ಸುದ್ದಿ ಸಂಪಾದಕರು :
ಹರೀಶ್ ಹೆಚ್ ಆರ್ (ಕೋಟೆ)
ನಮ್ಮದು ಒಂದೇ ಇಲಾಖೆ,ಕೇವಲ
ಕೆಳ ಹಂತದ ಅಧಿಕಾರಿಗಳು ಮಾತ್ರ ಕೆಲಸಕ್ಕೆ ಸೀಮಿತವಲ್ಲ,ಅವರ ಕಷ್ಟ ಮೇಲಾಧಿಕಾರಿಗಳಿಗೆ ಗೋತ್ತಾಗುವುದು ಯಾವಾಗ?
ಅವರ ಕಷ್ಟ, ಒತ್ತಡಗಳು ನಮಗೂ ಗೊತ್ತಾಗಬೇಕು ಅಲ್ವ!! ಇದನೆಲ್ಲ ಅರಿತ ಐಪಿಎಸ್ ಅಧಿಕಾರಿ ಸ್ವತಃ ಅಖಾಡಕ್ಕೆ
ಇಳಿದಿದ್ದಾರೆ...ಸತತ ಕಿರಿಯ ಸಿಬ್ಬಂದಿಗಳ ಜೊತೆ ಕಾರ್ಯೋನ್ಮುಖರಾಗಿ ಮಾದರಿಯಾಗಿದ್ದಾರೆ...ಅದರ ಒಂದು ಕಂಪ್ಲೀಟ್ ಸ್ಟೋರಿ ಇಲ್ಲಿದೆ...
ಎಸ್ಪಿ ಹೀಗೆ ಸ್ವತಃ ಲಾಠಿ ಹಿಡಿದು ಫೀಲ್ಡ್ಗೆ ಇಳಿದಿರುವ ಐಪಿಎಸ್ ಅಧಿಕಾರಿ ಬೇರೆ ಯಾರು ಅಲ್ಲ, ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀನಿವಾಸ್ ಗೌಡ...ಹಾಸನಕ್ಕೆ ಬಂದು ಇನ್ನು ಒಂದು ವರ್ಷ ಆಗಿಲ್ಲ, ಖಡಕ್ ಆಫೀಸರ್ ಅನ್ನೋ ಹಣೆ ಪಟ್ಟಿ ಜನರ ಬಾಯಲಿ ಗುಣಗತೊಡಗಿದೆ..ಇನ್ನು ಎಸ್ಪಿ ಸಾಹೇಬರು ಬರುತ್ತಿದ್ದಾರೆ, ಅಂದ್ರೆ ಇಲಾಖೆ ಅಲ್ಲದೆ ಆ ಸ್ಥಳದಲ್ಲಿರುವ ಜನರು ಕೂಡ ಅವರ ಕೆಲಸಕ್ಕೆ ಮನಸೋತಿದ್ದಾರೆ..
ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಒಂದು ಕಡೆ,ಇನ್ನೂಂದು ಕಡೆ ಕ್ರೈಮ್ ಕೂಡ ಜಾಸ್ತಿ ಇರುತ್ತೆ..ಇಲ್ಲಿ ಹೇಳೂರು ಇಲ್ಲ ಕೇಳೋರು ಇಲ್ಲ!!! ಇಂತ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಟ್ರಾಫಿಕ್ ಇನ್ಸಪೆಕ್ಟರ್ ಬಾಲು,ಹಾಗೂ ನಗರ ಠಾಣೆ ಪಿ ಎಸ್ ಐ ಇವರಿಬ್ಬರು ನಗರಕ್ಕೆ ಬಂದ ಮೇಲೆ ಸಾಕಷ್ಟು ಕೆಲಸ ಮಾಡಿದ್ದಾರೆ..ಟ್ರಾಫಿಕ್ ಸಮಸ್ಯೆ, ಒಂದಿಷ್ಟು ಕ್ರೈಮ್ ಕೂಡ ಕಮ್ಮಿ ಅದಂತೆ ಕಾಣಿಸುತ್ತಿದೆ..ಅದರೆ ನಮ್ಮ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ ಅವರ ಕಷ್ಟ ಎನೆಂಬುದು ತಿಳಿಯುವುದಕ್ಕೆ ಸ್ವತಃ ಪೊಲೀಸ್ ಮುಖ್ಯಸ್ಥ ಫೀಲ್ಡ್ಗೆ ಇಳಿದು ಸಾರ್ವಜನಿಕರಿಗೆ ಬುದ್ದಿ ಹೇಳಿದ್ರು..ಕೆಲವರೆಂತು ರಸ್ತೆಯನ್ನೆ ಮಾರುಕಟ್ಟೆ ಮಾಡಿದ್ರು.ಇನ್ನು ಬಾರ್ಗಳ ಮುಂದೆ ಟ್ರಾಫಿಕ್ ಸಮಸ್ಯೆ, ಇನ್ನು ಕೆಲವರು ಮುಖಕ್ಕೆ ಮಾಸ್ಕ್ ಹಾಕದೇ ಕೆಲಸಮಾಡುತ್ತಿದ್ದನ್ನು ಗಮನಿಸಿ ಎಲ್ಲರಿಗೂ ಬುದ್ದಿ ಹೇಳಿದ್ದಾರೆ...ಕೆಲ ಸಲ ಬಾರ್ಗಳ ಮುಂದೆ ಟ್ರಾಫಿಕ್ ಸಮಸ್ಯೆಯಿಂದ ಎದುರಿಸುತ್ತಿದ್ದವರಿಗೆ ಹಾಸನ ಎಸ್ಪಿ ಖಡಕ್ ಆದೇಶ ಮಾಡಿದ್ದಾರೆ..ಇನ್ನು ಮುಂದೆ ಹೀಗೆಲ್ಲ ಮಾಡಿದ್ರೆ ಕೇಸ್ ಸಮೇತ ಬಾರ್ ಬಂದ್ ಮಾಡಿಸುತ್ತೆನೆ ಅಂತ ಸೂಚನೆ ಕೊಟ್ಟಿದ್ದಾರೆ ಹಾಸನ ಎಸ್ಪಿ ಶ್ರೀನಿವಾಸ್ ಗೌಡ...ಇದೆ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ನಮ್ಮ ಸಿಬ್ಬಂದಿಗಳ ಸಮಸ್ಯೆ ಹಾಗೂ ಕಷ್ಟ ಗೊತ್ತಾಗಬೇಕು ಅಂತ ನಾನೇ ಫೀಲ್ಡ್ಗೆ ಇಳಿದಿದ್ದೆನೆ..ಇದರಿಂದ ನಾವುಗಳೆ ಸಮಸ್ಯೆಗೆ ಸ್ಪಂದಿಸದಿದ್ದರೆ ಬೇರೆಯವರಿಗೆ ಬುದ್ದಿ ಹೇಗೆ ಹೇಳಬೇಕು ಎಂಬ ಹೇಳಿಕೆ ನೀಡಿದರು.
ಜಿಲ್ಲಾ ಪೊಲೀಸ್ ಮುಖ್ಯಸ್ಥ ಶ್ರೀನಿವಾಸ್ ಗೌಡ.
ಒಟ್ಟಾರೆ ಹಾಸನ ಜಿಲ್ಲೆಯಲ್ಲಿ ಕ್ರೈಮ್ , ಟ್ರಾಫಿಕ್ ಸಮಸ್ಯೆ, ಸಾರ್ವಜನಿಕರ ಅಹವಾಲು ಹಾಗೂ ಇತರೆ ಸಮಸ್ಯೆ ಪರಿಹರಿಸಲು ಐಪಿಎಸ್ ಅಧಿಕಾರಿ ಸ್ವತಃ ಅಖಾಡಕ್ಕೆ ಇಳಿದು ಕೆಲಸ ಮಾಡುವುದಕ್ಕೆ ಮುಂದಾಗಿರುವುದು ಸಂತಸವೇ ಸರಿ...
ವಿಮರ್ಶಾ -vimarsha
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
Vimarsha.info