದ್ದಿವಂತರು ಸಾಧ್ಯವಾದಷ್ಟು ಸರಕಾರಿ ನೌಕರರು ಸಂಘಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗುವುದನ್ನೆ ಕಾಯಕವನ್ನಾಗಿಸಿಕೊಂಡವರು ಸಾಹಿತ್ಯದ ಗಂಧಗಾಳಿ ಇಲ್ಲದೆ ಅಧಿಕಾರಿಗಳು ರಾಜಕಾರಣಿಗಳ ಮುಂದೆ ಪೋಸ್ ಕೊಡುವವರ ಬಗ್ಗೆ ಪರಿಷತ್ತಿನ ಸದಸ್ಯರಿಗೆ ಅಸಹ್ಯ ಉಂಟಾಗಿದ್ದು ಯುವಕರ ಬಗ್ಗೆ ಅದರಲ್ಲಿಯೂ ಸಾಹಿತ್ಯ ಹಾಗೂ ಸಂಸ್ಕ್ರತಿಯ ಬಗ್ಗೆ ಅರಿವಿರುವವರೆಡೆ ಒಲವು ವ್ಯಕ್ತವಾಗಿದೆ ಒಟ್ಟಾರೆ ಪರಿಷತ್ತಿನ ಚುನಾವಣೆ ಮುಂದಿನ ದಿನದಲ್ಲಿ ಕುತೂಹಲ ಕೆರಳಸಲಿದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆರೋಗ್ಯ ಮತ್ತು ಸಂತ್ರೃಪ್ತ ಜೀವನ

ಬಂಧುಗಳೇ, ಪ್ರತಿಯೊಂದು ಜನರು ನೆಮ್ಮದಿಯಿಂದ ಬದುಕಲು ಇಷ್ಟಪಡುತ್ತಾರೆ, ಆದರೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಅದರಲ್ಲಿ  ಮುಖ್ಯ ಸಮಸ್ಯೆಗಳು ಅಂದರೆ ಆರೋಗ್ಯ ಮತ್ತು ಹಣಕಾಸು ಮತ್ತು  ಉದ್ಯೋಗ ಭದ್ರತೆ. ನಮ್ಮಲ್ಲಿ ಮೇಲ್ಕಂಡ  ಸಮಸ್ಯೆಗಳಿಗೆ ಸಮಂಜಸವಾದ ಪರಿಹಾರವಿದೆ , ನೀವು ಆತಂಕ ಪಡುವ ಅಗತ್ಯವಿಲ್ಲ, ಬನ್ನಿ ನಮ್ಮೂಡನೆ ಸೇರಿರಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳರಿ.   ನಾವು ಸಂವಹನ ಮಾಡಲು ಅಂತರ್ಜಾಲ ಮತ್ತು ನೇರ ಭೇಟಿ ಕಾರ್ಯಕ್ರಮ ಮೂಲಕ  ಕೆಲವೊಂದು ಮಾರ್ಗದರ್ಶನಗಳನ್ನು ನೀಡುತ್ತೇವೆ, ಅದಕ್ಕಾಗಿ ನೀವು ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ನಮಗೆ ಕಳುಹಿಸಿದರೆ, ಮಾರ್ಗದರ್ಶನ ಅವಕಾಶ ನಿಮಗೆ ಲಭಿಸುತ್ತದೆ.

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...