ವಿಷಯಕ್ಕೆ ಹೋಗಿ

ರಾಷ್ಟ್ರೀಯ ಅಗತ್ಯ ಔಷಧಿಗಳ 2022ರ ಪಟ್ಟಿ ಬಿಡುಗಡೆ :-ಡಾಕ್ಟರ್ ಮಾನ್ಸುಖ್ ಮಾಂಡವೀಯ. NLEM-2022

ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ ಬಿಡುಗಡೆ

ದಿನಾಂಕ:-13/09/2022.

ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ (ಎನ್‌ಎಲ್‌ಇಎಂ) 2022 ನ್ನು ಬಿಡುಗಡೆ ಮಾಡಿದ ಡಾ. ಮನ್ಸುಖ್ ಮಾಂಡವೀಯ
ಕೃಪೆ:-ಪಿಐಬಿ

ಎನ್‌ಎಲ್‌ಇಎಂ 2022 ರಲ್ಲಿ 34 ಹೊಸ ಔಷಧಗಳೊಂದಿಗೆ 384 ಔಷಧಗಳನ್ನು ಸೇರಿಸಲಾಗಿದೆ.

ಪ್ರಧಾನಮಂತ್ರಿಯವರ ";ಸಬ್ಕೋ ದವಾಯಿ, ಸಸ್ತಿ ದವಾಯಿ" ದೃಷ್ಟಿಕೋನದ ಅಡಿಯಲ್ಲಿ ಎನ್‌ಎಲ್‌ಇಎಂ ಕಡಿಮೆ ವೆಚ್ಚದ ಕೈಗೆಟುಕುವ ಆರೋಗ್ಯ ರಕ್ಷಣೆಯ ಕಡೆಗೆ ಮತ್ತೊಂದು ಹೆಜ್ಜೆಯಾಗಿದೆ”

ಇದು ಔಷಧಿಗಳ ಪರಿಣಾಮಕಾರಿತ್ವ, ಸುರಕ್ಷತೆ, ಗುಣಮಟ್ಟ, ಕೈಗೆಟುಕುವಿಕೆ ಮತ್ತು ಲಭ್ಯತೆಯನ್ನು ಮತ್ತಷ್ಟು ಖಚಿತಪಡಿಸುತ್ತದೆ: ಡಾ ಮನ್ಸುಖ್ ಮಾಂಡವೀಯ

ಆಂಟಿಮೈಕ್ರೊಬಿಯಲ್ ನಿರೋಧಕ ಶಕ್ತಿ ಕುರಿತು ಜಾಗೃತಿ ಮೂಡಿಸಲು ಡಾ. ಭಾರತಿ ಪ್ರವೀಣ್ ಪವಾರ್ ಕರೆ



ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸಬ್ಕೋ ದವಾಯಿ, ಸಸ್ತಿ ದವಾಯಿ ದೃಷ್ಟಿಕೋನದ ಅಡಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ದಿಕ್ಕಿನಲ್ಲಿ, ಆರೋಗ್ಯ ರಕ್ಷಣೆಯ ಎಲ್ಲಾ ಹಂತಗಳಲ್ಲಿ ಕೈಗೆಟುಕುವ ಗುಣಮಟ್ಟದ ಔಷಧಿಗಳ ಲಭ್ಯತೆಯನ್ನು ಖಾತ್ರಿಪಡಿಸುವಲ್ಲಿ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ (ಎನ್‌ಎಲ್‌ಇಎಂ) ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ ಮನ್ಸುಖ್ ಮಾಂಡವೀಯ ಹೇಳಿದ್ದಾರೆ. ಅವರು  ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ (ಎನ್‌ಎಲ್‌ಇಎಂ) 2022 ಅನ್ನು ಬಿಡುಗಡೆ ಮಾಡಿ ಮಾತನಾಡಿ, ಇದು ವೆಚ್ಚ-ಪರಿಣಾಮಕಾರಿ, ಗುಣಮಟ್ಟದ ಔಷಧಗಳಿಗೆ ಉತ್ತೇಜನ ನೀಡುತ್ತದೆ ಮತ್ತು ನಾಗರಿಕರಿಗೆ ಆರೋಗ್ಯ ರಕ್ಷಣೆಯ ಮೇಲಿನ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದರು.

ಈ ಪಟ್ಟಿಯಲ್ಲಿ 34 ಹೊಸ ಔಷಧಗಳ ಸೇರ್ಪಡೆಯೊಂದಿಗೆ 384 ಔಷಧಗಳಿವೆ. ಆದರೆ ಹಿಂದಿನ ಪಟ್ಟಿಯಿಂದ 26 ಔಷಧಗಳನ್ನು ಕೈಬಿಡಲಾಗಿದೆ. ಔಷಧಿಗಳನ್ನು 27 ಚಿಕಿತ್ಸಕ ವರ್ಗಗಳಾಗಿ ವರ್ಗೀಕರಿಸಲಾಗಿದೆ.



ಪರಿಣಾಮಕಾರಿತ್ವ, ಸುರಕ್ಷತೆ, ಗುಣಮಟ್ಟ ಮತ್ತು ಚಿಕಿತ್ಸೆಯ ಒಟ್ಟು ವೆಚ್ಚದ ಆಧಾರದ ಮೇಲೆ ಆದ್ಯತೆಯ ಆರೋಗ್ಯ ಅಗತ್ಯಗಳನ್ನು ಪೂರೈಸುವ ಔಷಧಿಗಳನ್ನು "ಅಗತ್ಯ ಔಷಧಿಗಳು" ಎಂದು ಕರೆಯಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. ಮೂರು ಪ್ರಮುಖ ಅಂಶಗಳನ್ನು ಅಂದರೆ ವೆಚ್ಚ, ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪರಿಗಣಿಸಿ ಔಷಧಿಗಳ ತರ್ಕಬದ್ಧ ಬಳಕೆಯನ್ನು ಉತ್ತೇಜಿಸುವುದು ಎನ್‌ಎಲ್‌ಇಎಂನ ಪ್ರಾಥಮಿಕ ಉದ್ದೇಶವಾಗಿದೆ. ಇದು ಆರೋಗ್ಯ ಸಂಪನ್ಮೂಲಗಳು ಮತ್ತು ಬಜೆಟ್‌ನ ಅತ್ಯುತ್ತಮ ಬಳಕೆ; ಔಷಧ ಖರೀದಿ ನೀತಿಗಳು, ಆರೋಗ್ಯ ವಿಮೆ; ಔಷಧಿಗಳನ್ನು ಶಿಫಾರಸು ಮಾಡುವ ಅಭ್ಯಾಸಗಳನ್ನು ಸುಧಾರಿಸುವುದು; ಸ್ನಾತಕ/ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಮತ್ತು ಔಷಧೀಯ ನೀತಿಗಳ ರಚನೆಯಲ್ಲಿ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಎನ್‌ಎಲ್‌ಇಎಂನಲ್ಲಿ, ಔಷಧಗಳನ್ನು ಆರೋಗ್ಯ ವ್ಯವಸ್ಥೆಯ ಮಟ್ಟವನ್ನು ಆಧರಿಸಿ ಪಿ- ಪ್ರಾಥಮಿಕ, ಎಸ್-ಸೆಕೆಂಡರಿ ಮತ್ತು ಟಿ-ತೃತೀಯ ಎಂದು ವರ್ಗೀಕರಿಸಲಾಗಿದೆ.

ಎಚ್ಚರಿಕೆಯಿಂದ ಆಯ್ಕೆಮಾಡಲಾಗಿರುವ ಔಷಧಿಗಳ ಸೀಮಿತ ಪಟ್ಟಿಯು ಆರೋಗ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ, ವೆಚ್ಚ-ಪರಿಣಾಮಕಾರಿ ಆರೋಗ್ಯ ರಕ್ಷಣೆ ಮತ್ತು ಔಷಧಿಗಳ ಉತ್ತಮ ನಿರ್ವಹಣೆಯನ್ನು ಒದಗಿಸುವ ಪರಿಕಲ್ಪನೆಯನ್ನು ಆಧರಿಸಿದೆ ಎಂದು ಅವರು ವಿವರಿಸಿದರು. ಎನ್‌ಎಲ್‌ಇಎಂ ಒಂದು ಕ್ರಿಯಾಶೀಲ ದಾಖಲೆಯಾಗಿದೆ ಮತ್ತು ಬದಲಾಗುತ್ತಿರುವ ಸಾರ್ವಜನಿಕ ಆರೋಗ್ಯದ ಆದ್ಯತೆಗಳು ಮತ್ತು ಔಷಧೀಯ ಜ್ಞಾನದಲ್ಲಿನ ಪ್ರಗತಿಯನ್ನು ಪರಿಗಣಿಸಿ ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ ಎಂದು ಅವರು ಹೇಳಿದರು. ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯನ್ನು ಮೊದಲು 1996 ರಲ್ಲಿ ರೂಪಿಸಲಾಯಿತು ಮತ್ತು ಇದನ್ನು 2003, 2011 ಮತ್ತು 2015 ರಲ್ಲಿ ಮೂರು ಬಾರಿ ಪರಿಷ್ಕರಿಸಲಾಗಿತ್ತು.

ಔಷಧಿಗಳ ರಾಷ್ಟ್ರೀಯ ಸ್ವತಂತ್ರ ಸ್ಥಾಯಿ ಸಮಿತಿ (ಎಸ್‌ಎನ್‌ಸಿಎಂ) ಯನ್ನು 2018 ರಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ರಚಿಸಿದೆ. ತಜ್ಞರು ಮತ್ತು ಭಾಗೀದಾರರ ಜೊತೆ ವಿವರವಾದ ಸಮಾಲೋಚನೆಯ ನಂತರ ಸಮಿತಿಯು ಎನ್‌ಎಲ್‌ಇಎಂ, 2015 ಅನ್ನು ಪರಿಷ್ಕರಿಸಿತು ಮತ್ತು ಎನ್‌ಎಲ್‌ಇಎಂ, 2022 ಕುರಿತ ತನ್ನ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಸಲ್ಲಿಸಿತು. ಭಾರತ ಸರ್ಕಾರವು ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಿದೆ ಮತ್ತು ಪಟ್ಟಿಯನ್ನು ಅಂಗೀಕರಿಸಿದೆ ಎಂದು ಸಚಿವರು ಹೇಳಿದರು. ಎನ್‌ಎಲ್‌ಇಎಂ ರಚನೆಯ ಪ್ರಕ್ರಿಯೆಯಲ್ಲಿ ಭಾಗೀದಾರರ ವೈಜ್ಞಾನಿಕ ಪ್ರತಿಕ್ರಿಯೆಗಳು ಮತ್ತು ಸೇರ್ಪಡೆ/ಹೊರಗಿಡುವ ತತ್ವವನ್ನು ಅನುಸರಿಸಲಾಗಿದೆ ಎಂದು ಅವರು ಹೇಳಿದರು.

ನಾಗರಿಕರಿಗೆ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸುವ ದಿಕ್ಕಿನಲ್ಲಿ ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ಪರಿಷ್ಕೃತ ಎನ್‌ಎಲ್‌ಇಎಂಗಾಗಿ ಭಾಗೀದಾರರನ್ನು ಅಭಿನಂದಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯಕ ಸಚಿವರಾದ ಡಾ ಭಾರತಿ ಪ್ರವೀಣ್ ಪವಾರ್, ನಮ್ಮ ವಿಜ್ಞಾನಿಗಳು ಮತ್ತು ಸಮುದಾಯಕ್ಕೆ ದೊಡ್ಡ ಸವಾಲಾಗಿರುವ ಆಂಟಿಮೈಕ್ರೊಬಿಯಲ್ ನಿರೋಧಕ ಶಕ್ತಿ (ಎಎಂಆರ್) ಕುರಿತು ಸಮಾಜದಲ್ಲಿ ಜಾಗೃತಿಯನ್ನು ಹೆಚ್ಚಿಸಬೇಕಿದೆ ಎಂದು ಒತ್ತಿ ಹೇಳಿದರು.



ಶೈಕ್ಷಣಿಕ, ಕೈಗಾರಿಕೋದ್ಯಮಿಗಳು ಮತ್ತು ಸಾರ್ವಜನಿಕ ನೀತಿ ತಜ್ಞರಂತಹ ಭಾಗೀದಾರರೊಂದಿಗೆ ಮತ್ತು ಡಬ್ಲ್ಯುಹೆಚ್‌ಒ ಇಎಂಎಲ್‌2021 ರಂತಹ ನಿರ್ಣಾಯಕ ದಾಖಲೆಗಳೊಂದಿಗೆ ನಿರಂತರ ಸಮಾಲೋಚನೆಯ ನಂತರ ಎನ್‌ಎಲ್‌ಇಎಂ 2022 ರ ಪರಿಷ್ಕರಣೆ ಮಾಡಲಾಗಿದೆ.

ಎನ್‌ಎಲ್‌ಇಎಂನಲ್ಲಿ ಸೇರ್ಪಡೆಗಾಗಿ ಈ ಕೆಳಗಿನ ಮಾನದಂಡಗಳನ್ನು ಅನುಸರಿಸಲಾಗಿದೆ:

1.    ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿರುವ ರೋಗಗಳಿಗೆ ಉಪಯುಕ್ತವಾದವು.

2.    ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (ಡಿಜಿಸಿಐ) ಪರವಾನಗಿ/ಅನುಮೋದಿತವಾದುವು.

3.    ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯನ್ನು ಸಾಬೀತುಪಡಿಸಿದವು.

            4.    ತುಲನಾತ್ಮಕವಾಗಿ ವೆಚ್ಚ ಪರಿಣಾಮಕಾರಿಯಾದುವು

            5.   ಪ್ರಸ್ತುತ ಚಿಕಿತ್ಸಾ ಮಾರ್ಗಸೂಚಿಗಳೊಂದಿಗೆ ಹೊಂದಿಕೆಯಾಗುವುವು.

6.    ಭಾರತದ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅಡಿಯಲ್ಲಿ ಶಿಫಾರಸು ಮಾಡಿರುವುವು. (ಉದಾ. ಲಿಂಫಾಟಿಕ್ ಫೈಲೇರಿಯಾಸಿಸ್ 2018 ರ ನಿರ್ಮೂಲನೆಗಾಗಿ ವೇಗವರ್ಧಿತ ಯೋಜನೆಯ ಐವರ್‌ಮೆಕ್ಟಿನ್). ‌

7.    ಒಂದೇ ಚಿಕಿತ್ಸಕ ವರ್ಗದಿಂದ ಒಂದಕ್ಕಿಂತ ಹೆಚ್ಚು ಔಷಧಗಳು ಲಭ್ಯವಿದ್ದಾಗ, ಆ ವರ್ಗದ ಒಂದು ಮೂಲಮಾದರಿಯ/ ವೈದ್ಯಕೀಯವಾಗಿ ಹೆಚ್ಚು ಸೂಕ್ತವಾದ ಔಷಧವನ್ನು ಸೇರಿಸಬೇಕು.

8.    ಒಟ್ಟು ಚಿಕಿತ್ಸೆಯ ಬೆಲೆಯನ್ನು ಪರಿಗಣಿಸಲಾಗುತ್ತದೆಯೇ ಹೊರತು ಔಷಧಿಯ ಯೂನಿಟ್ ಬೆಲೆಯನ್ನಲ್ಲ

             9.    ಸ್ಥಿರ ಡೋಸ್ ಸಂಯೋಜನೆಗಳನ್ನು ಸಾಮಾನ್ಯವಾಗಿ ಸೇರಿಸಲಾಗಿಲ್ಲ

10.   ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಸೇರಿಸುವ ಆಗಾಗ್ಗೆ ಲಸಿಕೆಗಳು (ಉದಾ. ರೋಟವೈರಸ್ ಲಸಿಕೆ).

 

ಎನ್‌ಎಲ್‌ಇಎಂ-2022  ಮಾಹಿತಿಗೆ  ಈ ತಾಣಕ್ಕೆ ಭೇಟಿ ನೀಡಿ:  https://cdsco.gov.in/opencms/opencms/system/modules/CDSCO.WEB/elements/download_file_division.jsp?num_id=OTAxMQ

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಡಿಸಿಜಿಐ ಡಾ. ವಿ.ಜಿ. ಸೋಮಾನಿ, ಜಂಟಿ ಕಾರ್ಯದರ್ಶಿ ಡಾ.ಮನ್‌ದೀಪ್ ಕುಮಾರ್ ಭಂಡಾರಿ, ಎಎಎಸ್‌ಸಿಎಂ ಉಪಾಧ್ಯಕ್ಷ ಡಾ.ವೈ.ಕೆ.ಗುಪ್ತಾ ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ರೈತ ದಿನ ಆಚರಣೆ-ಸಾವಯವ ಕೃಷಿ ಪದ್ಧತಿಗೆ ಸಲಹೆ.

👇👇👇👇👇👇👇👇👇👇👇👇👇 ರೈತ ದಿನಾಚರಣೆ https://youtube.com/shorts/EGX4c_IVzY8?si=erkB19_6MH0KmBG6 ಮೊಸಳೆಹೊಸಹಳ್ಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ರೈತರ ದಿನದ ಅಂಗವಾಗಿ ಸಾವಯವ ಕೃಷಿ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಪುಣ್ಯಭೂಮಿ ಪರಿಸರ ಪ್ರಶಸ್ತಿ ಮತ್ತು ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಕಟ್ಟಾಯ ಹೋಬಳಿಯ ಬ್ಯಾಡರಹಳ್ಳಿಯ ಸಾವಯವ ಕೃಷಿಕರು, ಪ್ರಗತಿಪರ ರೈತರು ಮತ್ತು ಪಾರಂಪರಿಕ ವೈದ್ಯರಾದ ಶ್ರೀಯುತ ರವಿಶಂಕರ್ ಅವರು ಆಗಮಿಸಿದ್ದರು. ಸಂಸ್ಥೆಯಲ್ಲಿ ರೈತರಿಂದ ಗಿಡ ನೆಡುವುದರ ಮೂಲಕ ರೈತರ ದಿನವನ್ನು ಉದ್ಘಾಟಿಸಲಾಯಿತು. ಸಾವಯವ ಕೃಷಿಯನ್ನು ಉದ್ದೇಶಿಸಿ ಮಾತನಾಡಿದ ಇವರು ವಿದ್ಯಾರ್ಥಿಗಳಿಗೆ ಸಾವಯವ ಕೃಷಿಯ ಕ್ರಮಗಳು, ಆರೋಗ್ಯಕರ ಪ್ರಯೋಜನಗಳನ್ನು ವಿವರಿಸುತ್ತಾ, ಬೆಳೆಗೆ ಯಾವುದೇ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಬಳಸದೇ ಕೇವಲ ಹಸುವಿನ ಸಗಣಿ ಮತ್ತು ಗಂಜುಳದಿಂದ ರಸಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ತಯಾರಿಸಿ ಮಣ್ಣಿನ ಫಲವತ್ತತೆಯನ್ನು ಹೇಗೆ ಹೆಚ್ಚಿಸುವುದು ಮತ್ತು ಯಾವ ಕಾಲ, ನಕ್ಷತ್ರ, ಹವಾಮಾನ ಮತ್ತು ಮಾಸಕ್ಕನುಗುಣವಾಗಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರು ಸೂಕ್ತವಾಗಿ ಅರಿತಿರಬೇಕು ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಗೊಳಿಸಿಕೊಳ್ಳ

ಮೊಸಳೆಹೊಸಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನ ಆಚರಣೆ.

ಹಾಸನ ತಾಲ್ಲೂಕಿನ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ ರೆಡ್ ರಿಬ್ಬನ್ ಕ್ಲಬ್ ಸಹಯೋಗದೊಂದಿಗೆ, ವಿಶ್ವ ಏಡ್ಸ್ ದಿನದ ಪ್ರಯುಕ್ತ ಸಂಸ್ಥೆಯಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. . ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಮತ್ತು ಕಂಟ್ರೋಲ್ ಘಟಕದ ಸೂಪರ್ವೈಸರ್ ಶ್ರೀಯುತ ರವಿಕುಮಾರ್ ವಿ. ಬಲ್ಲೇನಹಳ್ಳಿ ಯವರು ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ನಾಗೇಶ್ ರವರು ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಿಗೆ ಸಂಕ್ಷಿಪ್ತ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.  ಮುಂದುವರೆದು ಸಂಸ್ಥೆಯಲ್ಲಿ ಏಡ್ಸ್/ಹೆಚ್.ಐ.ವಿ. ಸೋಂಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸವಾಗಿ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ಡಿಸೈನ್ ಮತ್ತು ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಮತ್ತು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಂಸ್ಥೆಯ ಎನ್.ಎಸ್.ಎಸ್. ಅಧಿಕಾರಿಗಳಾದ ಶ್ರೀಯುತ ವೀರಭದ್ರಸ್ವಾಮಿ ಕೆ.ಎಂ. ರವರು, ಎನ್.ಎಸ್.ಎಸ್. ಚಟುವಟಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳು ಸುತ್ತಮುತ್ತಲ, ಮೂರು ಗ್ರಾಮಗಳನ್ನು ದತ್ತು ಪಡೆದು ಸ್ವಚ್ಛತೆ, ಆರೋಗ್ಯ, ಉನ್ನತ ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಜಾಗೃತಿ

ಹಾಸನ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗಾವಕಾಶಗಳು.

ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಗೃಹಿಣಿಯರು, ನಿವೃತ್ತ ಅಧಿಕಾರಿಗಳು /ನೌಕರರು ಮತ್ತು ನಿರುದ್ಯೋಗಿಗಳಿಗೆ ಆರ್ಥಿಕ ವಲಯದಲ್ಲಿ ಹೂಡಿಕೆ ಇಲ್ಲದೆ ವೃತ್ತಿ ಅವಕಾಶಗಳು / ವ್ಯಾಪಾರ ಅವಕಾಶಗಳು  ಪುರುಷ ಮತ್ತು  ಮಹಿಳೆಯರಿಗೆ   ವಯಸ್ಸಿನ ಮಿತಿ: - 25 ರಿಂದ 65 ವರ್ಷಗಳು.  ದಯವಿಟ್ಟು ನಿಮ್ಮ ವಿವರಗಳನ್ನು ಕೆಳಗಿನ ಇಮೇಲ್ ಐಡಿಗೆ ಕಳುಹಿಸಿ.  freelanceadvertisingthassan@gmail.com  ಅಥವಾ  ಸಂಪರ್ಕಿಸಿ  7090899728 Career opportunities /business opportunities with out an investments in financial sector for housewives ,retired officials /employees and unemployed persons residing in Hassan district, Karnataka state India For both male and female. Age limit:- 25 to 65 years. Please send your details to below email id. freelanceadvertisingathassan@gmail.com Or  Contact  070908 99728