ವಿಷಯಕ್ಕೆ ಹೋಗಿ

# ಹಾಸನ --- ಕ.ಸಾ.ಪ ದಲ್ಲಿ ಮಾಧ್ಯಮ ಮಿತ್ರರು- ಕೋಟೆ ಕಾಲಂ - ಲೇಖಕರು :- ಹರೀಶ್ ಹೆಚ್ .ಆರ್ .(ಕೋಟೆ).


ಲೇಖಕರು -ಹರೀಶ್ ಹೆಚ್ ಆರ್ (ಕೋಟೆ ).
 
ಕ.ಸಾ.ಪ ದಲ್ಲಿ ಮಾಧ್ಯಮ ಮಿತ್ರರು- ಕೋಟೆ  ಕಾಲಂ.

ಹಾಸನ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ ಚುನಾವಣೆ ಬಹುತೇಕ ಮಾರ್ಚ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ನಿಚ್ಚಳವಾಗಿದ್ದು ಅಭ್ಯರ್ಥಿಗಳು ಸಿದ್ದತೆಯಲ್ಲಿ ತೊಡಗಿದ್ದು ಆಕಾಂಕ್ಷಿಗಳಲ್ಲಿ ಮೇಲ್ನೋಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಕಾಣತೊಡಗಿದ್ದಾರೆ
ಇದೇನು ಸಾಹಿತ್ಯ ಪರಿಷತ್ತಿನ ಚುನಾವಣೆ ಯೊ ಅಥವಾ ಪತ್ರಕರ್ತರ ಸಂಘದ ಚುನಾವಣೆಯೋ ಎಂಬ ಅನುಮಾನ ಬರುವಂತೆ ಮಾಡಿದೆ
ಕಳೆದ ಚುನಾವಣೆಯ ಫಲಿತಾಂಶ ಬಂದ ನಂತರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿಅಧ್ಯಕ್ಷರಾಗಿದ್ದ ಮದನ ಗೌಡರು  ಒಕ್ಕಲಿಗ ಸಮುದಾಯದವರೇ ಏಕೆ ಪದೆಪದೆ ಸಾಹಿತ್ಯಪರಿಷತ್ ಅಧ್ಯಕ್ಷರಾಗಬೇಕು ಮುಂದಿನ ಅವಧಿಯಲ್ಲಿ ದಲಿತರು ಹಾಗು ಇತರೆ ಹಿಂದುಳಿದ ವರ್ಗಗಳ ವ್ಯಕ್ತಿ ಅಯ್ಕೆಯಾಗಬೇಕು ಎನ್ನುವ ಮೂಲಕ ಸಾಹಿತ್ಯ ಪರಿಷತ್ನಲ್ಲಿ  ಎಲ್ಲರಿಗೂ ಅವಕಾಶ ಲಬ್ಯವಾಗಬೇಕೆಂಬ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದರು
 ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಪತ್ರಕರ್ತ ಹೆತ್ತೂರು ನಾಗರಾಜ್ ಸಂಘಟನೆಯಲ್ಲಿ ತೊಡಗಿಕೊಂಡರು ಜೊತೆಗೆ ಉತ್ತಮ ಸಾಹಿತ್ಯ ರಚನೆ ಪುಸ್ತಕ ಪ್ರಕಟಿಸುವ ಮೂಲಕ ಸಾಹಿತ್ಯಾತ್ಮಕ ಚಟುವಟಿಕೆ ಗಳಲ್ಲಿ ಸಕ್ರಿಯರಾಗಿ ಮುಂದಿನ ಚುನಾವಣೆಗೆ ಸಿದ್ದತೆ ನಡೆಸಿದರು
ಇದರೊಂದಿಗೆ ಪತ್ರಿಕೆ ಹಾಗು ದಲಿತಪರ ಹೋರಾಟದ ಮೂಲಕ ಕಣದಲ್ಲಿದ್ದೇನೆ ಎಂಬ ಸಂದೇಶ ನೀಡುತ್ತಾ ಬಂದರು ಈ ಬಾರಿ ದಲಿತರಿಗೆ ಅವಕಾಶ ನೀಡಿ ಎಂಬ ವಿಚಾರ ಮುಂದಿಟ್ಟಿದ್ದಾರೆ ದಲಿತ ಪ್ರತಿನಿಧಿಯಾಗಿ ತಮ್ಮನ್ನು ಆಯ್ಕೆಮಾಡಿ ಎಂದು ಪ್ರತಿಪಾದಿಸುತ್ತಾ ತಮ್ಮ ಸಾಹಿತ್ಯ ಸೇವೆಯ ಬಗ್ಗೆ ಗಮನಸೆಳೆಯುತ್ತಿದ್ದಾರೆ
ಇನ್ನು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ‌ಅರ್ ಮಂಜುನಾಥ್ ಕಣದಲ್ಲಿರುವ ಪ್ರಮುಖ ಪ್ರತಿಸ್ಪರ್ಧಿ ಜಿಲ್ಲೆಯಲ್ಲಿ ಪತ್ರಕರ್ತರು ಅಲ್ಲದೆ ಎಲ್ಲಾ ವಲಯ ದಲ್ಲಿಯೂ ಸ್ನೇಹಿತ ರನ್ನು ಹೊಂದಿರುವ ವ್ಯಕ್ತಿ
ಸಾರ್ವಜನಿಕ ಜೀವನದಲ್ಲಿ ಯಾವುದೆ ಕಪ್ಪುಚುಕ್ಕಿ ಇಲ್ಲದ ಮಂಜುನಾಥ್ ಪರ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಒಲವು ತೋರಿರುವುದು ಕಂಡುಬಂದಿದೆ
(ಏನೇ ಹೇಳಿದರು ರಾಜಕೀಯ ನಾಯಕರ ಪರೋಕ್ಷ ಪಾತ್ರವಿಲ್ಲದೆ ಈ ಚುನಾವಣೆ ನಡೆಯದು ಎಂಬುದು ಎಲ್ಲರಿಗೂ ತಿಳಿದ ವಿಚಾರ)ಸರ್ಕಾರಿ ನೌಕರರು ಅದರಲ್ಲಿಯೂ ಶಿಕ್ಷಕರು ಹಾಗೂ ಸಾಹಿತಿಗಳು ಮಂಜುನಾಥ್ ಪರ ಒಲವು ತೋರಿದ್ದಾರೆ
ಮತ್ತೋರ್ವ ಪತ್ರಕರ್ತ ಬಿ.ಆರ್.ಉದಯಕುಮಾರ್ ನಾಟಕಗಳ ಅಭಿನಯ ಸಾಹಿತ್ಯ ರಚನೆ ಹಾಗು ಸಾಹಿತಿಗಳ ಒಡನಾಟ ಇದರೊಂದಿಗೆ ಸ್ವಜಾತಿ ಬಲವು ಗೆಲುವಾಗಬಹುದೆಂಬ ಲೆಕ್ಕಾಚಾರದಲ್ಲಿ ಇದ್ದಾರೆ
ಯುವ ಪತ್ರಕರ್ತ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ರವಿನಾಕಲಗೂಡು ಸದ್ಯದಲ್ಲಿ ಎಲ್ಲರಿಗಿಂತ ಅದ್ಯಕ್ಷಗಾದಿಗೆ ಏರಲು ಹೆಚ್ಚಾಗಿ ಉತ್ಸುಕರಾಗಿರುವ ವ್ಯಕ್ತಿ
ನಾಯಕರ ಹಳ್ಳಿ ಮಂಜೇಗೌಡ ಅಧ್ಯಕ್ಷರಾದ ದಿನದಿಂದಲೇ ಮುಂದಿನ ಅಧ್ಯಕ್ಷ ನಾನೇ ಎಂಬಂತೆ ಬಿಂಬಿಸಿಕೊಂಡಿದ್ದಲ್ಲದೆ ಹಲವು ಕಾರ್ಯಕ್ರಮ ಗಳಲ್ಲಿ ಹಾಲಿ ಅಧ್ಯಕ್ಷ ರನ್ನೇ ರವಿ ಡಮ್ಮಿ ಆಗಿಸಿದ್ದುಸುಳ್ಳಲ್ಲ
ಸದ್ಯಕ್ಕಂತೂ ಗೆಲುವಿನ ಪೂರ್ಣ ವಿಶ್ವಾಸ ಹೊಂದಿದಂತೆ ಕಾಣುತ್ತಿರುವ ನಾಕಲಗೂಡಿಗೆ ಜೊತೆಯಲ್ಲಿರುವವರೆ ಮುಳುವಾಗುವ ಸಾಧ್ಯತೆ ಗಳಿವೆ ಹಾಗು ಅವರ ಮುಂದಿನ ಹೆಜ್ಜೆಗಳು ಫಲಿತಾಂಶ ನಿರ್ಧರಿಸಲಿದ್ದು ಸದ್ಯಕ್ಕಂತೂ ಹಲವರ ಫೇವರಿಟ್ ಅಗಿದ್ದಾರೆ
ಕಳೆದ ಬಾರಿ ಕಣದಲ್ಲಿದ್ದ ಮತ್ತೋರ್ವ ಪತ್ರಕರ್ತ ಹಾ.ನ.ಪ್ರಸನ್ನ(ಚಲಂ)ಸಾಹಿತಿಗಳ ವಲಯದಲ್ಲಿ ಈಗಲೂ ಸಹ ವಿಶ್ವಾಸ ಉಳಿಸಿಕೊಂಡ  ವ್ಯಕ್ತಿ ಸಾಹಿತ್ಯ ರಚನೆ ಹಾಗು ಸಂಘಟನೆ ಎರಡರಲ್ಲೂ ಮುಂದಿರುವ ಚಲಂ ಕಣಕ್ಕಿಳಿದರೆ ಕೆಲವರಿಗಂತೂ ಸೋಲಲು ಕಾರಣ ರಾಗುತ್ತಾರೆ
ಇನ್ನೂ ಸಹ ಒಂದಿಬ್ಬರು ಪತ್ರಕರ್ತರು ಕಣಕ್ಕಿಳಿಯುವ ಸಾಧ್ಯತೆ ಗಳಿವೆ ಯಾರೆ ಬರಲಿ ಬಿಡಲಿ ರವಿನಾಕಲಗೂಡು,ಕೆ.ಅರ್.ಮಂಜುನಾಥ್, ಹಾಗೂ ಹೆತ್ತೂರುನಾಗರಾಜ್ ಕಣದಲ್ಲುಳಿಯುವುದು ಖಚಿತವಾದ ವಿಚಾರ
ಇನ್ನು ಹಾಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಯಾಗಿದ್ದ ಜಾವಗಲ್ ಪ್ರಸನ್ನ, ಯುವ ಪ್ರಶಸ್ತಿ ವಿಜೇತ ಬಿ.ಟಿ.ಮಾನವ ತಾವು ಸಹ ಪ್ರಬಲಸ್ಪರ್ಧಿ ಗಳು ಎಂದುಘೋಷಿಸಿಕೊಂಡಿದ್ದಾರೆ
ಅದರೆ ಇದೆಲ್ಲದರ ನಡುವೆ ಸಾಹಿತಿಗಳ ಸುಳಿವೆ ಇಲ್ಲದಿರುವುದು ಅಚ್ಚರಿಯ ವಿಚಾರ ಹಂಪನಹಳ್ಳಿ ತಿಮ್ಮೇಗೌಡ,ಡಾ.ಮಲ್ಲೇಶಗೌಡ ಅಂತವರು ಸುಮ್ಮನಿರುವುದು ಸಾಹಿತ್ಯ ವಲಯದಲ್ಲಿ ಅಚ್ಚರಿ ಮೂಡಿಸಿದೆ
ಜಿಲ್ಲಾ ಕಸಾಪ ಮುಂದಿನ ಅಧ್ಯಕ್ಷರು ಯಾರಾಗುತ್ತಾರೆ ಎಂಬುದನ್ನು ಸಮಯ ನಿರ್ಧರಿಸುತ್ತದೆ ಆದರೆ ಯಾರೇ ಆದರೂ ಮಾಧ್ಯಮದವರು ಮಾತ್ರ ನಿರ್ಣಾಯಕ ಪಾತ್ರವಹಿಸುವುದು ಸತ್ಯ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728