ಕ.ಸಾ.ಪ ದಲ್ಲಿ ಮಾಧ್ಯಮ ಮಿತ್ರರು- ಕೋಟೆ ಕಾಲಂ.
ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಚುನಾವಣೆ ಬಹುತೇಕ ಮಾರ್ಚ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ನಿಚ್ಚಳವಾಗಿದ್ದು ಅಭ್ಯರ್ಥಿಗಳು ಸಿದ್ದತೆಯಲ್ಲಿ ತೊಡಗಿದ್ದು ಆಕಾಂಕ್ಷಿಗಳಲ್ಲಿ ಮೇಲ್ನೋಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಕಾಣತೊಡಗಿದ್ದಾರೆ
ಇದೇನು ಸಾಹಿತ್ಯ ಪರಿಷತ್ತಿನ ಚುನಾವಣೆ ಯೊ ಅಥವಾ ಪತ್ರಕರ್ತರ ಸಂಘದ ಚುನಾವಣೆಯೋ ಎಂಬ ಅನುಮಾನ ಬರುವಂತೆ ಮಾಡಿದೆ
ಕಳೆದ ಚುನಾವಣೆಯ ಫಲಿತಾಂಶ ಬಂದ ನಂತರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿಅಧ್ಯಕ್ಷರಾಗಿದ್ದ ಮದನ ಗೌಡರು ಒಕ್ಕಲಿಗ ಸಮುದಾಯದವರೇ ಏಕೆ ಪದೆಪದೆ ಸಾಹಿತ್ಯಪರಿಷತ್ ಅಧ್ಯಕ್ಷರಾಗಬೇಕು ಮುಂದಿನ ಅವಧಿಯಲ್ಲಿ ದಲಿತರು ಹಾಗು ಇತರೆ ಹಿಂದುಳಿದ ವರ್ಗಗಳ ವ್ಯಕ್ತಿ ಅಯ್ಕೆಯಾಗಬೇಕು ಎನ್ನುವ ಮೂಲಕ ಸಾಹಿತ್ಯ ಪರಿಷತ್ನಲ್ಲಿ ಎಲ್ಲರಿಗೂ ಅವಕಾಶ ಲಬ್ಯವಾಗಬೇಕೆಂಬ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರು
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪತ್ರಕರ್ತ ಹೆತ್ತೂರು ನಾಗರಾಜ್ ಸಂಘಟನೆಯಲ್ಲಿ ತೊಡಗಿಕೊಂಡರು ಜೊತೆಗೆ ಉತ್ತಮ ಸಾಹಿತ್ಯ ರಚನೆ ಪುಸ್ತಕ ಪ್ರಕಟಿಸುವ ಮೂಲಕ ಸಾಹಿತ್ಯಾತ್ಮಕ ಚಟುವಟಿಕೆ ಗಳಲ್ಲಿ ಸಕ್ರಿಯರಾಗಿ ಮುಂದಿನ ಚುನಾವಣೆಗೆ ಸಿದ್ದತೆ ನಡೆಸಿದರು
ಇದರೊಂದಿಗೆ ಪತ್ರಿಕೆ ಹಾಗು ದಲಿತಪರ ಹೋರಾಟದ ಮೂಲಕ ಕಣದಲ್ಲಿದ್ದೇನೆ ಎಂಬ ಸಂದೇಶ ನೀಡುತ್ತಾ ಬಂದರು ಈ ಬಾರಿ ದಲಿತರಿಗೆ ಅವಕಾಶ ನೀಡಿ ಎಂಬ ವಿಚಾರ ಮುಂದಿಟ್ಟಿದ್ದಾರೆ ದಲಿತ ಪ್ರತಿನಿಧಿಯಾಗಿ ತಮ್ಮನ್ನು ಆಯ್ಕೆಮಾಡಿ ಎಂದು ಪ್ರತಿಪಾದಿಸುತ್ತಾ ತಮ್ಮ ಸಾಹಿತ್ಯ ಸೇವೆಯ ಬಗ್ಗೆ ಗಮನಸೆಳೆಯುತ್ತಿದ್ದಾರೆ
ಇನ್ನು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆಅರ್ ಮಂಜುನಾಥ್ ಕಣದಲ್ಲಿರುವ ಪ್ರಮುಖ ಪ್ರತಿಸ್ಪರ್ಧಿ ಜಿಲ್ಲೆಯಲ್ಲಿ ಪತ್ರಕರ್ತರು ಅಲ್ಲದೆ ಎಲ್ಲಾ ವಲಯ ದಲ್ಲಿಯೂ ಸ್ನೇಹಿತ ರನ್ನು ಹೊಂದಿರುವ ವ್ಯಕ್ತಿ
ಸಾರ್ವಜನಿಕ ಜೀವನದಲ್ಲಿ ಯಾವುದೆ ಕಪ್ಪುಚುಕ್ಕಿ ಇಲ್ಲದ ಮಂಜುನಾಥ್ ಪರ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಲವು ತೋರಿರುವುದು ಕಂಡುಬಂದಿದೆ
(ಏನೇ ಹೇಳಿದರು ರಾಜಕೀಯ ನಾಯಕರ ಪರೋಕ್ಷ ಪಾತ್ರವಿಲ್ಲದೆ ಈ ಚುನಾವಣೆ ನಡೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ)ಸರ್ಕಾರಿ ನೌಕರರು ಅದರಲ್ಲಿಯೂ ಶಿಕ್ಷಕರು ಹಾಗೂ ಸಾಹಿತಿಗಳು ಮಂಜುನಾಥ್ ಪರ ಒಲವು ತೋರಿದ್ದಾರೆ
ಮತ್ತೋರ್ವ ಪತ್ರಕರ್ತ ಬಿ.ಆರ್.ಉದಯಕುಮಾರ್ ನಾಟಕಗಳ ಅಭಿನಯ ಸಾಹಿತ್ಯ ರಚನೆ ಹಾಗು ಸಾಹಿತಿಗಳ ಒಡನಾಟ ಇದರೊಂದಿಗೆ ಸ್ವಜಾತಿ ಬಲವು ಗೆಲುವಾಗಬಹುದೆಂಬ ಲೆಕ್ಕಾಚಾರದಲ್ಲಿ ಇದ್ದಾರೆ
ಯುವ ಪತ್ರಕರ್ತ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ರವಿನಾಕಲಗೂಡು ಸದ್ಯದಲ್ಲಿ ಎಲ್ಲರಿಗಿಂತ ಅದ್ಯಕ್ಷಗಾದಿಗೆ ಏರಲು ಹೆಚ್ಚಾಗಿ ಉತ್ಸುಕರಾಗಿರುವ ವ್ಯಕ್ತಿ
ನಾಯಕರ ಹಳ್ಳಿ ಮಂಜೇಗೌಡ ಅಧ್ಯಕ್ಷರಾದ ದಿನದಿಂದಲೇ ಮುಂದಿನ ಅಧ್ಯಕ್ಷ ನಾನೇ ಎಂಬಂತೆ ಬಿಂಬಿಸಿಕೊಂಡಿದ್ದಲ್ಲದೆ ಹಲವು ಕಾರ್ಯಕ್ರಮ ಗಳಲ್ಲಿ ಹಾಲಿ ಅಧ್ಯಕ್ಷ ರನ್ನೇ ರವಿ ಡಮ್ಮಿ ಆಗಿಸಿದ್ದುಸುಳ್ಳಲ್ಲ
ಸದ್ಯಕ್ಕಂತೂ ಗೆಲುವಿನ ಪೂರ್ಣ ವಿಶ್ವಾಸ ಹೊಂದಿದಂತೆ ಕಾಣುತ್ತಿರುವ ನಾಕಲಗೂಡಿಗೆ ಜೊತೆಯಲ್ಲಿರುವವರೆ ಮುಳುವಾಗುವ ಸಾಧ್ಯತೆ ಗಳಿವೆ ಹಾಗು ಅವರ ಮುಂದಿನ ಹೆಜ್ಜೆಗಳು ಫಲಿತಾಂಶ ನಿರ್ಧರಿಸಲಿದ್ದು ಸದ್ಯಕ್ಕಂತೂ ಹಲವರ ಫೇವರಿಟ್ ಅಗಿದ್ದಾರೆ
ಕಳೆದ ಬಾರಿ ಕಣದಲ್ಲಿದ್ದ ಮತ್ತೋರ್ವ ಪತ್ರಕರ್ತ ಹಾ.ನ.ಪ್ರಸನ್ನ(ಚಲಂ)ಸಾಹಿತಿಗಳ ವಲಯದಲ್ಲಿ ಈಗಲೂ ಸಹ ವಿಶ್ವಾಸ ಉಳಿಸಿಕೊಂಡ ವ್ಯಕ್ತಿ ಸಾಹಿತ್ಯ ರಚನೆ ಹಾಗು ಸಂಘಟನೆ ಎರಡರಲ್ಲೂ ಮುಂದಿರುವ ಚಲಂ ಕಣಕ್ಕಿಳಿದರೆ ಕೆಲವರಿಗಂತೂ ಸೋಲಲು ಕಾರಣ ರಾಗುತ್ತಾರೆ
ಇನ್ನೂ ಸಹ ಒಂದಿಬ್ಬರು ಪತ್ರಕರ್ತರು ಕಣಕ್ಕಿಳಿಯುವ ಸಾಧ್ಯತೆ ಗಳಿವೆ ಯಾರೆ ಬರಲಿ ಬಿಡಲಿ ರವಿನಾಕಲಗೂಡು,ಕೆ.ಅರ್.ಮಂಜುನಾಥ್, ಹಾಗೂ ಹೆತ್ತೂರುನಾಗರಾಜ್ ಕಣದಲ್ಲುಳಿಯುವುದು ಖಚಿತವಾದ ವಿಚಾರ
ಇನ್ನು ಹಾಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಯಾಗಿದ್ದ ಜಾವಗಲ್ ಪ್ರಸನ್ನ, ಯುವ ಪ್ರಶಸ್ತಿ ವಿಜೇತ ಬಿ.ಟಿ.ಮಾನವ ತಾವು ಸಹ ಪ್ರಬಲಸ್ಪರ್ಧಿ ಗಳು ಎಂದುಘೋಷಿಸಿಕೊಂಡಿದ್ದಾರೆ
ಅದರೆ ಇದೆಲ್ಲದರ ನಡುವೆ ಸಾಹಿತಿಗಳ ಸುಳಿವೆ ಇಲ್ಲದಿರುವುದು ಅಚ್ಚರಿಯ ವಿಚಾರ ಹಂಪನಹಳ್ಳಿ ತಿಮ್ಮೇಗೌಡ,ಡಾ.ಮಲ್ಲೇಶಗೌಡ ಅಂತವರು ಸುಮ್ಮನಿರುವುದು ಸಾಹಿತ್ಯ ವಲಯದಲ್ಲಿ ಅಚ್ಚರಿ ಮೂಡಿಸಿದೆ
ಜಿಲ್ಲಾ ಕಸಾಪ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂಬುದನ್ನು ಸಮಯ ನಿರ್ಧರಿಸುತ್ತದೆ ಆದರೆ ಯಾರೇ ಆದರೂ ಮಾಧ್ಯಮದವರು ಮಾತ್ರ ನಿರ್ಣಾಯಕ ಪಾತ್ರವಹಿಸುವುದು ಸತ್ಯ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info