ವಿಷಯಕ್ಕೆ ಹೋಗಿ

# ಹಾಸನ --- ಕ.ಸಾ.ಪ ದಲ್ಲಿ ಮಾಧ್ಯಮ ಮಿತ್ರರು- ಕೋಟೆ ಕಾಲಂ - ಲೇಖಕರು :- ಹರೀಶ್ ಹೆಚ್ .ಆರ್ .(ಕೋಟೆ).


ಲೇಖಕರು -ಹರೀಶ್ ಹೆಚ್ ಆರ್ (ಕೋಟೆ ).
 
ಕ.ಸಾ.ಪ ದಲ್ಲಿ ಮಾಧ್ಯಮ ಮಿತ್ರರು- ಕೋಟೆ  ಕಾಲಂ.

ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಚುನಾವಣೆ ಬಹುತೇಕ ಮಾರ್ಚ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ನಿಚ್ಚಳವಾಗಿದ್ದು ಅಭ್ಯರ್ಥಿಗಳು ಸಿದ್ದತೆಯಲ್ಲಿ ತೊಡಗಿದ್ದು ಆಕಾಂಕ್ಷಿಗಳಲ್ಲಿ ಮೇಲ್ನೋಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಕಾಣತೊಡಗಿದ್ದಾರೆ
ಇದೇನು ಸಾಹಿತ್ಯ ಪರಿಷತ್ತಿನ ಚುನಾವಣೆ ಯೊ ಅಥವಾ ಪತ್ರಕರ್ತರ ಸಂಘದ ಚುನಾವಣೆಯೋ ಎಂಬ ಅನುಮಾನ ಬರುವಂತೆ ಮಾಡಿದೆ
ಕಳೆದ ಚುನಾವಣೆಯ ಫಲಿತಾಂಶ ಬಂದ ನಂತರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿಅಧ್ಯಕ್ಷರಾಗಿದ್ದ ಮದನ ಗೌಡರು  ಒಕ್ಕಲಿಗ ಸಮುದಾಯದವರೇ ಏಕೆ ಪದೆಪದೆ ಸಾಹಿತ್ಯಪರಿಷತ್ ಅಧ್ಯಕ್ಷರಾಗಬೇಕು ಮುಂದಿನ ಅವಧಿಯಲ್ಲಿ ದಲಿತರು ಹಾಗು ಇತರೆ ಹಿಂದುಳಿದ ವರ್ಗಗಳ ವ್ಯಕ್ತಿ ಅಯ್ಕೆಯಾಗಬೇಕು ಎನ್ನುವ ಮೂಲಕ ಸಾಹಿತ್ಯ ಪರಿಷತ್ನಲ್ಲಿ  ಎಲ್ಲರಿಗೂ ಅವಕಾಶ ಲಬ್ಯವಾಗಬೇಕೆಂಬ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರು
 ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪತ್ರಕರ್ತ ಹೆತ್ತೂರು ನಾಗರಾಜ್ ಸಂಘಟನೆಯಲ್ಲಿ ತೊಡಗಿಕೊಂಡರು ಜೊತೆಗೆ ಉತ್ತಮ ಸಾಹಿತ್ಯ ರಚನೆ ಪುಸ್ತಕ ಪ್ರಕಟಿಸುವ ಮೂಲಕ ಸಾಹಿತ್ಯಾತ್ಮಕ ಚಟುವಟಿಕೆ ಗಳಲ್ಲಿ ಸಕ್ರಿಯರಾಗಿ ಮುಂದಿನ ಚುನಾವಣೆಗೆ ಸಿದ್ದತೆ ನಡೆಸಿದರು
ಇದರೊಂದಿಗೆ ಪತ್ರಿಕೆ ಹಾಗು ದಲಿತಪರ ಹೋರಾಟದ ಮೂಲಕ ಕಣದಲ್ಲಿದ್ದೇನೆ ಎಂಬ ಸಂದೇಶ ನೀಡುತ್ತಾ ಬಂದರು ಈ ಬಾರಿ ದಲಿತರಿಗೆ ಅವಕಾಶ ನೀಡಿ ಎಂಬ ವಿಚಾರ ಮುಂದಿಟ್ಟಿದ್ದಾರೆ ದಲಿತ ಪ್ರತಿನಿಧಿಯಾಗಿ ತಮ್ಮನ್ನು ಆಯ್ಕೆಮಾಡಿ ಎಂದು ಪ್ರತಿಪಾದಿಸುತ್ತಾ ತಮ್ಮ ಸಾಹಿತ್ಯ ಸೇವೆಯ ಬಗ್ಗೆ ಗಮನಸೆಳೆಯುತ್ತಿದ್ದಾರೆ
ಇನ್ನು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ‌ಅರ್ ಮಂಜುನಾಥ್ ಕಣದಲ್ಲಿರುವ ಪ್ರಮುಖ ಪ್ರತಿಸ್ಪರ್ಧಿ ಜಿಲ್ಲೆಯಲ್ಲಿ ಪತ್ರಕರ್ತರು ಅಲ್ಲದೆ ಎಲ್ಲಾ ವಲಯ ದಲ್ಲಿಯೂ ಸ್ನೇಹಿತ ರನ್ನು ಹೊಂದಿರುವ ವ್ಯಕ್ತಿ
ಸಾರ್ವಜನಿಕ ಜೀವನದಲ್ಲಿ ಯಾವುದೆ ಕಪ್ಪುಚುಕ್ಕಿ ಇಲ್ಲದ ಮಂಜುನಾಥ್ ಪರ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಲವು ತೋರಿರುವುದು ಕಂಡುಬಂದಿದೆ
(ಏನೇ ಹೇಳಿದರು ರಾಜಕೀಯ ನಾಯಕರ ಪರೋಕ್ಷ ಪಾತ್ರವಿಲ್ಲದೆ ಈ ಚುನಾವಣೆ ನಡೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ)ಸರ್ಕಾರಿ ನೌಕರರು ಅದರಲ್ಲಿಯೂ ಶಿಕ್ಷಕರು ಹಾಗೂ ಸಾಹಿತಿಗಳು ಮಂಜುನಾಥ್ ಪರ ಒಲವು ತೋರಿದ್ದಾರೆ
ಮತ್ತೋರ್ವ ಪತ್ರಕರ್ತ ಬಿ.ಆರ್.ಉದಯಕುಮಾರ್ ನಾಟಕಗಳ ಅಭಿನಯ ಸಾಹಿತ್ಯ ರಚನೆ ಹಾಗು ಸಾಹಿತಿಗಳ ಒಡನಾಟ ಇದರೊಂದಿಗೆ ಸ್ವಜಾತಿ ಬಲವು ಗೆಲುವಾಗಬಹುದೆಂಬ ಲೆಕ್ಕಾಚಾರದಲ್ಲಿ ಇದ್ದಾರೆ
ಯುವ ಪತ್ರಕರ್ತ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ರವಿನಾಕಲಗೂಡು ಸದ್ಯದಲ್ಲಿ ಎಲ್ಲರಿಗಿಂತ ಅದ್ಯಕ್ಷಗಾದಿಗೆ ಏರಲು ಹೆಚ್ಚಾಗಿ ಉತ್ಸುಕರಾಗಿರುವ ವ್ಯಕ್ತಿ
ನಾಯಕರ ಹಳ್ಳಿ ಮಂಜೇಗೌಡ ಅಧ್ಯಕ್ಷರಾದ ದಿನದಿಂದಲೇ ಮುಂದಿನ ಅಧ್ಯಕ್ಷ ನಾನೇ ಎಂಬಂತೆ ಬಿಂಬಿಸಿಕೊಂಡಿದ್ದಲ್ಲದೆ ಹಲವು ಕಾರ್ಯಕ್ರಮ ಗಳಲ್ಲಿ ಹಾಲಿ ಅಧ್ಯಕ್ಷ ರನ್ನೇ ರವಿ ಡಮ್ಮಿ ಆಗಿಸಿದ್ದುಸುಳ್ಳಲ್ಲ
ಸದ್ಯಕ್ಕಂತೂ ಗೆಲುವಿನ ಪೂರ್ಣ ವಿಶ್ವಾಸ ಹೊಂದಿದಂತೆ ಕಾಣುತ್ತಿರುವ ನಾಕಲಗೂಡಿಗೆ ಜೊತೆಯಲ್ಲಿರುವವರೆ ಮುಳುವಾಗುವ ಸಾಧ್ಯತೆ ಗಳಿವೆ ಹಾಗು ಅವರ ಮುಂದಿನ ಹೆಜ್ಜೆಗಳು ಫಲಿತಾಂಶ ನಿರ್ಧರಿಸಲಿದ್ದು ಸದ್ಯಕ್ಕಂತೂ ಹಲವರ ಫೇವರಿಟ್ ಅಗಿದ್ದಾರೆ
ಕಳೆದ ಬಾರಿ ಕಣದಲ್ಲಿದ್ದ ಮತ್ತೋರ್ವ ಪತ್ರಕರ್ತ ಹಾ.ನ.ಪ್ರಸನ್ನ(ಚಲಂ)ಸಾಹಿತಿಗಳ ವಲಯದಲ್ಲಿ ಈಗಲೂ ಸಹ ವಿಶ್ವಾಸ ಉಳಿಸಿಕೊಂಡ  ವ್ಯಕ್ತಿ ಸಾಹಿತ್ಯ ರಚನೆ ಹಾಗು ಸಂಘಟನೆ ಎರಡರಲ್ಲೂ ಮುಂದಿರುವ ಚಲಂ ಕಣಕ್ಕಿಳಿದರೆ ಕೆಲವರಿಗಂತೂ ಸೋಲಲು ಕಾರಣ ರಾಗುತ್ತಾರೆ
ಇನ್ನೂ ಸಹ ಒಂದಿಬ್ಬರು ಪತ್ರಕರ್ತರು ಕಣಕ್ಕಿಳಿಯುವ ಸಾಧ್ಯತೆ ಗಳಿವೆ ಯಾರೆ ಬರಲಿ ಬಿಡಲಿ ರವಿನಾಕಲಗೂಡು,ಕೆ.ಅರ್.ಮಂಜುನಾಥ್, ಹಾಗೂ ಹೆತ್ತೂರುನಾಗರಾಜ್ ಕಣದಲ್ಲುಳಿಯುವುದು ಖಚಿತವಾದ ವಿಚಾರ
ಇನ್ನು ಹಾಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಯಾಗಿದ್ದ ಜಾವಗಲ್ ಪ್ರಸನ್ನ, ಯುವ ಪ್ರಶಸ್ತಿ ವಿಜೇತ ಬಿ.ಟಿ.ಮಾನವ ತಾವು ಸಹ ಪ್ರಬಲಸ್ಪರ್ಧಿ ಗಳು ಎಂದುಘೋಷಿಸಿಕೊಂಡಿದ್ದಾರೆ
ಅದರೆ ಇದೆಲ್ಲದರ ನಡುವೆ ಸಾಹಿತಿಗಳ ಸುಳಿವೆ ಇಲ್ಲದಿರುವುದು ಅಚ್ಚರಿಯ ವಿಚಾರ ಹಂಪನಹಳ್ಳಿ ತಿಮ್ಮೇಗೌಡ,ಡಾ.ಮಲ್ಲೇಶಗೌಡ ಅಂತವರು ಸುಮ್ಮನಿರುವುದು ಸಾಹಿತ್ಯ ವಲಯದಲ್ಲಿ ಅಚ್ಚರಿ ಮೂಡಿಸಿದೆ
ಜಿಲ್ಲಾ ಕಸಾಪ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂಬುದನ್ನು ಸಮಯ ನಿರ್ಧರಿಸುತ್ತದೆ ಆದರೆ ಯಾರೇ ಆದರೂ ಮಾಧ್ಯಮದವರು ಮಾತ್ರ ನಿರ್ಣಾಯಕ ಪಾತ್ರವಹಿಸುವುದು ಸತ್ಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  ವಾಟ್ಸಾಪ್ ಸಂದೇಶಗಳು ಮಾತ್ರ  7090899728  Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  WhatsApp messages only 070908 99728

ಉತ್ತಮ ಫಲಿತಾಂಶ , ಹಣ ಉಳಿತಾಯ.

ನಾನು ನೆಟ್‌ಸರ್ಫ್ ಡೈರೆಕ್ಟ್‌ನೊಂದಿಗೆ ಕೆಲಸ ಮಾಡುತ್ತಿದ್ದೇನೆ. ನಾನು ನೆಟ್ಸರ್ಫ್ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುತ್ತಿದ್ದೇನೆ. ನಾನು ನಿಮಗೆ ಈ ಉತ್ಪನ್ನಗಳನ್ನು ಬಲವಾಗಿ ಶಿಫಾರಸು ಮಾಡುತ್ತೇವೆ. 'NETSURF DIRECT' 5 ವಿವಿಧ ವಿಭಾಗಗಳಲ್ಲಿ 90 ಕ್ಕೂ ಹೆಚ್ಚು ಗಿಡಮೂಲಿಕೆ ಉತ್ಪನ್ನಗಳನ್ನು ನೀಡುತ್ತದೆ ಅಂದರೆ ಆರೋಗ್ಯ ರಕ್ಷಣೆ, ವೈಯಕ್ತಿಕ ಆರೈಕೆ, ಬಣ್ಣ ಸೌಂದರ್ಯವರ್ಧಕಗಳು, ಗೃಹ ಆರೈಕೆ ಮತ್ತು ಕೃಷಿ. ಈ ಉತ್ಪನ್ನಗಳನ್ನು ಭಾರತದಾದ್ಯಂತ 2.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರು ನಂಬಿದ್ದಾರೆ. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೆಟ್‌ಸರ್ಫ್ ವರ್ಲ್ಡ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ಎಲ್ಲಾ ನೆಟ್‌ಸರ್ಫ್ ಉತ್ಪನ್ನಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಪಡೆದುಕೊಳ್ಳಿ. ಒಮ್ಮೆ ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ನನ್ನ ಮೊಬೈಲ್ ಸಂಖ್ಯೆಯನ್ನು (8453502625) "ಉಲ್ಲೇಖಿಸಿದವರು" ನಲ್ಲಿ ನಮೂದಿಸಿ ಮತ್ತು ನಿಮ್ಮ 1ನೇ ಖರೀದಿಯಿಂದ ಪುನಃ ಪಡೆದುಕೊಳ್ಳಬಹುದಾದ ರೂ.100 ವೋಚರ್ ಅನ್ನು ಪಡೆಯಿರಿ. Andriod ಬಳಕೆದಾರರು: https://bit.ly/3SxEkfB ಆಪಲ್ ಬಳಕೆದಾರರು: https://apple.co/3Ace2JT   I am working with Netsurf Direct. I am using Netsurf products regularly. I strongly recommend these products to you .   'NETSURF DIRECT...

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ (92) ವಿಧಿವಶ. ನಾಳೆ ಅಂತ್ಯಕ್ರಿಯೆ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಇನ್ನಿಲ್ಲ:- ತಡ ರಾತ್ರಿ ನಿಧನರಾಗಿರುವ ಎಸ್.ಎಂ ಕೃಷ್ಣ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ ಕೃಷ್ಣ ಇತ್ತೀಚೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಎಸ್.ಎಂ.ಕೃಷ್ಣ (92) ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್.ಎಂ.ಕೃಷ್ಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ    ಕೊನೆಯುಸಿರೆಳೆದಿದ್ದಾರೆ. ಎಸ್​ಎಂ ಕೃಷ್ಣ ಅವರು ಪೂರ್ತಿ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಮಂಡ್ಯದ ಸೋಮನಹಳ್ಳಿಯಲ್ಲಿ 1932ರಲ್ಲಿ ಜನಿಸಿದ್ದ ಅವರು, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದುಕೊಂಡಿದ್ದರು. ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು. ನಾಳೆ ಎಸ್​​ಎಂ ಕೃಷ್ಣ ಅವರ ಅಂತ್ಯಕ್ರಿಯೆ; ಬೆಂಗಳೂರಲ್ಲಿ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ.. ಫೋಟೋ ಕೃಪೆ :-ವಿಕಿಪೀ...